AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಂದ ಗೋಕುಲ’: ತಂದೆ ನಂದನ ನಿಜವಾದ ಆಶಯ ತಿಳಿದು ಬದಲಾದ ಕೇಶವ

ಕಲರ್ಸ್ ಕನ್ನಡದ 'ನಂದ ಗೋಕುಲ' ಧಾರಾವಾಹಿಯಲ್ಲಿ, ನಂದನ ನಿಜ ಆಶಯ ತಿಳಿದು ಮಗ ಕೇಶವನ ನಿರ್ಧಾರ ಬದಲಾಗಿದೆ. ತಂದೆಯ ಕೋಪದ ಹಿಂದಿನ ಪ್ರೀತಿ ಅರ್ಥವಾದ ಕೇಶವ, ಮನೆ ಬಿಟ್ಟು ಹೋಗುವ ತನ್ನ ಹಿಂದಿನ ನಿರ್ಧಾರದಿಂದ ಹಿಂದೆ ಸರಿದಿದ್ದಾನೆ. ಟಿಆರ್‌ಪಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಈ ಜನಪ್ರಿಯ ಧಾರಾವಾಹಿ, ಭಾವನಾತ್ಮಕ ತಿರುವು ಪಡೆದು ಪ್ರೇಕ್ಷಕರನ್ನು ಸೆಳೆದಿದೆ.

‘ನಂದ ಗೋಕುಲ’: ತಂದೆ ನಂದನ ನಿಜವಾದ ಆಶಯ ತಿಳಿದು ಬದಲಾದ ಕೇಶವ
ನಂದ ಗೋಕುಲ
 ಶ್ರೀಲಕ್ಷ್ಮೀ ಎಚ್
| Edited By: |

Updated on:Apr 28, 2026 | 7:55 AM

Share

‘ನಂದ ಗೋಕುಲ’ ಧಾರಾವಾಹಿ (Nanda Gokula) ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ ಮತ್ತು ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿಯನ್ನು ಅನೇಕರು ಇಷ್ಟಪಟ್ಟಿದ್ದಾರೆ. ಈಗ ಧಾರಾವಾಹಿಯಲ್ಲಿ ನಂದನ ಅಸಲಿ ಮುಖ ರಿವೀಲ್ ಆಗಿದೆ. ಅಂದರೆ ಆತ ಏನು ಎಂಬುದು ರಿವೀಲ್ ಆಗಿದೆ. ಇದರಿಂದ ಕೇಶವ ತನ್ನ ನಿರ್ಧಾರವನ್ನು ಬದಲಿಸಿದ್ದಾನೆ. ಈ ಎಪಿಸೋಡ್ ಗಮನ ಸೆಳೆಯುವ ರೀತಿಯಲ್ಲಿ ಇದೆ.

ನಂದನು ಮಕ್ಕಳಿಗೆ ಪ್ರೀತಿ ತೋರಿಸುತ್ತಾನೆ ನಿಜ. ಆದರೆ, ಅದೇ ರೀತಿಯಲ್ಲಿ ಆತನಿಗೆ ಮಕ್ಕಳ ಮೇಲೆ ಸಿಟ್ಟು ಕೂಡ ಇದೆ. ಆತ ಪ್ರೀತಿ ತೋರಿಸೋದೇ ಹೀಗೆ. ಇದು ಮನೆಯ ಎಲ್ಲರಿಗೂ ಗೊತ್ತಿದೆ. ಆದರೂ ಕೆಲವು ಘಟನೆ ಕೇಶವನ ಕೋಪಕ್ಕೆ ಕಾರಣ ಆಗಿದೆ. ಆತ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದ. ಆದರೆ, ಈಗ ಆತ ಬದಲಾಗಿದ್ದಾನೆ. ಮನೆ ಬಿಟ್ಟ ಹೋಗುವ ನಿರ್ಧಾರದಿಂದ ಹಿಂದೆ ಬಂದಿದ್ದಾನೆ.

ಕೇಶವ ಹಾಗೂ ಮೀನಾ ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ಕೆಲವು ಕೆಲಸವನ್ನು ಕೇಶವನಿಗೆ ಹೇಳಲಾಗಿತ್ತು. ಆದರೆ, ಈ ಕೆಲಸವನ್ನು ಅವನು ಮಾಡಲೇ ಇಲ್ಲ. ಇದಕ್ಕೆ ಕಾರಣವೂ ಇದೆ. ಆತನಿಗೆ ಮೀನಾ ಜೊತೆ ಸಮಯ ಕಳೆಯಬೇಕಿತ್ತು. ಹೀಗಾಗಿ, ತಂದೆ ನಂದ ಕೊಟ್ಟ ಕೆಲಸವನ್ನು ಕೇಶವ ಮಾಡಿರಲಿಲ್ಲ. ಇದರಿಂದ ನಂದ ಬೇಸರಗೊಂಡಿದ್ದಾನೆ.

ನಂದನು ಬೇಸರಗೊಂಡ ಬಳಿಕ ಕೇಶವನಿಗೆ ಬಯ್ಯೋಕೆ ಆರಂಭಿಸಿದ. ಈ ಬಯ್ಯುವಿಕೆ ನಂತರ ಮೀನಾ ಮೇಲೂ ಶಿಫ್ಟ್ ಆಯಿತು. ಇದು ಕೇಶವನಿಗೆ ಸಾಕಷ್ಟು ಬೇಸರ ಮೂಡಿಸಿತು. ತನಗೆ ಬಯ್ಯೋದನ್ನು ಆತ ಹೇಗೋ ಸಹಸಿಕೊಳ್ಳುತ್ತಿದ್ದ. ಆದರೆ, ಈಗ ಮೀನಾಗೆ ಬಯ್ಯೋದನ್ನು ನೋಡಿ ಆತ ಸಿಟ್ಟಾಗಿದ್ದಾನೆ.

ನಂದನ ಮಾತಿನಿಂದ ಕೇಶವ ಬೇಸರಗೊಂಡ. ಆತ ಬೇರೆ ಮನೆ ಮಾಡುವ ನಿರ್ಧಾರಕ್ಕೆ ಬಂದ. ನಂತರ ಅಪ್ಪ ಮಾಡೋದು ಒಳ್ಳೆಯದಕ್ಕೆ ಎಂಬ ವಿಷಯ ಅರಿವಾಗಿದೆ. ಹೀಗಾಗಿ, ಬೇರೆ ಮನೆ ಮಾಡಬೇಕು ಎಂಬ ನಿರ್ಧರದಿಂದ ಹಿಂದೆ ಸರಿದಿದ್ದಾನೆ.

ಇದನ್ನೂ ಓದಿ: ನಂದ ಗೋಕುಲ: ಮೀನಾಳ ಒಪ್ಪಿಕೊಂಡ ನಂದ? ಸೊಸೆಗೆ ಆರತಿ ಎತ್ತಿ ಸ್ವಾಗತಿಸಿದ ಮಾವ

‘ನಂದ ಗೋಕುಲ’ ಧಾರಾವಾಹಿ ಕಲರ್ಸ್​​ನ ಟಾಪ್​ ಧಾರಾವಾಹಿಗಳಲ್ಲಿ ಮೊದಲಿದೆ. ಈ ಧಾರಾವಾಹಿ ಟಿಆರ್​​ಪಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡು ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:53 am, Tue, 28 April 26

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ