Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬೇಕಂತಲೇ ಹೀಗೆ ಮಾಡಿದೆ’: ಊಟದ ವಿಚಾರದಲ್ಲಿ ತಾರತಮ್ಯ ಮಾಡಿ ಸಮರ್ಥಿಸಿಕೊಂಡ್ರಾ ಸಂಗೀತಾ?

ಸಂಗೀತಾ ಶೃಂಗೇರಿ ಮಾಡಿದ ತಾರತಮ್ಯ ಕೆಲವರಿಗೆ ಇಷ್ಟ ಆಗಿಲ್ಲ. ಅದನ್ನು ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ಪ್ರಶ್ನೆ ಮಾಡಿದ್ದಾರೆ. ‘ನಾನು ಬೇಕಂತಲೇ ಹೀಗೆ ಮಾಡಿದ್ದೇನೆ’ ಎಂದು ಸಂಗೀತಾ ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಆಪ್ತ ಸ್ನೇಹಿತ ಕಾರ್ತಿಕ್​ ಮಹೇಶ್​ ಕೂಡ ಸಂಗೀತಾಗೆ ಬೆಂಬಲ ನೀಡಿಲ್ಲ.

‘ಬೇಕಂತಲೇ ಹೀಗೆ ಮಾಡಿದೆ’: ಊಟದ ವಿಚಾರದಲ್ಲಿ ತಾರತಮ್ಯ ಮಾಡಿ ಸಮರ್ಥಿಸಿಕೊಂಡ್ರಾ ಸಂಗೀತಾ?
ತುಕಾಲಿ ಸಂತೋಷ್​, ಸಂಗೀತಾ ಶೃಂಗೇರಿ
Follow us
ಮದನ್​ ಕುಮಾರ್​
|

Updated on: Dec 03, 2023 | 7:10 AM

ಹಲವು ಕಾರಣಗಳಿಂದ ಸಂಗೀತಾ ಶೃಂಗೇರಿ (Sangeetha Sringeri) ಅವರು ಬಿಗ್​ ಬಾಸ್​ ಮನೆಯಲ್ಲಿ ಹೈಲೈಟ್​ ಆಗಿದ್ದಾರೆ. ತಮಗೆ ಅನಿಸಿದ್ದನ್ನು ಅವರು ನೇರವಾಗಿ ಹೇಳುತ್ತಾರೆ. ತಮಗೆ ಸರಿ ಎನಿಸಿದ ರೀತಿಯಲ್ಲಿ ಅವರು ನಡೆದುಕೊಳ್ಳುತ್ತಾರೆ. ಅದೇ ಕಾರಣಕ್ಕಾಗಿ ಅವರು ಟ್ರೋಲ್​ ಆಗಿದ್ದುಂಟು. ಕೆಲವೊಮ್ಮೆ ಅವರು ಮಾಡಿದ ಕೆಲಸಗಳು ಸಿಕ್ಕಾಪಟ್ಟೆ ಟೀಕೆಗೆ ಒಳಗಾಗಿದ್ದುಂಟು. ಈಗ ಊಟದ ವಿಚಾರದಲ್ಲಿ ಸಂಗೀತಾ ಶೃಂಗೇರಿ ವಿಲನ್​ ಆಗಿದ್ದಾರೆ. ವರ್ತೂರು ಸಂತೋಷ್​ (Tukali Santosh) ಮತ್ತು ತುಕಾಲಿ ಸಂತೋಷ್​ ಅವರಿಗೆ ಸಂಗೀತಾ ತಂಗಳನ್ನ ನೀಡಿದ್ದಾರೆ ಎಂಬ ವಿಚಾರವು ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಸಖತ್​ ಚರ್ಚೆ ಆಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಊಟಕ್ಕೆ ಇತಿ-ಮಿತಿ ಇರುತ್ತದೆ. ಎಲ್ಲರೂ ಹಂಚಿಕೊಂಡು ತಿನ್ನಬೇಕು. ಕೆಲವರು ಹೆಚ್ಚು ಬಡಿಸಿಕೊಂಡರೆ ಇನ್ನುಳಿದವರಿಗೆ ಸರಿಯಾಗಿ ಊಟ ಸಿಗುವುದಿಲ್ಲ. 8ನೇ ವೀಕೆಂಡ್​ನಲ್ಲಿ ಹಾಗೆಯೇ ಆಗಿದೆ. ಅನ್ನ ಮಾಡಿದ ಬಳಿಕ ಯಾರು ಬೇಗ ಬಂದು ಹಾಕಿಕೊಂಡಿದ್ದಾರೋ ಅವರಿಗೆ ಮಾತ್ರ ಬಿಸಿ ಅನ್ನ ಸಿಕ್ಕಿದೆ. ಕೊನೆಯಲ್ಲಿ ಬಂದವರಿಗೆ ತಂಗಳನ್ನವೇ ಗತಿ ಆಗಿದೆ. ಇದರಿಂದ ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ಅವರಿಗೆ ಬೇಸರ ಆಗಿದೆ. ಅದನ್ನು ಅವರು ನೇರವಾಗಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ; ಇಲ್ಲಿದೆ ವಿಡಿಯೋ

ಬಿಸಿ ಅನ್ನವನ್ನು ಎಲ್ಲರಿಗೂ ಶೇರ್​ ಮಾಡಬೇಕು ಎಂಬುದು ವರ್ತೂರು ಮತ್ತು ತುಕಾಲಿ ಅವರ ವಾದ. ಆದರೆ ಇದನ್ನು ಸಂಗೀತಾ ಒಪ್ಪಿಕೊಂಡಿಲ್ಲ. ‘ಬಿಸಿ ಅನ್ನ ಬೇಕಾದವರು ಬೇಗ ಬರಬೇಕಿತ್ತು’ ಎಂದಿದ್ದಾರೆ ಸಂಗೀತಾ. ‘ಇದು ಸರಿಯಲ್ಲ’ ಎಂದಿದ್ದಾರೆ ತುಕಾಲಿ ಸಂತೋಷ್​. ಇದರಿಂದ ಕೋಪಗೊಂಡ ಸಂಗೀತಾ, ‘ಬೇಕು ಅಂತಲೇ ನಾನು ಹೀಗೆ ಮಾಡಿದ್ದೇನೆ. ಇದರಿಂದ ನನಗೆ ತುಂಬ ಖುಷಿ ಸಿಗುತ್ತದೆ’ ಎಂದು ಹೇಳಿದ್ದಾರೆ. ಈ ಮಾತು ಕೇಳಿಸಿಕೊಂಡ ತುಕಾಲಿ ಸಂತೋಷ್​ ಅವರಿಗೆ ಸಖತ್​ ಕೋಪ ಬಂದಿದೆ. ‘ಬಿಗ್​ ಬಾಸ್​ ಎಂದರೆ ನಿನ್ನ ಮನೆಯಲ್ಲ’ ಎಂದು ಜಗಳ ಮಾಡಿದ್ದಾರೆ.

ಇದನ್ನೂ ಓದಿ: ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಗಳಗಳನೆ ಕಣ್ಣೀರು ಹಾಕಿದ ಸಿರಿ

ಇಷ್ಟೆಲ್ಲ ಜಗಳ ನಡೆಯುತ್ತಿರುವಾಗ ಯಾರೂ ಕೂಡ ಸಂಗೀತಾ ಅವರಿಗೆ ಬೆಂಬಲ ನೀಡಿಲ್ಲ. ಮೊದಲು ಬಂದು ಬಿಸಿ ಅನ್ನ ಬಡಿಸಿಕೊಂಡವರು ಸಹ ಸಂಗೀತಾ ಪರ ಮಾತನಾಡಿಲ್ಲ. ಅದನ್ನು ಡ್ರೋನ್​ ಪ್ರತಾಪ್​ ಬಳಿ ಹೇಳಿಕೊಂಡು ಸಂಗೀತಾ ಶೃಂಗೇರಿ ಕಣ್ಣೀರು ಹಾಕಿದ್ದಾರೆ. ಈ ಹಿಂದೆ ಕಾರ್ತಿಕ್​ ಮಹೇಶ್​ ಕೂಡ ಊಟದ ವಿಚಾರದಲ್ಲಿ ಇದೇ ರೀತಿ ಕೂಗಾಡಿದ್ದು ಸಂಗೀತಾಗೆ ಬೇಸರ ತರಿಸಿತ್ತು. ಪ್ರತಿ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಬಿಗ್​ ಬಾಸ್​ ಸಂಚಿಕೆ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.