ಅಲ್ಲು ಅರ್ಜುನ್​ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್​ ಸೀಕ್ರೆಟ್​ ಇಲ್ಲಿದೆ..

‘ಪುಷ್ಪ’ ಸಿನಿಮಾದ ಗೆಲುವಿನಿಂದಾಗಿ ಅಲ್ಲು ಅರ್ಜುನ್​ ಅವರಿಗೆ ಉತ್ತರ ಭಾರತದಲ್ಲಿ ಅಭಿಮಾನಿ ಬಳಗ ಹೆಚ್ಚಿದೆ. ಅವರಿಗೆ ಈ ಪರಿ ಗೆಲುವು ಸಿಗಲು ಅನೇಕ ಅಂಶಗಳು ಕಾರಣ ಆಗಿವೆ.

ಅಲ್ಲು ಅರ್ಜುನ್​ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್​ ಸೀಕ್ರೆಟ್​ ಇಲ್ಲಿದೆ..
ಅಲ್ಲು ಅರ್ಜುನ್
Follow us
| Updated By: ಮದನ್​ ಕುಮಾರ್​

Updated on: Jan 26, 2022 | 2:12 PM

ಕಳೆದ ವರ್ಷ ಡಿ.17ರಂದು ತೆರೆಕಂಡ ‘ಪುಷ್ಪ’ ಸಿನಿಮಾ (Pushpa Movie) ಗೆದ್ದು ಬೀಗಿದೆ. ಆಂಧ್ರ, ತೆಲಂಗಾಣ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲೂ ಕೂಡ ಈ ಚಿತ್ರ ಧೂಳೆಬ್ಬಿಸಿದೆ. ಅಲ್ಲು ಅರ್ಜುನ್​ (Allu Arjun) ವೃತ್ತಿಜೀವನಕ್ಕೆ ಈ ಸಿನಿಮಾದಿಂದ ಭರ್ಜರಿ ಮೈಲೇಜ್​​ ಸಿಕ್ಕಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಚಾರ್ಮ್​ ಕೂಡ ಹೆಚ್ಚಿದೆ. ವಿಶ್ವಾದ್ಯಂತ ಈ ಸಿನಿಮಾ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಹಿಂದಿ, ಕನ್ನಡ, ಮಲಯಾಳಂ, ತಮಿಳು ಭಾಷೆಗಳಿಗೆ ಡಬ್​ ಆಗಿ ತೆರೆ ಕಂಡಿದ್ದು ಈ ಸಿನಿಮಾಗೆ ಪ್ಲಸ್​ ಪಾಯಿಂಟ್​ ಆಯಿತು. ಹಿಂದಿ ಅವತರಣಿಕೆಯಲ್ಲಿ ‘ಪುಷ್ಪ’ (Pushpa Movie Box Office Collection) ಗಳಿಸಿರುವುದು ಬರೋಬ್ಬರಿ 91 ಕೋಟಿ ರೂಪಾಯಿ! ಬಾಲಿವುಡ್​ನ ಅನೇಕ ಸ್ಟಾರ್ ನಟರ ಸಿನಿಮಾಗಳೇ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ ಇಷ್ಟು ಹಣ ಗಳಿಸಲು ಸಾಧ್ಯವಾಗದೇ ಸೋಲು ಅನುಭವಿಸಿದ ಉದಾಹರಣೆ ಸಾಕಷ್ಟಿದೆ. ಹೀಗಿರುವಾಗ ಅಲ್ಲು ಅರ್ಜುನ್​ ಅವರ ಚಿತ್ರ 91 ಕೋಟಿ ರೂಪಾಯಿ ಗಳಿಸಲು ಹೇಗೆ ಸಾಧ್ಯವಾಯ್ತು? ಅದರ ಹಿಂದೆ ಒಂದು ಟ್ರೇಡ್​ ಸೀಕ್ರೆಟ್​ ಇದೆ. ಆ ಕುರಿತು ‘ನ್ಯೂಸ್​9’ ಲೇಖನ ಪ್ರಕಟಿಸಿದೆ.

‘ಪುಷ್ಪ’ ಸಿನಿಮಾದಿಂದಲೇ ಅಲ್ಲು ಅರ್ಜುನ್​ ಅವರಿಗೆ ಹಿಂದಿಯಲ್ಲಿ ಮಾರುಕಟ್ಟೆ ಹೆಚ್ಚಿತಾ? ಹಾಗೇನೂ ಇಲ್ಲ. ‘ಪುಷ್ಪ’ ರಿಲೀಸ್​ ಆಗೋದಕ್ಕಿಂತ ಮುನ್ನವೇ ಅವರು ಹಿಂದಿ ಸಿನಿಪ್ರಿಯರಿಗೆ ಪರಿಚಿತಗೊಂಡಿದ್ದರು. ಅವರ ಈ ಹಿಂದಿನ ಅನೇಕ ಸಿನಿಮಾಗಳನ್ನು ಹಿಂದಿಗೆ ಡಬ್​ ಮಾಡಿ, ಟಿವಿ ಮತ್ತು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗಿತ್ತು. ಅದರ ಹಿಂದಿರುವುದು ‘ಗೋಲ್ಡ್​ಮೈನ್ಸ್​ ಫಿಲ್ಮ್ಸ್​’ ಸಂಸ್ಥೆ. ‘ಪುಷ್ಪ’ ಚಿತ್ರದ ಹಿಂದಿ ವರ್ಷನ್​ ಅನ್ನು ಥಿಯೇಟರ್​ನಲ್ಲಿ ಬಿಡುಗಡೆ ಮಾಡಿದ್ದು ಕೂಡ ಇದೇ ಸಂಸ್ಥೆ.

‘ಗೋಲ್ಡ್​ಮೈನ್ಸ್​ ಫಿಲ್ಮ್ಸ್​’ ಸಂಸ್ಥೆಯು ತನ್ನ ‘ಡಿಂಚಕ್​ ಟಿವಿ’ ಮೂಲಕ ಈಗಾಗಲೇ ದಕ್ಷಿಣ ಭಾರತದ ಅನೇಕ​ ಸಿನಿಮಾಗಳನ್ನು ಹಿಂದಿಗೆ ಡಬ್​ ಮಾಡಿ ಪ್ರಸಾರ ಮಾಡಿದೆ. ಅಲ್ಲಿ ಹೆಚ್ಚು ಟಿಆರ್​ಪಿ ಗಳಿಸಿರುವುದು ಅಲ್ಲು ಅರ್ಜುನ್​ ಸಿನಿಮಾಗಳು. ಹಾಗಾಗಿ ಅವರ ಸಿನಿಮಾವನ್ನು ಹಿಂದಿ ಪ್ರೇಕ್ಷಕರು ಇಷ್ಟಪಡುತ್ತಾರೆ ಎಂಬ ಸತ್ಯ ‘ಗೋಲ್ಡ್​ಮೈನ್ಸ್​ ಫಿಲ್ಮ್ಸ್​’ ಸಂಸ್ಥೆಯ ಮಾಲಿಕರಿಗೆ ಚೆನ್ನಾಗಿ ತಿಳಿದತ್ತು. ಹಾಗಾಗಿ ಅವರು ತಮ್ಮ ಟಿವಿ ಚಾನೆಲ್ ಮತ್ತು ಯೂಟ್ಯೂಬ್​ ಚಾನೆಲ್​ನಲ್ಲಿ ‘ಪುಷ್ಪ’ ಚಿತ್ರವನ್ನು ಚೆನ್ನಾಗಿ ಪ್ರಚಾರ ಮಾಡಿದರು. ಅದರ ಪರಿಣಾಮವಾಗಿ ಮೊದಲ ದಿನವೇ ಈ ಸಿನಿಮಾ ನೋಡಲು ಹಿಂದಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಮುಗಿಬಿದ್ದರು.

‘ಗೋಲ್ಡ್​ಮೈನ್ಸ್​ ಫಿಲ್ಮ್ಸ್​’ ಯೂಟ್ಯೂಬ್​ ಚಾನೆಲ್​ ಮತ್ತು ‘ಡಿಂಚಕ್​ ಟಿವಿ’ ಮೂಲಕ ಅಲ್ಲು ಅರ್ಜುನ್​ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದವರಿಗೆ ಅವರ ಪ್ರತಿಭೆ ಏನೆಂಬುದು ತಿಳಿದಿತ್ತು. ಹಾಗಾಗಿ ಅವರೆಲ್ಲರೂ ಚಿತ್ರಮಂದಿರದಲ್ಲಿ ‘ಪುಷ್ಪ’ ಸಿನಿಮಾ ನೋಡಲು ಮನಸ್ಸು ಮಾಡಿದರು ಎನ್ನುತ್ತಾರೆ ‘ಗೋಲ್ಡ್​ಮೈನ್ಸ್​ ಫಿಲ್ಮ್ಸ್​’ ಸಂಸ್ಥೆಯ ಮನೀಶ್​.

ಹಿಂದಿ ರೀತಿಯೇ ಮಲಯಾಳಂನಲ್ಲೂ ‘ಪುಷ್ಪ’ ಸಿನಿಮಾ ಉತ್ತಮ ಗಳಿಕೆ ಮಾಡಿದೆ. ‘ಆರ್ಯ’ ಸಿನಿಮಾದ ಕಾಲದಿಂದಲೂ ಕೇರಳದಲ್ಲಿ ಅಲ್ಲು ಅರ್ಜುನ್​ ಅವರ ಸಿನಿಮಾಗಳಿಗೆ ಬೇಡಿಕೆ ಇದೆ. ಅಲ್ಲಿ ಫ್ಯಾಮಿಲಿ ಆಡಿಯನ್ಸ್​ ಕೂಡ ಅಲ್ಲು ಅರ್ಜುನ್​ ಅವರನ್ನು ಇಷ್ಟಪಟ್ಟಿದ್ದಾರೆ. ಕೇರಳದಲ್ಲಿ ಅವರಿಗೆ ಇರುವ ಜನಪ್ರಿಯತೆ ‘ಪುಷ್ಪ’ ಚಿತ್ರದ ಯಶಸ್ಸಿಗೆ ಕಾರಣ ಆಯ್ತು ಎಂದಿದ್ದಾರೆ ವಿತರಕ, ಇ4 ಎಂಟರ್​ಟೇನ್​ಮೆಂಟ್​ ಸಂಸ್ಥೆಯ ಮುಕೇಶ್​ ಮೆಹ್ತಾ. ‘ಪುಷ್ಪ’ ಚಿತ್ರದ ಹಾಡು, ಟೀಸರ್​ ಮುಂತಾದ ಕಂಟೆಂಟ್​​ಗಳನ್ನು ತೆಲುಗಿನ ಜೊತೆಜೊತೆಗೆ ಬೇರೆ ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡಲಾಯ್ತು. ಪ್ರಾದೇಶಿಕ ಭಾಷೆಯ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಅದು ಸಹಾಯಕವಾಯ್ತು ಎಂಬುದು ಮುಕೇಶ್​ ಮೆಹ್ತಾ ಅನಿಸಿಕೆ.

‘ಅಲ್ಲು ಅರ್ಜುನ್​ ಅವರಿಗೆ ಕೇರಳದಲ್ಲಿ ಒಳ್ಳೆಯ ಮಾರ್ಕೆಟ್​ ಇದೆ. ಆದರೆ ಸಿನಿಮಾ ಗೆಲುವಿಗೆ ಅದೊಂದೇ ಸಾಕಾಗುವುದಿಲ್ಲ. ಪುಷ್ಪ ಸಿನಿಮಾ ಎಲ್ಲ ಆಯಾಮದಲ್ಲಿಯೂ ಉತ್ತಮವಾಗಿತ್ತು. ಕಥೆ, ಪಾತ್ರವರ್ಗ, ಸಂಗೀತ, ಆ್ಯಕ್ಷನ್​ ಹೀಗೆ ಎಲ್ಲದರ ಕಾರಣದಿಂದ ಸಿನಿಮಾ ಯಶಸ್ವಿ ಆಯಿತು’ ಎಂದು ಮುಕೇಶ್​ ಮೆಹ್ತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಲ್ಲು ಅರ್ಜುನ್​ ರೀತಿಯೇ ದಕ್ಷಿಣ ಭಾರತದ ಇತರೆ ನಟರು ಕೂಡ ಹಿಂದಿ ಡಬ್ಬಿಂಗ್​ ಮಾರ್ಕೆಟ್​ನಲ್ಲಿ ಗೆಲುವು ಕಾಣಬಹುದು. ಪ್ರಭಾಸ್​, ರಾಮ್​ ಚರಣ್​, ಯಶ್​, ಜ್ಯೂ. ಎನ್​ಟಿಆರ್​ ಮುಂತಾದ ನಟರಿಗೆ ಆ ಸಾಮರ್ಥ್ಯ ಇದೆ. ದಕ್ಷಿಣ ಭಾರತದಲ್ಲಿ ತಯಾರಾಗುವ ಸಿನಿಮಾಗಳ ಗುಣಮಟ್ಟ ಚೆನ್ನಾಗಿ ಇರುತ್ತದೆ ಎಂದು ‘ಗೋಲ್ಡ್​ಮೈನ್ಸ್​ ಫಿಲ್ಮ್ಸ್​’ ಮನೀಶ್​ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಅಲ್ಲು ಅರ್ಜುನ್​ ಹೊಸ ಚಿತ್ರಕ್ಕೆ ಅಟ್ಲಿ ನಿರ್ದೇಶನ; ಸಂಭಾವನೆ ಎಷ್ಟು ಅಂತ ಕೇಳಿದ್ರೆ ಅಚ್ಚರಿ ಆಗತ್ತೆ

‘ಪುಷ್ಪ’ ಚಿತ್ರವನ್ನು ಹಾಡಿ ಹೊಗಳಿದ ಮಹೇಶ್​ ಬಾಬು; ಈ ಪರಿ ಪ್ರಶಂಸೆಗೆ ಅಲ್ಲು ಅರ್ಜುನ್​ ಪ್ರತಿಕ್ರಿಯೆ ಏನು?

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ