ಮೈಕೆಲ್​-ಈಶಾನಿ ಬ್ರೇಕಪ್​; ಅಳುತ್ತಿದ್ದ ತಂಗಿಗೆ ಬೈಯ್ದು ಬುದ್ಧಿ ಹೇಳಿದ ವಿನಯ್​ ಗೌಡ

ಒಂದಷ್ಟು ದಿನ ಮೈಕೆಲ್​ ಅಜಯ್​​ ಮತ್ತು ಈಶಾನಿ ಅವರು ದೊಡ್ಮನೆಯಲ್ಲಿ ಒಟ್ಟೊಟ್ಟಿಗೆ ಕಾಲ ಕಳೆದರು. ಆದರೆ ನಂತರದಲ್ಲಿ ಇಬ್ಬರ ನಡುವೆ ಮೈಮನಸ್ಸು ಮೂಡಲು ಆರಂಭ ಆಯಿತು. ಅಂತಿಮವಾಗಿ ಅವರು ಬ್ರೇಕಪ್​ ಮಾಡಿಕೊಂಡಿದ್ದಾರೆ. ಇದರಿಂದ ಬಿಗ್ ಬಾಸ್​ ಮನೆ ಬಿಟ್ಟು ಹೊರಗೆ ಬರಬೇಕು ಎಂಬಷ್ಟರಮಟ್ಟಿಗೆ ಈಶಾನಿಗೆ ನೋವಾಗಿದೆ.

ಮೈಕೆಲ್​-ಈಶಾನಿ ಬ್ರೇಕಪ್​; ಅಳುತ್ತಿದ್ದ ತಂಗಿಗೆ ಬೈಯ್ದು ಬುದ್ಧಿ ಹೇಳಿದ ವಿನಯ್​ ಗೌಡ
ಮೈಕೆಲ್​ ಅಜಯ್​, ಈಶಾನಿ, ವಿನಯ್​ ಗೌಡ
Follow us
|

Updated on: Nov 13, 2023 | 10:40 PM

ಬಿಗ್​ ಬಾಸ್ (Bigg Boss Kannada)​ ಮನೆಯಲ್ಲಿ ಸಂಬಂಧಗಳು ಬೆಳೆಯುತ್ತವೆ. ಹಾಗೆಯೇ, ಬೆಳೆದ ಸಂಬಂಧಗಳು ಮುರಿದುಹೋಗುತ್ತವೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ಮೈಕೆಲ್​ ಅಜಯ್​ ಮತ್ತು ಈಶಾನಿ (Eshani) ನಡುವೆ ಪ್ರೀತಿ ಹುಟ್ಟಿತ್ತು. ಆದರೆ ಆ ಪ್ರೀತಿ ಈಗ ಬ್ರೇಕಪ್​ನಲ್ಲಿ ಅಂತ್ಯವಾಗಿದೆ. ಮೈಕೆಲ್​ (Michael Ajay) ಬ್ರೇಕಪ್​ ಮಾಡಿಕೊಂಡಿದ್ದಕ್ಕೆ ಈಶಾನಿ ಅವರು ಕಣ್ಣೀರು ಹಾಕಿದ್ದಾರೆ. ಅವರಿಗೆ ತುಂಬ ನೋವಾಗಿದೆ. ಬಿಗ್​ ಬಾಸ್​ ಮನೆ ಬಿಟ್ಟು ಹೋಗುವುದಾಗಿಯೂ ಈಶಾನಿ ಹೇಳಿದ್ದಾರೆ. ಇದನ್ನೆಲ್ಲ ಕೇಳಿಸಿಕೊಂಡ ವಿನಯ್​ ಗೌಡ ಅವರಿಗೆ ಕೋಪ ಬಂದಿದೆ. ಅಳುತ್ತಿದ್ದ ಈಶಾನಿಗೆ ವಿನಯ್​ ಗೌಡ ಬೈಯ್ದು ಬುದ್ಧಿ ಹೇಳಿದ್ದಾರೆ.

ಈಶಾನಿಯನ್ನು ವಿನಯ್​ ಗೌಡ ಅವರು ತಂಗಿ ಎಂದು ಈ ಮೊದಲೇ ಕರೆದಿದ್ದರು. ಹಾಗಾಗಿ ಈಶಾನಿಯ ಬಗ್ಗೆ ಅವರು ಕಾಳಜಿ ವಹಿಸಿದ್ದಾರೆ. ಮೊದಲು ಮೈಕೆಲ್​ ಜೊತೆ ಈಶಾನಿಗೆ ಲವ್​ ಆಗಿದೆ ಎಂಬುದು ತಿಳಿದಾಗಲೂ ಅವರು ಖುಷಿಪಟ್ಟಿದ್ದರು. ಆದರೆ ಈಗ ಈಶಾನಿ ಬ್ರೇಕಪ್​ ಮಾಡಿಕೊಂಡು ಅಳುತ್ತಿರುವುದು ವಿನಯ್​ಗೆ ಸರಿ ಎನಿಸಿಲ್ಲ. ಹಾಗಾಗಿ ಅವರು ಬುದ್ಧಿ ಹೇಳಿ ಸರಿಯಾದ ದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada: ‘ಡ್ರೋನ್​ ಪ್ರತಾಪ್​ ಹೀರೋ, ವಿನಯ್​ ಗೌಡ ವಿಲನ್​’; ಸ್ಪರ್ಧಿಗಳ ವರ್ತನೆ ಬಗ್ಗೆ ಮುಲಾಜಿಲ್ಲದೇ ಮಾತಾಡಿದ ಸುದೀಪ್​

ಒಂದಷ್ಟು ದಿನ ಮೈಕೆಲ್​ ಅಜಯ್​​ ಮತ್ತು ಈಶಾನಿ ಅವರು ಒಟ್ಟೊಟ್ಟಿಗೆ ಕಾಲ ಕಳೆದರು. ಆದರೆ ನಂತರದಲ್ಲಿ ಇಬ್ಬರ ನಡುವೆ ಮೈಮನಸ್ಸು ಮೂಡಲು ಆರಂಭ ಆಯಿತು. ಈಶಾನಿಯನ್ನು ಸೈಕೋ ಎಂದು ಕೂಡ ಮೈಕಲ್​ ಕರೆದಿದ್ದರು. ‘ನನಗೆ ನೀನು ಭಾವನಾತ್ಮಕವಾಗಿ ಬೆಂಬಲ ನೀಡುತ್ತಿಲ್ಲ’ ಎಂದು ಕೂಡ ಈಶಾನಿ ಕಣ್ಣೀರು ಹಾಕಿದ್ದರು. ಈಗ ಅವರು ಮೈಕಲ್​ ಜೊತೆ ಬ್ರೇಕಪ್​ ಮಾಡಿಕೊಂಡು, ಆ ನೋವಿನಲ್ಲಿ ‘ಬಿಗ್​ ಬಾಸ್​’ ಮನೆಯಿಂದಲೇ ಹೊರಗೆ ಹೋಗೋಕೆ ನಿರ್ಧರಿಸಿದ್ದಾರೆ. ಆದರೆ ಅದಕ್ಕೆ ವಿನಯ್​ ಗೌಡ ಅವಕಾಶ ಮಾಡಿಕೊಟ್ಟಿಲ್ಲ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ನೈಜೀರಿಯಾ ಕನ್ನಡಿಗ ಮೈಕೆಲ್​ ಅಜಯ್​; ಏನು ಇವರ ಹಿನ್ನೆಲೆ?

ಈಶಾನಿ ಅಂದುಕೊಂಡಿರುವ ಪ್ರೀತಿ ನಿಜವಾದ ಪ್ರೀತಿಯೇ ಅಲ್ಲ. ಮೈಕೆಲ್​ ಏನು ಎಂಬುದು ಈಶಾನಿಗೆ ಸರಿಯಾಗಿ ತಿಳಿದೇ ಇಲ್ಲ. ತಾವು ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶ ಏನು ಎಂಬುದೇ ಈಶಾನಿಗೆ ಮರೆತು ಹೋಗಿದೆ. ಈ ಎಲ್ಲ ವಿಚಾರಗಳನ್ನು ಮೈಕೆಲ್​ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ವಿನಯ್​ ಹೇಳಿದ ಮಾತು ಕೇಳಿ ಈಶಾನಿಗೆ ಹೌದು ಎನಿಸಿದೆ. ಇನ್ಮೇಲೆ ಟಾಸ್ಕ್​ ಮೇಲೆ ಪೂರ್ತಿ ಗಮನ ನೀಡುವುದಾಗಿ ಈಶಾನಿ ಹೇಳಿದ್ದಾರೆ. ಇನ್ಮುಂದೆ ಈಶಾನಿ ಮತ್ತು ಮೈಕೆಲ್​ ನಡುವಿನ ಸಂಬಂಧ ಹೇಗೆ ಇರಲಿದೆ ಎಂಬುದನ್ನು ಕಾದು ನೋಡಬೇಕು. ಕಲರ್ಸ್​ ಕನ್ನಡದಲ್ಲಿ ಪ್ರತಿ ರಾತ್ರಿ 9.30ಕ್ಕೆ ಎಪಿಸೋಡ್​ ಪ್ರಸಾರ ಆಗುತ್ತಿದೆ. 24 ಗಂಟೆಯೂ ‘ಜಿಯೋ ಸಿನಿಮಾ’ ಮೂಲಕ ಉಚಿತವಾಗಿ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು