AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಗೆ ಬಂತು ಪ್ರತಾಪ್​ನ ಡ್ರೋನ್​; ಅಂದು ಚುಚ್ಚುಮಾತು, ಇಂದು ಮೆಚ್ಚುಗೆ ಮಾತು

ಡ್ರೋನ್​ ವಿಚಾರವನ್ನೇ ಇಟ್ಟುಕೊಂಡು ಆರಂಭದಲ್ಲಿ ಪ್ರತಾಪ್​ ಅವರನ್ನು ಎಲ್ಲರೂ ಗೇಲಿ ಮಾಡಿದ್ದರು. ಚುಚ್ಚುಮಾತುಗಳನ್ನು ಆಡಿದ್ದರು. ಆದರೆ ಬಿಗ್​ ಬಾಸ್​ ಶೋ ಮುಗಿಯುವಾಗ ಅದೇ ಡ್ರೋನ್​ ವಿಚಾರದಲ್ಲಿ ಅವರಿಗೆ ಎಲ್ಲರೂ ಭೇಷ್​ ಎಂದಿದ್ದಾರೆ. ಮೆಚ್ಚುಗೆಯ ಮಾತು ತಿಳಿಸಿದ್ದಾರೆ. ‘ನೀನು ಸಾಧನೆ ಮಾಡಿದ್ದೀಯ’ ಎಂದು ಹೊಗಳಿದ್ದಾರೆ.

ಬಿಗ್​ ಬಾಸ್​ ಮನೆಗೆ ಬಂತು ಪ್ರತಾಪ್​ನ ಡ್ರೋನ್​; ಅಂದು ಚುಚ್ಚುಮಾತು, ಇಂದು ಮೆಚ್ಚುಗೆ ಮಾತು
ಡ್ರೋನ್​ ಪ್ರತಾಪ್​
ಮದನ್​ ಕುಮಾರ್​
|

Updated on: Jan 26, 2024 | 10:20 PM

Share

ಕೆಲವೇ ದಿನಗಳ ಹಿಂದೆ ಬಿಗ್​ ಬಾಸ್​ (Bigg Boss Kannada) ಮನೆಯ ಸದಸ್ಯರು ಕೆಲವು ಆಸೆಗಳನ್ನು ತೋಡಿಕೊಂಡಿದ್ದರು. ಅದನ್ನು ಈಡೇರಿಸುವುದಾಗಿ ಬಿಗ್​ ಬಾಸ್​ ಕೂಡ ಭರವಸೆ ನೀಡಿದ್ದರು. 109ನೇ ದಿನದಲ್ಲಿ ಡ್ರೋನ್​ ಪ್ರತಾಪ್​ (Drone Prathap) ಅವರ ಒಂದು ಆಸೆಯನ್ನು ನೆರವೇರಿಸಲಾಗಿದೆ. ಬಿಗ್​ ಬಾಸ್ ಮನೆಯೊಳಗೆ ಡ್ರೋನ್​ ತರಿಸಬೇಕು ಎಂದು ಪ್ರತಾಪ್​ ಕೇಳಿಕೊಂಡಿದ್ದರು. ಅದು ತಮ್ಮದೇ ಕಂಪನಿಯ ಡ್ರೋನ್​. ಅವರ ಕೋರಿಕೆಯಂತೆ ದೊಡ್ಮನೆಯೊಳಗೆ ಡ್ರೋನ್​ ತರಿಸಲಾಗಿದೆ. ಅದನ್ನು ನೋಡಿ ಪ್ರತಾಪ್​ ತುಂಬಾ ಖುಷಿಪಟ್ಟಿದ್ದಾರೆ. ತಮ್ಮ ಕಂಪನಿಯ ಈ ಡ್ರೋನ್​ (Drone) ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ಅವರ ಬಗ್ಗೆ ಇನ್ನುಳಿದ ಸದಸ್ಯರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

‘ಇದು ನನಗೆ ಸ್ಪೈಡರ್​ ರೀತಿ ಕಾಣುತ್ತಿದೆ’ ಎಂದು ಸಂಗೀತಾ ಶೃಂಗೇರಿ ಹೇಳಿದರು.‘ಹೊಲಕ್ಕೆ ಔಷಧಿ ಸಿಂಪಡಿಲು ಈ ಡ್ರೋನ್​ ಬಳಸಬಹುದು’ ಎಂದು ಹೇಳಿದ ಡ್ರೋನ್​ ಪ್ರತಾಪ್​ ಅವರು ‘ಇದು ನಮ್ಮಲ್ಲಿ ಇರುವ ಚಿಕ್ಕ ಡ್ರೋನ್​. ಇನ್ನೂ ದೊಡ್ಡದು ಇವೆ’ ಎಂದು ಮಾಹಿತಿ ನೀಡಿದರು. ‘ಇದರ ಮೂಲಕ ಅಂಗಾಂಗ ಕೂಡ ಕಳಿಸಬಹುದು’ ಎಂದು ಪ್ರತಾಪ್​ ಹೇಳಿದ್ದು ಕೇಳಿ ಎಲ್ಲರಿಗೂ ಅಚ್ಚರಿ ಆಯಿತು.

ಇದನ್ನೂ ಓದಿ: ‘ಡ್ರೋನ್​ ಪ್ರತಾಪ್​ ಒಳ್ಳೆಯ ಹುಡುಗ’: ಕೊನೇ ಕ್ಷಣದಲ್ಲಿ ಒಪ್ಪಿಕೊಂಡ ವಿನಯ್​ ಗೌಡ

‘ಸಣ್ಣ ಇಳುವರಿ ಇರುವ ರೈತರು ಈ ಡ್ರೋನ್​ ಬಳಸಬಹುದಾ’ ಎಂದು ತುಕಾಲಿ ಸಂತೋಷ್​ ಪ್ರಶ್ನಿಸಿದರು. ‘ಹೌದು.. ನೀವು ಇಟ್ಟುಕೊಂಡು, ನಿಮ್ಮ ಕೆಲಸ ಮುಗಿದ ಬಳಿಕ ಬೇರೆಯವರಿಗೆ ಬಾಡಿಗೆ ನೀಡಬಹುದು’ ಎಂದು ಪ್ರತಾಪ್​ ಉತ್ತರಿಸಿದರು. ‘ಇದು ರೈತರಿಗಾಗಿ ಮಾಡಿರುವ ಡ್ರೋನ್​. ಇದನ್ನು ತೋರಿಸಲು ಬಿಗ್​ ಬಾಸ್​ ಈ ಅವಕಾಶ ಕೊಟ್ಟಿದ್ದಕ್ಕೆ ಋಣಿಯಾಗಿ ಇರುತ್ತೇನೆ’ ಎಂದು ಪ್ರತಾಪ್​ ಖುಷಿ ಹಂಚಿಕೊಂಡರು.

ಇದನ್ನೂ ಓದಿ: ‘ಡ್ರೋನ್​ ಪ್ರತಾಪ್​ ಗೆದ್ದರೂ ಗೆಲ್ಲಬಹುದು’ ಎಂದ ವಿನಯ್​ ಗೌಡ; ಈ ಮಾತಿಗೆ ಕಾರಣ ಏನು?

ಡ್ರೋನ್​ ವಿಚಾರವನ್ನೇ ಇಟ್ಟುಕೊಂಡು ಆರಂಭದಲ್ಲಿ ಪ್ರತಾಪ್​ ಅವರನ್ನು ಎಲ್ಲರೂ ಗೇಲಿ ಮಾಡಿದ್ದರು. ಚುಚ್ಚುಮಾತುಗಳನ್ನು ಆಡಿದ್ದರು. ಆದರೆ ಬಿಗ್​ ಬಾಸ್​ ಶೋ ಮುಗಿಯುವಾಗ ಅದೇ ಡ್ರೋನ್​ ವಿಚಾರದಲ್ಲಿ ಅವರಿಗೆ ಎಲ್ಲರೂ ಭೇಷ್​ ಎಂದಿದ್ದಾರೆ. ಮೆಚ್ಚುಗೆಯ ಮಾತು ತಿಳಿಸಿದ್ದಾರೆ. ‘ನೀನು ಸಾಧನೆ ಮಾಡಿದ್ದೀಯ. ಬಾರಿ ಖುಷಿ ಆಯಿತು. ಇದು ನಿನ್ನ ದೊಡ್ಡ ಆಸೆ. ಇದು ನಿನ್ನ ಬದುಕಿನ ಕ್ಯಾಪ್ಟನ್​. ರೈತರಿಗೆ ನೀನು ಇದನ್ನು ತೋರಿಸಿದ್ದೀಯ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ’ ಎಂದು ತುಕಾಲಿ ಸಂತೋಷ್​ ಅವರು ಹೇಳಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಇರುವವರ ಪ್ರೋತ್ಸಾಹದ ಮಾತುಗಳಿಂದ ಪ್ರತಾಪ್​ಗೆ ಸಂತೋಷ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More