AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಸೂಪರ್ ಹಿಟ್, ನಿರ್ದೇಶಕನಿಗೆ ದುಬಾರಿ ಕಾರು ಕೊಟ್ಟ ಉದಯನಿಧಿ ಸ್ಟಾಲಿನ್

Mari Selvaraj: ಹಿಟ್ ಸಿನಿಮಾ ಕೊಟ್ಟ ನಿರ್ದೇಶಕನಿಗೆ ದುಬಾರಿ ಕಾರು ಉಡುಗೊರೆಯಾಗಿ ಕೊಟ್ಟ ತಮಿಳುನಾಡು ಸಿಎಂ ಪುತ್ರ ಉದಯ್​ನಿಧಿ ಸ್ಟಾಲಿನ್.

ಸಿನಿಮಾ ಸೂಪರ್ ಹಿಟ್, ನಿರ್ದೇಶಕನಿಗೆ ದುಬಾರಿ ಕಾರು ಕೊಟ್ಟ ಉದಯನಿಧಿ ಸ್ಟಾಲಿನ್
ಉದಯ್ ನಿಧಿ-ಸ್ಟಾಲಿನ್
ಮಂಜುನಾಥ ಸಿ.
|

Updated on: Jul 02, 2023 | 7:51 PM

Share

ತಮಿಳುನಾಡು ಸಿಎಂ ಪುತ್ರ ಉದಯ್​ನಿಧಿ ಸ್ಟಾಲಿನ್ (Udhayanidhi Stalin) ರಾಜಕಾರಣಿಯಾಗಿರುವ ಜೊತೆಗೆ ಸಿನಿಮಾ ನಟರೂ ಆಗಿದ್ದಾರೆ. ಉದಯ್ ನಿಧಿ ಸ್ಟಾಲಿನ್ ನಟನೆಯ ಮಾಮನ್ನನ್ (Maamannan) ಸಿನಿಮಾ ಕಳೆದ ಶುಕ್ರವಾರವಷ್ಟೆ ಬಿಡುಗಡೆ ಆಗಿದೆ. ಸಿನಿಮಾ ತಮಿಳುನಾಡು ಸೇರಿದಂತೆ ಇತರೆ ಕೆಲವು ರಾಜ್ಯಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದ್ದು, ವಿಮರ್ಶಕರಿಂದಲೂ ಮೆಚ್ಚಿಗೆಗೆ ಪಾತ್ರವಾಗಿದೆ. ಉದಯ್​ನಿಧಿ ಸ್ಟಾಲಿನ್ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ಉದಯ್ ನಿಧಿ ಸ್ಟಾಲಿನ್ ಮಾಮನ್ನನ್ ಸಿನಿಮಾದ ನಿರ್ದೇಶಕರಿಗೆ ದುಬಾರಿ ಕಾರೊಂದನ್ನು (luxury Car) ಉಡುಗೊರೆಯಾಗಿ ನೀಡಿದ್ದಾರೆ.

ಮಾಮನ್ನನ್ ಸಿನಿಮಾ ನಿರ್ದೇಶನ ಮಾಡಿರುವ ಮಾರಿ ಸೆಲ್ವರಾಜ್​ಗೆ ಮಿನಿ ಕೂಪರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಉದಯ್​ನಿಧಿ ಸ್ಟಾಲಿನ್. ಗಾತ್ರ, ಎತ್ತರ, ಲುಕ್​ನಲ್ಲಿ ನೋಡಲು ತುಸು ಮಾರುತಿ ಸ್ವಿಫ್ಟ್​ನಂತೆ ಕಾಣುವ ಈ ಕಾರಿನ ಬೆಲೆ ಬರೋಬ್ಬರಿ 40 ಲಕ್ಷ. ನಾಲ್ಕು ಸೀಟ್​ನ ಈ ಕ್ಯೂಟ್ ಕಾರು ಹ್ಯಾಚ್​ಬ್ಯಾಕ್ ಸೆಗ್​ಮೆಂಟ್​ ಕಾರುಗಳಲ್ಲಿ ಅತ್ಯಂತ ದುಬಾರಿ ಕಾರಿನಲ್ಲೊಂದು. ಇಂದು (ಜುಲೈ 02) ಮಾರಿ ಸೆಲ್ವರಾಜ್​ ವಾಸವಿರುವ ಅಪಾರ್ಟ್​ಮೆಂಟ್​ಗೆ ಖುದ್ದಾಗಿ ತೆರಳಿ ಉದಯ್​ನಿಧಿ ಸ್ಟಾಲಿನ್ ಮಿನಿ ಕೂಪರ್ ಕಾರನ್ನು ಹಸ್ತಾಂತರಿಸಿದ್ದಾರೆ.

ಕಾರು ಹಸ್ತಾಂತರಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಉದಯ್ ನಿಧಿ ಸ್ಟಾಲಿನ್, ”ಪ್ರತಿಯೊಬ್ಬರೂ ಸಿನಿಮಾ ಬಗ್ಗೆ ಭಿನ್ನವಾಗಿ ಚರ್ಚಿಸುತ್ತಿದ್ದಾರೆ. ತಮ್ಮ ಅನುಭವಗಳನ್ನು ನಮ್ಮ ಸಿನಿಮಾದೊಂದಿಗೆ ಹೋಲಿಸಿ ಹಂಚಿಕೊಳ್ಳುತ್ತಿದ್ದಾರೆ. ಇದು ಪ್ರಪಂಚದಾದ್ಯಂತದ ತಮಿಳರಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಅಂಬೇಡ್ಕರ್, ಪೆರಿಯಾರ್, ಅಣ್ಣಾ, ಕಲೈನಾರ್ ಅವರಂತಹ ನಮ್ಮ ನಾಯಕರು ಯುವ ಪೀಳಿಗೆಯಲ್ಲಿ ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಮೂಡಿಸಿದ್ದಾರೆ. ಈ ಸಿನಿಮಾ ದೊಡ್ಡ ಬಾಕ್ಸ್ ಆಫೀಸ್ ಗೆಲುವನ್ನೂ ಕಂಡಿದೆ. ನಮ್ಮ ರೆಡ್ ಜಾಯಿಂಟ್ ಮೂವೀಸ್ ಸಂಸ್ಥೆಯ ವತಿಯಿಂದ ನಿರ್ದೇಶಕ ಮಾರಿ ಸೆಲ್ವರಾಜ್ ಸರ್ ಅವರಿಗೆ ಮಿನಿ ಕೂಪರ್ ಕಾರನ್ನು ಉಡುಗೊರೆಯಾಗಿ ನೀಡಲು ಸಂತೋಷವಾಗಿದೆ. ‘ಮಾಮಣ್ಣನಿಗೆ’ ವಿಶ್ವದಾದ್ಯಂತ ಹಾರಲು ರೆಕ್ಕೆಗಳನ್ನು ನೀಡಿದ ನನ್ನ ಮಾರಿ ಸೆಲ್ವರಾಜ್ ಸರ್ ಅವರಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Toyota Vellfire: ದುಬಾರಿ ಕಾರು ಖರೀದಿಸಿದ ಚಿರಂಜೀವಿ; 1111 ನಂಬರ್​ ಪ್ಲೇಟ್​ ಪಡೆಯಲು ನೀಡಿದ ಹಣ ಎಷ್ಟು?

ಉದಯ್​ನಿಧಿ ಸ್ಟಾಲಿನ್ ನಟಿಸಿರುವ ಮಾಮನ್ನನ್ ಸಿನಿಮಾವನ್ನು ಮಾರಿ ಸೆಲ್ವರಾಜ್ ನಿರ್ದೇಶನ ಮಾಡಿದ್ದಾರೆ. ಜಾತಿ ರಾಜಕೀಯದ ಕತೆಯನ್ನು ಮಾಮನ್ನನ್​ಗಾಗಿ ಮಾರಿ ಸೆಲ್ವರಾಜ್ ಹೆಣೆದಿದ್ದಾರೆ. ಹಿಂದುಳಿಗ ವರ್ಗದ ಶಾಸಕ ಸಹ ಮೇಲ್ವರ್ಗದ ಧಣಿಗೆ ಕಟ್ಟುಬಿದ್ದು ನಡೆದುಕೊಳ್ಳುವ ಕೊನೆಗೆ ಅದನ್ನು ಮೀರಿ ಆ ಮನಸ್ಥಿತಿಯಿಂದ ಹೊರಬರುವ ಕತೆಯನ್ನು ಮಾಮನ್ನನ್ ಒಳಗೊಂಡಿದೆ. ದಲಿತ ಶಾಸಕನ ಮಗನ ಪಾತ್ರದಲ್ಲಿ ಉದಯ್​ನಿಧಿ ಸ್ಟಾಲಿನ್ ನಟಿಸಿದ್ದಾರೆ. ದಲಿತ ಶಾಸಕನ ಪಾತ್ರದಲ್ಲಿ ಹಿರಿಯ ಹಾಸ್ಯನಟ ವಡಿವೇಲು ನಟಿಸಿದ್ದಾರೆ. ವಿಲನ್ ಪಾತ್ರದಲ್ಲಿ ಫಹಾದ್ ಫಾಸಿಲ್ ಇದ್ದಾರೆ.

ಸಿನಿಮಾ ಹಿಟ್ ಆದಾಗ ನಿರ್ದೇಶಕರಿಗೆ ಉಡುಗೊರೆ ನೀಡುವ ಸಂಪ್ರದಾಯ ತಮಿಳು ಚಿತ್ರರಂಗದಲ್ಲಿ ಇತ್ತೀಚೆಗೆ ಹೆಚ್ಚಾಗಿದೆ. ವಿಕ್ರಂ ಸಿನಿಮಾ ಸೂಪರ್-ಡೂಪರ್ ಹಿಟ್ ಆದಾಗ ಅದರ ನಿರ್ದೇಶಕ ಲೋಕೇಶ್ ಕನಗರಾಜ್​ಗೆ ನಿಸ್ಸಾನ್ ಸಂಸ್ಥೆಯ ದುಬಾರಿ ಕಾರನ್ನು ನಟ, ನಿರ್ಮಾಪಕ ಕಮಲ್ ಹಾಸನ್ ಉಡುಗೊರೆಯಾಗಿ ನೀಡಿದ್ದರು. ನಿರ್ದೇಶಕ ತಂಡದಲ್ಲಿದ್ದ ಇತರರಿಗೆ ಟಿವಿಎಸ್ ಅಪಾಚೆ ಬೈಕ್ ಉಡುಗೊರೆಯಾಗಿ ನೀಡಿದ್ದರು. ಅದಾದ ಬಳಿಕ ತಮ್ಮ ಇಂಡಿಯನ್ 2 ಸಿನಿಮಾ ನಿರ್ದೇಶಿಸುತ್ತಿರುವ ಶಂಕರ್​ಗೆ ನಾಲ್ಕು ಲಕ್ಷ ಮೌಲ್ಯದ ದುಬಾರಿ ವಾಚ್ ಒಂದನ್ನು ಇತ್ತೀಚೆಗಷ್ಟೆ ಕಮಲ್ ಉಡುಗೊರೆಯಾಗಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ದೇವೇಗೌಡರ ಪತ್ನಿ ಚೆನ್ನಮ್ಮನ ಮೇಲೆ ಆ್ಯಸಿಡ್ ದಾಳಿ ಯಾವಾಗ? ಎಲ್ಲಿ ಆಗಿತ್ತು?
ದೇವೇಗೌಡರ ಪತ್ನಿ ಚೆನ್ನಮ್ಮನ ಮೇಲೆ ಆ್ಯಸಿಡ್ ದಾಳಿ ಯಾವಾಗ? ಎಲ್ಲಿ ಆಗಿತ್ತು?
ತಮ್ಮ ಬೆನ್ನೆಲುಬಾಗಿದ್ದ ಪತ್ನಿಯ ಅಗಲಿಕೆಗೆ ಕಣ್ಣೀರಿಟ್ಟ ದೇವೇಗೌಡ್ರು
ತಮ್ಮ ಬೆನ್ನೆಲುಬಾಗಿದ್ದ ಪತ್ನಿಯ ಅಗಲಿಕೆಗೆ ಕಣ್ಣೀರಿಟ್ಟ ದೇವೇಗೌಡ್ರು
ಬಂಗಾಳದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕಚೇರಿ ನೆಲಸಮ
ಬಂಗಾಳದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕಚೇರಿ ನೆಲಸಮ
ಬೆಳಗಾವಿಯಲ್ಲಿ ಬಸ್ ಸೌಕರ್ಯದ ಕೊರತೆ
ಬೆಳಗಾವಿಯಲ್ಲಿ ಬಸ್ ಸೌಕರ್ಯದ ಕೊರತೆ
ಬರದ ನಡುವೆ ಮರುಬಿತ್ತನೆ ಮಾಡಿದ ವೃದ್ಧ ದಂಪತಿ!
ಬರದ ನಡುವೆ ಮರುಬಿತ್ತನೆ ಮಾಡಿದ ವೃದ್ಧ ದಂಪತಿ!
SIR ಗೆ ಶಿಕ್ಷಕರ ನಿಯೋಜನೆ: ತರಗತಿಗಳು ಸ್ಥಗಿತ, ವಿದ್ಯಾರ್ಥಿಗಳ ಪ್ರತಿಭಟನೆ
SIR ಗೆ ಶಿಕ್ಷಕರ ನಿಯೋಜನೆ: ತರಗತಿಗಳು ಸ್ಥಗಿತ, ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು ದಸರಾದಲ್ಲಿ ಕಂಬಳಕ್ಕೆ ವಿರೋಧಿಸ್ತಿರೋ ಪ್ರತಿಭಟನಾಕಾರರು ಹೇಳಿದ್ದೇನು?
ಮೈಸೂರು ದಸರಾದಲ್ಲಿ ಕಂಬಳಕ್ಕೆ ವಿರೋಧಿಸ್ತಿರೋ ಪ್ರತಿಭಟನಾಕಾರರು ಹೇಳಿದ್ದೇನು?
ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ!
ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ!
ಟೋಯಿಂಗ್ ಬಳಿಕವೂ ಮಾಲೀಕರು ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ
ಟೋಯಿಂಗ್ ಬಳಿಕವೂ ಮಾಲೀಕರು ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ
ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಪತ್ತೆ
ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಪತ್ತೆ