AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೋಲೋಕೆ ಬರ್ತೀರಿ, ನಾಚಿಕೆ ಆಗಬೇಕು’: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಕ್ಲಾಸ್​ ತೆಗೆದುಕೊಂಡ ಜಗದೀಶ್

ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವುದು ಜಗದೀಶ್​. ಸಮಯ ಸಿಕ್ಕಾಗಲೆಲ್ಲ ಅವರು ಜಗಳ ಮಾಡುತ್ತಾರೆ. ಹಾಗಾಗಿ ಅವರಿಗೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಗುತ್ತಿದೆ. ಈಗ ಅವರು ನರಕದಲ್ಲಿ ಇದ್ದಾರೆ. ನರಕಕ್ಕೆ ಬಂದ ಮೇಲೂ ಜಗದೀಶ್​ ಅವರ ಹಾರಾಟ, ಚೀರಾಟ ಕಡಿಮೆ ಆಗಿಲ್ಲ. ಬೇರೆ ಸ್ಪರ್ಧಿಗಳಿಂದ ಚಿಕ್ಕ ತಪ್ಪಾದರೂ ಸಾಕು ಜಗದೀಶ್​ ವಿಪರೀತ ಕೋಪ ಮಾಡಿಕೊಳ್ಳುತ್ತಾರೆ.

‘ಸೋಲೋಕೆ ಬರ್ತೀರಿ, ನಾಚಿಕೆ ಆಗಬೇಕು’: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಕ್ಲಾಸ್​ ತೆಗೆದುಕೊಂಡ ಜಗದೀಶ್
ಜಗದೀಶ್​
ಮದನ್​ ಕುಮಾರ್​
|

Updated on: Oct 10, 2024 | 10:07 PM

Share

ಎರಡನೇ ವಾರದಲ್ಲಿ ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಸ್ವರ್ಗ ವರ್ಸಸ್​ ನರಕ ಎಂಬ ಕಾನ್ಸೆಪ್ಟ್ ಇರುವುದರಿಂದ ಈ ಬಾರಿಯ ಆಟದಲ್ಲಿ ಬದಲಾವಣೆ ಕಾಣಿಸಿದೆ. ನರಕದಲ್ಲಿ ಇದ್ದವರು ಸ್ವರ್ಗಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ನಾಮಿನೇಷನ್​ನಿಂದಲೂ ಬಚಾವ್ ಆಗಲು ಎಲ್ಲರೂ ಕಷ್ಟಪಡುತ್ತಿದ್ದಾರೆ. ಇತ್ತೀಚೆಗೆ ನೀಡಿದ್ದ ‘ಕಮಾನು ಬಿಲ್ಡಿಂಗ್’ ಟಾಸ್ಕ್​ನಲ್ಲಿ ನರಕ ನಿವಾಸಿಗಳು ಸೋತಿದ್ದಾರೆ. ಅದರಿಂದ ಬೇಸರ ಮಾಡಿಕೊಂಡ ಜಗದೀಶ್​ ಅವರು ತಮ್ಮದೇ ತಂಡದವರ ಮೇಲೆ ಕೂಗಾಡಿದ್ದಾರೆ.

‘ಕಮಾನು ಬಿಲ್ಡಿಂಗ್​’ ಟಾಸ್ಕ್​ನಲ್ಲಿ ಭಾಗವಹಿಸಲು ಜಗದೀಶ್​ಗೆ ಅವಕಾಶ ನೀಡಿರಲಿಲ್ಲ. ಮೋಕ್ಷಿತಾ ಪೈ ಅವರು ಈ ಟಾಸ್ಕ್​ನ ಉಸ್ತುವಾರಿ ವಹಿಸಿಕೊಂಡಿದ್ದರು. ನರಕದವರು ಸೋತಿದ್ದರಿಂದ ಜಗದೀಶ್ ಅವರಿಗೆ ಸಿಟ್ಟು ಬಂತು. ತಮ್ಮನ್ನು ಟಾಸ್ಕ್​ ಆಡಲು ಸೇರಿಸಿಕೊಳ್ಳದೇ ಇರುವುದು ಮತ್ತು ತಮ್ಮ ಮಾತನ್ನು ಪರಿಗಣಿಸದೇ ಇರುವುದೇ ತಮ್ಮ ತಂಡದ ಸೋಲಿಗೆ ಕಾರಣ ಎಂದು ಅವರು ವಾದಿಸಿದ್ದಾರೆ.

ಟಾಸ್ಕ್​ ಸೋತು ಸೈಡಲ್ಲಿ ನಿಂತಿಲ್ಲ ಶಿಶಿರ್, ಮೋಕ್ಷಿತಾ, ಗೋಲ್ಡ್​ ಸುರೇಶ್​, ಚೈತ್ರಾ ಕುಂದಾಪುರ ಮುಂತಾವರಿಗೆ ಜಗದೀಶ್​ ಅವರು ಹಿಗ್ಗಾಮುಗ್ಗಾ ಬೈಯ್ದಿದ್ದಾರೆ. ‘ಸೋಲೋಕೆ ಬರುತ್ತೀರಿ. ನಿಮಗೆಲ್ಲ ನಾಚಿಕೆ ಆಗಬೇಕು’ ಎಂದು ಜಗದೀಶ್​ ಹೇಳಿದ್ದನ್ನು ಕೇಳಿಸಿಕೊಂಡು ಎಲ್ಲರೂ ತಿರುಗಿಬಿದ್ದರು. ಅದಕ್ಕೆಲ್ಲ ಜಗದೀಶ್​ ಕೇರ್​ ಮಾಡಲಿಲ್ಲ. ‘ನಾನ್​ ಸೆನ್ಸ್​’ ಎಂದು ಕೂಡ ಬೈಯ್ದರು. ಆ ಪದ ಕೇಳಿಸಿಕೊಂಡು ಗೋಲ್ಡ್ ಸುರೇಶ್​ ಕೆರಳಿದರು. ಹಾಗಿದ್ದರೂ ಕೂಡ ಜಗದೀಶ್​ ಆರ್ಭಟ ನಿಲ್ಲಿಸಲಿಲ್ಲ. ಎಲ್ಲರ ಜೊತೆಗೂ ಜಗದೀಶ್​ ಕಿರಿಕ್​ ಮಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೂ ಕೂಡ ಬಿಗ್​ ಬಾಸ್​ ಮನೆಯ ಪ್ರತಿ ಕ್ಷಣವನ್ನು ತಾವು ಎಂಜಾಯ್​ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಜಗದೀಶ್ ಎದುರು ಮಾತಾಡಲು ಸಾಧ್ಯವಾಗದೇ ಸೋತ ಚೈತ್ರಾ ಕುಂದಾಪುರ; ಆಗಿದ್ದೇನು?

ಈ ವಾರ ಕೂಡ ಜಗದೀಶ್​ ಅವರು ನಾಮಿನೇಟ್​ ಆಗಿದ್ದಾರೆ. ವಿಶೇಷ ಅಧಿಕಾರ ಪಡೆದ ಗೌತಮಿ ಜಾದವ್ ಅವರು ನಾಮಿನೇಟ್​ ಮಾಡಿದ್ದಾರೆ. ‘ಜಗದೀಶ್​ ಹೆಚ್ಚಿನ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾರೆ. ಪದೇ ಪದೇ ಹೇಳಿದರೂ ಕೂಡ ತಮ್ಮ ತಪ್ಪನ್ನು ಅವರು ಸರಿ ಮಾಡಿಕೊಳ್ಳುತ್ತಿಲ್ಲ’ ಎಂಬ ಕಾರಣವನ್ನು ಗೌತಮಿ ಜಾದವ್​ ನೀಡಿದರು. ಅವರ ಜೊತೆ ಅನುಷಾ ರೈ ಅವರನ್ನು ಕೂಡ ನೇರವಾಗಿ ನಾಮಿನೇಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ