AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಂಪಲ್​’ ಸುನಿ ನಿರ್ದೇಶನದಲ್ಲಿ ‘ಶಾಂಭವಿ’ ಧಾರಾವಾಹಿ; ಸೆ.11ರಂದು ಉದಯ ಟಿವಿಯಲ್ಲಿ ಪ್ರಸಾರ ಆರಂಭ

‘ಶಾಂಭವಿ’ ಧಾರಾವಾಹಿಯಲ್ಲಿ ವಿನೂತನ ಶೈಲಿಯ ನಿರೂಪಣೆ ಜೊತೆಗೆ ಅದ್ದೂರಿತನ ಇರಲಿದೆ ಎಂದು ‘ಉದಯ’ ವಾಹಿನಿ ಹೇಳಿಕೊಂಡಿದೆ. ಖ್ಯಾತ ನಿರ್ದೇಶಕ ‘ಸಿಂಪಲ್’ ಸುನಿ ಅವರು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಧಾರಾವಾಹಿಯನ್ನು ನಿರ್ಮಿಸಿ, ಡೈರೆಕ್ಷನ್​ ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿ ‘ಶಾಂಭವಿ’ ಸೀರಿಯಲ್​ ವಿಶೇಷ ಎನಿಸಿಕೊಂಡಿದೆ.

‘ಸಿಂಪಲ್​’ ಸುನಿ ನಿರ್ದೇಶನದಲ್ಲಿ ‘ಶಾಂಭವಿ’ ಧಾರಾವಾಹಿ; ಸೆ.11ರಂದು ಉದಯ ಟಿವಿಯಲ್ಲಿ ಪ್ರಸಾರ ಆರಂಭ
ಸಿಂಪಲ್​ ಸುನಿ, ಶಾಂಭವಿ ಸೀರಿಯಲ್​ ಪೋಸ್ಟರ್​
ಮದನ್​ ಕುಮಾರ್​
|

Updated on: Sep 04, 2023 | 9:21 PM

Share

ಕನ್ನಡದ ಜನಪ್ರಿಯ ಮನರಂಜನಾ ವಾಹಿನಿ ‘ಉದಯ ಟಿವಿ’ (Udaya TV) ಈಗಾಗಲೇ ಅನೇಕ ಸೀರಿಯಲ್​ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಮೊದಲಿನಿಂದಲೂ ಈ ವಾಹಿನಿಯಲ್ಲಿ ಸೀರಿಯಲ್​ಗಳು ಫೇಮಸ್​. ವಿಭಿನ್ನವಾದ ಕಥೆಯನ್ನು ಹೊಂದಿರುವ ಧಾರಾವಾಹಿಗಳಲ್ಲಿ ಸೃಜನಾತ್ಮಕ ವಿಷಯಗಳು ಕಾಣಸಿಗುತ್ತಿವೆ. ‘ಕನ್ಯಾದಾನ’, ‘ಸೇವಂತಿ’, ‘ಆನಂದರಾಗ’, ‘ಜನನಿ’, ‘ಅಣ್ಣತಂಗಿ’, ‘ಗೌರಿಪುರದ ಗಯ್ಯಾಳಿಗಳು’, ‘ರಾಧಿಕಾ’ ಸೇರಿದಂತೆ ಅನೇಕ ಧಾರಾವಾಹಿಗಳು ಫ್ಯಾಮಿಲಿ ಪ್ರೇಕ್ಷಕರನ್ನು ರಂಜಿಸುತ್ತಿವೆ. ಅವುಗಳ ಸಾಲಿಗೆ ಹೊಸದೊಂದು ಸೀರಿಯಲ್​ ಸೇರ್ಪಡೆ ಆಗುತ್ತಿದೆ. ‘ಶಾಂಭವಿ’  (Shambhavi Serial) ಎಂಬುದು ಈ ಧಾರಾವಾಹಿಯ ಶೀರ್ಷಿಕೆ. ಈ ಧಾರಾವಾಹಿಗೆ ನಿರ್ದೇಶನ ಮಾಡುತ್ತಿರುವುದು ‘ಸಿಂಪಲ್​’ ಸುನಿ (Simple Suni) ಅನ್ನೋದು ವಿಶೇಷ.

‘ಶಾಂಭವಿ’ ಧಾರಾವಾಹಿಯಲ್ಲಿ ವಿನೂತನ ಶೈಲಿಯ ನಿರೂಪಣೆ ಜೊತೆಗೆ ಅದ್ದೂರಿತನ ಇರಲಿದೆ ಎಂದು ವಾಹಿನಿ ಹೇಳಿಕೊಂಡಿದೆ. ʻಸಿಂಪಲ್ಲಾಗ್​ ಒಂದ್​ ಲವ್ ಸ್ಟೋರಿʼ ಖ್ಯಾತಿಯ ನಿರ್ದೇಶಕ ‘ಸಿಂಪಲ್’ ಸುನಿ ಅವರು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಧಾರಾವಾಹಿಯನ್ನು ನಿರ್ಮಿಸಿ, ಡೈರೆಕ್ಷನ್​ ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿ ‘ಶಾಂಭವಿ’ ಧಾರಾವಾಹಿ ವಿಶೇಷ ಎನಿಸಿಕೊಂಡಿದೆ. ‘ಸುನಿ ಸಿನಿಮಾಸ್’ ಸಂಸ್ಥೆಯ ಮೂಲಕ ʻಶಾಂಭವಿʼ ಸೀರಿಯಲ್​ ನಿರ್ಮಾಣ ಆಗುತ್ತಿದೆ. YBR ಮನು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಪರಂ ಸಂಕಲನ, ಜಗದೀಶ್ ದೊಡ್ಡೇರಿ ಸಹ ನಿರ್ದೇಶನ ಮಾಡುತ್ತಿದ್ದಾರೆ. ರಾಧಾ ವೆಂಕಟ್​ ಅವರು ಸಂಭಾಷಣೆ, ಪುಗಳ್ಮಣಿ ಅವರು ಕಥೆ-ಚಿತ್ರಕಥೆ ಬರೆದಿದ್ದಾರೆ.

ಇದನ್ನೂ ಓದಿ: ಬಾಲಿವುಡ್​​​ಗೆ ಎಂಟ್ರಿ ಕೊಟ್ಟ ಕನ್ನಡತಿ ಧಾರಾವಾಹಿಯ ನಟ

‘ಶಾಂಭಬಿ’ ಧಾರಾವಾಹಿ ಕಥೆ ಏನು? ಶಿವಗಾಮಿ ಬಳಿ ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದೆ. ಆಕೆಗೆ ಹರಿಪ್ರಸಾದ್ ಎಂಬ ಅಣ್ಣ ಇದ್ದಾನೆ. ಅಣ್ಣ-ತಂಗಿ ನಡುವೆ ಬಹಳ ಪ್ರೀತಿ ಇದೆ. ಆಗ ಅಶೋಕನ ಎಂಟ್ರಿ ಆಗುತ್ತಿದೆ. ಶಿವಗಾಮಿಯ ಸಂಸ್ಥೆಯಲ್ಲಿ ಶಿಕ್ಷಕನಾಗಿ ಅಶೋಕ ಕೆಲಸಕ್ಕೆ ಸೇರಿದ ಬಳಿಕ ಟ್ವಿಸ್ಟ್​ ಎದುರಾಗುತ್ತಿದೆ. ಅಶೋಕನ ಕುಟುಂಬದವರು ಹಣಕ್ಕಾಗಿ ಹಪಹಪಿಸುತ್ತಾರೆ. ಆತನ ತಾಯಿ ಹಾಗೂ ತಮ್ಮಂದಿರು ಬಹಳ ಖತರ್ನಾಕ್ ಬುದ್ಧಿಯವರು. ಒಳ್ಳೊಳ್ಳೆಯ ಸಂಬಂಧ ಬಂದರೂ ವಿವಾಹಕ್ಕೆ ಒಪ್ಪದಿದ್ದ ಶಿವಗಾಮಿಯು ಈ ಮಧ್ಯಮವರ್ಗದ ಅಶೋಕನಿಗೆ ಮನಸೋಲುತ್ತಾಳೆ. ಅವನು ಬೀಸುವ ಷಡ್ಯಂತ್ರದ ಬಲೆಯಲ್ಲಿ ಸಿಲುಕುತ್ತಾಳೆ. ಇಬ್ಬರಿಗೂ ಮದುವೆ ಆಗುತ್ತದೆ. ಈ ದಂಪತಿಯ ಪುತ್ರಿಯೇ ಶಾಂಭವಿ. ಈ ಮುದ್ದಾದ 6 ವರ್ಷದ ಮಗುವಿನ ಕಥೆಯೇ ಇಲ್ಲಿನ ಹೈಲೈಟ್​.

ಇದನ್ನೂ ಓದಿ: ಮತ್ತೆ ಟಿವಿಯಲ್ಲಿ ಪ್ರಸಾರ ಆಗಲಿದೆ ‘ರಾಮಾಯಣ’ ಧಾರಾವಾಹಿ; ‘ಆದಿಪುರುಷ್​ಗಿಂತ ಇದೇ ಉತ್ತಮ’ ಎಂದ ಪ್ರೇಕ್ಷಕರು

ಒಂದಿನ ಶಾಂಭವಿ ಕಾಣೆ ಆಗುತ್ತಾಳೆ. ಆ ಘಟನೆಯ ನಂತರ ಶಿವಗಾಮಿ ಹುಚ್ಚಿ ಆಗಿಬಿಡುತ್ತಾಳೆ. ಆಗ ಕಥೆಯ ಸ್ವರೂಪ ಬದಲಾಗುತ್ತದೆ. ಆಗ ಒಂದು ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಕಳೆದು ಹೋಗಿರುವ ಶಾಂಭವಿಗೂ ಇಲ್ಲಿ ಪ್ರತಿಷ್ಠಾಪನೆ ಮಾಡಲಾದ ದೇವಿ ಇರುವ ಸ್ಥಳಕ್ಕೂ ಸಂಬಂಧ ಇರುತ್ತದೆ. ಶಾಂಭವಿ ಮರಳಿ ಬರುತ್ತಾಳೆ. ದುಷ್ಟರಿಗೆ ಪಾಠ ಕಲಿಸುತ್ತಾಳೆ. ಕೆಟ್ಟವರ ಪಾಲಿಗೆ ದೆವ್ವವಾಗಿ ಹಾಗೂ ಒಳ್ಳೆಯವರ ಪಾಲಿನ ದೇವತೆಯಾಗಿ ಶಾಂಭವಿ ಕಾಣಿಸಿಕೊಳ್ಳುತ್ತಾಳೆ.

ಇದನ್ನೂ ಓದಿ: ಹಿಂದಿ ಧಾರಾವಾಹಿ ನಟ ಈಗ ಬೆಂಗಳೂರಿನ ಕಾಲೇಜಿನಲ್ಲಿ ಪ್ರಾಧ್ಯಾಪಕ; ಯಾರು ಅವರು?

ಸೆಪ್ಟೆಂಬರ್ 11ರಂದು ʻಶಾಂಭವಿ’ ಧಾರಾವಾಹಿಯು ಪ್ರಸಾರ ಆರಂಭಿಸಲಿದೆ. ಸೋಮವಾರದಿಂದ ಶನಿವಾರದ ತನಕ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ಈ ಸೀರಿಯಲ್​ ಬಿತ್ತರವಾಗಲಿದೆ. ಶಾಂಭವಿಯ ಪಾತ್ರವನ್ನು ಬೇಬಿ ರಚನಾ ಟಿ.ಬಿ ಮಾಡುತ್ತಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ಐಶ್ವರ್ಯಾ ಸಿಂಧೋಗಿ, ಹರೀಶ್ ಟಿವಿ, ವಿನಯಾ ಗೌಡ, ಅಂಬುಜಾಕ್ಷಿ, ಡಾಲಿ ರಾಜೇಶ್, ಪೂಜಿತಾ, ಸೂರ್ಯ ಕುಂದಾಪುರ, ಶ್ಯಾಮಲಮ್ಮ, ರೋಹಿತ್ ನಾಯರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು