AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಸಿಹಿಯ ಊರು ಸುತ್ತುವ ಕಾರ್ಯಕ್ರಮ ರಾಮ್ ಮತ್ತು ಸೀತಾ ಮಧ್ಯೆ ಪ್ರೀತಿ ಅಂಕುರವಾಗುವಂತೆ ಮಾಡುತ್ತಾ?

Seetha Raama Serial: ರಾಮ್ ಮತ್ತು ಅಶೋಕ್ ಮಾಡಿರುವ ಐಡಿಯಾ ಬಗ್ಗೆ ಗೊತ್ತಿಲ್ಲದ ರಾಮನ ಚಿಕ್ಕಿ ಅವನು ಆಫೀಸ್ನಲ್ಲಿಯೇ ಇದ್ದಾನೆ ಎಂದು ನಂಬಿಕೊಳ್ಳುತ್ತಾಳೆ. ಜೊತೆಗೆ ಬಾಸ್ ಹಿಂದೆ ಯಾರೋ ಬಿದ್ದಿದ್ದಾರೆ ಅದನ್ನು ಪತ್ತೆ ಹಚ್ಚಿ ಎಂದು ಚರಣ್ ಗೆ ವಿಷಯ ತಿಳಿಸುತ್ತಾಳೆ. ಹೇಳದೆ ಕೇಳದೆ ಆಫೀಸಿಗೆ ಬಂದಿರುವ ಮ್ಯಾನೇಜರ್ ನಡೆ ಅಶೋಕ್ ಗೆ ಅನುಮಾನ ತರಿಸುತ್ತದೆ. ಮುಂದೆ ಏನಾಗಬಹುದು? ಕಾದು ನೋಡೋಣ.

Seetha Raama Serial: ಸಿಹಿಯ ಊರು ಸುತ್ತುವ ಕಾರ್ಯಕ್ರಮ ರಾಮ್ ಮತ್ತು ಸೀತಾ ಮಧ್ಯೆ ಪ್ರೀತಿ ಅಂಕುರವಾಗುವಂತೆ ಮಾಡುತ್ತಾ?
ಸೀತಾ ರಾಮ
ಪ್ರೀತಿ ಭಟ್​, ಗುಣವಂತೆ
| Updated By: ಮಂಜುನಾಥ ಸಿ.|

Updated on:Aug 29, 2023 | 10:30 PM

Share

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 32: ರುದ್ರ ಪ್ರತಾಪನ ಮೋಸ ಅರಿಯದ ಸೀತಾ ಅವನ ಮಾತು ಕೇಳಿ ಆಫೀಸ್ ಗೆ ಹೋಗುತ್ತಾಳೆ. ಅವಳಿಗಾಗಿ ರಾಮ್ ಮತ್ತು ಸಿಹಿ ಹೊರಗಡೆಯೇ ಕಾದು ಕುಳಿತುಕೊಳ್ಳುತ್ತಾರೆ. ಒಳಗೆ ಹೋದ ಸೀತಾ ಆರ್ ಪಿಯ ಮೋಸದ ತೆಕ್ಕೆಗೆ ಬೀಳುವ ಮೊದಲು ಹೊರಗಡೆ ಕಾದು ಕುಳಿತ ಸಿಹಿ, ಅಮ್ಮ ಬರದಿರುವುದನ್ನು ನೋಡಿ ಒಳಗಡೆ ಬರುತ್ತಾಳೆ. ಆರ್ ಪಿ ಸೀತಾಳಿಗೆ ಕೊಡುವ ಜ್ಯೂಸ್ ನಲ್ಲಿ ಮದ್ದು ಬೆರೆಸಿರುತ್ತಾನೆ ಇನ್ನೇನು ಸೀತಾ ಕುಡಿಯಬೇಕು ಎನ್ನುವಷ್ಟರಲ್ಲಿ ಸಿಹಿ ಬಂದ ವೇಗಕ್ಕೆ ಅವಳ ಕೈ ಜಾರಿ ಆ ಗ್ಲಾಸ್ ಕೆಳಗೆ ಬೀಳುತ್ತದೆ. ಅವಳ ಹಿಂದೆ ರಾಮನು ಓಡಿ ಬರುತ್ತಾನೆ. ಅದನ್ನು ನೋಡಿದ ರುದ್ರ ಪ್ರತಾಪನಿಗೆ ಕೋಪ ಉಕ್ಕರಿಸಿ ಬರುತ್ತದೆ. ಆದರೆ ಏನು ಹೇಳಲಾಗದ ಅವನ ಪರಿಸ್ಥಿತಿ ಬಳಸಿಕೊಂಡ ಸೀತಾ ಅಲ್ಲಿಂದ ಹೊರಡುತ್ತಾಳೆ.

ಮಗಳನ್ನು ಹೊರಗಡೆ ಕರೆದುಕೊಂಡು ಹೋಗುತ್ತೀನಿ ಎಂದಿದ್ದ ಸೀತಮ್ಮ ಅವಳ ಮಾತನ್ನು ಉಳಿಸಿಕೊಂಡು, ಬಂದಿದ್ದರಿಂದ ರಾಮ್, ಸೀತಾ, ಸಿಹಿ ಮೂರು ಜನ ಸೇರಿಕೊಂಡು ಸುತ್ತಾಡಲು ಆರಂಭಿಸುತ್ತಾರೆ. ಮೂವರು ಸೇರಿ ಪಾನಿಪುರಿ ತಿನ್ನುವುದಕ್ಕೆ ಶುರು ಮಾಡುತ್ತಾರೆ. ಅವರಿಬ್ಬರು ಅಷ್ಟೆಲ್ಲಾ ಖಾರ ತಿನ್ನುವುದನ್ನು ನೋಡಿ ಶ್ರೀರಾಮನಿಗೆ ಸಂಕಟವಾಗುತ್ತದೆ. ಅವನನ್ನು ಇಬ್ಬರು ಸಮಾಧಾನ ಮಾಡಿ ನೀರು ಕೊಟ್ಟು ಬಾಯಿ ಒರೆಸುತ್ತಾರೆ. ಜೊತೆಗೆ ದುಡ್ಡು ಸರಿ ಇಟ್ಟುಕೊಳ್ಳುವ ಬಗ್ಗೆ ಸೀತಾಳ ಪಾಠವು ಆಗುತ್ತದೆ.

ಇದನ್ನೂ ಓದಿ: ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ; ಹೆಚ್ಚಿತು ‘ಗೀತಾ’ ಸೀರಿಯಲ್ ಟಿಆರ್​ಪಿ

ರಜೆ ಇದ್ದರೂ ಆಫೀಸ್ ಗೆ ಬಂದ ರಾಮ್ ಬಗ್ಗೆ ವಿಚಾರಿಸಲು ಭಾರ್ಗವಿ ಮ್ಯಾನೇಜರ್ ಗೆ ಕಾಲ್ ಮಾಡುತ್ತಾಳೆ. ಅಶೋಕ್ ಬಾಸ್ ಅಲ್ಲ ಎನ್ನುವುದು ಗೊತ್ತಿಲ್ಲದೇ ಭಾರ್ಗವಿಗೆ ಬಾಸ್ ಆಫೀಸ್ನಲ್ಲಿಯೇ ಇದ್ದಾರೆ ಎನ್ನುತ್ತಾನೆ. ರಾಮ್ ಮತ್ತು ಅಶೋಕ್ ಮಾಡಿರುವ ಐಡಿಯಾ ಬಗ್ಗೆ ಗೊತ್ತಿಲ್ಲದ ರಾಮನ ಚಿಕ್ಕಿ ಅವನು ಆಫೀಸ್ನಲ್ಲಿಯೇ ಇದ್ದಾನೆ ಎಂದು ನಂಬಿಕೊಳ್ಳುತ್ತಾಳೆ. ಜೊತೆಗೆ ಬಾಸ್ ಹಿಂದೆ ಯಾರೋ ಬಿದ್ದಿದ್ದಾರೆ ಅದನ್ನು ಪತ್ತೆ ಹಚ್ಚಿ ಎಂದು ಚರಣ್ ಗೆ ವಿಷಯ ತಿಳಿಸುತ್ತಾಳೆ. ಹೇಳದೆ ಕೇಳದೆ ಆಫೀಸಿಗೆ ಬಂದಿರುವ ಮ್ಯಾನೇಜರ್ ನಡೆ ಅಶೋಕ್ ಗೆ ಅನುಮಾನ ತರಿಸುತ್ತದೆ. ಮುಂದೆ ಏನಾಗಬಹುದು? ಅಶೋಕ್ ಗೆ ಭಾರ್ಗವಿಯ ಮೋಸ ಮಾಡುತ್ತಿರುವ ವಿಷಯ ತಿಳಿಯುತ್ತಾ? ಸಿಹಿಯ ಊರು ಸುತ್ತುವ ಕಾರ್ಯದಿಂದ ರಾಮ್ ಮತ್ತೆ ಸೀತಾ ಮಧ್ಯೆ ಪ್ರೀತಿ ಹುಟ್ಟುತ್ತಾ? ಕಾದು ನೋಡೋಣ.

Published On - 10:27 pm, Tue, 29 August 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ