AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನಷ್ಟು ಕಿರಿದಾಯ್ತು ಮನೆ, ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟವರಿಗೆ ಟ್ವಿಸ್ಟ್ ಕೊಟ್ಟ ಸುದೀಪ್

Bigg Boss Kannada: ಫಿನಾಲೆಗೆ ಇನ್ನೊಂದು ವಾರ ಇರುವಾಗ ನಮ್ರತಾ ಎಲಿಮಿನೇಟ್ ಆಗಿದ್ದಾರೆ. ಫಿನಾಲೆ ವಾರಕ್ಕೆ ಆರು ಮಂದಿ ಎಂಟ್ರಿ ನೀಡಿದ್ದು, ಎಲ್ಲರಿಗೂ ಒಂದು ಎಚ್ಚರಿಕೆ ನೀಡಿದ್ದಾರೆ ಸುದೀಪ್.

ಇನ್ನಷ್ಟು ಕಿರಿದಾಯ್ತು ಮನೆ, ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟವರಿಗೆ ಟ್ವಿಸ್ಟ್ ಕೊಟ್ಟ ಸುದೀಪ್
ಮಂಜುನಾಥ ಸಿ.
|

Updated on: Jan 21, 2024 | 11:16 PM

Share

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಫಿನಾಲೆಗೆ ಇನ್ನು ಒಂದು ವಾರವಷ್ಟೆ ಉಳಿದಿದೆ. ಈ ವಾರ ಸುದೀಪ್ ಅವರು ಈ ಸೀಸನ್​ನ ಕೊನೆಯ ವಾರಾಂತ್ಯದ ಪಂಚಾಯಿತಿ ನಡೆಸಿಕೊಟ್ಟರು. ಕೊನೆಯ ವೀಕೆಂಡ್ ಎಲಿಮಿನೇಷನ್ ಸಹ ಮಾಡಿದರು. ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ಸಂಗೀತಾ ಈಗಾಗಲೇ ಬಿಗ್​ಬಾಸ್ ಫಿನಾಲೆ ವಾರ ತಲುಪಿದ್ದರು. ವಿನಯ್, ಕಾರ್ತಿಕ್, ನಮ್ರತಾ ಹಾಗೂ ಡ್ರೋನ್ ಪ್ರತಾಪ್ ಅವರುಗಳು ನಾಮಿನೇಷನ್ ಅಲ್ಲಿ ಉಳಿದುಕೊಂಡಿದ್ದರು.

ಪ್ರತಿಬಾರಿಯಂತೆ ಸುದೀಪ್ ನಗು-ನಗುತ್ತಾ ಆರಂಭ ಮಾಡಿದರಾದರೂ ಆರಂಭದಲ್ಲಿಯೇ ಇಲ್ಲಿಂದ ಹೊರಗೆ ಹೋಗುವವರು ಅಸಮರ್ಥರಲ್ಲ, ಆಟ ಈ ಹಂತಕ್ಕೆ ಬಂದಾಗ ಯಾರನ್ನಾದರೂ ಮನೆಯಿಂದ ಹೊರಗೆ ಕಳಿಸುವುದು ಬಹಳ ಕಷ್ಟದ ಕೆಲಸ, ನನಗೂ ಸಹ ಇದು ಕಷ್ಟದ ಕೆಲಸ, ನೋವಿನ ಕೆಲಸ, ಪ್ರತಿ ವರ್ಷವೂ ನನಗೆ ಅದು ಅನುಭವಕ್ಕೆ ಬರುತ್ತದೆ ಎಂದರು.

ಮೊದಲಿಗೆ ವಿನಯ್​ ಸೇಫ್ ಆದರು. ಆ ಮೂಲಕ ವಿನಯ್ ಫಿನಾಲೆ ವಾರಕ್ಕೆ ಎಂಟ್ರಿ ನೀಡಿದರು. ಅದಾದ ಬಳಿಕ ಡ್ರೋನ್ ಪ್ರತಾಪ್, ಕಾರ್ತಿಕ್ ಮತ್ತು ನಮ್ರತಾ ಉಳಿದುಕೊಂಡರು. ಈ ಮನೆಯಲ್ಲಿ ಯಾರು ಉಳಿದುಕೊಳ್ಳಬೇಕು ಎಂದು ಕೇಳಿದಾಗ ಹೆಚ್ಚು ಮತಗಳು ನಮ್ರತಾ ಹಾಗೂ ಕಾರ್ತಿಕ್​ಗೆ ಬಿದ್ದವು. ಆದರೆ ಉಳಿದುಕೊಂಡಿದ್ದು ಡ್ರೋನ್ ಪ್ರತಾಪ್. ಆ ಮೂಲಕ ಪ್ರತಾಪ್ ಸಹ ಫಿನಾಲೆ ವಾರಕ್ಕೆ ಎಂಟ್ರಿ ನೀಡಿದರು.

ಇದನ್ನೂ ಓದಿ:ಈ ಸೀಸನ್​ನಲ್ಲಿ ಬಿಗ್​ಬಾಸ್ ಮನೆಗೆ ಬಂದ ಅತಿಥಿಗಳ್ಯಾರು? ಇಲ್ಲಿದೆ ಪಟ್ಟಿ

ಕೊನೆಗೆ ಉಳಿದಿದ್ದು ನಮ್ರತಾ ಹಾಗೂ ಕಾರ್ತಿಕ್. ಇಬ್ಬರೂ ಸಹ ಮನೆಯ ಗಟ್ಟಿ ಸ್ಪರ್ಧಿಗಳು ಆದರೆ ಈ ವಾರ ಉಳಿದುಕೊಂಡಿದ್ದು ಕಾರ್ತಿಕ್. ಚೆನ್ನಾಗಿ ಆಡಿದ್ದ, ಆಡುತ್ತಾ ಬಂದಿದ್ದ ನಮ್ರತಾ ಫಿನಾಲೆಗೆ ಒಂದು ವಾರ ಇರುವಾಗ ಮನೆಯಿಂದ ಹೊರಗೆ ಹೋದರು. ಅಲ್ಲಿಗೆ ಫಿನಾಲೆ ವಾರಕ್ಕೆ ಸಂಗೀತಾ, ಪ್ರತಾಪ್, ವಿನಯ್, ತುಕಾಲಿ ಸಂತು, ವರ್ತೂರು ಸಂತು ಹಾಗೂ ಕಾರ್ತಿಕ್ ಒಟ್ಟು ಆರು ಜನ ಬಂದರು.

ಸಾಮಾನ್ಯವಾಗಿ ಫಿನಾಲೆ ವಾರಕ್ಕೆ ಐದು ಜನ ಬರುವುದು ವಾಡಿಕೆ. ಬಿಗ್​ಬಾಸ್​ನ ಟಾಪ್ ಐದು ಜನರಿಗೆ ಹೆಚ್ಚು ಮಹತ್ವ. ಆದರೆ ಕೊನೆಯ ವಾರದಲ್ಲಿ ಈ ಆರು ಜನ ಉಳಿದಿದ್ದಾರೆ. ಈ ಬಗ್ಗೆ ಮಾತನಾಡಿದ ಸುದೀಪ್, ಕೊನೆಯ ವಾರ ಆರು ಜನ ಮನೆಯಲ್ಲಿದ್ದೀರಿ ಆದರೆ ಈ ವಾರದಲ್ಲಿ ಯಾರಾದರೂ ಒಬ್ಬರು ಎಲಿಮಿನೇಟ್ ಆಗಬಹುದು. ಅದು ಫಿನಾಲೆ ಟಿಕೆಟ್ ಪಡೆದಿರುವ ಸಂಗೀತಾ ಸೇರಿದಂತೆ, ಈಗ ಸೇಫ್ ಆಗಿರುವ ಡ್ರೋನ್ ಪ್ರತಾಪ್, ಕಾರ್ತಿಕ್ ಸೇರಿದಂತೆ ಒಟ್ಟಾರೆ ಮನೆಯಲ್ಲಿರುವ ಆರು ಮಂದಿಯಲ್ಲಿ ಒಬ್ಬರು ಎಲಿಮಿನೇಟ್ ಆಗಬಹುದು ಎಂದರು.

ಅಲ್ಲಿಗೆ ಕಳೆದ ವಾರ ತನಿಷಾ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಮನೆಯಿಂದ ಹೊರಗೆ ಹೋದಂತೆ ಈ ವಾರವೂ ಸಹ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಅದಾದ ಬಳಿಕ ಮುಂದಿನ ವಾರ ಫಿನಾಲೆ ಶುರುವಾದಾಗ ಮೊದಲಿಗೆ ಒಬ್ಬರನ್ನು ಹೊರಗೆ ಕರೆಸಿ ಆ ನಂತರ ಫಿನಾಲೆಗೆ ಚಾಲನೆ ನೀಡಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ