AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗೆ ನೋ ಎಂದ ಸೀತಾ; ನೋವಲ್ಲಿ ಮುಳುಗೆದ್ದ ತಾಯಿಗೆ ಸಿಹಿಯ ಪ್ರೀತಿಯೇ ಆಸರೆ

ಭಾರ್ಗವಿ, ರಾಮ್ ಬಳಿ ಉಪಾಯ ಮಾಡಿ ಆಫೀಸ್​ನಲ್ಲಿ ಆಗುವ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುವ ಪಯತ್ನ ಮಾಡುತ್ತಿದ್ದಾಳೆ. ಆದರೆ ರಾಮ್ ಗೆಳೆಯ ಅಶೋಕ್ ಇದನ್ನು ತಡೆದಿದ್ದಾನೆ.

ಮದುವೆಗೆ ನೋ ಎಂದ ಸೀತಾ; ನೋವಲ್ಲಿ ಮುಳುಗೆದ್ದ ತಾಯಿಗೆ ಸಿಹಿಯ ಪ್ರೀತಿಯೇ ಆಸರೆ
ಸೀತಾ-ರಾಮ ಧಾರಾವಾಹಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 29, 2023 | 12:24 PM

Share

ಮುಂದೆ ಏನಾಗಬಹುದು ಎಂಬ ಕುತೂಹಲ ಇದ್ದಾಗಲೇ ಕಥೆ ಗೆಲ್ಲುತ್ತದೆ. ಸದ್ಯ ‘ಸೀತಾ ರಾಮ’ (Seetha Raama Serial) ಧಾರಾವಾಹಿ ಇದೇ ರೀತಿಯಲ್ಲಿ ಬರುತ್ತಿದೆ. ಧಾರವಾಹಿಯಲ್ಲಿ ಹೊಸ ಪಾತ್ರ ಪರಿಚಯವೂ ಆಗುತ್ತಿರುವುದರಿಂದ ಕಥೆಗೆ ಇನ್ನಷ್ಟು ಬಲ ಸಿಕ್ಕಿದೆ. ಆಫೀಸ್​ನಲ್ಲಿ ರಾಮ್ ಮೊದಲ ದಿನ ಆರಂಭಿಸಿದ್ದು ಸತ್ಯ ಶೋಧನೆಗೆ ಹೊಸ ಹೆಜ್ಜೆ ಇಟ್ಟಂತಾಗಿದೆ. ಮಧ್ಯಾಹ್ನದ ಊಟವೂ ಜೊತೆಯಾಗಿ ಆಗಿದೆ.

ಮನೆಯಲ್ಲಿ ತಾತ ಅಜ್ಜಿಯ ಜೊತೆ ಇರುವ ಸಿಹಿಗೆ ಹೆಣ್ಣು ಮಕ್ಕಳ ತವರು ಮನೆಯ ಬಗ್ಗೆ ಪಾಠವೂ ನಡೆಯುತ್ತಿದೆ. ಇನ್ನು ಸೀತಮ್ಮ ಕಚೇರಿ ಕೆಲಸ ಮುಗಿಸಿ ಮನೆಗೆ ಬರುವಾಗ ಸಿಹಿ ಅಜ್ಜಿಯಿಂದ ಮದುವೆ ಒತ್ತಾಯವು ನಡೆದಿದೆ. ಆದರೆ ಅವರದ್ದು ಒಳ್ಳೆ ಉದ್ದೇಶ. ಗಂಡು ದಿಕ್ಕಿಲ್ಲದ ಮನೆಯಲ್ಲಿ ಹೆಣ್ಣು ಒಬ್ಬಳೇ ಇರಲು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯ. ಸೀತಾಳದ್ದು ಇದಕ್ಕೆಲ್ಲಾ ಒಂದೇ ಮಾತು, “ಮದುವೆ, ಜೀವನದ ಸಂಬಂಧ ಆಗಬೇಕೇ ಹೊರತು ಒಪ್ಪಂದ ಆಗಬಾರದು. ನನ್ನ ಬದುಕಲ್ಲಿ ನಾನು ಸಿಹಿ ಅಷ್ಟೇ” ಎಂಬುದು. ಆದರೆ ಇದನ್ನೆಲ್ಲಾ ಕೇಳಿರುವ ಸಿಹಿಗೆ ಅಮ್ಮ ನನ್ನನ್ನು ಬಿಟ್ಟು ಹೋದರೇ ಅನ್ನೋದೆ ಚಿಂತೆ. ಅವಳ ಚಿಂತೆಗೆಲ್ಲಾ ಪರಿಹಾರ ಸಿಗೋ ಮೊದಲೇ ಲಾಯರ್ ಮನೆಗೆ ಬಂದಿದ್ದಾನೆ. ಮದುವೆ ಪ್ರಸ್ತಾಪವನ್ನೂ ಮಾಡಿದ್ದಾನೆ. ಅತ್ತಿಗೆ ಮಾಡಿರೋ ಈ ಉಪಾಯ ಸೀತಾಳಿಗೆ ಇನ್ನಷ್ಟು ಕೋಪ ತರಿಸಿದೆ. ಆದರೆ ಸಿಹಿಯ ಪ್ರೀತಿ ಅವಳ ನೋವನ್ನು ಮರೆಸಿ ಮತ್ತೆ ನಗುವಂತೆ ಮಾಡಿದೆ.

ಇದನ್ನೂ ಓದಿ: ಹೊರಬಿತ್ತು ‘ಸೀತಾ ರಾಮ’ ಟಿಆರ್​ಪಿ; ಟಾಪ್​ 10ರಲ್ಲಿ ಈ ಧಾರಾವಾಹಿಗೆ ಎಷ್ಟನೇ ಸ್ಥಾನ?

ಇನ್ನು ಭಾರ್ಗವಿಗೆ ಆಫೀಸ್ ಲಾಗಿನ್ ಪಾಸ್ವರ್ಡ್ ಬದಲಾಗಿದೆ ಅನ್ನೋದೇ ಸಹಿಸೋದಕ್ಕೆ ಆಗದೇ, ರಾಮ್ ಬಳಿ ಉಪಾಯ ಮಾಡಿ ಆಫೀಸ್ ನಲ್ಲಿ ಆಗುವ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುವ ಪಯತ್ನ ಮಾಡುತ್ತಿದ್ದಾಳೆ. ಆದರೆ ರಾಮ್ ಗೆಳೆಯ ಅಶೋಕ್, ಅದನ್ನು ತಡೆದು, ಭಾರ್ಗವಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾನೆ. ಮುಂದೇನಾಗಬಹುದು? ರಾಮನಿಗೆ ಕಳ್ಳರ ಸುಳಿವು ಸಿಗಬಹುದಾ? ಸೀತಾ ವರಿಸಲು ಬಂದ ಲಾಯರ್ ಮತ್ತೆ ಬರುತ್ತಾನಾ? ಕಾದು ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು