AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ಲಾಯರ್ ಮದುವೆಯಾಗಲು ಸೀತಾ ಒಪ್ಪಿಗೆ ಸೂಚಿಸುತ್ತಾಳಾ? ಈ ಬಗ್ಗೆ ಸಿಹಿ ಅಭಿಪ್ರಾಯ ಏನಿರಬಹುದು?

ಭಾರ್ಗವಿ ಬಣ್ಣ ಬಯಲಾಗಬಹುದು ಎಂದು ಅಂದುಕೊಂಡವರಿಗೆ ನಿರಾಸೆಯಾಗಿದೆ. ತನ್ನ ಬುದ್ದಿವಂತಿಕೆಯಿಂದ ಎಲ್ಲರನ್ನೂ ಮೂರ್ಖರನ್ನಾಗಿ ಮಾಡಿದ್ದಾಳೆ ಭಾರ್ಗವಿ. ಈ ಮಧ್ಯೆ ಕಳ್ಳರನ್ನು ಹುಡುಕುವುದಕ್ಕೆ ರಾಮ್ ಮಾಡಿರುವ ಉಪಾಯ ಫಲಿಸುತ್ತಾ?

Seetha Raama: ಲಾಯರ್ ಮದುವೆಯಾಗಲು ಸೀತಾ ಒಪ್ಪಿಗೆ ಸೂಚಿಸುತ್ತಾಳಾ? ಈ ಬಗ್ಗೆ ಸಿಹಿ ಅಭಿಪ್ರಾಯ ಏನಿರಬಹುದು?
ಸೀತಾ ರಾಮ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 28, 2023 | 7:54 AM

Share

ಕಳೆದ ವಾರ ಪ್ರಸಾರ ಆರಂಭಿಸಿದ ‘ಸೀತಾ ರಾಮ’ ಧಾರಾವಾಹಿಯ (Seetha Raama Serial) ವೀಕ್ಷಕರ ಗಮನ ಸೆಳೆದಿದೆ. ಇನ್ನು ಧಾರಾವಾಹಿಯ ಓಪನಿಂಗ್ ವೀಕ್ ಟಿಆರ್ಪಿಯಲ್ಲಿ ಈ ಧಾರವಾಹಿ ನಾಲ್ಕನೇ ಸ್ಥಾನದಲ್ಲಿದೆ. ಈ ಟಿಆರ್​ಪಿ  ಹೆಚ್ಚಾಗಬಹುದು ಎಂಬ ನಿರೀಕ್ಷೆಯೂ ಇದೆ. ಇನ್ನು ಈ ಸಂಚಿಕೆಯಲ್ಲಿ ಭಾರ್ಗವಿ ಬಣ್ಣ ಬಯಲಾಗಬಹುದು ಎಂದು ಅಂದುಕೊಂಡವರಿಗೆ ನಿರಾಸೆಯಾಗಿದೆ. ಏಕೆಂದರೆ ಕ್ಯಾರೆಟ್ ಹಲ್ವಾ ಕೊಡುವ ನೆಪ ಮಾಡಕ್ಕೊಂಡು ಆಫೀಸ್ ಗೆ ಬಂದ ಭಾರ್ಗವಿ ಸತ್ಯವನ್ನು ಯಾರಿಗೂ ಅರಿಯದಂತೆ ಸಲೀಸಾಗಿ ಮುಚ್ಚಿಹಾಕಿದ್ದಾಳೆ. ಇದೆಲ್ಲದರ ಮಧ್ಯೆ ಮ್ಯಾನೇಜರ್ ಚರಣ್​ ಡಿ ಸಿಕ್ಕಿಬಿದ್ದಿದ್ದಾನೆ. ಆದರೆ ರಾಮ್ ಗೆಳೆಯ ಅಶೋಕ್ ನಿಗೆ ಇದೆಲ್ಲದರ ಬಗ್ಗೆ ಅರಿವಿದ್ದರೂ ಯಾವುದಕ್ಕೂ ನಿಖರವಾದ ಸಾಕ್ಷಿ ಸಿಕ್ಕಿಲ್ಲ.

ದೇಸಾಯಿ ಮನೆತನದ ದೊಡ್ಡ ಕುಡಿ ಸೂರ್ಯ ಪ್ರಕಾಶ್, ಸೊಸೆ ಭಾರ್ಗವಿ ಹೇಳಿದ್ದನ್ನು ಕಣ್ಣು ಮುಚ್ಚಿ ನಂಬೋ ಮನುಷ್ಯ. ಹಾಗಾಗಿ ಇದನ್ನೂ ಸತ್ಯ ಅಂತ ತಿಳಿದಿದ್ದಾನೆ. ಅದಕ್ಕಾಗಿಯೇ ಮ್ಯಾನೇಜರ್ ಚರಣ್ ಡಿ. ಯನ್ನೂ ಕೆಲಸದಿಂದ ತೆಗೆಯುವುದಕ್ಕೂ ಮುಂದಾಗಿದ್ದಾನೆ. ಆದರೆ ಅದನ್ನು ತಡೆದ ರಾಮ್ ತನಗೆ ಇದರ ಹಿಂದೆ ಬೇರೆ ಯಾರೋ ಇದ್ದಾರೆಂಬ ಫೀಲ್ ಇದೆ ಹಾಗಾಗಿ ಅವರನ್ನು ವಜಾಗೊಳಿಸದೆಯೇ ಕಳ್ಳರನ್ನು ಹಿಡಿಯೋಣ ಎಂದು ತಾತನಿಗೆ ಒಳ್ಳೆಯ ಉಪಾಯ ನೀಡುವ ಮೂಲಕ ಮಾಮೂಲಿ ವರ್ಕರ್ ಆಗಿ ಕೆಲಸ ಶುರು ಮಾಡಿದ್ದಾನೆ.

ರಾಮ್ ಗೆಳೆಯ ಅಶೋಕ್ ಬಾಸ್ ಆಗಿ ನಾಟಕ ಮಾಡುತ್ತಿರುವುದರಿಂದ, ಅವನೂ ಉಪಾಯ ಮಾಡಿ ಸೀತಾ ಪಕ್ಕದಲ್ಲಿಯೇ ರಾಮನನ್ನೂ ಕುರಿಸಿದ್ದಾನೆ. ಅದರಂತೆ ಸೀತಮ್ಮನೂ ಕೂಡ ಕೋಪ ಮರೆತು ರಾಮ್ ನನ್ನು ಆದರದಿಂದ ಬರಮಾಡಿಕೊಂಡು ಅವನಿಗೆ ಸಹಾಯವನ್ನೂ ಮಾಡಿದ್ದಾಳೆ. ರಾಮನ ಜೊತೆ ಮಾತನಾಡುತ್ತಾ, ತನ್ನ ಮಗಳ ಹುಟ್ಟು ಹಬ್ಬದ ದಿನ ತಾನು ಮರೆತ ಕೇಕ್, ಅವನೇ ಕಳುಹಿಸಿದ್ದ ಎಂಬುದು ಅವಳಿಗೆ ಗೊತ್ತಾಗಿದೆ. ಅಂತೂ, ಇಂತೂ ರಾಮ್ ಮತ್ತು ಸೀತಾಳ ಮುನಿಸು ಕೊನೆಗೊಂಡು ಸ್ನೇಹ ಬೆಳೆಯಲು ಇನ್ನೇನು ಸ್ವಲ್ಪ ಹೆಜ್ಜೆ ಬಾಕಿ ಇದೆ ಅಷ್ಟೇ.

ಇದನ್ನೂ ಓದಿ: ಮೋಸದ ಲೆಕ್ಕ ನೀಡಿದ ಸೀತಾ; ಭಾರ್ಗವಿ ಕೆಂಗಣ್ಣಿಗೆ ಗುರಿಯಾಗುತ್ತಾಳಾ ನಾಯಕಿ?   

ಇನ್ನು ಈ ಧಾರಾವಾಹಿಗೆ ಮೂರು ಹೊಸ ಪಾತ್ರಗಳ ಪರಿಚಯವಾಗಿದೆ. ಕ್ರಿಮಿನಲ್ ಲಾಯರ್ ಒಬ್ಬ ಸೀತಾನನ್ನು ವರಿಸಲು ಹಿಂದೆ ಬಿದ್ದಿದ್ದು ಇದಕ್ಕೆ ಸೀತಾಳ ಅಣ್ಣ ಮತ್ತು ಅತ್ತಿಗೆ ಅವನು ಕೊಡುವ ದುಡ್ಡಿನ ಆಸೆಗಾಗಿ ನೆಂಟಸ್ತಿಗೆ ಬೆಳೆಸಲು ಸಿದ್ಧವಾಗಿದ್ದಾರೆ. ಆದರೆ ಅದಕ್ಕೆ ಒಪ್ಪದ ಸೀತಾ ಕಟ್ಟುನಿಟ್ಟಾಗಿ ನಾನು ಮದುವೆ ಆಗೋದಿಲ್ಲ ಅಂದಿದ್ದಾಳೆ ಆದರೂ ಆಕೆಯ ಅತ್ತಿಗೆ ಪಟ್ಟು ಬಿಡದೇ, ಹುಡುಗನನ್ನು ಮನೆಗೆ ಕಡೆದುಕೊಂಡು ಬರುತ್ತೇನೆ, ನೀನು ನೋಡಿ ಅವನನ್ನು ಒಪ್ಪು ಎಂದು ಹೇಳಿದ್ದಾಳೆ ಆದರೆ ಲಾಯರ್ ಮದುವೆಯಾಗಲು ಸೀತಾ ಒಪ್ಪಿಗೆ ಸೂಚಿಸುತ್ತಾಳಾ? ಈ ಬಗ್ಗೆ ಸಿಹಿ ಅಭಿಪ್ರಾಯ ಏನಿರಬಹುದು? ಕಾದು ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!