ಫ್ಯಾಮಿಲಿ ಮ್ಯಾನ್ ಹೀರೋಗೋಸ್ಕರ ಓಪನ್​ ಆಗಿಯೇ ಕಾಲೆಳೆದುಕೊಂಡ ಅಮೇಜಾನ್​-ನೆಟ್​ಫ್ಲಿಕ್ಸ್​

ದಿ ಫ್ಯಾಮಿಲಿ ಮ್ಯಾನ್​ ಸರಣಿ ಹಿಟ್​ ಆದ ನಂತರದಲ್ಲಿ ಮನೋಜ್​ ಬಾಜಪೇಯಿ ಅವರಿಗೆ ಬೇಡಿಕೆ ಹೆಚ್ಚಿದೆ. ಸಾಕಷ್ಟು ನಿರ್ದೇಶಕರು ಅವರ ಕಾಲ್​ಶೀಟ್​ ಪಡೆಯೋಕೆ ಪ್ರಯತ್ನಿಸುತ್ತಿದ್ದಾರೆ.

ಫ್ಯಾಮಿಲಿ ಮ್ಯಾನ್ ಹೀರೋಗೋಸ್ಕರ ಓಪನ್​ ಆಗಿಯೇ ಕಾಲೆಳೆದುಕೊಂಡ ಅಮೇಜಾನ್​-ನೆಟ್​ಫ್ಲಿಕ್ಸ್​
ಫ್ಯಾಮಿಲಿ ಮ್ಯಾನ್ ಹೀರೋಗೋಸ್ಕರ ಓಪನ್​ ಆಗಿಯೇ ಕಾಲೆಳೆದುಕೊಂಡ ಅಮೇಜಾನ್​-ನೆಟ್​ಫ್ಲಿಕ್ಸ್​
Follow us
|

Updated on:Jun 09, 2021 | 3:44 PM

ಮನೋಜ್​ ಬಾಜಪೇಯಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಅಮೇಜಾನ್​ ಪ್ರೈಮ್​ನಲ್ಲಿ ಈ ವೆಬ್​ ಸೀರಿಸ್​ ರಿಲೀಸ್​ ಆಗಿ ಒಂದು ವಾರ ಕಳೆದರೂ ಇದರ ಬಗ್ಗೆ ಚರ್ಚೆ ಮಾತ್ರ ಇನ್ನೂ ನಿಂತಿಲ್ಲ. ಹೀಗಿರುವಾಗಲೇ ಮನೋಜ್​ ಬಾಜಪೇಯಿ ವಿಚಾರದಲ್ಲಿ ಅಮೇಜಾನ್​ ಮತ್ತು ನೆಟ್​ಫ್ಲಿಕ್ಸ್​ ಓಪನ್​ ಆಗಿಯೇ ಒಬ್ಬರಿಗೊಬ್ಬರು ಟಾಂಗ್​ ನೀಡಿವೆ.

ದಿ ಫ್ಯಾಮಿಲಿ ಮ್ಯಾನ್​ ಸರಣಿ ಹಿಟ್​ ಆದ ನಂತರದಲ್ಲಿ ಮನೋಜ್​ ಬಾಜಪೇಯಿ ಅವರಿಗೆ ಬೇಡಿಕೆ ಹೆಚ್ಚಿದೆ. ಸಾಕಷ್ಟು ನಿರ್ದೇಶಕರು ಅವರ ಕಾಲ್​ಶೀಟ್​ ಪಡೆಯೋಕೆ ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ನೆಟ್​ಫ್ಲಿಕ್ಸ್​ನ ವೆಬ್​ ಸೀರಿಸ್​ ಒಂದರಲ್ಲಿ ನಟಿಸೋಕೆ ಮನೋಜ್​ ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಅಮೇಜಾನ್​ಗೆ ಕೌಂಟರ್​ ನೀಡುವ ರೀತಿಯಲ್ಲಿ ನೆಟ್​​ಫ್ಲಿಕ್ಸ್ ಟ್ವೀಟ್​ ಮಾಡಿದೆ.

‘ಮನೋಜ್​ ನೆಟ್​ಫ್ಲಿಕ್ಸ್​ ಸೀರಿಸ್​ಗೆ ಬರುತ್ತಿದ್ದಾರೆ. ಮ್ಯಾನ್​, ನೀವು ನಮ್ಮ ಫ್ಯಾಮಿಲಿಯ ಭಾಗವಾಗುತ್ತಿರುವುದನ್ನು ನಾವು ಇಷ್ಟಪಡುತ್ತಿದ್ದೇವೆ’ ಎಂದು ನೆಟ್​ಫ್ಲಿಕ್ಸ್​ ಟ್ವೀಟ್​ ಮಾಡಿದೆ.

ನೆಟ್​ಫ್ಲಿಕ್ಸ್​ ಮಾಡಿರುವ ಟ್ವೀಟ್​ ಅನ್ನು ಅಮೇಜಾನ್ ಪ್ರೈಮ್​ ವಿಡಿಯೋ​ ರಿಟ್ವೀಟ್​ ಮಾಡಿ ಉತ್ತರಿಸಿದೆ. ‘ಶ್ರೀಕಾಂತ್, ಉದ್ಯೋಗ ಬದಲಾಯಿಸಿದ್ದರಿಂದ ದೊಡ್ಡ ಬದಲಾವಣೆಯಾಗಿರಬೇಕು, ಅಲ್ಲವೇ?’ ಎಂದು ಪ್ರಶ್ನಿಸಿದೆ.

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ನಲ್ಲಿ ಶ್ರೀಕಾಂತ್ (ಮನೋಜ್​ ಬಾಜಪೇಯಿ)​ ಕೆಲಸ ಬದಲಿಸುತ್ತಾನೆ. ಆದರೆ, ಅವನಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ. ಹಳೆಯ ಕೆಲಸಕ್ಕೆ ಮರಳಬೇಕೆಂದು ಹಾತೊರೆಯುತ್ತಿರುತ್ತಾನೆ. ಈ ವೇಳೆ ಆತನಿ​ಗೆ ‘ಶ್ರೀಕಾಂತ್, ಉದ್ಯೋಗ ಬದಲಾಯಿಸಿದ್ದರಿಂದ ದೊಡ್ಡ ಬದಲಾವಣೆಯಾಗಿರಬೇಕು, ಅಲ್ಲವೇ?’ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದೇ ಘಟನೆಯನ್ನು ಇಟ್ಟುಕೊಂಡು ನೆಟ್​ಫ್ಲಿಕ್ಸ್​ ಅಮೇಜಾನ್ ಟಾಂಗ್​ ಕೊಟ್ಟಿದೆ.

ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ, ಹೆಂಡತಿ ಬಿಟ್ಟುಹೋದ ನೋವು; ಇದು ಮನೋಜ್​ ಬಾಜ​​ಪೇಯಿ ಜೀವನದ ಕಥೆ

Samantha Akkineni: ‘ದಿ ಫ್ಯಾಮಿಲಿ ಮ್ಯಾನ್ 2’ಗಾಗಿ ಸಮಂತಾ, ಮನೋಜ್ ಬಾಜಪೇಯಿ ಪಡೆದ ಸಂಭಾವನೆ ಎಷ್ಟು?

Published On - 3:44 pm, Wed, 9 June 21

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ