AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಕ್ಷಿತಾ, ಐಶ್ವರ್ಯಾಗೆ ಶಾಕ್ ನೀಡಿದ ಬಿಗ್ ಬಾಸ್; ಮುಂದಿನ ಆಟ ಇನ್ನೂ ಕಷ್ಟ

ಕಿರುತೆರೆ ನಟಿಯರಾದ ಮೋಕ್ಷಿತಾ ಪೈ ಮತ್ತು ಐಶ್ವರ್ಯಾ ಸಿಂಧೋಗಿ ಅವರಿಗೆ ಬಿಗ್ ಬಾಸ್​ ಮನೆಯಲ್ಲಿ ದೊಡ್ಡ ಶಾಕ್ ನೀಡಲಾಗಿದೆ. ಇದರಿಂದಾಗಿ ಅವರಿಗೆ ಸಖತ್ ಕಷ್ಟ ಆಗಲಿದೆ. ತ್ರಿವಿಕ್ರಮ್ ತೆಗೆದುಕೊಂಡ ಒಂದು ನಿರ್ಧಾರದಿಂದಾಗಿ ಈ ನಟಿಯರಿಗೆ ಇಂಥ ಪರಿಸ್ಥಿತಿ ಬಂದಿದೆ. ಮೂರನೇ ವಾರದಲ್ಲಿ ಬಿಗ್ ಬಾಸ್ ಆಟಕ್ಕೆ ಹೊಸ ಹೊಸ ಟ್ವಿಸ್ಟ್​ಗಳು ಸಿಗುತ್ತಿವೆ.

ಮೋಕ್ಷಿತಾ, ಐಶ್ವರ್ಯಾಗೆ ಶಾಕ್ ನೀಡಿದ ಬಿಗ್ ಬಾಸ್; ಮುಂದಿನ ಆಟ ಇನ್ನೂ ಕಷ್ಟ
ಮೋಕ್ಷಿತಾ ಪೈ, ಐಶ್ವರ್ಯಾ ಸಿಂಧೋಗಿ
ಮದನ್​ ಕುಮಾರ್​
|

Updated on: Oct 16, 2024 | 10:50 PM

Share

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ನಡುವೆ ಕಿತ್ತಾಟವೇ ಜಾಸ್ತಿ ಆಗಿದೆ. ಈ ನಡುವೆ ಮನೆಯ ದಿನಸಿ ವಸ್ತುಗಳು ಖಾಲಿ ಆಗಿವೆ. ಮತ್ತೆ ದಿನಸಿ ವಸ್ತುಗಳನ್ನು ಮರಳಿ ನೀಡಬೇಕು ಎಂದರೆ ಬಿಗ್ ಬಾಸ್ ಕೆಲವು ಕಂಡಿಷನ್​ ಹಾಕಿದ್ದಾರೆ. ಆಯ್ದ ಕೆಲವು ಸ್ಪರ್ಧಿಗಳು ಒಂದಷ್ಟು ವಸ್ತುಗಳನ್ನು ತ್ಯಾಗ ಮಾಡಬೇಕು. ಭವ್ಯಾ ಗೌಡ ಮತ್ತು ಮೋಕ್ಷಿತಾ ಪೈ ಅವರು ಮೇಕಪ್ ಕಿಟ್ ತ್ಯಾಗ ಮಾಡಿದರು. ನಂತರ ಮೋಕ್ಷಿತಾ ಮತ್ತು ಐಶ್ವರ್ಯಾ ಅವರಿಗೆ ಎದುರಾಗಿದ್ದು ರಿಯಲ್ ಶಾಕ್. ಆ ಬಗ್ಗೆ ಇಲ್ಲಿದೆ ವಿವರ.

ಕಳೆದ ಎರಡು ಎಪಿಸೋಡ್​ನಿಂದ ಬಿಗ್ ಬಾಸ್​ ಆದೇಶಗಳು ಟೆಲಿಫೋನ್ ಮೂಲಕ ಬರುತ್ತಿವೆ. ಒಬ್ಬೊಬ್ಬರನ್ನು ಕರೆದು ಒಂದೊಂದು ರೀತಿಯಲ್ಲಿ ಸೂಚನೆಗಳನ್ನು ನೀಡಿದ್ದಾರೆ. ತ್ರಿವಿಕ್ರಮ್ ಅವರನ್ನು ಕರೆದು, ‘ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಇಬ್ಬರ ಹೆಸರನ್ನು ಸೂಚಿಸಿ’ ಎಂದರು. ಆಗ ತ್ರಿವಿಕ್ರಮ್ ಅವರು ಮೋಕ್ಷಿತಾ ಪೈ ಮತ್ತು ಐಶ್ವರ್ಯಾ ಸಿಂಧೋಗಿ ಅವರ ಹೆಸರನ್ನು ಹೇಳಿದರು.

‘ಮೋಕ್ಷಿತಾ ಪೈ ಮತ್ತು ಐಶ್ವರ್ಯಾ ಸಿಂಧೋಗಿ ಅವರಿಗೆ ಸಂಬಂಧಿಸಿದ ಯಾವುದೇ ವಸ್ತುಗಳು ಕೂಡ ಈ ಮನೆಯಲ್ಲಿ ಇರಬಾರದು. ಎಲ್ಲವನ್ನೂ ತಂದು ಸ್ಟೋರ್​ ರೂಮ್​ನಲ್ಲಿ ಇರಿಸಿ’ ಎಂದು ಬಿಗ್​ ಬಾಸ್ ಕಡೆಯಿಂದ ಆದೇಶ ಬಂತು. ‘ಒಂದು ಕ್ಲಿಪ್ ಕೂಡ ಇರಬಾರದು’ ಎಂದು ತ್ರಿವಿಕ್ರಮ್ ಹೇಳಿದರು. ಇದರಿಂದಾಗಿ ಮೋಕ್ಷಿತಾ ಹಾಗೂ ಐಶ್ವರ್ಯಾ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಕಾಲ ಕಳೆಯುವುದು ಕಷ್ಟ ಆಗಲಿದೆ.

ಇದನ್ನೂ ಓದಿ: ಅಶ್ಲೀಲವಾಗಿ ಬಿಗ್ ಬಾಸ್ ಶೋ ಬಗ್ಗೆ ಮಾತಾಡಿದ ಜಗದೀಶ್; ಮಿತಿ ಮೀರಿತು ವರ್ತನೆ

ಮೊದಲ ವಾರದಲ್ಲಿ ಯಮುನಾ ಶ್ರೀನಿಧಿ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆದರು. ಎರಡನೇ ವಾರದಲ್ಲಿ ಯಾವುದೇ ಎಲಿಮಿನೇಷನ್​ ಇರಲಿಲ್ಲ. ಮೂರನೇ ವಾರದಲ್ಲಿ ಖಂಡಿತಾ ಎಲಿಮಿನೇಷನ್​ ಇರಲಿದೆ. ಯಾರು ಹೊರಗೆ ಹೋಗುತ್ತಾರೆ ಎಂಬುದನ್ನು ತಿಳಿಯಲು ವೀಕ್ಷಕರು ವಾರಾಂತ್ಯದ ಎಪಿಸೋಡ್​ಗಾಗಿ ಕಾದಿದ್ದಾರೆ. ಜಗಳಗಳ ನಡುವೆ ಬೇರೆ ಯಾವುದೂ ಕೂಡ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್​ ಆಗುತ್ತಿಲ್ಲ. ಪ್ರತಿ ಮಾತಿಗೂ ಜಗಳ ಆಗುತ್ತಿದೆ. ದೊಡ್ಮನೆ ಸದಸ್ಯರ ಜಗಳಕ್ಕೆ ಸ್ವತಃ ಬಿಗ್ ಬಾಸ್​ ಸುಸ್ತಾಗಿದ್ದಾರೆ. ಕೆಲವು ಸ್ಪರ್ಧಿಗಳನ್ನು ಉಗ್ರಂ ಮಂಜು ಅವರು ಬೇಕಂತಲೇ ಕೆಣಕಿದ್ದಾರೆ. ಆ ಕಾರಣದಿಂದಲೂ ಜಗಳ ಜಾಸ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?