AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ರಿವಿಕ್ರಮ್ ಮುಖವಾಡ ಬಯಲು ಮಾಡಿದ ಉಗ್ರಂ ಮಂಜು; ಹೆಚ್ಚಿತು ದ್ವೇಷ

ಮೊದಲಿಗೆ ಕ್ಯಾಪ್ಟೆನ್ಸಿ ಟಾಸ್ಕ್​ನಲ್ಲಿ ತ್ರಿವಿಕ್ರಮ್ ಅವರಿಗೆ ಉಗ್ರಂ ಮಂಜು ಸಹಾಯ ಮಾಡಿದ್ದರು. ಆದರೆ ನಂತರದ ವಾರದಲ್ಲಿ ಉಗ್ರಂ ಮಂಜು ಅವರು ಕ್ಯಾಪ್ಟನ್ ಆಗುವ ಅವಕಾಶಕ್ಕೆ ತ್ರಿವಿಕ್ರಮ್ ಕಲ್ಲು ಹಾಕಿದ್ದರು. ನಾಮಿನೇಷನ್​ ಸಂದರ್ಭದಲ್ಲಿ ಈ ಬಗ್ಗೆ ಮಂಜು ಗರಂ ಆಗಿ ಮಾತನಾಡಿದ್ದಾರೆ. ಅಲ್ಲದೇ, ಬೇರೆ ಸ್ಪರ್ಧಿಗಳನ್ನು ತ್ರಿವಿಕ್ರಮ್ ಹೇಗೆ ತಮ್ಮತ್ತ ಸೆಳೆಯುತ್ತಾರೆ ಎಂಬುದನ್ನು ಕೂಡ ಮಂಜು ತಿಳಿಸಿದ್ದಾರೆ.

ತ್ರಿವಿಕ್ರಮ್ ಮುಖವಾಡ ಬಯಲು ಮಾಡಿದ ಉಗ್ರಂ ಮಂಜು; ಹೆಚ್ಚಿತು ದ್ವೇಷ
ಉಗ್ರಂ ಮಂಜು, ತ್ರಿವಿಕ್ರಮ್
ಮದನ್​ ಕುಮಾರ್​
|

Updated on: Nov 19, 2024 | 11:01 PM

Share

ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಅವರು ಸ್ಟ್ರಾಂಗ್ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದಾರೆ. ಅವರಿಗೆ ಉಗ್ರಂ ಮಂಜು ಅವರು ನೇರವಾಗಿ ಪೈಪೋಟಿ ನೀಡುತ್ತಿದ್ದಾರೆ. ಈ ವಾರದ ನಾಮಿನೇಷನ್​ ಪ್ರಕ್ರಿಯೆಯಲ್ಲಿ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ತ್ರಿವಿಕ್ರಮ್ ಅವರನ್ನು ನಾಮಿನೇಟ್ ಮಾಡುವಾಗ ಉಗ್ರಂ ಮಂಜು ಅವರು ಒಂದಷ್ಟು ಕಾರಣಗಳನ್ನು ನೀಡಿದ್ದಾರೆ. ಆ ಮೂಲಕ ತ್ರಿವಿಕ್ರಮ್ ಅವರ ಮುಖವಾಡ ಕಳಚುವ ಪ್ರಯತ್ನವನ್ನು ಉಗ್ರಂ ಮಂಜು ಮಾಡಿದ್ದಾರೆ. ಈ ವೇಳೆ ಇಬ್ಬರೂ ಏರು ಧ್ವನಿಯಲ್ಲಿ ವಾದ ಮಾಡಿಕೊಂಡಿದ್ದಾರೆ.

ಮೊದಲು ಮೋಕ್ಷಿತಾ ಅವರು ಉಗ್ರಂ ಮಂಜು ಜೊತೆ ಚೆನ್ನಾಗಿ ಇದ್ದರು. ಆದರೆ ಮೋಕ್ಷಿತಾ ಅವರನ್ನು ತಮ್ಮತ್ತ ಸೆಳೆದುಕೊಳ್ಳಬೇಕು ಎಂಬ ಕಾರಣಕ್ಕಾಗಿ ತ್ರಿವಿಕ್ರಮ್ ಅವರು ಒಂದು ಪ್ಲ್ಯಾನ್ ಮಾಡಿದ್ದರು. ‘ನಿಮ್ಮ ಜೊತೆ ನಾನು ಆಟ ಆಡಬೇಕು’ ಎಂದು ಮೋಕ್ಷಿತಾ ಜೊತೆ ಕೈ ಜೋಡಿಸಲು ತ್ರಿವಿಕ್ರಮ್ ಪ್ರಯತ್ನಿಸಿದ್ದರು. ಅದೇ ಸಮಯಕ್ಕೆ ಮೋಕ್ಷಿತಾ ಅವರು ಉಗ್ರಂ ಮಂಜು ಜೊತೆ ಸ್ನೇಹ ಕೆಡಿಸಿಕೊಂಡರು. ಅವರ ಈ ಬದಲಾವಣೆ ಹಿಂದೆ ತ್ರಿವಿಕ್ರಮ್ ಅವರ ಕುತಂತ್ರ ವರ್ಕ್ ಆಗಿದೆ ಎಂಬುದು ಮಂಜು ವಾದ.

ಈ ಮೊದಲು ಕ್ಯಾಪ್ಟೆನ್ಸಿ ಆಟದಲ್ಲಿ ತ್ರಿವಿಕ್ರಮ್ ಅವರಿಗೆ ಉಗ್ರಂ ಮಂಜು ಸಹಾಯ ಮಾಡಿದ್ದರು. ಮುಂದಿನ ಬಾರಿ ಉಗ್ರಂ ಮಂಜುಗೆ ತಾವು ಸಪೋರ್ಟ್ ಮಾಡುವುದಾಗಿ ತ್ರಿವಿಕ್ರಮ್ ಮಾತು ನೀಡಿದ್ದರು. ಆದರೆ ಆ ಮಾತಿಗೆ ತಕ್ಕಂತೆ ತ್ರಿವಿಕ್ರಮ್ ನಡೆದುಕೊಂಡಿಲ್ಲ ಎಂದು ಮಂಜು ವಾದ ಮಾಡಿದ್ದಾರೆ. ಅಲ್ಲದೇ, ತ್ರಿವಿಕ್ರಮ್ ಅವರದ್ದು ಬೇರೆಯವರನ್ನು ತುಳಿದು ಮುಂದೆ ಸಾಗುವ ವ್ಯಕ್ತಿತ್ವ ಎಂದು ಮಂಜು ಖಂಡಿಸಿದ್ದಾರೆ.

ಇದನ್ನೂ ಓದಿ: ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ಉಗ್ರಂ ನಟನ ವಿರುದ್ಧ ತೊಡೆ ತಟ್ಟಿದ ತ್ರಿವಿಕ್ರಮ್

ಎಲ್ಲ ಟಾಸ್ಕ್​ನಲ್ಲಿಯೂ ತ್ರಿವಿಕ್ರಮ್ ಅವರು ಅಗ್ರೆಸಿವ್ ಆಗಿ ಆಡುತ್ತಾರೆ. ಹಾಗಾಗಿ ಅವರನ್ನು ಸ್ಟ್ರಾಂಗ್ ಸ್ಪರ್ಧಿ ಎಂದು ಎಲ್ಲರೂ ಪರಿಗಣಿಸಿದ್ದಾರೆ. ಅವರ ಜೊತೆ ಕೈ ಜೋಡಿಸಬೇಕು ಎಂಬ ಕಾರಣದಿಂದ ಚೈತ್ರಾ ಅವರು ಕಳೆದ ವಾರ ಶಿಶಿರ್ ಜೊತೆ ಜೋಡಿ ಮುರಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಅದರಿಂದಾಗಿ ಚೈತ್ರಾ ಅವರಿಗೆ ಮುಳುವಾಯಿತು. ತ್ರಿವಿಕ್ರಮ್ ಅವರು ಚೈತ್ರಾ ಬದಲು ಭವ್ಯಾ ಅವರನ್ನು ಆಯ್ಕೆ ಮಾಡಿಕೊಂಡರು. ಭವ್ಯಾ ಕ್ಯಾಪ್ಟನ್ ಆದರು. ಚೈತ್ರಾಗೆ ಸಿಕ್ಕಿದ್ದು ಕಪ್ಪು ಚುಕ್ಕಿ ಮಾತ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್