Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ‘ಮೋಟಿವೇಟ್​ ಮಾಡುವ ಪ್ರತಿಯೊಬ್ಬನೂ ಸಾಚಾ ಎಂದುಕೊಳ್ತಾನೆ’: ಪ್ರದೀಪ್​ ಈಶ್ವರ್​ ವಿಡಿಯೋ ವೈರಲ್​

Pradeep Eshwar Viral Video: ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ಕ್ಕೆ ಪ್ರದೀಪ್​ ಈಶ್ವರ್​ ಅವರು ಪ್ರವೇಶ ಪಡೆದಿದ್ದಾರೆ. ಒಂದು ದಿನ ತಡವಾಗಿ ಅವರು ಬಿಗ್ ಬಾಸ್​ ಮನೆಯೊಳಗೆ ಕಾಲಿಟ್ಟಿದ್ದಾರೆ. ದೊಡ್ಮನೆಗೆ ಬರುತ್ತಿದ್ದಂತೆಯೇ ಅವರು ಮೋಟಿವೇಷನ್​ ಸ್ಪೀಚ್​ ಶುರುಮಾಡಿಕೊಂಡಿದ್ದಾರೆ. ಅದನ್ನು ನೋಡಿದ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

Bigg Boss Kannada: ‘ಮೋಟಿವೇಟ್​ ಮಾಡುವ ಪ್ರತಿಯೊಬ್ಬನೂ ಸಾಚಾ ಎಂದುಕೊಳ್ತಾನೆ’: ಪ್ರದೀಪ್​ ಈಶ್ವರ್​ ವಿಡಿಯೋ ವೈರಲ್​
ಪ್ರದೀಪ್​ ಈಶ್ವರ್​
Follow us
ಮದನ್​ ಕುಮಾರ್​
|

Updated on: Oct 09, 2023 | 5:33 PM

ಎಲ್ಲ ವರ್ಗದ ಜನರಿಗೂ ಬಿಗ್​ ಬಾಸ್​ (Bigg Boss Kannada) ರಿಯಾಲಿಟಿ ಶೋನಲ್ಲಿ ಅವಕಾಶ ಸಿಗುತ್ತದೆ. ರಾಜಕಾರಣಿಗಳೂ ಇದಕ್ಕೆ ಹೊರತಾಗಿಲ್ಲ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್​ ಈಶ್ವರ್​ (Pradeep Eshwar) ಅವರು ಬಿಗ್​ ಬಾಸ್​ ಮನೆಗೆ ಕಾಲಿಟ್ಟಿರುವುದೇ ಇದಕ್ಕೆ ಸಾಕ್ಷಿ. ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ್​ ಈಶ್ವರ್​ ಅವರಿಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ಅವರು ವೇದಿಕೆಯಲ್ಲಿ ಮಾಡಿದ ಮಾತುಗಳು ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತವೆ. ‘ಬಿಗ್ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ರಿಯಾಲಿಟಿ ಶೋನಲ್ಲೂ ಅದು ಮುಂದುವರಿದಿದೆ. ಎಂಟ್ರಿಯಾದ ಮೊದಲ ದಿನವೇ ಪ್ರದೀಪ್​ ಈಶ್ವರ್ ಅವರು ಮೋಟಿವೇಷನಲ್​ ಸ್ಪೀಚ್​ ನೀಡಿದ್ದಾರೆ. ಅದರ ಪ್ರೋಮೋ ವೈರಲ್​ ಆಗಿದೆ.

ಹೊಸ ತಲೆಮಾರಿನ ಯುವಜನತೆಯನ್ನು ಮೋಟಿವೇಟ್​ ಮಾಡಲು ಪ್ರದೀಪ್​ ಈಶ್ವರ್​ ಪ್ರಯತ್ನಿಸುತ್ತಾರೆ. ಯುವಕ-ಯುವತಿಯರಿಗೆ ಜೀವನದ ಪಾಠ ಹೇಳಿಕೊಡಲು ಅವರು ಭಾಷಣಗಳನ್ನು ಮಾಡುತ್ತಾರೆ. ಶಾಸಕರಾದ ಬಳಿಕ ಅವರಿಗೆ ಭಾರಿ ಜನಪ್ರಿಯತೆ ಸಿಕ್ಕಿತು. ಟ್ರೋಲ್​ ಪೇಜ್​ಗಳಲ್ಲಿ ಪ್ರದೀಪ್​ ಈಶ್ವರ್​ ಅವರ ವಿಡಿಯೋಗಳು ಹರಿದಾಡಲು ಆರಂಭಿಸಿದವು. ಬಹುತೇಕರು ಅವರ ಮಾತುಗಳನ್ನು ಒಪ್ಪುತ್ತಾರೆ. ಅನೇಕ ವೇದಿಕೆಗಳಲ್ಲಿ ಪ್ರದೀಪ್​ ಈಶ್ವರ್​ ಹೇಳಿದ ಪಂಚಿಂಗ್​ ಡೈಲಾಗ್​ಗಳಿಗೆ ಚಪ್ಪಾಳೆ ಸಿಕ್ಕಿದೆ.

ಇದನ್ನೂ ಓದಿ: Pradeep Eshwar : ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್​ ಬಿಗ್​ ಬಾಸ್​ಗೆ ಹೋಗಿದ್ದು ಸರಿಯೇ?

ಪ್ರದೀಪ್​ ಈಶ್ವರ್​ ಅವರು ಒಂದು ದಿನ ತಡವಾಗಿ ಬಿಗ್ ಬಾಸ್​ ಮನೆಯನ್ನು ಪ್ರವೇಶಿಸಿದ್ದಾರೆ. ‘ನಾನು ನಿನ್ನೆಯೇ ಬರಬೇಕಾಗಿತ್ತು. ಸ್ಪರ್ಧಿಯಾಗಿ ಇಲ್ಲಿಗೆ ಬಂದಿದ್ದಕ್ಕೆ ನನಗೆ ಬಹಳ ಖುಷಿ ಆಯಿತು. ನಾವೆಲ್ಲ ಬೆಂಗಳೂರಿಗೆ ಸೋಲೋಕೆ ಬಂದವರು. ಗೆಲ್ಲುವುದು ನಮಗೆ ಕಾಂಪ್ಲಿಮೆಂಟರಿ’ ಎಂದು ಹೇಳುತ್ತಲೇ ಅವರು ಮೋಟಿವೇಷನ್​ ಶುರು ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ಪ್ರೊಮೋಗೆ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಈ ಶೋ ಉಚಿತವಾಗಿ 24 ಗಂಟೆಯೂ ಪ್ರಸಾರ ಆಗುತ್ತಿದೆ.

‘ಇಲ್ಲಿ ಏನಾಗುತ್ತಿದೆ ಅಂದರೆ, ಮೋಟಿವೇಟ್​ ಮಾಡುವ ಪ್ರತಿಯೊಬ್ಬನೂ ಸಾಚಾ ಎಂದುಕೊಳ್ಳುತ್ತಿದ್ದಾನೆ. ಈ ಜನರೇಷನ್​ ಅನ್ನು ನಾವು ಸರಿಯಾಗಿ ಮೋಟಿವೇಟ್​ ಮಾಡುತ್ತಿಲ್ಲ. ತಪ್ಪಾಗಿ ಮೋಟಿವೇಟ್​ ಮಾಡುತ್ತಿದ್ದೇವೆ. ಏಣಿ ಹತ್ತುವುದೇ ಕಷ್ಟ ಅಂತ ದೊಡ್ಡವರು ಹೇಳಿಕೊಡ್ತಾರೆ. ಹೇಗೋ ಏಣಿ ಹತ್ತುತ್ತೀಯ. ಆದರೆ ತುದಿಯಲ್ಲಿ ನಿಂತುಕೊಳ್ಳುವುದು ಇನ್ನೂ ಕಷ್ಟ ಅಂತ ಕೆಲವರು ಹೇಳುತ್ತಾರೆ. ನಮ್ಮ ಜನರೇಷನ್​ಗೆ ಏಣಿಯೇ ಸಿಕ್ತಾ ಇಲ್ಲ ಬಾಸ್​’ ಎಂದು ಪ್ರದೀಪ್​ ಈಶ್ವರ್​ ಹೇಳಿರುವುದು ಬಿಗ್​ ಬಾಸ್​ ಪೋಮೋದಲ್ಲಿ ಹೈಲೈಟ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ