‘ಹೀಗೆ ಆದರೆ ಹೊರ ಹೋಗ್ತೀರಿ’; ಒಂದೇ ಎಪಿಸೋಡ್ನಲ್ಲಿ ಗಿಲ್ಲಿಗೆ ಎರಡೆರಡು ಬಾರಿ ವಾರ್ನಿಂಗ್ ಕೊಟ್ಟ ಸುದೀಪ್
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಪ್ರಬಲ ಸ್ಪರ್ಧಿಯಾಗಿರುವ ಗಿಲ್ಲಿ ನಟರಿಗೆ ಸುದೀಪ್ ಭಾನುವಾರ ಪಾಠ ಹೇಳಿದ್ದಾರೆ. ಟಾಸ್ಕ್ನಲ್ಲಿ ಗಂಭೀರತೆ ಇಲ್ಲದಿರುವುದು ಮತ್ತು ಹೆಣ್ಣುಮಕ್ಕಳ ಖಾಸಗಿ ವಿಚಾರದಲ್ಲಿ ಹಸ್ತಕ್ಷೇಪದ ಬಗ್ಗೆ ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಈ ತಪ್ಪುಗಳು ಮುಂದುವರಿದರೆ ಮನೆಯಿಂದ ಹೊರಹೋಗುವ ಸಾಧ್ಯತೆಯನ್ನೂ ಸೂಚಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗೆಲ್ಲುವ ಕುದುರೆಯಾಗಿ ಗಿಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಅವರು ರೇಸ್ನಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಅವರು ಇಷ್ಟು ದಿನಗಳ ಕಾಲ ಸುದೀಪ್ ಅವರಿಂದ ಭೇಷ್ ಎನಿಸಿಕೊಳ್ಳುತ್ತಿದ್ದರು. ಅವರಿಗೆ ಕಿಚ್ಚನ ಚಪ್ಪಾಳೆಯೂ ಸಿಕ್ಕಿದೆ. ಆದರೆ, ಈ ವಾರ ಅವರು ಸುದೀಪ್ ಕೈಯಿಂದ ಪಾಠ ಹೇಳಿಸಿಕೊಂಡಿದ್ದಾರೆ. ಈ ಮಧ್ಯೆ ಆಟ ಹೀಗೆಯೇ ಮುಂದುವರಿದರೆ ನೀವು ಮನೆಯಿಂದ ಹೊರ ಹೊಗೋದು ಪಕ್ಕಾ ಎಂಬ ಎಚ್ಚರಿಕೆಯೂ ಅವರಿಗೆ ಸಿಕ್ಕಿದೆ.
ಆಟದಲ್ಲಿ ಇಲ್ಲ ಗಂಭೀರತೆ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಯಾವಾಗಲೂ ಫನ್ ಮಾಡುತ್ತಾ ಇರುತ್ತಾರೆ. ಟಾಸ್ಕ್ ಆಡುವಾಗ ಕೆಲವು ನಿಯಮಗಳನ್ನು ಮುರಿದು ಫನ್ ಮಾಡಲು ಹೊಗಿದ್ದರು ಗಿಲ್ಲಿ. ಅಲ್ಲದೆ, ಅವರ ತಪ್ಪಿನಿಂದ ಇಡೀ ತಂಡ ತೊಂದರೆ ಅನುಭವಿಸಬೇಕಾಯಿತು. ಹೀಗಾಗಿ, ಸುದೀಪ್ ಅವರು ಈ ಬಗ್ಗೆ ಎಚ್ಚರಿಸಿದರು. ಈ ತಪ್ಪು ಮುಂದುವರಿದರೆ ನೀವು ಶೀಘ್ರವೇ ವೇದಿಕೆ ಮೇಲೆ ಇರ್ತೀರಾ ಎಂದು ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಟಾಸ್ಕ್ನ ಗಂಭಿರವಾಗಿ ಆಡುವಂತೆ ಸೂಚಿಸಿದರು.
ಬಟ್ಟೆ ಮುಟ್ಟಿದ್ದಕ್ಕೆ ಎಚ್ಚರಿಕೆ
ಹೆಣ್ಣುಮಕ್ಕಳ ಬಟ್ಟೆ ಮುಟ್ಟಿದ ವಿಚಾರದಲ್ಲೂ ಸುದೀಪ್ ಅವರು ಗಿಲ್ಲಿಗೆ ಎಚ್ಚರಿಕೆ ನೀಡಿದ್ದಾರೆ. ಗಿಲ್ಲಿ ನಟ ಅವರು ರಿಷಾ ನೀರು ಕೊಟ್ಟಿಲ್ಲ ಎಂಬ ಕಾರಣಕ್ಕೆ ಅವರ ಬಟ್ಟೆಯನ್ನು ತೆಗೆದುಕೊಂಡು ಹೋಗಿ ಬಾತ್ರೂಂ ಹೊರ ಭಾಗದಲ್ಲಿ ಇಟ್ಟಿದ್ದರು. ಇದರಿಂದ ಸಿಟ್ಟಾದ ರಿಷಾ ಅವರು ಗಿಲ್ಲಿಗೆ ಹೊಡೆದಿದ್ದರು. ರಿಷಾ ಮಾಡಿದ್ದು ಹೇಗೆ ತಪ್ಪೋ, ಗಿಲ್ಲಿ ಮಾಡಿದ್ದು ಕೂಡ ತಪ್ಪೇ ಎಂದರು ಸುದೀಪ್.
ಇದನ್ನೂ ಓದಿ: ನಾನು ಹೇಳಿದ್ದೇ ಹೌದಾದ್ರೆ ಬಿಗ್ ಬಾಸ್ನಿಂದ ಹೋಗ್ತೀನಿ ಎಂದ ಅಶ್ವಿನಿ; ವಿಟಿ ತೋರಿಸಿದಮೇಲೆ ಗಪ್ ಚುಪ್
‘ನಮ್ಮ ಮನೆಯಲ್ಲಿ ನಾವು ಹೆಣ್ಣುಮಕ್ಕಳ ಬಟ್ಟೆ ಮುಟ್ಟೋಕೆ ಹೋಗೋದಿಲ್ಲ. ಅದು ಅವರ ಖಾಸಗಿ ವಿಚಾರ. ಅದನ್ನು ಮುಟ್ಟುವ ಅಧಿಕಾರ ನಮಗೆ ಇರೋದಿಲ್ಲ’ ಎಂದು ಸುದೀಪ್ ಅವರು ಗಿಲ್ಲಿಗೆ ಹೇಳಿದರು. ಇದು ಕಾಳಜಿಯಿಂದ ನಿಮಗೆ ಹೇಳುತ್ತಿರಿವುದು ಎಂದರು ಕಿಚ್ಚ. ಆ ಬಳಿಕ ಗಿಲ್ಲಿ ಅವರು ಈ ವಿಚಾರವನ್ನು ತಿದ್ದಿಕೊಳ್ಳೋದಾಗಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




