Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ರತಾ ಕೈಯಲ್ಲಿ ಈಗ ಉಳಿದಿರೋದು ಚಮಚ ಮಾತ್ರ; ಸುದೀಪ್ ಮಾತಿಗೆ ಮುಖದ ಬಣ್ಣವೇ ಬದಲಾಯ್ತು

ಹೆಣ್ಣುಮಕ್ಕಳಿಗೆ ರೆಸ್ಪೆಕ್ಟ್ ಕೊಡಲ್ಲ ಎಂದು ನಮ್ರತಾ ಅವರು ಮೈಕೆಲ್​ಗೆ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ, ವಿನಯ್ ಅವರು  ಹೆಣ್ಣುಮಕ್ಕಳಿಗೆ ಪದೇ ಪದೇ ಅವಮಾನ ಮಾಡಿದರೂ ಈ ವಿಚಾರದಲ್ಲಿ ಮೌನ ತಾಳಿದ್ದರು. ಈ ಬಗ್ಗೆ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ.

ನಮ್ರತಾ ಕೈಯಲ್ಲಿ ಈಗ ಉಳಿದಿರೋದು ಚಮಚ ಮಾತ್ರ; ಸುದೀಪ್ ಮಾತಿಗೆ ಮುಖದ ಬಣ್ಣವೇ ಬದಲಾಯ್ತು
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 05, 2023 | 12:10 AM

ನಮ್ರತಾ ಗೌಡ (Namrata Gowda) ಅವರು ಆರಂಭದಲ್ಲಿ ಸ್ಟ್ರಾಂಗ್ ಸ್ಪರ್ಧಿ ಆಗುತ್ತಾರೆ ಎಂದು ವೀಕ್ಷಕರು ಭಾವಿಸಿದ್ದರು. ಆದರೆ, ಹಾಗಾಗುವ ಸೂಚನೆ ಸಿಗುತ್ತಿಲ್ಲ. ಕಳೆದ ವಾರ ಅವರಿಗೆ ಒಂದು ಎಚ್ಚರಿಕೆ ಕೂಡ ಬಂದಿತ್ತು. ‘ದಾದಾಗಿರಿ ಮಾಡದಿದ್ದರೂ ಪರವಾಗಿಲ್ಲ ಚಮಚಾಗಿರಿ ಮಾತ್ರ ಮಾಡಬೇಡಿ’ ಎನ್ನುವ ಪತ್ರವನ್ನು ವೀಕ್ಷಕರು ಕಳುಹಿಸಿದ್ದರು. ಬಹುಶಃ ಅವರು ಇದನ್ನು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಈ ಕಾರಣಕ್ಕೆ ಅವರು ಈ ವಾರ ದಂಡ ತೆತ್ತಿದ್ದಾರೆ. ಸುದೀಪ್ (Sudeep) ಅವರು ಕೊಟ್ಟ ಮಾತಿನ ಏಟಿಗೆ ಅವರು ತತ್ತರಿಸಿ ಹೋಗಿದ್ದಾರೆ. ಮಾತನಾಡಲು ಸಾಧ್ಯವಾಗದೇ ಕೇವಲ ಮುಖವನ್ನು ಅಲ್ಲಾಡಿಸುತ್ತಾ ಎಪಿಸೋಡ್ ಮುಗಿಸಿದ್ದಾರೆ. ತಪ್ಪಾಯ್ತು ಎಂದು ಒಪ್ಪಿಕೊಂಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿದೆ.

ಈ ವಾರ ವಿನಯ್ ಗೌಡ ಹಾಗೂ ನಮ್ರತಾ ಒಂದೇ ಗುಂಪಿನಲ್ಲಿ ಇದ್ದರು. ಈ ಕಾರಣಕ್ಕೆ ಪ್ರತಿ ವಿಚಾರದಲ್ಲೂ ಅವರು ವಿನಯ್ ಅವರನ್ನು ವಹಿಸಿಕೊಂಡು ಬಂದರು. ಅದು ಮಿತಿ ಮೀರಿತ್ತು. ಹೆಣ್ಣುಮಕ್ಕಳಿಗೆ ರೆಸ್ಪೆಕ್ಟ್ ಕೊಡಲ್ಲ ಎಂದು ನಮ್ರತಾ ಅವರು ಮೈಕೆಲ್​ಗೆ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ, ವಿನಯ್ ಅವರು  ಹೆಣ್ಣುಮಕ್ಕಳಿಗೆ ಪದೇ ಪದೇ ಅವಮಾನ ಮಾಡಿದರೂ ಈ ವಿಚಾರದಲ್ಲಿ ಮೌನ ತಾಳಿದ್ದರು. ಈ ಬಗ್ಗೆ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ.

‘ನಮ್ರತಾ ಅವರೇ ಈ ವಾರ ಹೆಣ್ಣುಮಕ್ಕಳನ್ನು ಹೇಗೆ ಗೌರವಿಸಬೇಕು ಎಂದು ಮೈಕೆಲ್​ಗೆ ಪಾಠ ಹೇಳಿದಿರಿ. ಆದರೆ, ವಿನಯ್ ಅವರು ನಿಮ್ಮ ಎದುರೇ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದಾಗ ಮೌನವಾಗಿದ್ದಿರಿ. ಗಂಡಸು ತರ ಆಡು, ಬಳೆ ತೊಟ್ಟವರಂತೆ ಆಡಬೇಡ ಎಂದು ವಿನಯ್ ಹೇಳಿದಾಗ ನೀವು ಅಲ್ಲೇ ಇದ್ದಿರಿ. ಈ ಮನೆಯಲ್ಲಿ ಬಳೆಗಳ ರಾಜ ಒಬ್ಬನಿದ್ದಾನೆ ಅಂದಾಗಲೂ ನೀವು ಅಲ್ಲೇ ಇದ್ದಿರಿ. ಆಗ ಇದೆಲ್ಲ ತಪ್ಪು ಎನಿಸಲಿಲ್ಲವೇ. ವಿನಯ್ ಅವರ ಮಾರನ್ನು ಏಕೆ ವಿರೋಧಿಸಲಿಲ್ಲ’ ಎಂದು ಸುದೀಪ್ ಅವರು ನಮ್ರತಾ ಅವರನ್ನು ಪ್ರಶ್ನೆ ಮಾಡಿದರು.

ನಮ್ರತಾಗೆ ಏನು ಉತ್ತರ ಹೇಳಬೇಕು ಎಂದೇ ತಿಳಿಯಲಿಲ್ಲ. ಇದಕ್ಕೆಲ್ಲ ತೇಪೆ ಹಚ್ಚುವ ಕೆಲಸಕ್ಕೆ ಹೋದರು. ಆಗ ಸುದೀಪ್ ಅವರು ನಮ್ರತಾಗೆ ಪಾಠ ಹೇಳಿದರು. ‘ಪ್ರೇಕ್ಷಕರು ನಿಮಗೆ ಚಮಚಾ ನೀಡಿದ್ದರು. ಅದರ ಜೊತೆ ಕೊಟ್ಟ ಪತ್ರ ಕಳೆದು ಹೋಗಿ, ಈಗ ಆ ಚಮಚ ಮಾತ್ರ ಉಳಿದುಕೊಂಡಿದೆ. ಇಡೀ ವಾರ ವೀಕ್ಷಕರಿಗೆ ಕಾಣಿಸಿದ್ದು ಆ ಚಮಚ ಮಾತ್ರ’ ಎಂದರು.

‘ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಬಳೆ ಚರ್ಚೆ: ಬಳೆಗೆ ವಿಶೇಷ ಗೌರವ ನೀಡಿದ ಕಿಚ್ಚ ಸುದೀಪ್

ಸುದೀಪ್ ಹೇಳುತ್ತಿದ್ದ ಪ್ರತಿ ಮಾತು ನಮ್ರತಾ ಅವರನ್ನು ತಿವಿಯುತ್ತಿತ್ತು. ವಿನಯ್ ಅವರನ್ನು ಬೆಂಬಲಿಸುತ್ತಾ ಬಂದ ಅವರಿಗೆ ಸುದೀಪ್ ತೆಗೆದುಕೊಂಡ ಕ್ಲಾಸ್​ನಿಂದ ಮುಖದ ಬಣ್ಣವೇ ಬದಲಾಗಿತ್ತು. ನಮ್ರತಾ ಮುಂದಿನ ದಿನಗಳಲ್ಲಿ ಬದಲಾಗುತ್ತಾರಾ ಅಥವಾ ಇದೇ ರೀತಿ ಚಮಚಾಗಿರಿ ಮುಂದುವರಿಸುತ್ತಾರಾ ಎನ್ನುವ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:09 am, Sun, 5 November 23

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​