ಭವ್ಯಾ, ಐಶ್ವರ್ಯಾ ಬಿಗ್ ಬಾಸ್ ಫಿನಾಲೆ ಟಾಪ್ 2 ಸ್ಪರ್ಧಿಗಳು: ದೊಡ್ಮನೆ ಒಳಗೆ ಭವಿಷ್ಯವಾಣಿ

ಸೀರಿಯಲ್​ನಲ್ಲಿ ಖ್ಯಾತಿ ಪಡೆದ ಭವ್ಯಾ ಮತ್ತು ಐಶ್ವರ್ಯಾ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ ಫಿನಾಲೆ ತಲುಪುತ್ತಾರೆ ಎಂದು ಭವಿಷ್ಯ ನುಡಿಯಲಾಗಿದೆ. ಅವರಿಬ್ಬರ ಆಟಕ್ಕೆ ಮೆಚ್ಚುಗೆ ಸಿಗುತ್ತಿದೆ. ಹಾಗಾದರೆ ದೊಡ್ಮನೆ ಒಳಗೆ ಈ ರೀತಿ ಭವಿಷ್ಯ ನುಡಿದಿದ್ದು ಯಾರು? ಇಂಥ ಮಾತು ಬರಲು ಕಾರಣ ಆಗಿದ್ದು ಏನು? ಇಲ್ಲಿದೆ ವಿವರ..

ಭವ್ಯಾ, ಐಶ್ವರ್ಯಾ ಬಿಗ್ ಬಾಸ್ ಫಿನಾಲೆ ಟಾಪ್ 2 ಸ್ಪರ್ಧಿಗಳು: ದೊಡ್ಮನೆ ಒಳಗೆ ಭವಿಷ್ಯವಾಣಿ
ಭವ್ಯಾ, ಐಶ್ವರ್ಯಾ
Follow us
|

Updated on: Oct 15, 2024 | 9:12 PM

ಬಿಗ್​ ಬಾಸ್​ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಹೊರ ಜಗತ್ತಿನಲ್ಲಿ ಏನು ಆಗುತ್ತಿದೆ ಎಂಬುದು ತಿಳಿಯುವುದಿಲ್ಲ. ಎಪಿಸೋಡ್​ನಲ್ಲಿ ತಮ್ಮನ್ನು ಯಾವ ರೀತಿ ಬಿಂಬಿಸಲಾಗುತ್ತಿದೆ? ಸೋಶಿಯಲ್ ಮೀಡಿಯಾದಲ್ಲಿ ಯಾವ ರೀತಿಯ ಇಮೇಜ್​ ಸೃಷ್ಟಿ ಆಗುತ್ತಿದೆ ಎಂಬುದು ಕೂಡ ಗೊತ್ತಿರುವುದಿಲ್ಲ. ತಮ್ಮ ಆಟದ ವೈಖರಿ ಜನರಿಗೆ ಇಷ್ಟ ಆಗುತ್ತಿದೆಯಾ ಅಥವಾ ಇಲ್ಲವಾ ಎಂಬ ನಿಖರ ಮಾಹಿತಿಯೂ ಸಿಗುವುದಿಲ್ಲ. ಆದರೆ ಈ ಬಾರಿ ಬಿಗ್​ ಬಾಸ್​ನಲ್ಲಿ ಒಂದು ಟ್ವಿಸ್ಟ್​ ನೀಡಲಾಗಿದೆ. ಹೊರಗಿನಿಂದ ವ್ಯಕ್ತಿಯೊಬ್ಬರು ಬಿಗ್​ ಬಾಸ್ ಮನೆಗೆ ಕರೆ ಮಾಡಿ ಕೆಲವು ಮಾಹಿತಿ ನೀಡಿದ್ದಾರೆ.

ಹೌದು, ಮಾಜಿ ಬಿಗ್ ಬಾಸ್​ ಸ್ಪರ್ಧಿ ತುಕಾಲಿ ಸಂತೋಷ್ ಅವರು ಬಿಗ್​ ಬಾಸ್ ಮನೆಗೆ ಫೋನ್ ಮಾಡಿದ್ದಾರೆ. ಪತ್ನಿ ಮಾನಸಾ ಜೊತೆ ಮಾತನಾಡಿದ್ದಾರೆ. ದೊಡ್ಮನೆಯಲ್ಲಿ ಇರುವ ಕೆಲವು ಸ್ಪರ್ಧಿಗಳಿಗೆ ಅವರು ಒಂದಷ್ಟು ವಿಚಾರವನ್ನು ಮುಟ್ಟಿಸಿದ್ದಾರೆ. ಹೀಗೆ ಮಾತನಾಡುವಾಗ ಭವ್ಯಾ ಮತ್ತು ಐಶ್ವರ್ಯಾ ಬಗ್ಗೆ ಅವರು ಭವಿಷ್ಯ ನುಡಿದಿದ್ದಾರೆ.

ಪತ್ನಿ ಮಾನಸಾ ಜೊತೆ ಫೋನ್​ನಲ್ಲಿ ಮಾತನಾಡುವಾಗ ತುಕಾಲಿ ಸಂತೋಷ್​ ಈ ರೀತಿ ಹೇಳಿದರು. ‘ಭವ್ಯಾ ಮತ್ತು ಐಶ್ವರ್ಯಾ ಮನಸ್ಸು ಮಾಡಿದರೆ ಇಡೀ ಸೀಸನ್​ ಗೆಲ್ಲಬಹುದು. ಅವರಿಬ್ಬರು ಅಷ್ಟು ಸ್ಟ್ರಾಂಗ್ ಇದ್ದಾರೆ. ಆದರೆ ಒಂದು ಸಲ ಆಡುತ್ತಾರೆ, ಇನ್ನೊಂದು ಸಲ ಆಫ್​ ಆಗುತ್ತಾರೆ. ಅವರಿಬ್ಬರು ಮನಸ್ಸು ಮಾಡಿದರೆ ಫಿನಾಲೆಯ ಟಾಪ್ 2 ಸ್ಪರ್ಧಿಗಳು ಅವರೇ ಆಗಿರುತ್ತಾರೆ. ಬೇಕಾದರೆ ಇದನ್ನು ನಾನು ಬರೆದುಕೊಡಬಲ್ಲೆ. ಅವರಿಗೆ ಹೋಗಿ ಹೇಳು.. ಅವರೇ ತಮ್ಮ ಎನರ್ಜಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ ತುಕಾಲಿ ಸಂತೋಷ್.

ಇದನ್ನೂ ಓದಿ: ‘ಇವರ ಅಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ’: ಜಗದೀಶ್​ಗೆ ಚೈತ್ರಾ ಕ್ಲಾಸ್

ಅದೇ ರೀತಿ, ಲಾಯರ್ ಜಗದೀಶ್ ಅವರಿಗೂ ತುಕಾಲಿ ಸಂತೋಷ್​ ಮೆಸೇಜ್ ನೀಡಿದ್ದಾರೆ. ‘ಜಗದೀಶ್ ಅವರು ಸೂಪರ್​ ಆಗಿ ಆಡ್ತಾ ಇದ್ದಾರೆ. ಯಾರನ್ನೂ ಅವರು ಮೇಲೆ ಬರೋಕೆ ಬಿಡುತ್ತಿಲ್ಲ. ಎಲ್ಲರ ಕಂಟೆಂಟ್​ಗಳನ್ನು ಆಯಪ್ಪನೇ ತಿಂದುಕೊಂಡು ಹೀರೋ ಆಗಿದ್ದಾರೆ. ಅವರು ಎಲ್ಲರನ್ನೂ ಓವರ್​ಟೇಕ್​ ಮಾಡಿಕೊಂಡು ಕಿಂಗ್ ಆಗಿದ್ದಾರೆ. ಅವರನ್ನು ಬಿಟ್ಟರೆ ಬೇರೆ ಯಾರೂ ಕಾಣಿಸುತ್ತಿಲ್ಲ. ಅವರೇ ಕಿಂಗ್ ಅಲ್ಲಿ’ ಎಂದು ಪತ್ನಿ ಮಾನಸಾ ಬಳಿ ತುಕಾಲಿ ಸಂತೋಷ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ರಾಜ ಗೆಲ್ಲುತ್ತಾನೆ, ಆದ್ರೆ ಈಗ ದೈವಬಲ ಇಲ್ಲ: ಕೋಡಿಶ್ರೀ ಸ್ಫೋಟಕ ಭವಿಷ್ಯ
ರಾಜ ಗೆಲ್ಲುತ್ತಾನೆ, ಆದ್ರೆ ಈಗ ದೈವಬಲ ಇಲ್ಲ: ಕೋಡಿಶ್ರೀ ಸ್ಫೋಟಕ ಭವಿಷ್ಯ
ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ: ಸಿಎಂ
ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ: ಸಿಎಂ
ಬೆಂಗಳೂರಿನಲ್ಲಿ ಮಳೆ ಆರ್ಭಟ; ಹೆಬ್ಬಾಳದಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್​
ಬೆಂಗಳೂರಿನಲ್ಲಿ ಮಳೆ ಆರ್ಭಟ; ಹೆಬ್ಬಾಳದಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್​
ಬ್ರ್ಯಾಂಡ್ ಬೆಂಗಳೂರು ಎನ್ನುವ ಶಿವಕುಮಾರ್​ಗೆ ನಗರದ ರಸ್ತೆಗಳು ಕಾಣುತ್ತಿಲ್ಲ!
ಬ್ರ್ಯಾಂಡ್ ಬೆಂಗಳೂರು ಎನ್ನುವ ಶಿವಕುಮಾರ್​ಗೆ ನಗರದ ರಸ್ತೆಗಳು ಕಾಣುತ್ತಿಲ್ಲ!