AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pradeep Eshwar: ಶಾಸಕ ಪ್ರದೀಪ್​ ಈಶ್ವರ್​ ಬಿಗ್​ ಬಾಸ್​ಗೆ ಬಂದಿದ್ದರ ಹಿಂದಿನ ಅಸಲಿ ಟ್ವಿಸ್ಟ್​ ಬಹಿರಂಗ

Bigg Boss Kannada: ಬಿಗ್​ ಬಾಸ್​ ಮನೆಗೆ ಪ್ರದೀಪ್​ ಈಶ್ವರ್​ ಬಂದಿದ್ದರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗಿದೆ. ಶಾಸಕ ಆಗಿರುವುದರಿಂದ ಅವರು ಇಂಥ ಶೋಗೆ ಬಂದಿದ್ದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದುಂಟು. ಅವರು ನಿಜವಾಗಿಯೂ ಸ್ಪರ್ಧಿಸುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ಕೆಲವರಿಗೆ ಅನುಮಾನ ಮೂಡಿತ್ತು. ಆ ಬಗ್ಗೆ ಈಗ ಸ್ಪಷ್ಟ ಚಿತ್ರಣ ಸಿಕ್ಕಿದೆ.

Pradeep Eshwar: ಶಾಸಕ ಪ್ರದೀಪ್​ ಈಶ್ವರ್​ ಬಿಗ್​ ಬಾಸ್​ಗೆ ಬಂದಿದ್ದರ ಹಿಂದಿನ ಅಸಲಿ ಟ್ವಿಸ್ಟ್​ ಬಹಿರಂಗ
ಪ್ರದೀಪ್​ ಈಶ್ವರ್​
ಮದನ್​ ಕುಮಾರ್​
|

Updated on: Oct 09, 2023 | 11:03 PM

Share

ಒಂದು ದಿನ ತಡವಾಗಿ ಪ್ರದೀಪ್​ ಈಶ್ವರ್​ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಶೋಗೆ ಎಂಟ್ರಿ ನೀಡಿದರು. ‘ನಾನು ಈ ಶೋನಲ್ಲಿ ಸ್ಪರ್ಧಿಸುತ್ತಿರುವುದು ಖುಷಿ ನೀಡಿದೆ’ ಎಂದು ಅವರು ಮನೆಯೊಳಗೆ ಬಂದ ಕೂಡಲೇ ಹೇಳಿದರು. ಆದರೆ ಅವರು ಬಂದಿರುವುದು ಸ್ಪರ್ಧಿಯಾಗಿ ಅಲ್ಲ ಎಂಬುದು ಈಗ ಬಹಿರಂಗ ಆಗಿದೆ. ತಾವು ಕೇವಲ ಅತಿಥಿಯಾಗಿ ಬಂದಿರುವುದು ಎಂದು ಪ್ರದೀಪ್​ ಈಶ್ವರ್​ (Pradeep Eshwar) ಹೇಳಿದ್ದಾರೆ. ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಆಗಿರುವುದರಿಂದ ಬಿಗ್​ ಬಾಸ್​ಗೆ ಬಂದಿದ್ದರ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದುಂಟು. ಆದರೆ ಈಗ ಅಸಲಿ ವಿಷಯ ಏನು ಎಂಬುದನ್ನು ಬಿಗ್ ಬಾಸ್ (Bigg Boss Kannada)​ ಮನೆಯಲ್ಲಿ ರಿವೀಲ್​ ಮಾಡಲಾಗಿದೆ.

‘ತಮಾಷೆಗೆ ಮಾಡಿದ ಪ್ರ್ಯಾಂಕ್​ ಇದು. ನೀವು ಮೊದಲ ಅತಿಥಿಯಾಗಿ ಬಿಗ್​ ಬಾಸ್​ ಮನೆಗೆ ಬಂದಿದ್ದೀರಿ’ ಎಂದು ಪ್ರದೀಪ್​ ಈಶ್ವರ್​ಗೆ ಬಿಗ್​ ಬಾಸ್​ ಹೇಳಿದರು. ಅದನ್ನು ಕೇಳಿದ ಬಳಿಕ ಸ್ಪರ್ಧಿಗಳಿಗೆ ಅಚ್ಚರಿ ಆಯಿತು. ಪ್ರದೀಪ್​ ಈಶ್ವರ್​ ಬಂದಿದ್ದಾರೆ ಎಂದಾಗ ಕೆಲವು ಅಭ್ಯರ್ಥಿಗಳಿಗೆ ಶಾಕ್​ ಆಗಿತ್ತು. ಆದರೆ ಇನ್ನೂ ಕೆಲವರಿಗೆ ಅನುಮಾನ ಮೂಡಿತ್ತು. ಹಾಲಿ ಶಾಸಕರು ಹೀಗೆಲ್ಲ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಅನೇಕರು ಊಹಿಸಿದರು. ಅದು ನಿಜವಾಗಿದೆ.

ಇದನ್ನೂ ಓದಿ: Tukali Santhosh: ‘ತುಕಾಲಿ ಅಂತ ಕರೆಯೋದು ಸರಿ ಎನಿಸುತ್ತಿಲ್ಲ’; ಸಂತೋಷ್​ ಹೆಸರಿಗೆ ಬಿಗ್​ ಬಾಸ್​ ತಕರಾರು

ರಾಜಕಾರಣಿ ಆಗಿ ಅಲ್ಲದೇ ಮೋಟಿವೇಷನಲ್​ ಸ್ಪೀಕರ್ ಆಗಿ ಪ್ರದೀಪ್​ ಈಶ್ವರ್​ ಅವರು ಗುರುತಿಸಿಕೊಂಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲೂ ಅವರು ಅದೇ ಕೆಲಸ ಮಾಡಿದ್ದಾರೆ. ಎಲ್ಲ ಸ್ಪರ್ಧಿಗಳನ್ನು ಎದುರುಗಡೆ ಕೂರಿಸಿಕೊಂಡು ಪ್ರೇರಣೆಯ ಮಾತುಗಳನ್ನು ಹೇಳಿದ್ದಾರೆ. ‘ಇಲ್ಲಿ ಇರುವ ಯಾವ ಸ್ಪರ್ಧಿಗಳ ಬಗ್ಗೆ ನಿಮಗೆ ಒಳ್ಳೆಯ ಮತ್ತು ಕೆಟ್ಟ ಇಂಪ್ರೆಷನ್​ ಇದೆ’ ಎಂದು ಪ್ರಶ್ನೆ ಕೇಳಿ ಎಲ್ಲರಿಂದ ಉತ್ತರ ಪಡೆದುಕೊಂಡರು. ಪ್ರದೀಪ್​ ಈಶ್ವರ್​ ಅವರು ಬಂದಿದ್ದಕ್ಕೆ ತುಕಾಲಿ ಸಂತೋಷ್​ ಅವರು ಹೆಚ್ಚು ಖುಷಿಪಟ್ಟರು. ‘ನಾನು ಕೂಡ ನಿಮ್ಮ ಊರಿನವರೇ’ ಎಂದು ಸಿರಿ ಅವರು ಹೇಳಿದ್ದಕ್ಕೆ, ‘ಓಹ್​.. ನೀವು ನಮ್ಮ ಮತದಾರರು’ ಎಂದು ಪ್ರದೀಪ್​ ಈಶ್ವರ್​ ನಮಸ್ಕಾರ ಮಾಡಿದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ನೈಜೀರಿಯಾ ಕನ್ನಡಿಗ ಮೈಕೆಲ್​ ಅಜಯ್​; ಏನು ಇವರ ಹಿನ್ನೆಲೆ?

ಬಿಗ್​ ಬಾಸ್​ ಆಟ ಈಗಷ್ಟೇ ಆರಂಭ ಆಗಿದೆ. ಈಗತಾನೇ ಟಾಸ್ಕ್​ಗಳನ್ನು ನೀಡಲು ಪ್ರಾರಂಭಿಸಲಾಗಿದೆ. ಒಬ್ಬರನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳಲು ಆರಂಭಿಸಿದ್ದಾರೆ. ದಿನ ಕಳೆದಂತೆ ದೊಡ್ಮನೆಯ ವಾತಾವರಣ ಬದಲಾಗಲಿದೆ. ಇದು 10ನೇ ಸೀಸನ್​ ಆದ್ದರಿಂದ ಈ ಬಾರಿ ಸಾಕಷ್ಟು ವಿಶೇಷತೆಗಳು ಇವೆ. ಹೊಸ ಹೊಸ ನಿಯಮಗಳನ್ನು ಪರಿಚಯಿಸಲಾಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಈ ಶೋ ಉಚಿತವಾಗಿ ಪ್ರಸಾರ ಕಾಣುತ್ತಿದೆ. ಕಿಚ್ಚ ಸುದೀಪ್​ ಅವರ ನಿರೂಪಣೆ ಎಲ್ಲರಿಗೂ ಇಷ್ಟ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ