AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಸೋಲಿನಿಂದ ಬಚಾವ್ ಆದ್ರಿ’; ಕಿಯಾರಾಗೆ ಹೇಳಿದ ನಯನತಾರಾ ಪತಿ

'ಟಾಕ್ಸಿಕ್' ಸಿನಿಮಾದ ಅದ್ಧೂರಿ ಈವೆಂಟ್‌ನಲ್ಲಿ ನಟಿ ಕಿಯಾರಾ ಅಡ್ವಾಣಿ ಕುರಿತು ನಿರ್ದೇಶಕ ವಿಘ್ನೇಶ್ ಶಿವನ್ ತಮಾಷೆಯಾಗಿ ನೀಡಿದ ಹೇಳಿಕೆ ವೈರಲ್ ಆಗಿದೆ. ತಾವಿಬ್ಬರೂ ಜೊತೆಯಾಗಿ ಮಾಡಬೇಕಿದ್ದ ಸಿನಿಮಾ ಸೋತಿದ್ದರಿಂದ ಕಿಯಾರಾ ದೊಡ್ಡ ಸೋಲಿನಿಂದ ಬಚಾವ್ ಆದರು ಎಂದು ವಿಘ್ನೇಶ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

‘ಆ ಸೋಲಿನಿಂದ ಬಚಾವ್ ಆದ್ರಿ’; ಕಿಯಾರಾಗೆ ಹೇಳಿದ ನಯನತಾರಾ ಪತಿ
ಕಿಯಾರಾ-ನಯನತಾರಾ, ವಿಘ್ನೇಶ್ ಶಿವನ್
ರಾಜೇಶ್ ದುಗ್ಗುಮನೆ
|

Updated on: Aug 25, 2026 | 12:26 PM

Share

ಮುಖ್ಯಾಂಶಗಳು

  • 'ಟಾಕ್ಸಿಕ್' ಈವೆಂಟ್‌ನಲ್ಲಿ ವಿಘ್ನೇಶ್ ಶಿವನ್ ಟ್ರೋಲ್
  • ‘LIC' ಸಿನಿಮಾದ ದೊಡ್ಡ ಸೋಲಿನಿಂದ ಬಚಾವ್ ಆದ್ರು ಕಿಯಾರಾ
  • ತಮ್ಮದೇ ಸಿನಿಮಾದ ಫ್ಲಾಪ್ ಒಪ್ಪಿಕೊಂಡು ವೇದಿಕೆಯಲ್ಲಿ ನಕ್ಕ ನಿರ್ದೇಶಕ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ (Toxic Movie) ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಾಲಿವುಡ್ ನಿರ್ದೇಶಕ, ನಯನತಾರಾ ಪತಿ ವಿಘ್ನೇಶ್ ಶಿವನ್ ತಮ್ಮ ಹಾಸ್ಯಪ್ರಜ್ಞೆಯಿಂದ ತಮ್ಮನ್ನೇ ಟ್ರೋಲ್ ಮಾಡಿಕೊಳ್ಳುವ ಮೂಲಕ ಗಮನಸೆಳೆದಿದ್ದಾರೆ. ನಟಿ ಕಿಯಾರಾ ಅಡ್ವಾಣಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ತಾವು ನಿರ್ದೇಶಿಸಿದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದನ್ನು ಒಪ್ಪಿಕೊಳ್ಳುತ್ತಾ ಕಿಯಾರಾ ಆ ಸೋಲಿನಿಂದ ಬಚಾವ್ ಆದದ್ದನ್ನು ತಮಾಷೆಯಾಗಿ ನೆನಪಿಸಿಕೊಂಡಿದ್ದಾರೆ.

ಕಿಯಾರಾಗೆ ಕಥೆ ಹೇಳಿದ್ದ ವಿಘ್ನೇಶ್ ಶಿವನ್

ವೇದಿಕೆಯಲ್ಲಿ ಮಾತನಾಡಿದ ವಿಘ್ನೇಶ್ ಶಿವನ್, ‘ಕಿಯಾರಾ, ನನಗೆ ನೀವು ಚೆನ್ನಾಗಿ ನೆನಪಿದ್ದೀರಿ. ಕಬೀರ್ ಸಿಂಗ್ ಸಿನಿಮಾ ಬಿಡುಗಡೆಯಾಗುವ ಮುನ್ನ ನಾನು ನಿಮಗೊಂದು ಕಥೆ ಹೇಳಲು ಬಂದಿದ್ದೆ. ನಂತರ ಆ ಕಥೆಯನ್ನು ಲವ್ ಇನ್ಶೂರೆನ್ಸ್ ಕಂಪನಿ ಹೆಸರಿನಲ್ಲಿ ಸಿನಿಮಾ ಮಾಡಿದೆ. ಆದರೆ ನೀವು ತುಂಬಾ ಲಕ್ಕಿ, ಏಕೆಂದರೆ ಆ ಸಿನಿಮಾದಲ್ಲಿ ನೀವು ನಟಿಸಲಿಲ್ಲ’ ಎಂದು ನಗುತ್ತಾ ಹೇಳಿದರು.

ಫ್ಲಾಪ್ ಸಿನಿಮಾದಿಂದ ಪಾರಾದ ನಟಿ

ವಿಘ್ನೇಶ್ ಶಿವನ್ ನಿರ್ದೇಶನದ ‘ಲವ್ ಇನ್ಶೂರೆನ್ಸ್ ಕಂಪನಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಭಾರೀ ಸೋಲು ಅನುಭವಿಸಿತ್ತು. ಒಂದು ವೇಳೆ ಕಿಯಾರಾ ಆ ಪ್ರಾಜೆಕ್ಟ್ ಒಪ್ಪಿಕೊಂಡಿದ್ದರೆ, ಅವರ ಖಾತೆಗೆ ಸೋಲೊಂದು ಸೇರುತ್ತಿತ್ತು. ಹೀಗಾಗಿ ವಿಘ್ನೇಶ್ ಸ್ವತಃ ತಾವೇ ತಮ್ಮ ಸಿನಿಮಾದ ಸೋಲನ್ನು ಒಪ್ಪಿಕೊಂಡು ಕಿಯಾರಾ ಆ ಸೋಲಿನಿಂದ ಬಚಾವ್ ಆದರು ಎಂದು ಸ್ವಯಂ-ಹಾಸ್ಯ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಯಶ್ ಬೆಂಬಲ ನೆನೆದು ಟಾಕ್ಸಿಕ್; ಈವೆಂಟ್‌ನಲ್ಲಿ ಧನ್ಯವಾದ ಹೇಳಿದ ಕಿಯಾರಾ

ನೆಟ್ಟಿಗರ ಮೆಚ್ಚುಗೆ

ತಮ್ಮದೇ ಸಿನಿಮಾದ ಸೋಲನ್ನು ಸಾರ್ವಜನಿಕ ವೇದಿಕೆಯಲ್ಲಿ ಮುಕ್ತವಾಗಿ ಒಪ್ಪಿಕೊಂಡ ವಿಘ್ನೇಶ್ ಶಿವನ್ ಅವರ ಸರಳತೆ ಮತ್ತು ಹಾಸ್ಯಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ವಿಘ್ನೇಶ್ ಅವರಿಗೆ ಯಾವ ವೇದಿಕೆ ಮೇಲೆ ಏನು ಮಾತನಾಡಬೇಕು ಎಂಬುದು ತಿಳಿಯಲ್ಲ ಎಂದಿದ್ದಾರೆ. ಕಿಯಾರಾ ಅಡ್ವಾಣಿ ಕೂಡ ವಿಘ್ನೇಶ್ ಅವರ ಈ ಮಾತುಗಳನ್ನು ಕೇಳಿ ನಗೆ ಬೀರಿದ್ದು, ಈ ವೀಡಿಯೋ ತುಣುಕುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ನಕಲಿ ಮೆಡಿಸಿನ್‌ನಿಂದಲೇ ಕೋಟಿ ಕೋಟಿ ಸಂಪಾದನೆ
ನಕಲಿ ಮೆಡಿಸಿನ್‌ನಿಂದಲೇ ಕೋಟಿ ಕೋಟಿ ಸಂಪಾದನೆ
ಪಿಯೂಶ್​ ಗೋಯಲ್​ ಮನೆಯಲ್ಲಿ ನಡೆದ ಗಣೇಶ ಪೂಜೆಯಲ್ಲಿ ಪ್ರಧಾನಿ ಮೋದಿ ಭಾಗಿ
ಪಿಯೂಶ್​ ಗೋಯಲ್​ ಮನೆಯಲ್ಲಿ ನಡೆದ ಗಣೇಶ ಪೂಜೆಯಲ್ಲಿ ಪ್ರಧಾನಿ ಮೋದಿ ಭಾಗಿ
ಡಿಜೆಗೆ ನಿರಾಕರಣೆ: ರಸ್ತೆಯಲ್ಲೇ ಗಣೇಶ ಮೂರ್ತಿ ಇಟ್ಟು ಪ್ರತಿಭಟನೆ
ಡಿಜೆಗೆ ನಿರಾಕರಣೆ: ರಸ್ತೆಯಲ್ಲೇ ಗಣೇಶ ಮೂರ್ತಿ ಇಟ್ಟು ಪ್ರತಿಭಟನೆ
ಲಂಚ ಸ್ವೀಕರಿಸುತ್ತಿದ್ದಾಗ ಗುಬ್ಬಿ ಆರ್‌ಎಫ್‌ಒ ಲೋಕಾಯುಕ್ತ ಬಲೆಗೆ
ಲಂಚ ಸ್ವೀಕರಿಸುತ್ತಿದ್ದಾಗ ಗುಬ್ಬಿ ಆರ್‌ಎಫ್‌ಒ ಲೋಕಾಯುಕ್ತ ಬಲೆಗೆ
ಕರ್ತವ್ಯ ಲೋಪ ಕೇಸ್​: ಶಾಸಕ ಉಮೇಶ್ ಮೇಟಿ ಸೊಸೆ ಡಾ ಅಂಕಿತಾ ಯರಗಲ್​​ ವಜಾ
ಕರ್ತವ್ಯ ಲೋಪ ಕೇಸ್​: ಶಾಸಕ ಉಮೇಶ್ ಮೇಟಿ ಸೊಸೆ ಡಾ ಅಂಕಿತಾ ಯರಗಲ್​​ ವಜಾ
ಗಣಪತಿ ಮೆರವಣಿಗೆಗೆ ಇರುವ ಕಂಡೀಷನ್​​, ಈದ್​ ಮಿಲಾದ್​ಗೆ ಯಾಕಿಲ್ಲ?: ಅಶೋಕ್​
ಗಣಪತಿ ಮೆರವಣಿಗೆಗೆ ಇರುವ ಕಂಡೀಷನ್​​, ಈದ್​ ಮಿಲಾದ್​ಗೆ ಯಾಕಿಲ್ಲ?: ಅಶೋಕ್​
ವಿಜಯಪುರದಲ್ಲಿ ಅಗ್ನಿವೀರ್​ ನೇಮಕಾತಿ: 11 ಜಿಲ್ಲೆಗಳಿಂದ ಅಭ್ಯರ್ಥಿಗಳು ಭಾಗಿ
ವಿಜಯಪುರದಲ್ಲಿ ಅಗ್ನಿವೀರ್​ ನೇಮಕಾತಿ: 11 ಜಿಲ್ಲೆಗಳಿಂದ ಅಭ್ಯರ್ಥಿಗಳು ಭಾಗಿ
ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ