AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪನಿಶ್​ಮೆಂಟ್ ​ಕೊಡೋಕೆ ನೀವ್ಯಾರು?’; ಎರಡನೇ ದಿನವೇ ಬಿಗ್ ಬಾಸ್ ಮನೆಯಲ್ಲಿ ಫೈಟ್

ಅನರ್ಹರನ್ನು ನಾಮಿನೇಟ್ ಮಾಡಲು ಅರ್ಹರಿಗೆ ಅವಕಾಶ ಇತ್ತು. ಈ ಪೈಕಿ ವಿನಯ್ ಅವರು ಸಂಗೀತಾ ಹೆಸರನ್ನು ಹೇಳಿದರು. ಅನರ್ಹರಿಗೆ ಸೋಫಾ, ಬೆಡ್​ರೂಂ ಬಳಕೆಗೆ ಅವಕಾಶ ಇರಲಿಲ್ಲ. ಆದಾಗ್ಯೂ ಸಂಗೀತಾ ಅವರು ಸೋಫಾ ಮೇಲೆ ಕುಳಿತರು. ಇದೇ ವಿಚಾರ ಇಟ್ಟುಕೊಂಡು ವಿನಯ್ ಅವರು ಸಂಗೀತಾ ಅವರನ್ನು ನಾಮಿನೇಟ್ ಮಾಡಿದರು.

‘ಪನಿಶ್​ಮೆಂಟ್ ​ಕೊಡೋಕೆ ನೀವ್ಯಾರು?’; ಎರಡನೇ ದಿನವೇ ಬಿಗ್ ಬಾಸ್ ಮನೆಯಲ್ಲಿ ಫೈಟ್
ವಇನಯ್-ಸಂಗೀತಾ-ನಮ್ರತಾ
ರಾಜೇಶ್ ದುಗ್ಗುಮನೆ
|

Updated on:Oct 10, 2023 | 10:42 AM

Share

‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಹತ್ತು ಹಲವು ಮನಸ್ಥಿತಿಗಳು ಒಂದೆಡೆ ಸೇರುತ್ತವೆ. ಹೀಗಿದ್ದಾಗ ಜಗಳಗಳು ಕಾಮನ್. ಸಾಮಾನ್ಯವಾಗಿ ಬಿಗ್ ಬಾಸ್ಗೆ ಬಂದ ಮೊದಲ ವಾರ ಎಲ್ಲರೂ ಶಾಂತರೀತಿಯಿಂದ ವರ್ತಿಸೋಕೆ ಪ್ರಯತ್ನಿಸತ್ತಾರೆ. ಮೊದಲ ದಿನವೇ ಏಕೆ ಕಿತ್ತಾಟ ಎನ್ನುವ ಭಾವನೆ ಅನೇಕರಲ್ಲಿ ಇರುತ್ತದೆ. ಆದರೆ, ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಈ ರೀತಿ ಆಗಿಲ್ಲ. ಎರಡನೇ ದಿನಕ್ಕೆ ಕಿತ್ತಾಟ ಶುರುವಾಗಿದೆ. ಸಂಗೀತಾ ಶೃಂಗೇರಿ ಹಾಗೂ ವಿನಯ್ ಮಧ್ಯೆ ಕಿತ್ತಾಟ ನಡೆದಿದೆ.

ಈ ಬಾರಿ ದೊಡ್ಮನೆಗೆ ಎಂಟ್ರಿ ಪಡೆಯೋದು ಅಷ್ಟು ಸುಲಭದ್ದಾಗಿರಲಿಲ್ಲ. ಶೋ ನೋಡೋಕೆ ಬಂದವರಿಗೆ ಓಟಿಂಗ್ ಮಾಡುವ ಅವಕಾಶ ಇತ್ತು. ಹೀಗೆ ಓಟಿಂಗ್ ಮಾಡಿದಾಗ ಶೇ.80ರ ಮೇಲೆ ಬಂದರೆ ಅವರು ಅರ್ಹರು ಎಂದು ಪರಿಗಣಿಸಲಾಗಿತ್ತು. ಇನ್ನು, ಶೇ.40ರಿಂದ 79 ಇದ್ದರೆ ಅವರನ್ನು ಅನರ್ಹರು ಎಂದು ಪರಿಗಣಿಸಿ ಬಿಗ್ ಬಾಸ್ ಮನೆ ಒಳಗೆ ಕಳುಹಿಸಲಾಯಿತು.

ಅನರ್ಹರನ್ನು ನಾಮಿನೇಟ್ ಮಾಡಲು ಅರ್ಹರಿಗೆ ಅವಕಾಶ ಇತ್ತು. ಈ ಪೈಕಿ ವಿನಯ್ ಅವರು ಸಂಗೀತಾ ಹೆಸರನ್ನು ಹೇಳಿದರು. ಅನರ್ಹರಿಗೆ ಸೋಫಾ, ಬೆಡ್​ರೂಂ ಬಳಕೆಗೆ ಅವಕಾಶ ಇರಲಿಲ್ಲ. ಆದಾಗ್ಯೂ ಸಂಗೀತಾ ಅವರು ಸೋಫಾ ಮೇಲೆ ಕುಳಿತರು. ಇದೇ ವಿಚಾರ ಇಟ್ಟುಕೊಂಡು ವಿನಯ್ ಅವರು ಸಂಗೀತಾ ಅವರನ್ನು ನಾಮಿನೇಟ್ ಮಾಡಿದರು. ಇದಕ್ಕೆ ಸಂಗೀತಾ ಸಿಟ್ಟಾಗಿದ್ದಾರೆ.

‘ನಾನು ತಪ್ಪು ಮಾಡಿದ್ದರೆ ಬಿಗ್ ಬಾಸ್ ಶಿಕ್ಷೆ ಕೊಡುತ್ತಿದ್ದರು. ನೀವೇ ಬಿಗ್ ಬಾಸ್ ಆಗ್ಬಿಟ್ರಲ್ಲ’ ಎಂದರು ಸಂಗೀತಾ. ‘ನನ್ನತ್ರ ಯಾರೂ ಮಾತಾಡೋದನ್ನು ಇಟ್ಕೋಬೇಡಿ’ ಎಂದು ವಿನಯ್ ಎಚ್ಚರಿಕೆ ಕೊಟ್ಟರು. ಈ ಹಿನ್ನೆಲೆಯಲ್ಲಿ ಇವರ ಬಿಗ್ ಬಾಸ್ ಮನೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಯ್ತು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿರುವ ಫಿಟ್ನೆಸ್ ಫ್ರೀಕ್ ಸುಂದರಿಯ ಫೋಟೋಸ್

‘ಬಿಗ್ ಬಾಸ್’ ಮನೆಯಲ್ಲಿ 17 ಸ್ಪರ್ಧಿಗಳು ಇದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಒಂದು ದಿನದ ಅತಿಥಿಯಾಗಿ ದೊಡ್ಮನೆ ಸೇರಿದ್ದರು. ಅವರು ಒಂದೇ ದಿನಕ್ಕೆ ವಾಪಸ್ ತೆರಳಿದ್ದಾರೆ. ಅವರು ಬಿಗ್ ಬಾಸ್​ಗೆ ಬಂದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:59 am, Tue, 10 October 23

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ