Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಕಡೆಗೆ ವಿಚಿತ್ರ ಲುಕ್ ನೀಡಿದ ದೀಪಿಕಾ; ಎಲ್ಲಕ್ಕೂ ಕಾರಣ ಭಾಯಿ ಇಟ್ಟ ಹೊಸ ಹೆಸರು!

Deepika Padukone | Salman Khan: ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ನ 15 ಸೀಸನ್ ಮುಕ್ತಾಯವಾಗಲು ದಿನಗಣನೆ ಆರಂಭವಾಗಿದೆ. ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಸೇರಿದಂತೆ ಅನೇಕ ತಾರೆಯರು ಕಾಣಿಸಿಕೊಳ್ಳಲಿದ್ದಾರೆ.

ಸಲ್ಮಾನ್ ಕಡೆಗೆ ವಿಚಿತ್ರ ಲುಕ್ ನೀಡಿದ ದೀಪಿಕಾ; ಎಲ್ಲಕ್ಕೂ ಕಾರಣ ಭಾಯಿ ಇಟ್ಟ ಹೊಸ ಹೆಸರು!
ದೀಪಿಕಾ ಪಡುಕೋಣೆ, ಸಲ್ಮಾನ್ ಖಾನ್
Follow us
TV9 Web
| Updated By: shivaprasad.hs

Updated on: Jan 26, 2022 | 7:00 AM

ಹಿಂದಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್ 15 (Big Boss 15) ಮುಕ್ತಾಯದ ಹಂತಕ್ಕೆ ಸಮೀಪಿಸುತ್ತಿದೆ. ಜನರ ಕುತೂಹಲವನ್ನು ಕೆರಳಿಸುತ್ತಿರುವ ಈ ಬಾರಿಯ ಶೋನಲ್ಲಿ ಪ್ರಶಸ್ತಿ ಗೆಲ್ಲಲು ಕಠಿಣ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ವಿಶೇಷ ಅತಿಥಿ ಆಗಮನದ ಪ್ರೋಮೋವನ್ನು ವಾಹಿನಿ ಬಿಡುಗಡೆ ಮಾಡಿದ್ದು, ಕುತೂಹಲ ಕೆರಳಿಸಿದೆ. ಕಲರ್ಸ್ ವಾಹಿನಿ ಸಲ್ಮಾನ್ ಖಾನ್ (Salman Khan) ನಡೆಸಿಕೊಡುವ ಕಾರ್ಯಕ್ರಮದ ಪ್ರೋಮೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ದೀಪಿಕಾ ಪಡುಕೋಣೆ (Deepika Padukone) ಫಿನಾಲೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೀಗ ಶೋನ ಪ್ರೋಮೋದಲ್ಲಿ ದೀಪಿಕಾಗೆ ಸಲ್ಮಾನ್ ಹೊಸ ಹೆಸರನ್ನಿಟ್ಟಿದ್ದು, ವೀಕ್ಷಕರ ಮುಖದಲ್ಲಿ ನಗು ಮೂಡಲು ಕಾರಣವಾಗಿದೆ. ಅಷ್ಟಕ್ಕೂ ದೀಪಿಕಾ ಪಡುಕೋಣೆ ಎಂಬ ಹೆಸರಿನ ಬದಲಾಗಿ ಸಲ್ಮಾನ್ ಇಟ್ಟ ಹೆಸರೇನು? ಇಲ್ಲಿದೆ ಕುತೂಹಲಕರ ಮಾಹಿತಿ.

ಪ್ರೋಮೋನಲ್ಲಿ ತೋರಿಸಲಾಗಿರುವಂತೆ ದೀಪಿಕಾ ಪಡುಕೋಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅವರನ್ನು ಸಲ್ಮಾನ್ ಪರಿಚಯಿಸಿಕೊಡುತ್ತಾ, ‘‘ದೀಪಿಕಾ ರಣವೀರ್ ಪಡುಕೋಣೆ ಸಿಂಗ್’ ಎಂದಿದ್ದಾರೆ. ದೀಪಿಕಾ ಪತಿ ರಣವೀರ್ ಅವರ ಸಂಪೂರ್ಣ ಹೆಸರನ್ನೂ ಸೇರಿಸಿ ಹೊಸ ಹೆಸರನ್ನು ಸಲ್ಮಾನ್ ಖಾನ್ ನಾಮನಕರಣ ಮಾಡಿದ್ದು, ದೀಪಿಕಾ ಮುಖದಲ್ಲೂ ನಗು ತರಿಸಿದೆ. ಅದಕ್ಕೆ ಅವರು ವಿಚಿತ್ರವಾಗಿ ಸಲ್ಮಾನ್ ಕಡೆಗೆ ನೋಡಿದ್ದಾರೆ. ಇದು ಶೋನಲ್ಲಿ ಮತ್ತಷ್ಟು ನಗು ಮೂಡಲು ಕಾರಣವಾಗಿದೆ.

ವಾಹಿನಿ ಹಂಚಿಕೊಂಡ ಪ್ರೋಮೋ ಇಲ್ಲಿದೆ:

View this post on Instagram

A post shared by ColorsTV (@colorstv)

ಬಿಗ್ ಬಾಸ್ ಫಿನಾಲೆ ಯಾವಾಗ?: ಇತ್ತೀಚೆಗೆ ವಾಹಿನಿ ಮತ್ತೊಂದು ಪ್ರೋಮೋ ಹಂಚಿಕೊಂಡಿತ್ತು. ಅದರಲ್ಲಿ ಈ ವಾರಾಂತ್ಯ ಅಂದರೆ ಜನವರಿ 29 ಹಾಗೂ 30ರಂದು ರಾತ್ರಿ 8 ಗಂಟೆಗೆ ಬಿಗ್ ಬಾಸ್ ಫಿನಾಲೆ ಪ್ರಸಾರವಾಗಲಿದೆ ಎಂದು ತಿಳಿಸಲಾಗಿತ್ತು. ದೀಪಿಕಾ ಪಡುಕೋಣೆಯಲ್ಲದೇ ಹಲವಾರು ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಬಿಗ್ ಬಾಸ್ 15ರಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳೂ ಭಾಗವಹಿಸಲಿದ್ದಾರೆ.

ಅಂತಿಮ ಸುತ್ತಿಗೆ ಮನೆಯಲ್ಲಿ ಉಳಿದುಕೊಂಡಿರುವವರು ಯಾರೆಲ್ಲಾ? ಪ್ರಸ್ತುತ ಬಿಗ್ ಬಾಸ್ ಮನೆಯಲ್ಲಿ ಶಮಿತಾ ಶೆಟ್ಟಿ, ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ, ರಾಖಿ ಸಾವಂತ್, ನಿಶಾಂತ್ ಭಟ್, ರಶ್ಮಿ ದೇಸಾಯಿ ಮತ್ತು ಪ್ರತೀಕ್ ಸೆಹಜ್ಪಾಲ್ ಉಳಿದುಕೊಂಡಿದ್ದು, ಫೈನಲ್​ನಲ್ಲಿ ಸ್ಪರ್ಧಿಸಲಿದ್ದಾರೆ. ಈ ಮೊದಲು ಜನವರಿ ಮೊದಲ ಭಾಗದಲ್ಲಿ ಬಿಗ್​ ಬಾಸ್ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ ವಾಹಿನಿಯು ಇದನ್ನು ಎರಡು ವಾರಗಳ ಕಾಲ ಮುಂದೂಡಿತ್ತು. ಆದರೆ ಬಿಗ್ ಬಾಸ್ ಫಿನಾಲೆ ಮುಂದೂಡಲು ಕಾರಣವನ್ನು ನಿರ್ಮಾಪಕರು ಅಥವಾ ವಾಹಿನಿ ನೀಡಿರದಿದ್ದರೂ, ಕೊರೊನಾ ಕಾರಣ ಸದ್ಯ ಹೊಸ ಶೋ ಪ್ರಾರಂಭಿಸುವುದು ಕಷ್ಟವಾದ್ದರಿಂದ ಬಿಗ್ ಬಾಸ್ ಮುಂದುವರೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಧ್ಯಮಮಗಳು ವರದಿ ಮಾಡಿದ್ದವು. ಅಂತಿಮವಾಗಿ ಈ ವಾರ ಫಿನಾಲೆ ನಡೆಯಲಿದೆ.

ಇದನ್ನೂ ಓದಿ:

Sonu Nigam: ಖ್ಯಾತ ಗಾಯಕ ಸೋನು ನಿಗಮ್​ ಸಾಧನೆಗೆ ಒಲಿಯಿತು ಪದ್ಮಶ್ರೀ ಪ್ರಶಸ್ತಿಯ ಗರಿ

ಈ ವರ್ಷ ಮದುವೆಯಾಗುತ್ತೇನೆ ಎಂದ ಶಮಿತಾ; ಆದರೆ ಹುಡುಗ ಯಾರು ಎಂಬುದೇ ಅನುಮಾನವಂತೆ!

ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್