TN Seetharam: ‘ಮತ್ತೆ ಮನ್ವಂತರ’ ಧಾರವಾಹಿಯ ಚಿತ್ರೀಕರಣ ಪ್ರಾರಂಭದ ದಿನಾಂಕ ತಿಳಿಸಿದ ನಿರ್ದೇಶಕ ಟಿ.ಎನ್.ಸೀತಾರಾಮ್

ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರ ಹೊಸ ಧಾರವಾಹಿ ‘ಮತ್ತೆ ಮನ್ವಂತರ’ದ ಚಿತ್ರೀಕರಣಕ್ಕೆ ದಿನ ನಿಗದಿಯಾಗಿದೆ. ಈ ಕುರಿತು ಅವರು ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

TN Seetharam: ‘ಮತ್ತೆ ಮನ್ವಂತರ’ ಧಾರವಾಹಿಯ ಚಿತ್ರೀಕರಣ ಪ್ರಾರಂಭದ ದಿನಾಂಕ ತಿಳಿಸಿದ ನಿರ್ದೇಶಕ ಟಿ.ಎನ್.ಸೀತಾರಾಮ್
‘ಮತ್ತೆ ಮನ್ವಂತರದ’ದ ನಾಯಕಿ ಮೇಧಾ- ನಿರ್ದೇಶಕ ಟಿ.ಎನ್​.ಸೀತಾರಾಮ್​
Follow us
| Updated By: shivaprasad.hs

Updated on:Aug 11, 2021 | 6:57 PM

ಕನ್ನಡ ಕಿರುತೆರೆಯ ಇತಿಹಾಸದಲ್ಲಿ ತಮ್ಮ ವಿಭಿನ್ನ ವಸ್ತು ಶೈಲಿಯ ಧಾರವಾಹಿಗಳಿಂದ ಮನೆಮಾತಾದವರು ಟಿ.ಎನ್.ಸೀತಾರಾಮ್. ಅವರ ನಿರ್ದೇಶನದ ಮನ್ವಂತರ, ಮುಕ್ತ, ಮುಕ್ತಮುಕ್ತ, ಮಾಯಾಮೃಗ ಮೊದಲಾದ ಧಾರವಾಹಿಗಳು ಅಪಾರ ಜನಮೆಚ್ಚುಗೆ ಗಳಿಸಿದ್ದವು. ಅವರು ಕೊನೆಯದಾಗಿ ನಿರ್ದೇಶಿಸಿದ ಧಾರವಾಹಿ ‘ಮಗಳು ಜಾನಕಿ’. ಗಾನವಿ ಲಕ್ಷ್ಮಣ್, ರಾಕೇಶ್ ಮಯ್ಯ ಮೊದಲಾದ ಉದಯೋನ್ಮುಖ ಕಲಾವಿದರನ್ನು ಈ ಧಾರವಾಹಿಯ ಮುಖಾಂತರ ಪರಿಚಯಿಸಿದ ಸೀತಾರಾಮ್, ಅನಿವಾರ್ಯ ಕಾರಣಗಳಿಂದ ‘ಮಗಳು ಜಾನಕಿ’ಯನ್ನು ನಿಲ್ಲಿಸಿದ್ದರು. ಆ ಸಂದರ್ಭದಲ್ಲೇ ಹೊಸ ಧಾರವಾಹಿ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂಬ ಸೂಚನೆಯನ್ನೂ ಅವರು ನೀಡಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.

ಇತ್ತೀಚೆಗೆ ಟಿ.ಎನ್.ಸೀತಾರಾಮ್ ತಮ್ಮ ಹೊಸ ಧಾರವಾಹಿಗೆ ಶೀರ್ಷಿಕೆ ಸೂಚಿಸಿ ಎಂದು ಫೇಸ್​ಬುಕ್​ನಲ್ಲಿ ಕೇಳಿಕೊಂಡಿದ್ದಾಗ ಅವರ ಅಪಾರ ಅಭಿಮಾನಿ ಬಳಗ ತಮ್ಮಿಚ್ಛೆಯ ಹೆಸರನ್ನು ಸೂಚಿಸಿದ್ದರು. ಹೆಸರನ್ನು ಅಂತಿಮಗೊಳಿಸಿದ್ದ ಅವರು, ಅದಕ್ಕೆ ‘ಮತ್ತೆ ಮನ್ವಂತರ’ ಎಂದು ಹೆಸರಿಟ್ಟಿದ್ದರು. ಅವರ ಈ ಹಿಂದಿನ ಧಾರವಾಹಿಗಳನ್ನು ನಿರ್ಮಾಣ ಮಾಡಿದ್ದ ಭೂಮಿಕಾ ಸಂಸ್ಥೆ ಇದನ್ನು ನಿರ್ಮಿಸಲಿದೆ.

‘ಮತ್ತೆ ಮನ್ವಂತರ’ದ ಚಿತ್ರೀಕರಣಕ್ಕೆ ಮುಹೂರ್ತ ನಿಗದಿಯಾಗಿದ್ದು, ನಾಳೆ ಅಂದರೆ ಆಗಸ್ಟ್ 12ರ ಗುರುವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಸೀತಾರಾಮ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹೊಸ ಪಯಣಕ್ಕೆ ಅಭಿಮಾನಿಗಳ ಪ್ರೀತಿ ಮತ್ತು ಹಾರೈಕೆಯನ್ನು ಅವರು ಕೋರಿದ್ದಾರೆ.

ಫೇಸ್​ಬುಕ್​ನಲ್ಲಿ ಟಿ.ಎನ್.ಸೀತಾರಾಮ್ ಹಂಚಿಕೊಂಡಿರುವ ಪೋಸ್ಟ್:

‘ಮತ್ತೆ ಮನ್ವಂತರ’ ಧಾರವಾಹಿಯಲ್ಲಿ ಮೇಧಾ ವಿದ್ಯಾಭೂಷಣ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಂಗೀತದ ಹಿನ್ನೆಲೆಯುಳ್ಳ ಅವರು, ಖ್ಯಾತ ಗಾಯಕ ವಿದ್ಯಾಭೂಷಣ ಅವರ ಪುತ್ರಿ. ‘ಮತ್ತೆ ಮನ್ವಂತರ’ವು ಸವಾಲುಗಳನ್ನು ಎದುರಿಸಿ, ಗುರಿಯತ್ತ ಮುನ್ನುಗ್ಗುವ ಯುವತಿಯ ಕತೆ ಎಂದು ಈ ಹಿಂದೆ ಮೇಧಾ ಟಿವಿ9ನೊಂದಿಗೆ ಮಾತನಾಡಿದಾಗ ಮಾಹಿತಿ ಹಂಚಿಕೊಂಡಿದ್ದರು. ಈ ಧಾರವಾಹಿಯೂ ಟಿ.ಎನ್​.ಎಸ್. ಅವರ ಈ ಹಿಂದಿನ ಧಾರವಾಹಿಗಳಂತೆ ಜನರಿಗೆ ಪ್ರಿಯವಾಗಲಿದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:

‘ಮುಕ್ತ ಮುಕ್ತ’ ನೋಡಿಕೊಂಡು ಬೆಳೆದ ಹುಡುಗಿ ಈಗ ‘ಮತ್ತೆ ಮನ್ವಂತರ’ದ ನಾಯಕಿ! ಟಿಎನ್ಎಸ್​​​ ಹುಡುಕಿದ ಹೊಸ ಪ್ರತಿಭೆ ಮೇಧಾ

ಟಿ.ಎನ್.​ ಸೀತಾರಾಮ್ ಹೊಸ ಧಾರಾವಾಹಿಗೆ ಟೈಟಲ್​ ಫಿಕ್ಸ್​; ಮೇಧಾ ವಿದ್ಯಾಭೂಷಣ​ ನಾಯಕಿ!

(TN Seetharam directorial new serial Matte Manvantara starts shooting from August 12th says TNS)

Published On - 6:55 pm, Wed, 11 August 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ