AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್ ಎಪಿಸೋಡ್​ನಲ್ಲಿ ಕೊತ್ವಾಲನ ಉಲ್ಲೇಖ: ರೌಡಿಸಂ ಎಂಬುದೆಲ್ಲ ಸುಳ್ಳೆ?

Weekend With Ramesh: ವೀಕೆಂಡ್ ವಿತ್ ರಮೇಶ್​ಗೆ ಅತಿಥಿಯಾಗಿ ಡಿಕೆ ಶಿವಕುಮಾರ್ ಆಗಮಿಸಿದ್ದರು. ಎಪಿಸೋಡ್​ನಲ್ಲಿ ರೌಡಿ ಕೊತ್ವಾಲನ ಉಲ್ಲೇಖವಾಯಿತು. ಡಿಕೆ ಶಿವಕುಮಾರ್-ಕೊತ್ವಾಲನ ಗೆಳೆತನದ ಬಗ್ಗೆ ಇರುವ ಕತೆಗಳೆಲ್ಲ ಸುಳ್ಳೆ?

ಡಿಕೆ ಶಿವಕುಮಾರ್ ಎಪಿಸೋಡ್​ನಲ್ಲಿ ಕೊತ್ವಾಲನ ಉಲ್ಲೇಖ: ರೌಡಿಸಂ ಎಂಬುದೆಲ್ಲ ಸುಳ್ಳೆ?
ಡಿಕೆ ಶಿವಕುಮಾರ್-ಕೊತ್ವಾಲ
Follow us
ಮಂಜುನಾಥ ಸಿ.
|

Updated on: Jun 11, 2023 | 8:27 AM

ವೀಕೆಂಡ್ ವಿತ್ ರಮೇಶ್​ಗೆ (Weekend With Ramesh) ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅತಿಥಿಯಾಗಿ ಆಗಮಿಸಿ ಸಾಧಕರು ಕುರ್ಚಿಯಲ್ಲಿ ಕುಳಿತಿದ್ದಾರೆ. ಡಿಕೆಶಿ ವೀಕೆಂಡ್ ವಿತ್ ರಮೇಶ್​ಗೆ ಬರಲಿದ್ದಾರೆ ಎಂದಾಗಲೇ ಡಿಕೆ ಶಿವಕುಮಾರ್ ಬಗ್ಗೆ ಈಗಾಗಲೇ ಚಾಲ್ತಿಯಲ್ಲಿರುವ ರೌಡಿಸಂ ಕತೆಗಳು ಇನ್ನಿತರೆ ಕತೆಗಳ ಕುರಿತಾಗಿ ಉಲ್ಲೇಖ ಆಗಬಹುದು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿತ್ತು. ಕೊತ್ವಾಲನ ಶಿಷ್ಯ ಡಿಕೆ ಶಿವಕುಮಾರ್ ಎಂದು ಆಗಾಗ್ಗೆ ಸಿಟಿ ರವಿ ಸೇರಿದಂತೆ ಬಿಜೆಪಿ ಮುಖಂಡರು ಸಹ ಹೇಳುತ್ತಲೇ ಇರುತ್ತಾರೆ. ಆದರೆ ಶನಿವಾರ ಪ್ರಸಾರವಾದ ಎಪಿಸೋಡ್​ನಲ್ಲಿ ಡಿಕೆ ಶಿವಕುಮಾರ್ ಅವರ ಬಾಲ್ಯದ ಜೀವನ, ಶಾಲೆ, ಕಾಲೇಜು ಜೀವನದ ಬಗ್ಗೆಯೇ ಹೆಚ್ಚು ಚರ್ಚೆಯಾಯಿತು. ಆದರೆ ಶನಿವಾರದ ಎಪಿಸೋಡ್​ನಲ್ಲಿ ಒಮ್ಮೆ ಮಾತ್ರ ರೌಡಿ ಕೊತ್ವಾಲನ (Kothwal) ಉಲ್ಲೇಖವಾಯಿತು.

ಎಪಿಸೋಡ್​ಗೆ ಡಿ.ಕೆ.ಶಿವಕುಮಾರ್ ಅವರ ಹಳೆಯ ಗೆಳೆಯರು, ಸೋದರ ಸಂಬಂಧಿಗಳು ಆಗಮಿಸಿ ಡಿ.ಕೆ.ಶಿವಕುಮಾರ್ ಅವರೊಟ್ಟಿಗೆ ಕಳೆದ ದಿನಗಳ ಬಗ್ಗೆ ನೆನಪು ಮಾಡಿಕೊಂಡರು. ಈ ವೇಳೆ ಮಾತನಾಡಿದ ಪರಮೇಶ್ ಎಂಬುವರು, ಡಿ.ಕೆ.ಶಿವಕುಮಾರ್ ವಿದ್ಯಾರ್ಥಿ ನಾಯಕನಾಗಿದ್ದಾಗಿನಿಂದಲೂ ನಾನು ಅವರನ್ನು ಹತ್ತಿರದಿಂದ ಬಲ್ಲೆ. ಅವರ ಬಳಿ ಲ್ಯಾಂಬ್ರೆಟಾ ಸ್ಕೂಟರ್ ಇತ್ತು ಅದಾದ ಬಳಿಕ ಯೆಜ್ಡಿ ಬೈಕ್ ಖರೀದಿಸಿದರು. ಅದರ ಪೂಜೆ ನಮ್ಮ ಮನೆಯಲ್ಲಿ ಮಾಡಿದ್ದು ಸಹ ನನಗೆ ನೆನಪಿದೆ. ಯಾರ್ಯಾರೋ ಏನೇನೋ ಹೇಳುತ್ತಾರೆ, ರೌಡಿಸಂ ಎಂದೆಲ್ಲ ಮಾತನಾಡುತ್ತಾರೆ ಅದೆಲ್ಲ ಸುಳ್ಳು ಎಂದರು.

ನಾವು ಜನರಲ್ ಹಾಸ್ಟೆಲ್​ಗೆ ಎಲ್​ಎನ್ ಮೂರ್ತಿ ಅವರನ್ನು ಭೇಟಿ ಆಗಲು ಹೋಗುತ್ತಿದ್ದೆವು. ಅವರು ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಆಗೆಲ್ಲ ಅಲ್ಲಿ ಕೊತ್ವಾಲ ಆಗಾಗ್ಗೆ ಕಾಣಿಸುತ್ತಿದ್ದರು. ಅವರೂ ಸಹ ಡಿಕೆ ಶಿವಕುಮಾರ್ ಅನ್ನು ಮಾತನಾಡಿಸುತ್ತಿದ್ದರು. ನೀವೆಲ್ಲ ನಾಯಕರಾಗುವಂತವರು, ನಮ್ಮಂಥವರೊಟ್ಟಿಗೆ ಕಾಣಿಸಿಕೊಳ್ಳಬೇಡಿ ಎನ್ನುತ್ತಿದ್ದರು ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಆಗಿನಿಂದಲೂ ಜನರ ಬಗ್ಗೆ ಅಪಾರ ಪ್ರೀತಿ, ಜೊತೆಗೆ ಏನನ್ನಾದರೂ ಸಾಧಿಸುವ ಛಲ. ಅದೇ ಕಾರಣಕ್ಕೆ ಅವರು ಇಂದಿನ ಸ್ಥಾನಕ್ಕೆ ಏರಿದ್ದಾರೆ ಎಂದರು.

ಇದನ್ನೂ ಓದಿ:ಡಿಕೆ ಶಿವಕುಮಾರ್ ಗೆದ್ದಾಗ ಇಡೀ ಮೆಜೆಸ್ಟಿಕ್ ಬಂದ್, ರೂಂಗೆ ಬರುತ್ತಿದ್ದು ಬಕೆಟ್​ಗಟ್ಟಲೆ ಆಹಾರ

ಅದೇ ಸಮಯದಲ್ಲಿ ಅವರ ಮತ್ತೊಬ್ಬ ಸಹೋದರ ಮಾತನಾಡಿ, 82-83 ರ ದಶಕದಲ್ಲಿ ಡಿ.ಕೆ.ಶಿವಕುಮಾರ್ ಬೇರೆಯದ್ದೇ ರೀತಿ ಇದ್ದರು. ಅವರನ್ನು ಹುಡುಕುವುದೇ ಕಷ್ಟವಾಗುತ್ತಿತ್ತು. ಆಗೆಲ್ಲ ಅವರು ಜನರಲ್ ಹಾಸ್ಟೆಲ್​ನಲ್ಲಿಯೇ ಹೆಚ್ಚಿಗೆ ಇರುತ್ತಿದ್ದರು. ಅಲ್ಲಿಂದ ಇವರು ಈ ಎತ್ತರಕ್ಕೆ ಏರಿದ್ದಾರೆ ಎಂದರು. ಡಿಕೆ ಶಿವಕುಮಾರ್ ಅವರ ಸೋದರರು ಇಂಟರ್ನೆಟ್​ನಲ್ಲಿ ವೈರಲ್ ಆಗಿದ್ದ ಏನ್ ಚಂದ ಕಾಣಿಸ್ತೀ ಕೋಡೆ ರಮ್ಮವ್ವ ಹಾಡು ಹಾಡಿದರು.

ಹಾಡಿನ ಬಳಿಕ ಕೋಡೆ ಕುಟುಂಬದ ಹರಿ ಕೋಡೆ ಅವರನ್ನು ನೆನಪು ಮಾಡಿಕೊಂಡ ಡಿಕೆ ಶಿವಕುಮಾರ್, ಶ್ರೀಹರಿ ಕೋಡೆ ಅವರಿಗೆ ನನ್ನ ಮೇಲೆ ಅಪಾರ ಪ್ರೀತಿ ಮತ್ತು ಗೌರವ. ನನ್ನ ರಾಜಕೀಯಕ್ಕೆ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ. ಒಮ್ಮೆ ಅವರು ಕನಕಪುರ ಬಳಿ 25 ಎಕರೆ ಭೂಮಿ ಕೇಳಿದ್ದರು, ನಾನು ನಮ್ಮ ತಾತನ ಭೂಮಿ ನೀಡಿದ್ದೆ. ಅವರು ನನ್ನ ಹೆಸರಿಗೆ ಜಮೀನನ್ನು ಬರೆದಿದ್ದರು. ನನಗೆ ಜಮೀನು ಬರೆದಿರುವ ವಿಷಯವನ್ನೇ ಅವರು ಮರೆತಿದ್ದರು ಎಂಟು-ಒಂಬತ್ತು ವರ್ಷದ ಹಿಂದೆ ಅವರು ಬದುಕಿದ್ದಾಗ ಹೋಗಿ ಆ ವಿಷಯ ತಿಳಿಸಿ ಅವರ ಪತ್ನಿ ಹೆಸರಿಗೆ ಆ ಜಮೀನನ್ನು ನೊಂದಣಿ ಮಾಡಿಸಿದೆವು ಎಂದು ನೆನಪು ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ