AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭವ್ಯಾ, ಐಶ್ವರ್ಯಾ ಬಿಗ್ ಬಾಸ್ ಫಿನಾಲೆ ಟಾಪ್ 2 ಸ್ಪರ್ಧಿಗಳು: ದೊಡ್ಮನೆ ಒಳಗೆ ಭವಿಷ್ಯವಾಣಿ

ಸೀರಿಯಲ್​ನಲ್ಲಿ ಖ್ಯಾತಿ ಪಡೆದ ಭವ್ಯಾ ಮತ್ತು ಐಶ್ವರ್ಯಾ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ ಫಿನಾಲೆ ತಲುಪುತ್ತಾರೆ ಎಂದು ಭವಿಷ್ಯ ನುಡಿಯಲಾಗಿದೆ. ಅವರಿಬ್ಬರ ಆಟಕ್ಕೆ ಮೆಚ್ಚುಗೆ ಸಿಗುತ್ತಿದೆ. ಹಾಗಾದರೆ ದೊಡ್ಮನೆ ಒಳಗೆ ಈ ರೀತಿ ಭವಿಷ್ಯ ನುಡಿದಿದ್ದು ಯಾರು? ಇಂಥ ಮಾತು ಬರಲು ಕಾರಣ ಆಗಿದ್ದು ಏನು? ಇಲ್ಲಿದೆ ವಿವರ..

ಭವ್ಯಾ, ಐಶ್ವರ್ಯಾ ಬಿಗ್ ಬಾಸ್ ಫಿನಾಲೆ ಟಾಪ್ 2 ಸ್ಪರ್ಧಿಗಳು: ದೊಡ್ಮನೆ ಒಳಗೆ ಭವಿಷ್ಯವಾಣಿ
ಭವ್ಯಾ, ಐಶ್ವರ್ಯಾ
ಮದನ್​ ಕುಮಾರ್​
|

Updated on: Oct 15, 2024 | 9:12 PM

Share

ಬಿಗ್​ ಬಾಸ್​ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಹೊರ ಜಗತ್ತಿನಲ್ಲಿ ಏನು ಆಗುತ್ತಿದೆ ಎಂಬುದು ತಿಳಿಯುವುದಿಲ್ಲ. ಎಪಿಸೋಡ್​ನಲ್ಲಿ ತಮ್ಮನ್ನು ಯಾವ ರೀತಿ ಬಿಂಬಿಸಲಾಗುತ್ತಿದೆ? ಸೋಶಿಯಲ್ ಮೀಡಿಯಾದಲ್ಲಿ ಯಾವ ರೀತಿಯ ಇಮೇಜ್​ ಸೃಷ್ಟಿ ಆಗುತ್ತಿದೆ ಎಂಬುದು ಕೂಡ ಗೊತ್ತಿರುವುದಿಲ್ಲ. ತಮ್ಮ ಆಟದ ವೈಖರಿ ಜನರಿಗೆ ಇಷ್ಟ ಆಗುತ್ತಿದೆಯಾ ಅಥವಾ ಇಲ್ಲವಾ ಎಂಬ ನಿಖರ ಮಾಹಿತಿಯೂ ಸಿಗುವುದಿಲ್ಲ. ಆದರೆ ಈ ಬಾರಿ ಬಿಗ್​ ಬಾಸ್​ನಲ್ಲಿ ಒಂದು ಟ್ವಿಸ್ಟ್​ ನೀಡಲಾಗಿದೆ. ಹೊರಗಿನಿಂದ ವ್ಯಕ್ತಿಯೊಬ್ಬರು ಬಿಗ್​ ಬಾಸ್ ಮನೆಗೆ ಕರೆ ಮಾಡಿ ಕೆಲವು ಮಾಹಿತಿ ನೀಡಿದ್ದಾರೆ.

ಹೌದು, ಮಾಜಿ ಬಿಗ್ ಬಾಸ್​ ಸ್ಪರ್ಧಿ ತುಕಾಲಿ ಸಂತೋಷ್ ಅವರು ಬಿಗ್​ ಬಾಸ್ ಮನೆಗೆ ಫೋನ್ ಮಾಡಿದ್ದಾರೆ. ಪತ್ನಿ ಮಾನಸಾ ಜೊತೆ ಮಾತನಾಡಿದ್ದಾರೆ. ದೊಡ್ಮನೆಯಲ್ಲಿ ಇರುವ ಕೆಲವು ಸ್ಪರ್ಧಿಗಳಿಗೆ ಅವರು ಒಂದಷ್ಟು ವಿಚಾರವನ್ನು ಮುಟ್ಟಿಸಿದ್ದಾರೆ. ಹೀಗೆ ಮಾತನಾಡುವಾಗ ಭವ್ಯಾ ಮತ್ತು ಐಶ್ವರ್ಯಾ ಬಗ್ಗೆ ಅವರು ಭವಿಷ್ಯ ನುಡಿದಿದ್ದಾರೆ.

ಪತ್ನಿ ಮಾನಸಾ ಜೊತೆ ಫೋನ್​ನಲ್ಲಿ ಮಾತನಾಡುವಾಗ ತುಕಾಲಿ ಸಂತೋಷ್​ ಈ ರೀತಿ ಹೇಳಿದರು. ‘ಭವ್ಯಾ ಮತ್ತು ಐಶ್ವರ್ಯಾ ಮನಸ್ಸು ಮಾಡಿದರೆ ಇಡೀ ಸೀಸನ್​ ಗೆಲ್ಲಬಹುದು. ಅವರಿಬ್ಬರು ಅಷ್ಟು ಸ್ಟ್ರಾಂಗ್ ಇದ್ದಾರೆ. ಆದರೆ ಒಂದು ಸಲ ಆಡುತ್ತಾರೆ, ಇನ್ನೊಂದು ಸಲ ಆಫ್​ ಆಗುತ್ತಾರೆ. ಅವರಿಬ್ಬರು ಮನಸ್ಸು ಮಾಡಿದರೆ ಫಿನಾಲೆಯ ಟಾಪ್ 2 ಸ್ಪರ್ಧಿಗಳು ಅವರೇ ಆಗಿರುತ್ತಾರೆ. ಬೇಕಾದರೆ ಇದನ್ನು ನಾನು ಬರೆದುಕೊಡಬಲ್ಲೆ. ಅವರಿಗೆ ಹೋಗಿ ಹೇಳು.. ಅವರೇ ತಮ್ಮ ಎನರ್ಜಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ ತುಕಾಲಿ ಸಂತೋಷ್.

ಇದನ್ನೂ ಓದಿ: ‘ಇವರ ಅಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ’: ಜಗದೀಶ್​ಗೆ ಚೈತ್ರಾ ಕ್ಲಾಸ್

ಅದೇ ರೀತಿ, ಲಾಯರ್ ಜಗದೀಶ್ ಅವರಿಗೂ ತುಕಾಲಿ ಸಂತೋಷ್​ ಮೆಸೇಜ್ ನೀಡಿದ್ದಾರೆ. ‘ಜಗದೀಶ್ ಅವರು ಸೂಪರ್​ ಆಗಿ ಆಡ್ತಾ ಇದ್ದಾರೆ. ಯಾರನ್ನೂ ಅವರು ಮೇಲೆ ಬರೋಕೆ ಬಿಡುತ್ತಿಲ್ಲ. ಎಲ್ಲರ ಕಂಟೆಂಟ್​ಗಳನ್ನು ಆಯಪ್ಪನೇ ತಿಂದುಕೊಂಡು ಹೀರೋ ಆಗಿದ್ದಾರೆ. ಅವರು ಎಲ್ಲರನ್ನೂ ಓವರ್​ಟೇಕ್​ ಮಾಡಿಕೊಂಡು ಕಿಂಗ್ ಆಗಿದ್ದಾರೆ. ಅವರನ್ನು ಬಿಟ್ಟರೆ ಬೇರೆ ಯಾರೂ ಕಾಣಿಸುತ್ತಿಲ್ಲ. ಅವರೇ ಕಿಂಗ್ ಅಲ್ಲಿ’ ಎಂದು ಪತ್ನಿ ಮಾನಸಾ ಬಳಿ ತುಕಾಲಿ ಸಂತೋಷ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ