AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಂಸಾ ಇದ್ದಲ್ಲಿ ನಾನಿರಲ್ಲ’; ಬಿಗ್ ಬಾಸ್ ಮನೆಯಲ್ಲಿ ಸಿಡಿದೆದ್ದ ಜಗದೀಶ್ ಗೆಳೆಯ

ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಹೆಚ್ಚು ಕ್ಲೋಸ್ ಆಗಿ ಇದ್ದಿದ್ದು ಸುರೇಶ್ ಜೊತೆ ಮಾತ್ರ. ಸುರೇಶ್ ಕೂಡ ಜಗದೀಶ್ ಜೊತೆ ಉತ್ತಮವಾಗಿಯೇ ಇದ್ದರು. ಆದರೆ, ದಿನ ಕಳೆದಂತೆ ಜಗದೀಶ್ ವರ್ತನೆ ಸುರೇಶ್​ಗೆ ಇಷ್ಟ ಆಗಲೇ ಇಲ್ಲ. ಈಗ ಜಗದೀಶ್ ಮನೆಯಲ್ಲಿ ಇಲ್ಲ. ಜಗದೀಶ್ ಫ್ರೆಂಡ್ ಹಂಸಾ ವಿರುದ್ಧ ಸುರೇಶ್ ಸಿಟ್ಟಾಗಿದ್ದಾರೆ.

‘ಹಂಸಾ ಇದ್ದಲ್ಲಿ ನಾನಿರಲ್ಲ’; ಬಿಗ್ ಬಾಸ್ ಮನೆಯಲ್ಲಿ ಸಿಡಿದೆದ್ದ ಜಗದೀಶ್ ಗೆಳೆಯ
ಜಗದೀಶ್-ಹಂಸಾ
ರಾಜೇಶ್ ದುಗ್ಗುಮನೆ
|

Updated on: Oct 24, 2024 | 11:21 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭ ಆಗಿ ತಿಂಗಳು ಕಳೆಯುವುದರ ಒಳಗೆ ಸಾಕಷ್ಟು ಬೆಳವಣಿಗೆಗಳು ನಡೆದು ಹೋಗಿವೆ. ಕೆಲವು ಸ್ಪರ್ಧಿಗಳು ಜಗಳ ಆಡಿಕೊಂಡು ಹೊರ ಹೋಗಿದ್ದಾರೆ. ಈ ಪೈಕಿ ಜಗದೀಶ್ ಕೂಡ ಇದ್ದಾರೆ. ಅವರಿಗೆ ಹಂಸ ಮೇಲೆ ವಿಶೇಷ ಕಾಳಜಿ ಇತ್ತು. ಜಗದೀಶ್ ಮನೆಯಿಂದ ಹೊರ ಹೋಗುತ್ತಿದ್ದಂತೆ ಜಗದೀಶ್ ಗೆಳೆಯ ಗೋಲ್ಡ್ ಸುರೇಶ್ ಹಾಗೂ ಹಂಸಾ ಮಧ್ಯೆ ಕಿರಿಕ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಹೆಚ್ಚು ಕ್ಲೋಸ್ ಆಗಿ ಇದ್ದಿದ್ದು ಸುರೇಶ್ ಜೊತೆ ಮಾತ್ರ. ಸುರೇಶ್ ಕೂಡ ಜಗದೀಶ್ ಜೊತೆ ಉತ್ತಮವಾಗಿಯೇ ಇದ್ದರು. ಆದರೆ, ದಿನ ಕಳೆದಂತೆ ಜಗದೀಶ್ ವರ್ತನೆ ಸುರೇಶ್​ಗೆ ಇಷ್ಟ ಆಗಲೇ ಇಲ್ಲ. ಹೀಗಾಗಿ ಅಂತರ ಕಾಯ್ದುಕೊಂಡರು. ಹಂಸಾ ಬಗ್ಗೆ ಜಗದೀಶ್ ಕೆಟ್ಟದಾಗಿ ಮಾತನಾಡಿದರು ಎಂಬುದನ್ನು ಕೂಡ ಎಲ್ಲರಿಗೂ ತಿಳಿಸಿದ್ದು ಇದೇ ಸುರೇಶ್. ಈಗ ಹಂಸಾ ಜೊತೆ ಅವರಿಗೆ ಅಸಮಾಧಾನ ಭುಗಿಲೆದ್ದಿದೆ.

ಕಿಚನ್​ನ ಕ್ಲೀನಿಂಗ್​ಗೆ ಹಂಸಾ ಹಾಗೂ ಸುರೇಶ್​ನ ನೇಮಕ ಮಾಡಿದ್ದರು ಕ್ಯಾಪ್ಟನ್ ಐಶ್ವರ್ಯಾ. ಆದರೆ, ಇದು ಸುರೇಶ್​ಗೆ ಇಷ್ಟ ಆಗಿಲ್ಲ. ಈ ಕಾರಣಕ್ಕೆ ಅವರು ‘ಹಂಸಾ ಜೊತೆಗಿದ್ದರೆ ನಾನು ಕ್ಲೀನಿಂಗ್ ಮಾಡಲ್ಲ’ ಎಂದರು. ಆ ಬಳಿಕ ಸುರೇಶ್ ಹಠ ನೋಡಿ ಹೆದರಿದ ಐಶ್ವರ್ಯಾ ಅವರು ಹಂಸನ ಜಾಗಕ್ಕೆ ಧನರಾಜ್ ಅವರನ್ನು ಕರೆತಂದರು. ಆ ಬಳಿಕವೇ ಸುರೇಶ್ ಕೆಲಸ ಮಾಡೋಕೆ ಒಪ್ಪಿದರು.

ಸುರೇಶ್ ಅವರು ಈ ರೀತಿ ಮಾಡೋಕೂ ಒಂದು ಕಾರಣ ಇದೆ. ‘ನನ್ನ ಕಪ್​ನ ಎಲ್ಲರೂ ಬಳಸುತ್ತಾರೆ. ಈ ಕಾರಣಕ್ಕೆ ನನ್ನ ಕಪ್​ ಮೇಲೆ ಲಿಪ್​ಸ್ಟಿಕ್ ಇರುವಂತೆ ನೋಡಿಕೊಂಡೆ. ಇದಕ್ಕೆ ಸುರೇಶ್ ಸಿಟ್ಟಾಗಿದ್ದಾರೆ. ನಿಮ್ಮ ಕಪ್​ಗೆ ಲಿಪ್​ಸ್ಟಿಕ್ ಬಡಿಡಿದೆ ಕ್ಲೀನ್ ಮಾಡಿ ಎಂದು ಹೇಳಿದ್ದರೆ ಮುಗಿದಿತ್ತು’ ಎಂಬ ಅಭಿಪ್ರಾಯವನ್ನು ಹಂಸಾ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಲರ್ಸ್​ ಶೋಗೆ ಮರಳಿದ ಲಾಯರ್ ಜಗದೀಶ್; ಫ್ಯಾನ್ಸ್​ಗೆ ಗುಡ್ ನ್ಯೂಸ್

ಜಗದೀಶ್ ಅವರು ಇದ್ದಿದ್ದರೆ ಹಂಸಾ ಜೊತೆ ಮತ್ತಷ್ಟು ಕ್ಲೋಸ್ ಆಗುತ್ತಿದ್ದರು ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಜಗದೀಶ್ ಇದ್ದಿದ್ದರೆ ಸುರೇಶ್ ಅವರು ಹಂಸಾ ಜೊತೆ ಇಷ್ಟೊಂದು ದ್ವೇಷ ಸಾಧಿಸುತ್ತಾ ಇರಲಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ