AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಳೋದೆಲ್ಲ ಹೇಳಿ ‘ತಪ್ಪು ಶಬ್ದ ಪ್ರಯೋಗ ಮಾಡಿದ್ದರೆ ಕ್ಷಮೆ ಇರಲಿ’ ಎಂದ ವಿನಯ್ ಗೌಡ

ಮೊದಲ ವಾರ ಸಂಗೀತಾ ಹಾಗೂ ವಿನಯ್ ನಡುವೆ ಕಿತ್ತಾಟ ನಡೆಯಿತು. ಇದು ಸಾಮಾನ್ಯ ರೀತಿಯಲ್ಲೇ ಇತ್ತು. ಕಳೆದ ವಾರ ಸುದೀಪ್ ಅವರು ವಿನಯ್ ಅವರನ್ನು ಆನೆ ಎಂದು ಹೊಗಳಿದ ಬಳಿಕ ಅವರು ನಡೆದುಕೊಳ್ಳುವ ರೀತಿ ಬದಲಾಯಿತು. ಈ ವಾರ ಅವರಿಗೆ ಮಿತಿಯೇ ಇಲ್ಲ ಎಂಬ ರೀತಿಯಲ್ಲಿ ನಡೆದುಕೊಂಡರು.

ಹೇಳೋದೆಲ್ಲ ಹೇಳಿ ‘ತಪ್ಪು ಶಬ್ದ ಪ್ರಯೋಗ ಮಾಡಿದ್ದರೆ ಕ್ಷಮೆ ಇರಲಿ’ ಎಂದ ವಿನಯ್ ಗೌಡ
ವಿನಯ್​ ಗೌಡ
ರಾಜೇಶ್ ದುಗ್ಗುಮನೆ
|

Updated on:Nov 03, 2023 | 9:44 AM

Share

ಬಿಗ್ ಬಾಸ್ (Bigg Boss) ಮನೆಯಲ್ಲಿರುವ ವಿನಯ್ ಗೌಡ (Vinay Gowda) ಅವರ ಬಗ್ಗೆ ನೆಗೆಟಿವ್ ಮಾತು ಶುರುವಾಗಿದೆ. ಅವರು ನಡೆದುಕೊಳ್ಳುತ್ತಿರುವುದು ಆ ರೀತಿಯಲ್ಲಿದೆ. ಎಲ್ಲರ ಮೇಲೆ ಏಕವಚನ ಪ್ರಯೋಗ ಮಾಡುತ್ತಾರೆ. ಆ ಬಳಿಕ ತಮಗೆ ಗೌರವ ಸಿಗಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ಈ ಬಾರಿ ಮಹಿಳೆಯರ ಬಗ್ಗೆ ಅವರು ಬಳಕೆ ಮಾಡಿದ ಅವಾಚ್ಯ ಶಬ್ದಗಳು ಒಂದೆರಡಲ್ಲ. ಮಾಡುವುದನ್ನೆಲ್ಲ ಮಾಡಿ, ಹೇಳುವುದನ್ನೆಲ್ಲ ಹೇಳಿ ಕೊನೆಗೆ ಅವರು ಕ್ಷಮೆ ಕೇಳಿದ್ದಾರೆ. ಇದು ನಾಟಕದ ಕ್ಷಮೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ವಾರ ಸಂಗೀತಾ ಹಾಗೂ ವಿನಯ್ ನಡುವೆ ಕಿತ್ತಾಟ ನಡೆಯಿತು. ಇದು ಸಾಮಾನ್ಯ ರೀತಿಯಲ್ಲೇ ಇತ್ತು. ಕಳೆದ ವಾರ ಸುದೀಪ್ ಅವರು ವಿನಯ್ ಅವರನ್ನು ಆನೆ ಎಂದು ಹೊಗಳಿದ ಬಳಿಕ ಅವರು ನಡೆದುಕೊಳ್ಳುವ ರೀತಿ ಬದಲಾಯಿತು. ಈ ವಾರ ಅವರಿಗೆ ಮಿತಿಯೇ ಇಲ್ಲ ಎಂಬ ರೀತಿಯಲ್ಲಿ ನಡೆದುಕೊಂಡರು. ಅನೇಕರ ಮನಸ್ಸನ್ನು ನೋಯಿಸಿದರು. ಅವಾಚ್ಯ ಶಬ್ದ ಬಳಕೆ ಮಾಡಿದರು.

ಕಳೆದ ವಾರ ಎಲಿಮಿನೇಟ್ ಆಗಿದ್ದರೂ ಭಾಗ್ಯಶ್ರೀ ಅವರು ಉಳಿದುಕೊಂಡರು. ಜನರ ಕೋರಿಕೆ ಮೇರೆಗೆ ಈ ವಾರ ಎಲಿಮಿನೇಷನ್ ಇರಲ್ಲ ಎಂದು ಸುದೀಪ್ ಘೋಷಿಸಿದರು. ಈ ವಿಚಾರ ಇಟ್ಟುಕೊಂಡು ಭಾಗ್ಯಶ್ರೀಗೆ ನೋಯಿಸಿದ್ದಾರೆ ವಿನಯ್. ‘ಅವರು ದಸರಾ ಹಬ್ಬದ ಕಾರಣಕ್ಕೆ ಉಳಿದುಕೊಂಡರು. ಇಲ್ಲದಿದ್ದರೆ ಎಲಿಮಿನೇಟ್ ಆಗುತ್ತಿದ್ದರು’ ಎಂದಿದ್ದರು. ಇದು ಭಾಗ್ಯಶ್ರೀಗೆ ನೋವು ತಂದಿತ್ತು. ಅವರು ಸಾಕಷ್ಟು ಕಣ್ಣೀರು ಹಾಕಿದರು.

ಇನ್ನು, ಸಂಗೀತಾ ಹಾಗೂ ತನಿಷಾ ವಿಚಾರದಲ್ಲಿ ಅವರು ಏಕವಚನ ಬಳಕೆ ಮಾಡಿದ್ದರು. ‘ಗಂಡಸರ ರೀತಿ ಆಡು, ಬಳೆ ಹಾಕಿಕೊಂಡವರ ರೀತಿ ಆಡಬೇಡ’ ಎಂದು ಮಹಿಳೆಯರಿಗೆ ಅವಮಾನ ಮಾಡಿದ್ದರು. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿತ್ತು.

ಇದನ್ನೂ ಓದಿ: ಬಿಗ್ ಬಾಸ್ ಎಫೆಕ್ಟ್: ‘ಸೀತಾ ರಾಮ’ ಧಾರಾವಾಹಿ ಟಿಆರ್​ಪಿಯಲ್ಲಿ ಇಳಿಕೆ; ಇಲ್ಲಿದೆ ವಿವರ

ಟಾಸ್ಕ್​ ಎಲ್ಲವೂ ಮುಗಿದ ಬಳಿಕ ವಿನಯ್ ಗೌಡ ಅವರು ಕ್ಷಮೆ ಕೇಳಿದರು. ‘ನನ್ನಿಂದ ತಪ್ಪಾಗಿದ್ದರೆ, ನಾನು ಕೆಟ್ಟ ಶಬ್ದ ಬಳಕೆ ಮಾಡಿದರೆ ನಮ್ಮ ಮನೆತನದವರಿಗೆ ಹಾಗೂ ಸಂಗೀತಾ ಮನೆತನದವರಿಗೆ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ ವಿನಯ್.  ಈ ಕ್ಷಮೆಯನ್ನು ನಾವು ಒಪ್ಪಲ್ಲ ಎಂದಿದ್ದಾರೆ ಪ್ರೇಕ್ಷಕರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:41 am, Fri, 3 November 23

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!