AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಫ್ಯಾಮಿಲಿ ಮ್ಯಾನ್​ 3’ ಕಥೆ ಬಹಿರಂಗ; ನಿರ್ದೇಶಕರು ಬಾಯ್ಬಿಟ್ಟ ಸೀಕ್ರೆಟ್​ ಇಲ್ಲಿದೆ

ಅಪರಿಚಿತ ವ್ಯಕ್ತಿಯೊಬ್ಬ ಮಾಸ್ಕ್​ ಧರಿಸಿ, ಚೈನೀಸ್​ ಭಾಷೆಯಲ್ಲಿ ಮೆಸೇಜ್​ ಕಳಿಸಲು ಶುರುಮಾಡುತ್ತಾನೆ. ಆತ ಒಂದು ಹೊಸ ಅವಘಡ ಮಾಡಲು ಭಾರತಕ್ಕೆ ಬಂದಿದ್ದಾನೆ.

‘ದಿ ಫ್ಯಾಮಿಲಿ ಮ್ಯಾನ್​ 3’ ಕಥೆ ಬಹಿರಂಗ; ನಿರ್ದೇಶಕರು ಬಾಯ್ಬಿಟ್ಟ ಸೀಕ್ರೆಟ್​ ಇಲ್ಲಿದೆ
ಮನೋಜ್​ ಬಾಜ್​ಪೇಯ್​, ಸಮಂತಾ ಅಕ್ಕಿನೇನಿ
ಮದನ್​ ಕುಮಾರ್​
|

Updated on: Jun 11, 2021 | 12:46 PM

Share

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿದೆ. ಇನ್ನೂ ಅನೇಕರು ಈ ಸೀರಿಸ್​ ನೋಡಿಲ್ಲ. ಅಷ್ಟರಲ್ಲಾಗಲೇ 3ನೇ ಸೀಸನ್​ ಬಗ್ಗೆ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಆಗಿರುವುದು 2ನೇ ಸೀಸನ್​ನ ಕ್ಲೈಮ್ಯಾಕ್ಸ್​​. ಎರಡನೇ ಸೀಸನ್​ ಮುಗಿಯುವಾಗ ಸಂಬಂಧವೇ ಇಲ್ಲದ ಒಂದು ದೃಶ್ಯವನ್ನು ತೋರಿಸಲಾಗಿದೆ. ಅದರ ಅರ್ಥ ಏನು? ಯಾಕೆ ಆ ದೃಶ್ಯವನ್ನು ಸೇರಿಸಲಾಗಿದೆ ಎಂಬುದನ್ನು ನಿರ್ದೇಶಕರಾದ ರಾಜ್​ ಮತ್ತು ಡಿಕೆ ವಿವರಿಸಿದ್ದಾರೆ.

ಆ ದೃಶ್ಯದಲ್ಲಿ ಏನಿದೆ?

ಅಪರಿಚಿತ ವ್ಯಕ್ತಿಯೊಬ್ಬ ಮಾಸ್ಕ್​ ಧರಿಸಿ, ಕೊಲ್ಕತ್ತಾದ ನಿಗೂಢ ಸ್ಥಳಕ್ಕೆ ಬರುತ್ತಾನೆ. ತನ್ನ ಲ್ಯಾಪ್​ಟಾಪ್ ತೆರೆದು ಚೈನೀಸ್​ ಭಾಷೆಯಲ್ಲಿ ಮೆಸೇಜ್​ ಕಳಿಸಲು ಶುರುಮಾಡುತ್ತಾನೆ. ಆತ ಒಂದು ಹೊಸ ಅವಘಡ ಮಾಡಲು ಭಾರತಕ್ಕೆ ಬಂದಿದ್ದಾನೆ ಎಂಬುದರ ಸುಳಿವು ಕೊಡಲಾಗಿದೆ. ಅಷ್ಟಕ್ಕೂ ಈ ದೃಶ್ಯ ಯಾಕೆ ಇದೆ ಎಂಬ ಪ್ರಶ್ನೆ ಅನೇಕರ ಮನದಲ್ಲಿ ಮೂಡಿದೆ.

3ನೇ ಸೀಸನ್​ನಲ್ಲಿ ಕೊವಿಡ್​ ಕಥೆ

‘ಎಲ್ಲ ಮುಗಿದ ನಂತರದಲ್ಲಿ ನಾವು ಈ ದೃಶ್ಯವನ್ನು ಚಿತ್ರೀಕರಿಸಿದೆವು. ಕೊವಿಡ್​ನಿಂದಾಗಿ ಮುಂದೆ ನಾವು ಯಾವ ಪರಿಸ್ಥಿತಿಗೆ ಹೋಗಬಹುದು ಎಂಬುದನ್ನು ಆ ದೃಶ್ಯ ಪ್ರತಿನಿಧಿಸುತ್ತದೆ. ಜನರಲ್ಲಿ ಕುತೂಹಲ ಮೂಡಿಸಬೇಕು ಎಂಬ ಉದ್ದೇಶದಿಂದಲೇ ಆ ದೃಶ್ಯ ಸೇರಿಸಿದ್ದೇವೆ. ಕೊವಿಡ್​ಗೆ ಸಂಬಂಧಿಸಿದ ಕತೆಯನ್ನು ನಾವು ಖಂಡಿತವಾಗಿ ಮೂರನೇ ಎಪಿಸೋಡ್​ನಲ್ಲಿ ತೋರಿಸುತ್ತೇವೆ. ಆದರೆ ಅದರ ಪ್ರಮಾಣ ಎಷ್ಟು ಇರಲಿದೆ ಎಂಬುದನ್ನು ಕಥೆ ಬರೆಯಲು ಕುಳಿತಾಗ ನಿರ್ಧರಿಸಲಿದ್ದೇವೆ’ ಎಂದು ರಾಜ್​ ವಿವರಿಸಿದ್ದಾರೆ.

ಬದಲಾಗಿದೆ ಶ್ರೀಕಾಂತ್​-ಸುಚಿ ಸಂಸಾರ

ಈ ವೆಬ್​ ಸರಣಿಯಲ್ಲಿ ಶ್ರೀಕಾಂತ್​ ತಿವಾರಿ (ಮನೋಜ್​ ಬಾಯಪೇಯಿ) ಮತ್ತು ಸುಚಿ (ಪ್ರಿಯಾಮಣಿ) ಸಂಸಾರದ ಕಥೆ ಕೂಡ ಇಂಟರೆಸ್ಟಿಂಗ್​ ಆಗಿದೆ. ಆದರೆ ಎರಡನೇ ಸೀಸನ್​ನ ಕೊನೆಯಲ್ಲಿ ತನ್ನ ಒಂದು ಸೀಕ್ರೆಟ್​ ಅನ್ನು ಗಂಡನ ಎದುರು ಸುಚಿ ರಿವೀಲ್​ ಮಾಡಿದ್ದಾಳೆ. ಹಾಗಾಗಿ ಅವರ ಫ್ಯಾಮಿಲಿ ಕಥೆ ಕೂಡ 3ನೇ ಸೀಸನ್​ನಲ್ಲಿ ಬೇರೆ ಸ್ವರೂಪ ಪಡೆದುಕೊಳ್ಳಲಿದೆ.

ಈ ವೆಬ್​ ಸರಣಿಗೆ ನಟಿ ಸಮಂತಾ ಅಕ್ಕಿನೇನಿ ಹೊಸದಾಗಿ ಸೇರ್ಪಡೆ ಆಗಿದ್ದರು. ರಾಜಿ ಎಂಬ ರಗಡ್​ ಯುವತಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡ ಅವರಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ನಟಿಯರು ಸುಮಂತಾ ಅವರ ಆ್ಯಕ್ಷನ್​ ನೋಡಿ ಫಿದಾ ಆಗಿದ್ದಾರೆ.

ಇದನ್ನೂ ಓದಿ:

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನ ಮುಖ್ಯವಾದ ಸೀಕ್ರೆಟ್​ ಬಗ್ಗೆ ಮನೋಜ್​ ಬಾಜಪೇಯ್​ ಹೇಳಿದ್ದೇನು?

ಫ್ಯಾಮಿಲಿ ಮ್ಯಾನ್ ಹೀರೋಗೋಸ್ಕರ ಓಪನ್​ ಆಗಿಯೇ ಕಾಲೆಳೆದುಕೊಂಡ ಅಮೇಜಾನ್​-ನೆಟ್​ಫ್ಲಿಕ್ಸ್​

Follow Us
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು