AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾ ನಿನ್ನ ಬಿಡಲಾರೆ’ : ಮಾಯಾಳ ಕೆಟ್ಟ ಕೆಲಸ ಅರಿತ ದುರ್ಗಾ; ಇನ್ಮುಂದೆ ಬೇರೆಯದೇ ಲೆಕ್ಕ

Na Ninna Bidalare serial: ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಅಂಬಿಕಾ ಹಾಗೂ ಹಿತಾ ಅಮ್ಮ ಮಗಳು. ಆದರೆ, ಅಂಬಿಕಾ ನಿಧನದ ನಂತರ ಹಿತಾ ಒಂಟಿ ಆದಳು. ಆಕೆಯನ್ನು ಕಾಪಾಡುವ ಜಾವಾಬ್ದಾರಿ ಈಗ ದುರ್ಗಾಳ ಹೆಗಲಿಗೆ ಬಿದ್ದಿದೆ. ದುರ್ಗಾ ತನ್ನ ಮಗಳಂತೆ ಆಕೆಯನ್ನು ಕಾಪಾಡುತ್ತಾ ಇದ್ದಾಳೆ. ಈಗ ಹೊಸ ಪ್ರೋಮೋ ಬಿಡಲಾಗಿದ್ದು, ಹಿತಾ ಪರವಾಗಿ ದುರ್ಗಾ ಧ್ವನಿ ಎತ್ತಿದ್ದಾಳೆ.

‘ನಾ ನಿನ್ನ ಬಿಡಲಾರೆ’ : ಮಾಯಾಳ ಕೆಟ್ಟ ಕೆಲಸ ಅರಿತ ದುರ್ಗಾ; ಇನ್ಮುಂದೆ ಬೇರೆಯದೇ ಲೆಕ್ಕ
Na Ninna Bidalare Serial
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 13, 2025 | 6:52 PM

Share

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ನಾ ನಿನ್ನ ಬಿಡಲಾರೆ’ (Na Ninna Bidalare) ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್​ಗಳು ಬಂದವು. ಈಗ ಧಾರಾವಾಹಿಯಲ್ಲಿ ದುರ್ಗಾ ಹಾಗೂ ಶರತ್​ಗೆ ಮತ್ತೊಮ್ಮೆ ಮದುವೆ ಆಗಿದೆ. ಇಷ್ಟು ದಿನ ಕಣ್ಣಿಗೆ ಕಾಣಿಸದೇ ಇದ್ದ ಅಂಬಿಕಾ ಆತ್ಮ ಕಾಣುವಂತೆ ಆಗಿದೆ. ಅಂಬಿಕಾ ನಡೆದ ವಿಚಾರವನ್ನು ಹೇಳಿದ್ದಾಳೆ. ಇದರಿಂದ ದುರ್ಗಾ ಸಖತ್ ಸಿಟ್ಟಾಗಿದ್ದಾಳೆ. ಆಕೆಗೆ ಮಾಯಾ ಮೇಲೆ ಕೋಪ ಬಂದಿದ್ದು, ಕೆನ್ನೆಗೆ ಬಾರಿಸಿದ್ದಾಳೆ.

ಅಂಬಿಕಾ ಹಾಗೂ ಹಿತಾ ಅಮ್ಮ ಮಗಳು. ಆದರೆ, ಅಂಬಿಕಾ ನಿಧನದ ನಂತರ ಹಿತಾ ಒಂಟಿ ಆದಳು. ಆಕೆಯನ್ನು ಕಾಪಾಡುವ ಜಾವಾಬ್ದಾರಿ ಈಗ ದುರ್ಗಾಳ ಹೆಗಲಿಗೆ ಬಿದ್ದಿದೆ. ದುರ್ಗಾ ತನ್ನ ಮಗಳಂತೆ ಆಕೆಯನ್ನು ಕಾಪಾಡುತ್ತಾ ಇದ್ದಾಳೆ. ಈಗ ಹೊಸ ಪ್ರೋಮೋ ಬಿಡಲಾಗಿದ್ದು, ಹಿತಾ ಪರವಾಗಿ ದುರ್ಗಾ ಧ್ವನಿ ಎತ್ತಿದ್ದಾಳೆ.

ಅಂಬಿಕಾ ಇಷ್ಟು ದಿನ ದುರ್ಗಾಳ ಕಣ್ಣಿಗೆ ಕಾಣಿಸುತ್ತಾ ಇರಲಿಲ್ಲ. ಇದಕ್ಕೆ ಕಾರಣವೂ ಇತ್ತು. ದುರ್ಗಾಳ ದೇಹದ ಒಳಗೆ ಒಪ್ಪಿಗೆ ಇಲ್ಲದೆ ಸೇರಿದ್ದಳು ಅಂಬಿಕಾ. ಇದು ಪ್ರಕೃತಿ ನಿಯಮದ ಉಲ್ಲಂಘನೆ. ಹೀಗಾಗಿ, ಅವಳ ಕಣ್ಣಿಗೆ ಅಂಬಿಕಾ ಆತ್ಮ ಕಾಣುತ್ತಾ ಇರಲಿಲ್ಲ. ಈಗ ಸ್ವ ಇಚ್ಛೆಯಿಂದ ದುರ್ಗಾ ವಿವಾಹ ಆಗಿದ್ದಾಳೆ. ಈ ಕಾರಣಕ್ಕೆ ದುರ್ಗಾ ಕಣ್ಣಿಗೆ ಅಂಬಿಕಾ ಕಾಣುತ್ತಿದ್ದಾಳೆ. ಅವಳು ಮಾಯಾ ಮಾಡುತ್ತಿರುವ ಕೆಟ್ಟ ಕೆಲಸ ಹೇಳಿದ್ದಾರೆ.

ಇದನ್ನೂ ಓದಿ:ದುರ್ಗಾ ಕಣ್ಣಿಗೆ ಕಾಣಿಸಿದ ಅಂಬಿಕಾ ಆತ್ಮ; ‘ನಾ ನಿನ್ನ ಬಿಡಲಾರೆ’ಯಲ್ಲಿ ದೊಡ್ಡ ಟ್ವಿಸ್ಟ್

ಮಾಯಾ ತುಂಬಾನೇ ಕೆಟ್ಟವಳು. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ಈ ವಿಚಾರವನ್ನು ಅಂಬಿಕಾಳು ದುರ್ಗಾಳಿಗೆ ಹೇಳಿದ್ದಾಳೆ. ದುರ್ಗಾ ಹೋಗಿ ಈ ಬಗ್ಗೆ ಮಾಯಾಗೆ ಪ್ರಶ್ನೆ ಮಾಡಿದ್ದಾಳೆ. ‘ಹಿತಾ ಧರಿದ್ರವಳು’ ಎಂದು ಮಾಯಾ ಹೇಳಿದ್ದಾಳೆ. ಇದರಿಂದ ಸಿಟ್ಟಾದ ದುರ್ಗಾಳು ಮಾಯಾ ಕೆನ್ನೆಗೆ ಹೊಡೆದಿದ್ದಾಳೆ. ಇಷ್ಟು ದಿನ ದುರ್ಗಾ ಮೃದುತ್ವ ತೋರಿಸುತ್ತಿದ್ದರು. ಆದರೆ, ಇನ್ನುಮುಂದೆ ಬೇರೆಯದೇ ರೀತಿಯ ಲೆಕ್ಕ ಇರಲಿದೆ ಎಂದು ಹೇಳಲಾಗುತ್ತಾ ಇದೆ.

ಅಂಬಿಕಾ ಆತ್ಮ ದುರ್ಗಾಳ ಕಣ್ಣಿಗೆ ಕಾಣಿಸುತ್ತಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಮುಂದೆ ಆಗುವ ಎಲ್ಲಾ ಕೆಟ್ಟ ಕೆಲಸಗಳ ಸೂಚನೆ ದುರ್ಗಾಳಿಗೆ ಸಿಗುತ್ತದೆ. ಇದರಿಂದ ಒಂದಷ್ಟು ಕೆಟ್ಟ ಕೆಲಸಗಳನ್ನು ತಡೆಯಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ