AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಬೆಂಬಲ ನೆನೆದು ‘ಟಾಕ್ಸಿಕ್’ ಈವೆಂಟ್‌ನಲ್ಲಿ ಧನ್ಯವಾದ ಹೇಳಿದ ಕಿಯಾರಾ

ತಮ್ಮ ಗರ್ಭಿಣಿ ವಿಚಾರ ತಿಳಿದಾಗ 'ಟಾಕ್ಸಿಕ್' ಸಿನಿಮಾ, ಲಾಜಿಸ್ಟಿಕ್ಸ್ ಬಗ್ಗೆ ಚಿಂತಿಸದೆ, ಆನಂದಭಾಷ್ಪದೊಂದಿಗೆ ಬೆಂಬಲ ನೀಡಿದ ನಟ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರಿಗೆ ನಟಿ ಕಿಯಾರಾ ಅಡ್ವಾಣಿ ಧನ್ಯವಾದ ತಿಳಿಸಿದ್ದಾರೆ. ಚೆನ್ನೈ ಈವೆಂಟ್‌ನಲ್ಲಿ ಕಿಯಾರಾ ಹಂಚಿಕೊಂಡ ಈ ಭಾವುಕ ಮಾತುಗಳು ಈಗ ವೈರಲ್ ಆಗಿವೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. 

ಯಶ್ ಬೆಂಬಲ ನೆನೆದು 'ಟಾಕ್ಸಿಕ್' ಈವೆಂಟ್‌ನಲ್ಲಿ ಧನ್ಯವಾದ ಹೇಳಿದ ಕಿಯಾರಾ
ಯಶ್-ಕಿಯಾರಾ
ರಾಜೇಶ್ ದುಗ್ಗುಮನೆ
|

Updated on:Aug 25, 2026 | 11:33 AM

Share

ಮುಖ್ಯಾಂಶಗಳು

  • ಗರ್ಭಿಣಿಯಾದಾಗ ಮೊದಲು ತಿಳಿಸಿದ್ದೇ ಯಶ್ ಹಾಗೂ ಗೀತುಗೆ
  • ಸಿನಿಮಾ ಶೂಟಿಂಗ್ ಚಿಂತೆ ಮಾಡದೆ ಶುಭಕೋರಿದ್ದ 'ಟಾಕ್ಸಿಕ್' ತಂಡ
  • ವೇದಿಕೆಯಲ್ಲೇ ಭಾವುಕರಾಗಿ ಯಶ್‌ಗೆ ಧನ್ಯವಾದ ತಿಳಿಸಿದ ಕಿಯಾರಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ ಚೆನ್ನೈನಲ್ಲಿ ನಡೆದಿದೆ. ಈ ವೇದಿಕೆ ಮೇಲೆ ನಟಿ ಕಿಯಾರಾ ಅಡ್ವಾಣಿ ಅವರು ತಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದ ಅತ್ಯಂತ ಭಾವುಕ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ. ನಟ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಮಾನವೀಯತೆ ಮತ್ತು ಪ್ರೀತಿಯನ್ನು ನೆನೆದು ಕಿಯಾರಾ ವೇದಿಕೆಯಲ್ಲೇ ಕೃತಜ್ಞತೆ ಸಲ್ಲಿಸಿದ್ದಾರೆ.

ಮೊದಲ ಬಾರಿಗೆ ಸತ್ಯ ಬಿಚ್ಚಿಟ್ಟ ಕಿಯಾರಾ

ವೇದಿಕೆಯಲ್ಲಿ ಮಾತನಾಡಿದ ಕಿಯಾರಾ, ‘ನಾನು ಗರ್ಭಿಣಿಯಾದಾಗ ನನ್ನ ಕುಟುಂಬದ ನಂತರ ಈ ವಿಚಾರವನ್ನು ಹಂಚಿಕೊಂಡ ಮೊದಲ ಇಬ್ಬರು ವ್ಯಕ್ತಿಗಳೆಂದರೆ ಯಶ್ ಮತ್ತು ಗೀತು ಮೋಹನ್‌ದಾಸ್. ಆ ಕ್ಷಣದಲ್ಲಿ ಅವರು ಸಿನಿಮಾವನ್ನು ಹೇಗೆ ಮುಗಿಸುವುದು, ಪ್ರಯಾಣ ಹೇಗೆ ಎನ್ನುವುದರ ಬಗ್ಗೆ ಯೋಚಿಸಲೇ ಇಲ್ಲ. ಬದಲಾಗಿ ಕಣ್ಣಲ್ಲಿ ಆನಂದಭಾಷ್ಪ ತುಂಬಿಕೊಂಡು ನನಗೆ ಶುಭಾಶಯ ತಿಳಿಸಿದರು’ ಎಂದು ಆ ಕ್ಷಣವನ್ನು ಸ್ಮರಿಸಿದರು.

ಸೆಟ್‌ನಲ್ಲಿ ನೀಡಿದ ಬೆಂಬಲ ಮತ್ತು ಪ್ರೀತಿ

ಮುಂದುವರಿದು ಮಾತನಾಡಿದ ಅವರು, ‘ಚಿತ್ರೀಕರಣದ ಸಮಯದಲ್ಲಿ ‘ಸೆಟ್‌ಗೆ ಬಾ, ಕಂಫರ್ಟಬಲ್ ಆಗಿರು, ನಿನಗೆ ಇಷ್ಟ ಬಂದದ್ದನ್ನು ತಿನ್ನು, ನಾವೆಲ್ಲರೂ ಸೇರಿ ಅತ್ಯುತ್ತಮ ಸಿನಿಮಾ ಮಾಡೋಣ’ ಎಂದು ಪ್ರೋತ್ಸಾಹಿಸಿದರು’ ಎಂದಿದ್ದಾರೆ ಕಿಯಾರಾ.

ಇದನ್ನೂ ಓದಿ: ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಲು ಟಾಕ್ಸಿಕ್ ಸಿನಿಮಾ ಶೀರ್ಷಿಕೆ ಬಳಸಿಕೊಂಡ ಒಡಿಶಾ ಪೋಲೀಸ್

‘ಅವರು ನೀಡಿದ ಆ ಬೆಂಬಲದಿಂದಾಗಿ ನಾನು ಯಾವುದೇ ಭಯವಿಲ್ಲದೆ ಕೆಲಸ ಮಾಡಲು ಸಾಧ್ಯವಾಯಿತು. ಅವರು ತೋರಿಸಿದ ಕಾಳಜಿ ಮತ್ತು ಪ್ರೀತಿಯನ್ನು ನಾನು ಜೀವನದಲ್ಲಿ ಎಂದು ಮರೆಯುವುದಿಲ್ಲ. ಇಂತಹ ಅದ್ಭುತ ತಂಡ ಸಿಕ್ಕಿದ್ದಕ್ಕೆ ಧನ್ಯವಾದಗಳು’ ಎಂದು ನಟ ಯಶ್ ಹಾಗೂ ಗೀತು ಮೋಹನ್‌ದಾಸ್‌ಗೆ ಕೃತಜ್ಞತೆ ವ್ಯಕ್ತಪಡಿಸಿದರು. ಕಿಯಾರಾ ಅವರ ಈ ಮಾತಿಗೆ ನಟ ಯಶ್ ಕೈಜೋಡಿಸಿ ಗೌರವ ಸಲ್ಲಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:02 am, Tue, 25 August 26

Follow Us
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಯಿಲ್ ಟ್ಯಾಂಕರ್ ಪಲ್ಟಿ; ಎಣ್ಣೆ ಹಿಡಿಯಲು ಬಕೆಟ್ ಹಿಡಿದು ನುಗ್ಗಿದ ಜನ!
ಆಯಿಲ್ ಟ್ಯಾಂಕರ್ ಪಲ್ಟಿ; ಎಣ್ಣೆ ಹಿಡಿಯಲು ಬಕೆಟ್ ಹಿಡಿದು ನುಗ್ಗಿದ ಜನ!
'ರಾಮಾಯಣ' ಚಿತ್ರದ ಪೆನ್ಸಿಲ್ ಆರ್ಟ್
'ರಾಮಾಯಣ' ಚಿತ್ರದ ಪೆನ್ಸಿಲ್ ಆರ್ಟ್
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್
9 ಗಂಟೆಗಳ ಶೋಧ: ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆದ್ರಾ ಜ್ಞಾನೇಂದ್ರ ಕುಮಾರ್?
9 ಗಂಟೆಗಳ ಶೋಧ: ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆದ್ರಾ ಜ್ಞಾನೇಂದ್ರ ಕುಮಾರ್?
ಸಿಎಂ ಡಿಕೆಶಿಗೆ ಶಾಸಕ ಸುನಿಲ್ ಕುಮಾರ್ ಸವಾಲು
ಸಿಎಂ ಡಿಕೆಶಿಗೆ ಶಾಸಕ ಸುನಿಲ್ ಕುಮಾರ್ ಸವಾಲು