
ಕನ್ನಡ ಕಿರುತೆರೆಯ ಜನಪ್ರಿಯ ನಟ ಗಗನ್ ಚಿನ್ನಪ್ಪ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಗೆ ಪ್ರಮುಖ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಹಲವು ಪ್ರಸಿದ್ಧ ಧಾರಾವಾಹಿಗಳಲ್ಲಿ ನಾಯಕನಾಗಿ ನಟಿಸಿ ವೀಕ್ಷಕರ ಮನ ಗೆದ್ದಿರುವ ಗಗನ್, ಇದೀಗ ರಿಯಾಲಿಟಿ ಶೋ ಅಂಗಳದಲ್ಲಿ ತಮ್ಮ ರಿಯಲ್ ವ್ಯಕ್ತಿತ್ವವನ್ನು ಅನಾವರಣಗೊಳಿಸಲು ಸಿದ್ಧರಾಗಿದ್ದಾರೆ. ಅವರು ಜೋಶ್ನಿಂದ ದೊಡ್ಮನೆಗೆ ಪ್ರವೇಶ ಪಡೆದುಕೊಂಡಿದ್ದಾರೆ.
‘ಮಂಗಳ ಗೌರಿ ಮದುವೆ’ ಧಾರಾವಾಹಿಯಲ್ಲಿ ನಟಿಸಿದರು. ಅದು ಅವರ ಮೊದಲ ಸೀರಿಯಲ್. ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸಿ ಭರ್ಜರಿ ಮೆಚ್ಚುಗೆ ಪಡೆದರು. ಈ ಧಾರಾವಾಹಿಯಲ್ಲಿ ರಾಮ್ ಪಾತ್ರ ಸಾಕಷ್ಟು ಮೆಚ್ಚುಗೆ ಪಡೆಯಿತು. ಅವರು ಈಗ ಬಿಗ್ ಬಾಸ್ ವೇದಿಕೆ ಏರಿರುವುದು ಅನೇಕರಿಗೆ ಅಚ್ಚರಿ ತಂದಿದೆ.
ಗ್ರ್ಯಾಂಡ್ ಓಪನಿಂಗ್ ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರೊಂದಿಗೆ ಮಾತುಕತೆ ನಡೆಸಿದ ಗಗನ್, ತಮ್ಮ ಜರ್ನಿ ಹಂಚಿಕೊಂಡರು. ‘ಬಿಗ್ ಬಾಸ್ ಪ್ರಯಾಣ ಮುಖ್ಯ’ ಎಂದರು. ತಮ್ಮ ವಿಶಿಷ್ಟ ಪರ್ಸನಾಲಿಟಿ, ಫಿಟ್ನೆಸ್ ಹಾಗೂ ಚಾರ್ಮಿಂಗ್ ಲುಕ್ನಿಂದಲೇ ಹೆಸರುವಾಸಿಯಾಗಿರುವ ಇವರು ಮನೆಯೊಳಗೆ ಸೃಷ್ಟಿಸಲಿರುವ ಕಂಟೆಂಟ್ ಮತ್ತು ನೀಡಲಿರುವ ಟಾಸ್ಕ್ ಪರ್ಫಾರ್ಮೆನ್ಸ್ ಮೇಲೆ ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿದೆ.
ಇದನ್ನೂ ಓದಿ: ಮಸ್ಕತ್ನಲ್ಲಿ ಹುಟ್ಟಿದ ಸೌಂದರ್ಯಾ ಶೆಟ್ಟಿ ಬಿಗ್ ಬಾಸ್ಗೆ ಎಂಟ್ರಿ
ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಗಗನ್ ಚಿನ್ನಪ್ಪ, ದೊಡ್ಮನೆಯ ಸವಾಲುಗಳನ್ನು ಎದುರಿಸಿ ವೀಕ್ಷಕರ ಹೃದಯ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ‘ನಾನು ಸಖತ್ ಮನರಂಜನೆ ಕೊಡುತ್ತೇನೆ’ ಎಂದು ಗಗನ್ ಭರವಸೆ ನೀಡಿ ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಪಡೆದರು ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.