AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನಷ್ಟು ಕಿರಿದಾಯ್ತು ಮನೆ, ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟವರಿಗೆ ಟ್ವಿಸ್ಟ್ ಕೊಟ್ಟ ಸುದೀಪ್

Bigg Boss Kannada: ಫಿನಾಲೆಗೆ ಇನ್ನೊಂದು ವಾರ ಇರುವಾಗ ನಮ್ರತಾ ಎಲಿಮಿನೇಟ್ ಆಗಿದ್ದಾರೆ. ಫಿನಾಲೆ ವಾರಕ್ಕೆ ಆರು ಮಂದಿ ಎಂಟ್ರಿ ನೀಡಿದ್ದು, ಎಲ್ಲರಿಗೂ ಒಂದು ಎಚ್ಚರಿಕೆ ನೀಡಿದ್ದಾರೆ ಸುದೀಪ್.

ಇನ್ನಷ್ಟು ಕಿರಿದಾಯ್ತು ಮನೆ, ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟವರಿಗೆ ಟ್ವಿಸ್ಟ್ ಕೊಟ್ಟ ಸುದೀಪ್
ಮಂಜುನಾಥ ಸಿ.
|

Updated on: Jan 21, 2024 | 11:16 PM

Share

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಫಿನಾಲೆಗೆ ಇನ್ನು ಒಂದು ವಾರವಷ್ಟೆ ಉಳಿದಿದೆ. ಈ ವಾರ ಸುದೀಪ್ ಅವರು ಈ ಸೀಸನ್​ನ ಕೊನೆಯ ವಾರಾಂತ್ಯದ ಪಂಚಾಯಿತಿ ನಡೆಸಿಕೊಟ್ಟರು. ಕೊನೆಯ ವೀಕೆಂಡ್ ಎಲಿಮಿನೇಷನ್ ಸಹ ಮಾಡಿದರು. ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ಸಂಗೀತಾ ಈಗಾಗಲೇ ಬಿಗ್​ಬಾಸ್ ಫಿನಾಲೆ ವಾರ ತಲುಪಿದ್ದರು. ವಿನಯ್, ಕಾರ್ತಿಕ್, ನಮ್ರತಾ ಹಾಗೂ ಡ್ರೋನ್ ಪ್ರತಾಪ್ ಅವರುಗಳು ನಾಮಿನೇಷನ್ ಅಲ್ಲಿ ಉಳಿದುಕೊಂಡಿದ್ದರು.

ಪ್ರತಿಬಾರಿಯಂತೆ ಸುದೀಪ್ ನಗು-ನಗುತ್ತಾ ಆರಂಭ ಮಾಡಿದರಾದರೂ ಆರಂಭದಲ್ಲಿಯೇ ಇಲ್ಲಿಂದ ಹೊರಗೆ ಹೋಗುವವರು ಅಸಮರ್ಥರಲ್ಲ, ಆಟ ಈ ಹಂತಕ್ಕೆ ಬಂದಾಗ ಯಾರನ್ನಾದರೂ ಮನೆಯಿಂದ ಹೊರಗೆ ಕಳಿಸುವುದು ಬಹಳ ಕಷ್ಟದ ಕೆಲಸ, ನನಗೂ ಸಹ ಇದು ಕಷ್ಟದ ಕೆಲಸ, ನೋವಿನ ಕೆಲಸ, ಪ್ರತಿ ವರ್ಷವೂ ನನಗೆ ಅದು ಅನುಭವಕ್ಕೆ ಬರುತ್ತದೆ ಎಂದರು.

ಮೊದಲಿಗೆ ವಿನಯ್​ ಸೇಫ್ ಆದರು. ಆ ಮೂಲಕ ವಿನಯ್ ಫಿನಾಲೆ ವಾರಕ್ಕೆ ಎಂಟ್ರಿ ನೀಡಿದರು. ಅದಾದ ಬಳಿಕ ಡ್ರೋನ್ ಪ್ರತಾಪ್, ಕಾರ್ತಿಕ್ ಮತ್ತು ನಮ್ರತಾ ಉಳಿದುಕೊಂಡರು. ಈ ಮನೆಯಲ್ಲಿ ಯಾರು ಉಳಿದುಕೊಳ್ಳಬೇಕು ಎಂದು ಕೇಳಿದಾಗ ಹೆಚ್ಚು ಮತಗಳು ನಮ್ರತಾ ಹಾಗೂ ಕಾರ್ತಿಕ್​ಗೆ ಬಿದ್ದವು. ಆದರೆ ಉಳಿದುಕೊಂಡಿದ್ದು ಡ್ರೋನ್ ಪ್ರತಾಪ್. ಆ ಮೂಲಕ ಪ್ರತಾಪ್ ಸಹ ಫಿನಾಲೆ ವಾರಕ್ಕೆ ಎಂಟ್ರಿ ನೀಡಿದರು.

ಇದನ್ನೂ ಓದಿ:ಈ ಸೀಸನ್​ನಲ್ಲಿ ಬಿಗ್​ಬಾಸ್ ಮನೆಗೆ ಬಂದ ಅತಿಥಿಗಳ್ಯಾರು? ಇಲ್ಲಿದೆ ಪಟ್ಟಿ

ಕೊನೆಗೆ ಉಳಿದಿದ್ದು ನಮ್ರತಾ ಹಾಗೂ ಕಾರ್ತಿಕ್. ಇಬ್ಬರೂ ಸಹ ಮನೆಯ ಗಟ್ಟಿ ಸ್ಪರ್ಧಿಗಳು ಆದರೆ ಈ ವಾರ ಉಳಿದುಕೊಂಡಿದ್ದು ಕಾರ್ತಿಕ್. ಚೆನ್ನಾಗಿ ಆಡಿದ್ದ, ಆಡುತ್ತಾ ಬಂದಿದ್ದ ನಮ್ರತಾ ಫಿನಾಲೆಗೆ ಒಂದು ವಾರ ಇರುವಾಗ ಮನೆಯಿಂದ ಹೊರಗೆ ಹೋದರು. ಅಲ್ಲಿಗೆ ಫಿನಾಲೆ ವಾರಕ್ಕೆ ಸಂಗೀತಾ, ಪ್ರತಾಪ್, ವಿನಯ್, ತುಕಾಲಿ ಸಂತು, ವರ್ತೂರು ಸಂತು ಹಾಗೂ ಕಾರ್ತಿಕ್ ಒಟ್ಟು ಆರು ಜನ ಬಂದರು.

ಸಾಮಾನ್ಯವಾಗಿ ಫಿನಾಲೆ ವಾರಕ್ಕೆ ಐದು ಜನ ಬರುವುದು ವಾಡಿಕೆ. ಬಿಗ್​ಬಾಸ್​ನ ಟಾಪ್ ಐದು ಜನರಿಗೆ ಹೆಚ್ಚು ಮಹತ್ವ. ಆದರೆ ಕೊನೆಯ ವಾರದಲ್ಲಿ ಈ ಆರು ಜನ ಉಳಿದಿದ್ದಾರೆ. ಈ ಬಗ್ಗೆ ಮಾತನಾಡಿದ ಸುದೀಪ್, ಕೊನೆಯ ವಾರ ಆರು ಜನ ಮನೆಯಲ್ಲಿದ್ದೀರಿ ಆದರೆ ಈ ವಾರದಲ್ಲಿ ಯಾರಾದರೂ ಒಬ್ಬರು ಎಲಿಮಿನೇಟ್ ಆಗಬಹುದು. ಅದು ಫಿನಾಲೆ ಟಿಕೆಟ್ ಪಡೆದಿರುವ ಸಂಗೀತಾ ಸೇರಿದಂತೆ, ಈಗ ಸೇಫ್ ಆಗಿರುವ ಡ್ರೋನ್ ಪ್ರತಾಪ್, ಕಾರ್ತಿಕ್ ಸೇರಿದಂತೆ ಒಟ್ಟಾರೆ ಮನೆಯಲ್ಲಿರುವ ಆರು ಮಂದಿಯಲ್ಲಿ ಒಬ್ಬರು ಎಲಿಮಿನೇಟ್ ಆಗಬಹುದು ಎಂದರು.

ಅಲ್ಲಿಗೆ ಕಳೆದ ವಾರ ತನಿಷಾ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಮನೆಯಿಂದ ಹೊರಗೆ ಹೋದಂತೆ ಈ ವಾರವೂ ಸಹ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಅದಾದ ಬಳಿಕ ಮುಂದಿನ ವಾರ ಫಿನಾಲೆ ಶುರುವಾದಾಗ ಮೊದಲಿಗೆ ಒಬ್ಬರನ್ನು ಹೊರಗೆ ಕರೆಸಿ ಆ ನಂತರ ಫಿನಾಲೆಗೆ ಚಾಲನೆ ನೀಡಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್