AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೋಡೋಕೆ ಅಷ್ಟೇ ಪಾಪ, ತುಂಬಾ ಡೇಂಜರ್’; ಗಮನ ಸೆಳೆದ ವೈಷ್ಣವಿ ಹೊಸ ಸೀರಿಯಲ್ ಪ್ರೋಮೋ

‘ಸೀತಾ ರಾಮ’ ಧಾರಾವಾಹಿ ಬಗ್ಗೆ ವೀಕ್ಷಕರಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ವೈಷ್ಣವಿ ಹಾಗೂ ಗಗನ್ ಚಿನ್ನಪ್ಪ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ಮಾಡುತ್ತಿದ್ದಾರೆ.

‘ನೋಡೋಕೆ ಅಷ್ಟೇ ಪಾಪ, ತುಂಬಾ ಡೇಂಜರ್’; ಗಮನ ಸೆಳೆದ ವೈಷ್ಣವಿ ಹೊಸ ಸೀರಿಯಲ್ ಪ್ರೋಮೋ
ವೈಷ್ಣವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 21, 2023 | 9:38 AM

ವೈಷ್ಣವಿ ಗೌಡ (Vaishnavi Gowda) ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡ ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಅವರು ಜನಪ್ರಿಯತೆ ಹೆಚ್ಚಿಸಿಕೊಂಡರು. ನಂತರ ಬಿಗ್ ಬಾಸ್​ಗೆ ಬಂದು ಎಲ್ಲರ ಗಮನ ಸೆಳೆದರು. ಈಗ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರ ಪ್ರೋಮೋನ ವಾಹಿನಿ ಹಂಚಿಕೊಂಡಿದೆ. ಇದು ಸಾಕಷ್ಟು ಸೌಂಡ್ ಮಾಡುತ್ತಿದೆ. ವೈಷ್ಣವಿ ಗೌಡ ಅವರು ಸೈಲೆಂಟ್ ಅಮ್ಮ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಸೀತಾ ನೋಡೋಕೆ ಅಷ್ಟೇ ಪಾಪ ಅಂತೆ!

‘ಸೀತಾ ರಾಮ’ ಧಾರಾವಾಹಿ ಬಗ್ಗೆ ವೀಕ್ಷಕರಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ವೈಷ್ಣವಿ ಹಾಗೂ ಗಗನ್ ಚಿನ್ನಪ್ಪ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ಮಾಡುತ್ತಿದ್ದಾರೆ. ರೀತು ಸಿಂಗ್ ಹೆಸರಿನ ಬಾಲಕಿ ಕೂಡ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಸದ್ಯ ಹೊಸ ಪ್ರೋಮೋಗೆ ಸಾಕಷ್ಟು ಮೆಚ್ಚುಗೆ ಕೇಳಿ ಬಂದಿದೆ.

ಇದನ್ನೂ ಓದಿ: Vaishnavi Gowda: ಕ್ಯೂಟ್ ಲುಕ್​ನಲ್ಲಿ ಗಮನ ಸೆಳೆದ ನಟಿ ವೈಷ್ಣವಿ ಗೌಡ; ಇಲ್ಲಿದೆ ಫೋಟೋ ಗ್ಯಾಲರಿ

ಕಥಾ ನಾಯಕಿ ಸೀತಾ (ವೈಷ್ಣವಿ) ಹಾಗೂ ಅವಳ ಮಗಳು (ರೀತು ಸಿಂಗ್) ತಮ್ಮ ಪಾಡಿಗೆ ತಾವಿರುತ್ತಾರೆ. ಆಗ ಕಥಾ ನಾಯಕ ರಾಮನ (ಗಗನ್) ಎಂಟ್ರಿ ಆಗುತ್ತದೆ. ಸೀತಾಳ ಮದುವೆ ಆಗಬೇಕು ಎಂದರೆ ಅವಳ ಮಗಳ ಒಪ್ಪಿಗೆ ಪಡೆಯಬೇಕು. ಸದ್ಯಕ್ಕೆ ಪ್ರೋಮೋ ನೋಡಿದವರು ಧಾರಾವಾಹಿ ಕಥೆಯನ್ನು ಈ ರೀತಿ ಊಹಿಸುತ್ತಿದ್ದಾರೆ. ಅಸಲಿ ಕಥೆ ಬೇರೆಯದೇ ಇರಬಹುದೇ ಎಂಬುದನ್ನು ಕಾದು ನೋಡಬೇಕಿದೆ.

View this post on Instagram

A post shared by Zee Kannada (@zeekannada)

‘ಇವಳು ನೋಡೋಕೆ ಪಾಪದವಳ ತರ ಕಾಣಿಸ್ತಾಳೆ. ಆದರೆ ತುಂಬಾ ಡೇಂಜರ್. ಕೋಪ ಬಂದ್ರೆ ಟೀಚರ್​ಗಿಂತ ಜೋರಾಗಿ ಹೊಡಿತಾಳೆ. ಎಷ್ಟು ಉರಿಯತ್ತೆ ಗೊತ್ತಾ? ನೋಡು ಇವಳು ನನ್ನಮ್ಮ. ನಂಗೇ ಇಷ್ಟು ಹೊಡೀತಾಳೆ. ಮದುವೆ ಆದ್ಮೇಲೆ ನಿಂಗೆ ಎಷ್ಟು ಕಾಟ ಕೊಡಬಹುದು. ಯೋಚನೆ ಮಾಡು’ ಎಂದು ಅಮ್ಮನ ಬಗ್ಗೆ ಮಗಳು ಹೇಳುವ ರೀತಿಯಲ್ಲಿ ಪ್ರೋಮೋ ಇದೆ.

ಇದನ್ನೂ ಓದಿ: ದಿವ್ಯಾ-ಅರವಿಂದ್ ಜತೆ ವೈಷ್ಣವಿ ಗೌಡ, ರಘು ಮೋಜು-ಮಸ್ತಿ ; ಫೋಟೋ ವೈರಲ್

‘ಸೀತಾ ರಾಮ’ ಮೊದಲ ಪ್ರೋಮೋ ರಿಲೀಸ್ ಆಗಿ ಕೆಲವು ತಿಂಗಳು ಕಳೆದಿದೆ. ಅಂದಿನಿಂದ ಇಂದಿನವರೆಗೆ ಧಾರಾವಾಹಿ ಆರಂಭ ದಿನಾಂಕ ರೀವಿಲ್ ಆಗಿಲ್ಲ. ಈಗ ರಿಲೀಸ್ ಆದ ಹೊಸ ಪ್ರೋಮೋದಲ್ಲೂ ಧಾರಾವಾಹಿಯ ಪ್ರಸಾರದ ದಿನಾಂಕ ಇಲ್ಲ. ದಯವಿಟ್ಟು ಧಾರಾವಾಹಿ ರಿಲೀಸ್ ದಿನಾಂಕ ತಿಳಿಸಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಈ ಮುದ್ದಾದ ಸ್ಟೋರಿನ ನೋಡೋಕೆ ವೀಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
ಮೂರುಬಾರಿ ಶಾಸಕನಾದರೆ ಮಂತ್ರಿ ಮಾಡುವ ಪರಿಪಾಠ ಇಲ್ಲವಾಗಿದೆ: ಗೋಪಾಲಕೃಷ್ಣ
ಮೂರುಬಾರಿ ಶಾಸಕನಾದರೆ ಮಂತ್ರಿ ಮಾಡುವ ಪರಿಪಾಠ ಇಲ್ಲವಾಗಿದೆ: ಗೋಪಾಲಕೃಷ್ಣ
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು