AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramayan Serial: ಮತ್ತೆ ಟಿವಿಯಲ್ಲಿ ಪ್ರಸಾರ ಆಗಲಿದೆ ‘ರಾಮಾಯಣ’ ಧಾರಾವಾಹಿ; ‘ಆದಿಪುರುಷ್​ಗಿಂತ ಇದೇ ಉತ್ತಮ’ ಎಂದ ಪ್ರೇಕ್ಷಕರು

Ramanand Sagar: ರಮಾನಂದ್​ ಸಾಗರ್​ ನಿರ್ದೇಶನ ಮಾಡಿದ್ದ ‘ರಾಮಾಯಣ’ ಸೀರಿಯಲ್​ 1987ರಲ್ಲಿ ಪ್ರಸಾರ ಕಂಡಿತ್ತು. ‘ದೂರದರ್ಶನ’ ವಾಹಿನಿ ಮೂಲಕ ಬಿತ್ತರವಾದ ಈ ಧಾರಾವಾಹಿಯನ್ನು ಜನರು ಈಗಲೂ ಹೊಗಳುತ್ತಾರೆ.

Ramayan Serial: ಮತ್ತೆ ಟಿವಿಯಲ್ಲಿ ಪ್ರಸಾರ ಆಗಲಿದೆ ‘ರಾಮಾಯಣ’ ಧಾರಾವಾಹಿ; ‘ಆದಿಪುರುಷ್​ಗಿಂತ ಇದೇ ಉತ್ತಮ’ ಎಂದ ಪ್ರೇಕ್ಷಕರು
ರಾಮಾಯಣ ಧಾರಾವಾಹಿ
Follow us
ಮದನ್​ ಕುಮಾರ್​
|

Updated on: Jun 28, 2023 | 8:23 PM

ಪ್ರಭಾಸ್​ ನಟನೆಯ ‘ಆದಿಪುರುಷ್​’ (Adipurush) ಸಿನಿಮಾದಿಂದ ಸಾಕಷ್ಟು ವಿವಾದ ಸೃಷ್ಟಿ ಆಯಿತು. ಈ ಚಿತ್ರವನ್ನು ಹೊಗಳಿದ್ದಕ್ಕಿಂತ ತೆಗಳಿದವರೇ ಹೆಚ್ಚು. ರಾಮಾಯಣವನ್ನು ಆಧಾರವಾಗಿ ಇಟ್ಟುಕೊಂಡು ಈ ಚಿತ್ರ ಮೂಡಿಬಂದಿತ್ತು. ಆದರೆ ರಾಮಾಯಣದ ಕಥೆಯನ್ನು ಮನಬಂದಂತೆ ತೆರೆಗೆ ತರಲಾಗಿದೆ ಎಂಬುದು ಪ್ರೇಕ್ಷಕರ ಆರೋಪ. ಪ್ರಭಾಸ್ (Prabhas) ಅವರು ಮಾಡಿದ ರಾಮನ ಪಾತ್ರ ಹಾಗೂ ಸೈಫ್​ ಅಲಿ ಖಾನ್​ ಮಾಡಿದ ರಾವಣನ ಪಾತ್ರದ ಬಗ್ಗೆ ಜನರಿಂದ ಭಾರಿ ಅಸಮಾಧಾನ ವ್ಯಕ್ತವಾಯಿತು. ಆಂಜನೇಯನ ಪಾತ್ರದ ಸಂಭಾಷಣೆಗಳಿಗೂ ಆಕ್ಷೇಪ ಎದುರಾಯಿತು. ‘ಈ ಸಿನಿಮಾಗಿಂತ ಹಳೇ ಕಾಲದ ರಾಮಾಯಣ ಧಾರಾವಾಹಿಯೇ ಎಷ್ಟೋ ಉತ್ತಮ’ ಎಂದು ಪ್ರೇಕ್ಷಕರು ಅನಿಸಿಕೆ ಹಂಚಿಕೊಂಡರು. ಹಾಗಾಗಿ ಮತ್ತೆ ಟಿವಿಯಲ್ಲಿ ‘ರಾಮಾಯಣ’ ಸೀರಿಯಲ್​ (Ramayana Serial) ಪ್ರಸಾರ ಮಾಡಲು ನಿರ್ಧರಿಸಲಾಗಿದೆ.

ಕೊವಿಡ್​ ಲಾಕ್​ಡೌನ್​ ಸಂದರ್ಭದಲ್ಲಿ ಹಳೇ ಸೀರಿಯಲ್​ಗಳನ್ನು ಮತ್ತೆ ಪ್ರಸಾರ ಮಾಡಲಾಗಿತ್ತು. ಬೇರೆ ಬೇರೆ ಭಾಷೆಗಳಿಗೆ ಡಬ್​ ಮಾಡಿ ಬಿತ್ತರಿಸಲಾಗಿತ್ತು. ಆಗ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಒಳ್ಳೆಯ ಟಿಆರ್​ಪಿ ಬಂದಿತ್ತು. ಈಗ ‘ರಾಮಾಯಣ’ ಧಾರಾವಾಹಿಯ ಮರುಪ್ರಸಾರಕ್ಕೆ ‘ಶೆಮರೂ ಟಿವಿ’ ಮುಂದಾಗಿದೆ. ಜುಲೈ 3ರಿಂದ ಈ ಸೀರಿಯಲ್​ ಸಂಚಿಕೆಗಳು ರಾತ್ರಿ 7.30ಕ್ಕೆ ಪ್ರಸಾರ ಆಗಲಿವೆ. ವೀಕ್ಷಕರಿಂದ ಯಾವ ರೀತಿ ರೆಸ್ಪಾನ್ಸ್​ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Arun Govil: ರಾಮನ ಪಾತ್ರ ಮಾಡಿದ್ದ ನಟನ ಕಾಲಿಗೆ ಬಿದ್ದು ಮಗುವನ್ನು ಉಳಿಸುವಂತೆ ಬೇಡಿಕೊಂಡಿದ್ದ ಮಹಿಳೆ: ನಂತರ ಆಗಿದ್ದೇನು?

ರಮಾನಂದ್​ ಸಾಗರ್​ ಅವರು ನಿರ್ದೇಶನ ಮಾಡಿದ್ದ ‘ರಾಮಾಯಣ’ ಧಾರಾವಾಹಿ 1987ರಲ್ಲಿ ಪ್ರಸಾರ ಕಂಡಿತ್ತು. ‘ದೂರದರ್ಶನ’ ವಾಹಿನಿ ಮೂಲಕ ಬಿತ್ತರವಾದ ಈ ಧಾರಾವಾಹಿಯನ್ನು ಜನರು ಈಗಲೂ ಮೆಚ್ಚಿಕೊಳ್ಳುತ್ತಾರೆ. ಪೌರಾಣಿಕ ಕಥೆಯನ್ನು ತುಂಬ ಅಚ್ಚುಕಟ್ಟಾಗಿ ಜನರ ಮುಂದಿರಿಸಿದ ಸೀರಿಯಲ್​ ಎಂದು ಎಲ್ಲರೂ ಹೊಗಳುತ್ತಾರೆ. ‘ಆದಿಪುರುಷ್’ ಸಿನಿಮಾಗೆ ಟೀಕೆ ಎದುರಾದ ಹಿನ್ನೆಲೆಯಲ್ಲಿ ಹಳೇ ರಾಮಾಯಣ ಸೀರಿಯಲ್​ನ ಬಗ್ಗೆ ಜನರು ಮತ್ತೆ ಮಾತನಾಡಲು ಆರಂಭಿಸಿದ್ದಾರೆ.

ಇದನ್ನೂ ಓದಿ: Ramayan: ಮತ್ತೆ ರಾಮಾಯಣ, ಮಹಾಭಾರತದ ಕಥೆ ಇಟ್ಟುಕೊಂಡ ಸಿನಿಮಾ ಮಾಡುವ ಧೈರ್ಯ ಯಾರಿಗಿದೆ?

‘ರಾಮಾಯಣ’ ಧಾರಾವಾಹಿಯಲ್ಲಿ ರಾಮನ ಪಾತ್ರವನ್ನು ಅರುಣ್​ ಗೋವಿಲ್​ ಮಾಡಿದ್ದರು. ಸೀತೆಯಾಗಿ ದೀಪಿಕಾ ಚಿಖ್ಲಿಯಾ ನಟಿಸಿದ್ದರು. ಆಂಜನೇಯನಾಗಿ ಧಾರ ಸಿಂಗ್​ ಅಭಿನಯಿಸಿದ್ದರು. ಆ ಪಾತ್ರಗಳನ್ನು ವೀಕ್ಷಕರು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ. ಜನರು ಈ ಸೀರಿಯಲ್​ ಅನ್ನು ಬಹಳ ಭಕ್ತಿ ಭಾವದಿಂದ ವೀಕ್ಷಿಸಿದ್ದರು. ರಾಮ-ಸೀತೆಯ ಪಾತ್ರ ಮಾಡಿದ್ದ ಅರುಣ್​ ಗೋವಿಲ್​ ಮತ್ತು ದೀಪಿಕಾ ಚಿಖ್ಲಿಯಾ ಅವರಿಗೆ ಜನರು ತುಂಬ ಗೌರವ ನೀಡುತ್ತಿದ್ದರು. ಆದರೆ ‘ಆದಿಪುರುಷ್​’ ಚಿತ್ರತಂಡದವರು ಟ್ರೋಲ್​ ಆಗುವ ರೀತಿಯಲ್ಲಿ ಸಿನಿಮಾ ಮಾಡಿದ್ದು ವಿಪರ್ಯಾಸ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್