AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ಮಾತಾಡುವ ಮೊದಲೇ ರಜತ್​ಗೆ ಪಾಠ ಕಲಿಸಿದ ಬಿಗ್ ಬಾಸ್ ಸದಸ್ಯರು

ಬಾಯಿಗೆ ಬಂದಂತೆ ಮಾತನಾಡಿದ್ದ ರಜತ್ ಅವರಿಗೆ ಬಿಗ್ ಬಾಸ್​ ಮನೆಯ ಸದಸ್ಯರು ಕಳಪೆ ಪಟ್ಟ ನೀಡಿದ್ದಾರೆ. ಬಹುತೇಕ ಎಲ್ಲ ಅಭಿಪ್ರಾಯ ಇದೇ ಆಗಿದ್ದರಿಂದ ರಜತ್ ಜೈಲಿಗೆ ಹೋಗಬೇಕಾಯಿತು. ಜೈಲಿಗೆ ಹೋದರೂ ಕೂಡ ರಜತ್ ಸೊಕ್ಕು ಕಡಿಮೆ ಆಗಿಲ್ಲ. ಹಾಗಾಗಿ ವೀಕೆಂಡ್​ನಲ್ಲಿ ಅವರು ಸುದೀಪ್​ ಕಡೆಯಿಂದ ಬೈಯ್ಯಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಸುದೀಪ್ ಮಾತಾಡುವ ಮೊದಲೇ ರಜತ್​ಗೆ ಪಾಠ ಕಲಿಸಿದ ಬಿಗ್ ಬಾಸ್ ಸದಸ್ಯರು
ರಜತ್
ಮದನ್​ ಕುಮಾರ್​
|

Updated on: Nov 22, 2024 | 11:13 PM

Share

ವೈಲ್ಡ್ ಕಾರ್ಡ್​ ಮೂಲಕ ಬಿಗ್ ಬಾಸ್ ಮನೆಗೆ ಬಂದಿರುವ ರಜತ್ ಅವರಿಗೆ ಮಾತಿನ ಮೇಲೆ ಹಿಡಿತ ಇಲ್ಲ. ಇನ್ನುಳಿದ ಸ್ಪರ್ಧಿಗಳಿಗೆ ಅವರು ಅವಾಚ್ಯ ಪದಗಳನ್ನು ಬಳಸಿದ್ದಾರೆ. ಗೋಲ್ಡ್​ ಸುರೇಶ್​ ಅವರಿಗೆ ಅವಮಾನ ಆಗುವಂತಹ ಮಾತುಗಳನ್ನು ರಜತ್ ಹೇಳಿದ್ದಾರೆ. ಆಟದ ಮಧ್ಯೆ ಅಶ್ಲೀಲ ಪದ ಬಳಕೆ ಮಾಡಿದ್ದರಿಂದ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ಆಗಿದೆ. ಹಾಗಾಗಿ ಅವರಿಗೆ ಎಲ್ಲರೂ ಸೇರೆ ಕಳಪೆ ಪಟ್ಟ ನೀಡಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲನೇ ವಾರವೇ ರಜತ್ ಅವರು ಜೈಲು ಸೇರುವಂತಾಗಿದೆ. ಹಾಗಂತ ಅವರ ಅಹಂಕಾರ ಕಡಿಮೆ ಆಗಿಲ್ಲ.

ಇಡೀ ವಾರದ ಆಟ ಮತ್ತು ವರ್ತನೆಯನ್ನು ಪರಿಗಣಿಸಿ ದೊಡ್ಮನೆಯಲ್ಲಿ ಕಳಪೆ ಯಾರು ಮತ್ತು ಉತ್ತಮ ಯಾರು ಎಂಬುದನ್ನು ನಿರ್ಧರಿಸಲಾಗುತ್ತದೆ. ಈ ವಾರ ಉತ್ತಮ ಪಟ್ಟ ಮೋಕ್ಷಿತಾ ಅವರಿಗೆ ಸಿಕ್ಕಿತು. ಕಳಪೆ ಪಟ್ಟ ರಜತ್ ಪಾಲಾಯಿತು. ಎಲ್ಲರೂ ನೀಡಿದ್ದು ಒಂದೇ ಕಾರಣ. ರಜತ್ ಆಡುವ ಮಾತುಗಳು ಸರಿ ಇಲ್ಲ ಎಂಬುದೇ ಆ ಕಾರಣ. ಆದರೆ ತಮ್ಮ ತಪ್ಪನ್ನು ರಜತ್ ಅರಿತುಕೊಂಡಿಲ್ಲ.

ಜೈಲಿಗೆ ಹೋದಾಗಲೂ ರಜತ್ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ‘ಬಿಗ್ ಬಾಸ್ ಟ್ರೋಫಿ ಗೆಲ್ಲುವುದು ಹುಡುಗಿಯರ ಕೈ ಕೈ ಹಿಡಿದುಕೊಂಡು ಓಡಾಡಿದಂತೆ ಅಲ್ಲ. ಇನ್ಮೇಲೆ ಇದಕ್ಕಿಂತಲೂ ಜಾಸ್ತಿ ಮಾತನಾಡುತ್ತೇನೆ. ನಾನು ಬದಲಾಗಲ್ಲ’ ಎಂದು ರಜತ್ ಹೇಳಿದ್ದಾರೆ. ಅವರ ಮಾತುಗಳಿಂದ ಉಗ್ರಂ ಮಂಜು, ಐಶ್ವರ್ಯಾ, ಶಿಶಿರ್​ ಮುಂತಾದವರಿಗೆ ಮತ್ತೆ ಬೇಸರ ಆಗಿದೆ.

ಇದನ್ನೂ ಓದಿ: ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು

ವೀಕೆಂಡ್​ ಪಂಚಾಯ್ತಿಯಲ್ಲಿ ಸುದೀಪ್​ ಅವರು ರಜತ್​ಗೆ ಕ್ಲಾಸ್​ ತೆಗೆದುಕೊಳ್ಳಬೇಕು ಎಂಬುದು ಬಹುತೇಕರ ಬಯಕೆ. ಅದಕ್ಕೂ ಮುನ್ನವೇ ರಜತ್​ಗೆ ಕಳಪೆ ನೀಡಿ ಜೈಲಿಗೆ ಕಳಿಸುವ ಮೂಲಕ ಬಿಗ್ ಬಾಸ್​ ಸ್ಪರ್ಧಿಗಳೇ ಪಾಠ ಕಲಿಸಿದ್ದಾರೆ. ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್​ಗೆ ರಜತ್ ಆಯ್ಕೆ ಆಗಿದ್ದರು. ಆದರೆ ಕೊನೆಯಲ್ಲಿ ಸೋತರು. ಅಂತಿಮವಾಗಿ ಮಂಜು ಟಾಸ್ಕ್​ ಗೆದ್ದು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಈ ಆಟದಲ್ಲಿ ಹನುಮಂತ ಕೂಡ ಭರ್ಜರಿ ಪೈಪೋಟಿ ನೀಡಿದರು. ಚೈತ್ರಾ ಕುಂದಾಪುರ ಹಾಗೂ ಶೋಭಾ ಶೆಟ್ಟಿ ಸಹ ಕ್ಯಾಪ್ಟೆನ್ಸಿ ಆಟದಲ್ಲಿ ಸೋತರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್