AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರಾಗ್ತಾರೆ ಬಿಗ್​ ಬಾಸ್​ ಮನೆಯ ಮೊದಲ ಕ್ಯಾಪ್ಟನ್​? ನರಕದವರಿಗೆ ಮತ್ತೆ ನಿರಾಸೆ

ನರಕವಾಸಿಗಳಿಗೆ ನರಕ ದರ್ಶನ ಮುಂದುವರಿಯಲಿದೆ. ಯಾಕೆಂದರೆ ಅವರಿಗೆ ಕ್ಯಾಪ್ಟನ್​ ಆಗುವ ಅವಕಾಶವೇ ಸಿಕ್ಕಿಲ್ಲ. ಕೇವಲ ಸ್ವರ್ಗದಲ್ಲಿ ಇರುವವರಿಗೆ ಮಾತ್ರ ಕ್ಯಾಪ್ಟೆನ್ಸಿ ಟಾಸ್ಕ್​ನಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ. ಹಂಸಾ, ಭವ್ಯ, ತ್ರಿವಿಕ್ರಮ್, ಉಗ್ರಂ ಮಂಜು, ಐಶ್ವರ್ಯಾ, ಯಮುನಾ ಶ್ರೀನಿಧಿ ಅವರು ಕ್ಯಾಪ್ಟನ್​ ಆಗಲು ಪೈಪೋಟಿ ನಡೆಸಲಿದ್ದಾರೆ.

ಯಾರಾಗ್ತಾರೆ ಬಿಗ್​ ಬಾಸ್​ ಮನೆಯ ಮೊದಲ ಕ್ಯಾಪ್ಟನ್​? ನರಕದವರಿಗೆ ಮತ್ತೆ ನಿರಾಸೆ
ಬಿಗ್​ ಬಾಸ್​ ಕನ್ನಡ ಸೀಸನ್​ 11
ಮದನ್​ ಕುಮಾರ್​
|

Updated on: Oct 04, 2024 | 10:53 PM

Share

ಬಿಗ್​ ಬಾಸ್​ ಮನೆಯಲ್ಲಿ ಒಂದು ವಾರ ಕಳೆಯುತ್ತಿದೆ. ಎರಡನೇ ವಾರಕ್ಕೆ ಕ್ಯಾಪ್ಟನ್​ ಆಯ್ಕೆ ಆಗಬೇಕಿದೆ. ಈ ಸೀಸನ್​ನ ಮೊದಲ ಕ್ಯಾಪ್ಟನ್​ ಯಾರು ಆಗುತ್ತಾರೆ ಎಂಬ ಕೌತುಕ ಮೂಡಿದೆ. ಕ್ಯಾಪ್ಟನ್​ ಆಗುವವರಿಗೆ ಒಂದು ವಾರದ ಇಮ್ಯುನಿಟಿ ಸಿಗುತ್ತದೆ. ಅಲ್ಲದೇ ಕೆಲವು ವಿಶೇಷ ಅಧಿಕಾರಗಳು ಸಿಗುತ್ತವೆ. ಹಾಗಾಗಿ ಕ್ಯಾಪ್ಟನ್​ ಆಗಲು ಎಲ್ಲರೂ ಸಖತ್ ಪೈಪೋಟಿ ನೀಡುತ್ತಾರೆ. ಕ್ಯಾಪ್ಟನ್​ ಆಗುವ ಅವಕಾಶ ಎಲ್ಲರಿಗೂ ಸಿಗುತ್ತಿಲ್ಲ. ನರಕವಾಸಿಗಳು ಈ ಟಾಸ್ಕ್​ನಲ್ಲಿ ಭಾಗವಹಿಸುವಂತಿಲ್ಲ ಎಂದು ಬಿಗ್​ ಬಾಸ್​ ಕಡೆಯಿಂದ ಆದೇಶ ಬಂದಿದೆ. ಹಾಗಾಗಿ ನರಕದ ಮಂದಿಗೆ ನಿರಾಸೆ ಆಗಿದೆ.

ಕೇವಲ ಸ್ವರ್ಗದಲ್ಲಿ ಇರುವವರು ಮಾತ್ರ ಕ್ಯಾಪ್ಟನ್​ ಆಗುವ ಅರ್ಹತೆ ಪಡೆದಿದ್ದಾರೆ. ಸ್ವರ್ಗದಲ್ಲಿ 10 ಜನ ಇದ್ದಾರೆ. ಅವರಲ್ಲಿ 6 ಜನರು ಕ್ಯಾಪ್ಟೆನ್ಸಿ ಟಾಸ್ಕ್​ ಆಡಲು ಆಯ್ಕೆ ಆಗಿದ್ದಾರೆ. ಭವ್ಯ, ಹಂಸಾ, ತ್ರಿವಿಕ್ರಮ್, ಉಗ್ರಂ ಮಂಜು, ಯಮುನಾ ಶ್ರೀನಿಧಿ, ಐಶ್ವರ್ಯಾ ಅವರು ಕ್ಯಾಪ್ಟೆನ್ಸಿ ಟಾಸ್ಕ್​ನಲ್ಲಿ ಭಾಗಿ ಆಗಲಿದ್ದಾರೆ. ಆದರೆ ಈ 6 ಜನರನ್ನು ಆಯ್ಕೆ ಮಾಡಿದ್ದು ಜಗದೀಶ್ ಅವರಿಗೆ ಸರಿ ಎನಿಸಿಲ್ಲ.

‘ಆಯ್ಕೆನಲ್ಲಿ ಮೋಸ ಆಗಿದೆ. ಇವರೆಲ್ಲ ಸಿಂಡಿಕೇಟ್​ ಮಾಡಿಕೊಂಡು ಶೋ ನಡೆಸುತ್ತಿದ್ದಾರೆ. ಇದು ಅನ್ಯಾಯ ಅಂತ ನನಗೆ ಅನಿಸುತ್ತಿದೆ. ಈ ಆರು ಜನರು ನೆಟ್ಟಗೆ ಮಾತು ಕೂಡ ಆಡುವುದಿಲ್ಲ. ನನ್ನ ಅನಿಸಿಕೆ ನಾನು ಹೇಳಿದ್ದೇನೆ. ಅದನ್ನು ಪರಿಗಣಿಸುವುದು ಬಿಡುವುದು ಬಿಗ್​ ಬಾಸ್​ಗೆ ಬಿಟ್ಟಿದ್ದು’ ಎಂದು ಜಗದೀಶ್​ ಹೇಳಿದ್ದಾರೆ. ಅವರ ವಾದವನ್ನು ಬಿಗ್​ ಬಾಸ್​ ಒಪ್ಪಿಕೊಂಡಿಲ್ಲ. ಹಾಗಾಗಿ ತಾವು ಈ ಶೋನಿಂದಲೇ ಹೊರಗೆ ಹೋಗುವುದಾಗಿ ಜಗದೀಶ್ ಹೇಳಿದ್ದಾರೆ. ಆದರೆ ದುಡುಕುವುದು ಬೇಡ ಎಂದು ಜಗದೀಶ್​ಗೆ ಬಿಗ್​ ಬಾಸ್​ ಬುದ್ಧಿ ಹೇಳಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ, ಧರ್ಮ, ಅನುಷಾ: ಬಿಗ್​ ಬಾಸ್​ ಮನೆಯಲ್ಲಿ ಶುರುವಾಯ್ತಾ ತ್ರಿಕೋನ ಪ್ರೇಮ?

ಗೋಲ್ಡ್​ ಸುರೇಶ್​, ಮೋಕ್ಷಿತಾ ಪೈ, ಶಿಶಿರ್, ರಂಜಿತ್, ಚೈತ್ರಾ ಕುಂದಾಪುರ, ಅನುಷಾ ರೈ, ಮಾನಸಾ ಅವರು ನರಕದಲ್ಲಿ ಇದ್ದಾರೆ. ಇನ್ನುಳಿದ ಸ್ಪರ್ಧಿಗಳಿಗೆ ಸ್ವರ್ಗದಲ್ಲಿ ಸ್ಥಾನ ಸಿಕ್ಕಿದೆ. ಮೊದಲ ಕ್ಯಾಪ್ಟನ್ ಆಗುವವರು ಸ್ವರ್ಗ ಮತ್ತು ನರಕ ನಿವಾಸಿಗಳನ್ನು ಅದಲು ಬದಲು ಮಾಡುವ ಅಧಿಕಾರ ಪಡೆಯಲಿದ್ದಾರೆ. ಹಾಗಾಗಿ ಈ ಬಾರಿ ಕ್ಯಾಪ್ಟನ್​ ಯಾರಾಗುತ್ತಾರೆ ಎಂಬುದು ಬಹಳ ಮುಖ್ಯವಾಗಲಿದೆ. ಮೊದಲ ವಾರದ ಪಂಚಾಯಿತಿಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬರಲಿವೆ. ಲಾಯರ್​ ಜಗದೀಶ್ ತೋರಿದ ಅತಿರೇಖಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್