AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ಯದ ದೊರೆ ವಿಜಯ್​ಮಲ್ಯ ಜೀವನಾಧಾರಿತ ಬಯೋಪಿಕ್​ ಚಿತ್ರೀಕರಣ ಶೀಘ್ರದಲ್ಲೇ ಆರಂಭ

ದಿ ವಿಜಯ್​ ಮಲ್ಯ ಲೈಫ್​ ಸ್ಟೋರಿ ಎನ್ನುವ ಪುಸ್ತಕದ ಆಧಾರದ ಮೇಲೆ ಅದರಲ್ಲಿರುವ ಅಂಶಗಳನ್ನು ಇಟ್ಟುಕೊಂಡು ವೆಬ್​ ಸೀರೀಸ್​ ಮಾಡಲಾಗುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ

ಮದ್ಯದ ದೊರೆ ವಿಜಯ್​ಮಲ್ಯ ಜೀವನಾಧಾರಿತ ಬಯೋಪಿಕ್​ ಚಿತ್ರೀಕರಣ ಶೀಘ್ರದಲ್ಲೇ ಆರಂಭ
ವಿಜಯ್​ ಮಲ್ಯ
TV9 Web
| Edited By: |

Updated on: Dec 18, 2021 | 2:05 PM

Share

ಮದ್ಯಲೋಕದ ದೊರೆ ವಿಜಯ್​ ಮಲ್ಯ ಜೀವನದ ಕಥೆ ವೆಬ್​ ಸೀರೀಸ್​ ಆಗುತ್ತಿದೆ. ಸಾವಿರಾರು ಕೋಟಿ ವಂಚಿಸಿ ಇಂಗ್ಲೆಂಡ್​ಗೆ ಪರಾರಿಯಾದ ಮಲ್ಯ ಜೀವನಾಧಾರಿತ ಬಯೋಪಿಕ್​ ತಯಾರಾಗುತ್ತಿದೆ. ದಿ ವಿಜಯ್​ ಮಲ್ಯ ಲೈಫ್​ ಸ್ಟೋರಿ ಎನ್ನುವ ಪುಸ್ತಕದ ಆಧಾರದ ಮೇಲೆ ಅದರಲ್ಲಿರುವ ಅಂಶಗಳನ್ನು ಇಟ್ಟುಕೊಂಡು ವೆಬ್​ ಸೀರೀಸ್​ ಮಾಡಲಾಗುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ಹೇಳಲಾಗಿದೆ. ಆಲ್​ಮೈಟಿ ಮೋಷನ್​ ಪಿಕ್ಚರ್​ ಸಂಸ್ಥೆಯ ನಟಿ ಹಾಗೂ ನಿರ್ಮಾಪಕಿ ಪ್ರಬ್ಲಿನ್​ ಕೌರ್​ ಅವರು pz ಪಿಕ್ಚರ್​ ಸಂಸ್ಥೆಯು ಜಂಟಿಯಾಗಿ ವೆಬ್​ ಸೀರೀಸ್​ ನಿರ್ಮಾಣ ಮಾಡುತ್ತಿದ್ದಾರೆ.  ಖ್ಯಾತ ಪತ್ರಕರ್ತ, ಬರಹಗಾರ ಕೆ ಗಿರೀಶ್ ಅವರು ವಿಜಯ್​ ಮಲ್ಯ ಜೀವನದ ಸೋಲು, ಗೆಲುವಿನ ಕುರಿತು ದಿ ವಿಜಯ್​ ಮಲ್ಯ ಲೈಫ್​ ಸ್ಟೋರಿ ಪುಸ್ತಕದಲ್ಲಿ ಬರೆದಿದ್ದಾರೆ. ಇದರ ಪ್ರಮುಖ ಅಂಶಗಳನ್ನು ಇಟ್ಟುಕೊಂಡು ವೆಬ್​ ಸೀರೀಸ್​ನಲ್ಲಿ ವಿಜಯ್​ ಮಲ್ಯ ಅವರ ಬಾಲ್ಯ, ಅವರ ಯಶಸ್ಸು, ಸೋಲಿನ ಕತೆಗಳನ್ನು ತರಲಾಗುತ್ತಿದೆ ಎಂದು ಹೇಳಲಾಗಿದೆ.

ಎಮ್​ ಎಕ್ಸ್​ ಪ್ಲೇಯರ್​ ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದ್ದು ಸದ್ಯದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ. ವಿಜಯ್​ ಮಲ್ಯ ಪಾತ್ರದಲ್ಲಿ ಬಾಲಿವುಡ್​ ನಟರೊಬ್ಬರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಎಮ್​ ಎಕ್ಸ್​ ಪ್ಲೇಯರ್​ ಒಟಿಟಿ ಮೂಲಕ ವೆಬ್​ ಸೀರೀಸ್​ ಅನ್ನು ಬಿಡುಗಡೆಗೊಳಿಸಲಿದೆ. ಈಗಾಗಲೇ ಎಮ್​ ಎಕ್ಸ್​ ಪ್ಲೇಯರ್​ಆಶ್ರಮ್​, ಕ್ವೀನ್​ನಂತಹ ವೆಬ್​ ಸೀರೀಸ್​ಗಳನ್ನು ಸ್ಟ್ರೀಮಿಂಗ್​ ಮಾಡಿದೆ. ಹೀಗಾಗಿ ವಿಜಯ್​ ಮಲ್ಯ ಅವರ ಜೀವನದ ಸಂಪೂರ್ಣ ಚಿತ್ರಣವನ್ನು ಪಡೆಯಲು ವೀಕ್ಷಕರೂ ಕೂಡ ಕಾತುರದಿಂದ ಕಾಯುತ್ತಿದ್ದಾರೆ.

ಉನೈಟೆಡ್​ ಸ್ಪಿರಿಟ್ಸ್​ , ಕಿಂಗ್​ಪಿಷರ್​ನಂತಹ ಮದ್ಯದ ಕಂಪನಿಗಳನ್ನು ಹೊಂದಿದ್ದ ವಿಜಯ್​ ಮಲ್ಯ ಭಾರತ ಮಾತ್ರವಲ್ಲದೆ ವಿದೇಶಿ ಬ್ಯಾಂಕ್​ಗಳಲ್ಲೂ ಕೋಟಿಗಟ್ಟಲೇ ವೆಚ್ಚದಲ್ಲಿ ಸಾಲ ಮಾಡಿಕೊಂಡಿದ್ದರು ಈ ಹಿನ್ನೆಲೆಯಲ್ಲಿ ಕೆಲವು ವರ್ಷಗಳ ಹಿಂದೆ ಇಂಗ್ಲೆಂಡಿಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದರು.

Follow Us
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!