ಜಗದೀಶ್ ಶರ್ಟ್ ಮೇಲೆ ಹಂಸಾ ಲಿಪ್​ಸ್ಟಿಕ್ ಗುರುತು; ಯಾವಾಗ ಆಯ್ತು ಈ ಕಲೆ?

‘ಬಿಗ್​ ಬಾಸ್ ಕನ್ನಡ ಸೀಸನ್​ 11’ ಆಟದಲ್ಲಿ ಜಗದೀಶ್ ಮತ್ತು ಹಂಸಾ ಹೈಲೈಟ್ ಆಗುತ್ತಿದ್ದಾರೆ. ಇಬ್ಬರ ನಡುವಿನ ಬಾಂಧವ್ಯ ನೋಡಿ ಇನ್ನುಳಿದವರಿಗೆ ಗೊಂದಲ ಆಗುತ್ತಿದೆ. ಒಂದು ಕ್ಷಣ ಜೋರಾಗಿ ಜಗಳ ಮಾಡುವ ಅವರಿಬ್ಬರು ನಂತರದ ಕ್ಷಣದಲ್ಲಿ ಫ್ರೆಂಡ್ಸ್​ ಆಗುತ್ತಾರೆ. ಭಾನುವಾರದ ಎಪಿಸೋಡ್​ನಲ್ಲಿ ಅವರಿಬ್ಬರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದರು.

ಜಗದೀಶ್ ಶರ್ಟ್ ಮೇಲೆ ಹಂಸಾ ಲಿಪ್​ಸ್ಟಿಕ್ ಗುರುತು; ಯಾವಾಗ ಆಯ್ತು ಈ ಕಲೆ?
ಹಂಸಾ, ಜಗದೀಶ್
Follow us
|

Updated on: Oct 14, 2024 | 10:45 PM

ಲಾಯರ್​ ಜಗದೀಶ್ ಅವರಿಗೆ ಬಿಗ್ ಬಾಸ್​ ಆಟ ಹೇಳಿ ಮಾಡಿಸಿದಂತಿದೆ. ಆರಂಭದಿಂದಲೂ ಅವರು ಸಖತ್​ ಸದ್ದು ಮಾಡುತ್ತಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಅವರು ಎಲ್ಲರ ಜೊತೆಗೂ ಕಿರಿಕ್ ಮಾಡಿಕೊಂಡಿದ್ದಾರೆ. ಆದರೆ ಹೆಚ್ಚು ಜಗಳ ಮಾಡಿದ್ದು ನಟಿ ಹಂಸಾ ಜೊತೆ. ಹಾಗಂತ ಆ ಜಗಳ ಹಾಗೆಯೇ ಮುಂದುವರಿದಿಲ್ಲ. ಹಂಸಾ ಜೊತೆ ಜಗದೀಶ್ ಎಷ್ಟು ಜಗಳ ಮಾಡಿದ್ದಾರೋ ಅಷ್ಟೇ ಸ್ನೇಹ ಕೂಡ ಬೆಳೆಸಿದ್ದಾರೆ. ಸೋಮವಾರದ (ಅಕ್ಟೋಬರ್​ 14) ಸಂಚಿಕೆಯಲ್ಲಿ ಜಗದೀಶ್ ಅವರು ಲಿಪ್​ಸ್ಟಿಕ್​ ಕಲೆ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ದಾರೆ.

ಲಿವಿಂಗ್ ಏರಿಯಾದಲ್ಲಿ ಎಲ್ಲರೂ ಮಾತನಾಡುತ್ತಾ ಕುಳಿತಿದ್ದಾಗ ಜಗದೀಶ್ ಅವರು ಎಂಟ್ರಿ ನೀಡಿದರು. ಅವರು ಬಿಳಿ ಬಣ್ಣದ ಶರ್ಟ್​ ಹಾಕಿಕೊಂಡು ಬಂದರು. ತಮ್ಮ ಶರ್ಟ್​ ಮೇಲೆ ಲಿಪ್​ಸ್ಟಿಕ್ ಗುರುತು ಇದೆ ಎಂದು ಅವರು ಹೇಳಿದರು. ‘ನನ್ನ ಶರ್ಟ್​ ಮೇಲೆ ನಿಮ್ಮ ಲಿಪ್​ ಸ್ಟಿಕ್​ ಕಲೆ ಇದೆ’ ಎಂದು ನೇರವಾಗಿ ಹಂಸಾ ಬಳಿಯೇ ಜಗದೀಶ್ ಹೇಳಿದರು. ಅದನ್ನು ಹಂಸಾ ಕೂಡ ಅಲ್ಲ ಎನ್ನಲಿಲ್ಲ.

‘ನಿನ್ನೆ ಹಗ್ ಮಾಡಿದಾಗ ಈ ಕಲೆ ಆಗಿದ್ದು’ ಎಂದು ಹಂಸಾ ಅವರು ಹೇಳಿದರು. ಅಲ್ಲದೇ, ‘ಬೇಕಿದ್ದರೆ ವಾಶ್ ಮಾಡಿ ಕೊಡುವೆ’ ಎಂದು ಕೂಡ ಅವರು ಹೇಳಿದರು. ಜಗದೀಶ್​ ಹಾಗೂ ಹಂಸಾ ಅವರ ನಡುವಿನ ಸ್ನೇಹ-ಜಗಳ ಎಲ್ಲರಿಗೂ ಗೊಂದಲ ಮೂಡಿಸುವ ರೀತಿಯಲ್ಲಿ ಇದೆ. ಹಂಸಾ ಅವರು ಕ್ಯಾಪ್ಟನ್ ಆದಾಗ ಜಗದೀಶ್​ ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದರು. ಏಕವಚನದಲ್ಲಿ ಬೈಯ್ದುಕೊಳ್ಳುವ ಮಟ್ಟಕ್ಕೆ ಕಿತ್ತಾಡಿದ್ದರು. ಆದರೆ ಆ ಘಟನೆಗಳ ಬಳಿಕ ಅವರಿಬ್ಬರ ನಡುವಿನ ಸ್ನೇಹ ಇನ್ನಷ್ಟು ಹೆಚ್ಚಾಯಿತು.

ಇದನ್ನೂ ಓದಿ: ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ: ಇದೇ ಕೊನೆಯ ಸೀಸನ್; ಅಧಿಕೃತ ಘೋಷಣೆ

ಹಾಗಾದ್ರೆ ಈ ಲಿಪ್​ಸ್ಟಿಕ್ ಹತ್ತಿದ್ದು ಯಾವಾಗ? ಭಾನುವಾರದ ಸಂಚಿಕೆಯಲ್ಲಿ ‘ಅನಿಸುತಿದೆ ಯಾಕೋ ಇಂದು..’ ಹಾಡಿಗೆ ಹಂಸಾ ಮತ್ತು ಜಗದೀಶ್ ಅವರು ಡ್ಯಾನ್ಸ್​ ಮಾಡಿ ಎಲ್ಲರನ್ನೂ ರಂಜಿಸಿದ್ದರು. ಅವರಿಬ್ಬರ ಉತ್ಸಾಹಕ್ಕೆ ಸುದೀಪ್ ಕೂಡ ಭೇಷ್ ಎಂದಿದ್ದರು. ವೀಕೆಂಡ್ ಸಂಚಿಕೆ ಆದ್ದರಿಂದ ಹಂಸಾ ಅವರು ಚೆನ್ನಾಗಿ ಮೇಕಪ್ ಮಾಡಿಕೊಂಡಿದ್ದರು. ಖುಷಿಯಿಂದ ಡ್ಯಾನ್ಸ್ ಮಾಡುವಾಗ ಅವರ ಲಿಪ್​ಸ್ಟಿಕ್​ ಬಣ್ಣ ಜಗದೀಶ್ ಶರ್ಟ್​ಗೆ ಅಂಟಿತ್ತು ಅಷ್ಟೇ.

ಇಂಥ ಹಲವು ಘಟನೆಗಳಿಂದಾಗಿ ಜಗದೀಶ್ ಅವರಿಗೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಗುತ್ತಿದೆ. ಅನೇಕ ಬಾರಿ ಅವರು ಬಿಗ್ ಬಾಸ್ ಮನೆಯ ನಿಯಮ ಮುರಿದಿದ್ದರು. ಬಿಗ್ ಬಾಸ್​ ಕಾರ್ಯಕ್ರಮದ ಬಗ್ಗೆಯೂ ಅವರು ಹಗುರಾಗಿ ಮಾತನಾಡಿದ್ದರು. ಹಾಗಿದ್ದರೂ ಕೂಡ ಅವರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ಅವರಿಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ
ರೋಹಿತ್​ ಪಡೆಗೆ ಗಂಭೀರ ಎಚ್ಚರಿಕೆ ನೀಡಿದ ಕೋಚ್ ಗೌತಮ್
ರೋಹಿತ್​ ಪಡೆಗೆ ಗಂಭೀರ ಎಚ್ಚರಿಕೆ ನೀಡಿದ ಕೋಚ್ ಗೌತಮ್
ಮೌಖಿಕ ಆದೇಶಗಳಿಗೆ ಕಿಮ್ಮತ್ತಿರಲ್ಲ ಅಂತ ಜಮೀರ್​​​ಗೆ ಗೊತ್ತಿಲ್ಲ: ಯತ್ನಾಳ್
ಮೌಖಿಕ ಆದೇಶಗಳಿಗೆ ಕಿಮ್ಮತ್ತಿರಲ್ಲ ಅಂತ ಜಮೀರ್​​​ಗೆ ಗೊತ್ತಿಲ್ಲ: ಯತ್ನಾಳ್
ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ
ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಮುಡಾ ಕೇಸ್: ಲೋಕಾಯುಕ್ತ ಮೇಲೆ ಪ್ರಭಾವ, ಕಾಂಗ್ರೆಸ್​ ವಕ್ತಾರನ ಮೇಲೆ ಆರೋಪ
ಮುಡಾ ಕೇಸ್: ಲೋಕಾಯುಕ್ತ ಮೇಲೆ ಪ್ರಭಾವ, ಕಾಂಗ್ರೆಸ್​ ವಕ್ತಾರನ ಮೇಲೆ ಆರೋಪ