AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ಯದ ದೊರೆ ವಿಜಯ್​ಮಲ್ಯ ಜೀವನಾಧಾರಿತ ಬಯೋಪಿಕ್​ ಚಿತ್ರೀಕರಣ ಶೀಘ್ರದಲ್ಲೇ ಆರಂಭ

ದಿ ವಿಜಯ್​ ಮಲ್ಯ ಲೈಫ್​ ಸ್ಟೋರಿ ಎನ್ನುವ ಪುಸ್ತಕದ ಆಧಾರದ ಮೇಲೆ ಅದರಲ್ಲಿರುವ ಅಂಶಗಳನ್ನು ಇಟ್ಟುಕೊಂಡು ವೆಬ್​ ಸೀರೀಸ್​ ಮಾಡಲಾಗುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ

ಮದ್ಯದ ದೊರೆ ವಿಜಯ್​ಮಲ್ಯ ಜೀವನಾಧಾರಿತ ಬಯೋಪಿಕ್​ ಚಿತ್ರೀಕರಣ ಶೀಘ್ರದಲ್ಲೇ ಆರಂಭ
ವಿಜಯ್​ ಮಲ್ಯ
TV9 Web
| Updated By: Pavitra Bhat Jigalemane

Updated on: Dec 18, 2021 | 2:05 PM

Share

ಮದ್ಯಲೋಕದ ದೊರೆ ವಿಜಯ್​ ಮಲ್ಯ ಜೀವನದ ಕಥೆ ವೆಬ್​ ಸೀರೀಸ್​ ಆಗುತ್ತಿದೆ. ಸಾವಿರಾರು ಕೋಟಿ ವಂಚಿಸಿ ಇಂಗ್ಲೆಂಡ್​ಗೆ ಪರಾರಿಯಾದ ಮಲ್ಯ ಜೀವನಾಧಾರಿತ ಬಯೋಪಿಕ್​ ತಯಾರಾಗುತ್ತಿದೆ. ದಿ ವಿಜಯ್​ ಮಲ್ಯ ಲೈಫ್​ ಸ್ಟೋರಿ ಎನ್ನುವ ಪುಸ್ತಕದ ಆಧಾರದ ಮೇಲೆ ಅದರಲ್ಲಿರುವ ಅಂಶಗಳನ್ನು ಇಟ್ಟುಕೊಂಡು ವೆಬ್​ ಸೀರೀಸ್​ ಮಾಡಲಾಗುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ಹೇಳಲಾಗಿದೆ. ಆಲ್​ಮೈಟಿ ಮೋಷನ್​ ಪಿಕ್ಚರ್​ ಸಂಸ್ಥೆಯ ನಟಿ ಹಾಗೂ ನಿರ್ಮಾಪಕಿ ಪ್ರಬ್ಲಿನ್​ ಕೌರ್​ ಅವರು pz ಪಿಕ್ಚರ್​ ಸಂಸ್ಥೆಯು ಜಂಟಿಯಾಗಿ ವೆಬ್​ ಸೀರೀಸ್​ ನಿರ್ಮಾಣ ಮಾಡುತ್ತಿದ್ದಾರೆ.  ಖ್ಯಾತ ಪತ್ರಕರ್ತ, ಬರಹಗಾರ ಕೆ ಗಿರೀಶ್ ಅವರು ವಿಜಯ್​ ಮಲ್ಯ ಜೀವನದ ಸೋಲು, ಗೆಲುವಿನ ಕುರಿತು ದಿ ವಿಜಯ್​ ಮಲ್ಯ ಲೈಫ್​ ಸ್ಟೋರಿ ಪುಸ್ತಕದಲ್ಲಿ ಬರೆದಿದ್ದಾರೆ. ಇದರ ಪ್ರಮುಖ ಅಂಶಗಳನ್ನು ಇಟ್ಟುಕೊಂಡು ವೆಬ್​ ಸೀರೀಸ್​ನಲ್ಲಿ ವಿಜಯ್​ ಮಲ್ಯ ಅವರ ಬಾಲ್ಯ, ಅವರ ಯಶಸ್ಸು, ಸೋಲಿನ ಕತೆಗಳನ್ನು ತರಲಾಗುತ್ತಿದೆ ಎಂದು ಹೇಳಲಾಗಿದೆ.

ಎಮ್​ ಎಕ್ಸ್​ ಪ್ಲೇಯರ್​ ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದ್ದು ಸದ್ಯದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ. ವಿಜಯ್​ ಮಲ್ಯ ಪಾತ್ರದಲ್ಲಿ ಬಾಲಿವುಡ್​ ನಟರೊಬ್ಬರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಎಮ್​ ಎಕ್ಸ್​ ಪ್ಲೇಯರ್​ ಒಟಿಟಿ ಮೂಲಕ ವೆಬ್​ ಸೀರೀಸ್​ ಅನ್ನು ಬಿಡುಗಡೆಗೊಳಿಸಲಿದೆ. ಈಗಾಗಲೇ ಎಮ್​ ಎಕ್ಸ್​ ಪ್ಲೇಯರ್​ಆಶ್ರಮ್​, ಕ್ವೀನ್​ನಂತಹ ವೆಬ್​ ಸೀರೀಸ್​ಗಳನ್ನು ಸ್ಟ್ರೀಮಿಂಗ್​ ಮಾಡಿದೆ. ಹೀಗಾಗಿ ವಿಜಯ್​ ಮಲ್ಯ ಅವರ ಜೀವನದ ಸಂಪೂರ್ಣ ಚಿತ್ರಣವನ್ನು ಪಡೆಯಲು ವೀಕ್ಷಕರೂ ಕೂಡ ಕಾತುರದಿಂದ ಕಾಯುತ್ತಿದ್ದಾರೆ.

ಉನೈಟೆಡ್​ ಸ್ಪಿರಿಟ್ಸ್​ , ಕಿಂಗ್​ಪಿಷರ್​ನಂತಹ ಮದ್ಯದ ಕಂಪನಿಗಳನ್ನು ಹೊಂದಿದ್ದ ವಿಜಯ್​ ಮಲ್ಯ ಭಾರತ ಮಾತ್ರವಲ್ಲದೆ ವಿದೇಶಿ ಬ್ಯಾಂಕ್​ಗಳಲ್ಲೂ ಕೋಟಿಗಟ್ಟಲೇ ವೆಚ್ಚದಲ್ಲಿ ಸಾಲ ಮಾಡಿಕೊಂಡಿದ್ದರು ಈ ಹಿನ್ನೆಲೆಯಲ್ಲಿ ಕೆಲವು ವರ್ಷಗಳ ಹಿಂದೆ ಇಂಗ್ಲೆಂಡಿಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದರು.

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು