AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾ ಜೊತೆ ಬಾಲಿ ಸುತ್ತಿ ಬಂದ ಆತ್ಮೀಯ ಗೆಳತಿ ಯಾರು? ಈಕೆಯ ಹಿನ್ನೆಲೆ ಏನು?

Samantha: ನಟಿ ಸಮಂತಾ ಇತ್ತೀಚೆಗಷ್ಟೆ ಬಾಲಿಯಲ್ಲಿ ಪ್ರವಾಸ ಮುಗಿಸಿ ಬಂದಿದ್ದಾರೆ. ಬಾಲಿಗೆ ಸಮಂತಾ ಜೊತೆ ಹೋಗಿದ್ದ ಆ ಗೆಳತಿ ಯಾರೆಂದು ಸ್ಯಾಮ್ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅಂದಹಾಗೆ ಯಾರು ಆ ಆತ್ಮೀಯ ಗೆಳತಿ?

ಸಮಂತಾ ಜೊತೆ ಬಾಲಿ ಸುತ್ತಿ ಬಂದ ಆತ್ಮೀಯ ಗೆಳತಿ ಯಾರು? ಈಕೆಯ ಹಿನ್ನೆಲೆ ಏನು?
ಸಮಂತಾ
ಮಂಜುನಾಥ ಸಿ.
|

Updated on:Aug 02, 2023 | 4:54 PM

Share

ನಟಿ ಸಮಂತಾ (Samantha) ಸದ್ಯಕ್ಕೆ ಸಿನಿಮಾಗಳಿಂದ ಬಿಡುವು ಪಡೆದಿದ್ದಾರೆ. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸುವ ಉದ್ದೇಶದಿಂದ ಬರೋಬ್ಬರಿ ಒಂದು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ಶೂಟಿಂಗ್​ ಮುಗಿಯುತ್ತಲೆ ಮೊದಲು ಕೊಯಂಬತ್ತೂರಿನ ಇಶಾ ಸೆಂಟರ್​ಗೆ (Isha Center) ಭೇಟಿ ನೀಡಿ ಸದ್ಗುರು ಮಾರ್ಗದರ್ಶನದಲ್ಲಿ ಯೋಗ, ಧ್ಯಾನ ಅಭ್ಯಾಸ ಮಾಡಿದ ಸಮಂತಾ ಅದರ ಬಳಿಕ ಹಾರಿದ್ದು ಬಾಲಿಗೆ. ಪ್ರಕೃತಿ ಮಧ್ಯೆ ಆರಾಮದಿಂದ ಸಮಂತಾ ಸಮಯ ಕಳೆದಿದ್ದಾರೆ. ಸಮಂತಾ ಒಬ್ಬರೇ ಬಾಲಿ ಪ್ರವಾಸಕ್ಕೆ ಹೋಗಿರಲಿಲ್ಲ ಜೊತೆಗೆ ಗೆಳತಿಯೊಬ್ಬರನ್ನು ಕರೆದೊಯ್ದಿದ್ದರು. ಆ ಗೆಳತಿ ಯಾರು ಎಂದು ಸಮಂತಾ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಸ್ವತಃ ಸಮಂತಾ ಹಿಂದೊಮ್ಮೆ ಹೇಳಿಕೊಂಡಿದ್ದಂತೆ, ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಗೆಳೆಯರು ಗೆಳತಿಯರು ಇದ್ದಾರಂತೆ ಆದರೆ ಅತ್ಯಂತ ಆತ್ಮೀಯ ಗೆಳೆಯರು ಇರುವುದು ಚಿತ್ರರಂಗದಿಂದ ಹೊರಗೆ. ಹಾಗೆಯೇ ಸಮಂತಾ ಜೊತೆಗೆ ಬಾಲಿ ಟ್ರಿಪ್​ಗೆ ಹೋದ ಯುವತಿ ಸಹ ಸಮಂತಾರ ಅತ್ಯಂತ ಆತ್ಮೀಯ ಗೆಳತಿ ಆದರೆ ಚಿತ್ರರಂಗದಿಂದ ತುಸು ಅಂತರ ಕಾಯ್ದುಕೊಂಡಿರುವ ಆದರೆ ಕಲೆಯಲ್ಲಿ ಆಸಕ್ತಿ, ಪ್ರಾವಿಣ್ಯತೆ ಪಡೆದಿರುವ ಅನುಷಾ ಸ್ವಾಮಿ.

ಅನುಷಾ ಸ್ವಾಮಿ ಬಹುಕಲಾ ಪ್ರವೀಣೆ. ಅತ್ಯುತ್ತಮ ಭರತ ನಾಟ್ಯ ನೃತ್ಯಗಾರ್ತಿ ಆಗಿರುವ ಅನುಷಾ ಸ್ವಾಮಿ, ಪೋಲ್ ಡ್ಯಾನ್ಸರ್ ಸಹ ಹೌದು. ಸ್ವತಃ ಒಂದು ಡ್ಯಾನ್ಸ್ ಸ್ಟುಡಿಯೋವನ್ನು ಅನುಷಾ ಸ್ವಾಮಿ ಹೊಂದಿದ್ದಾರೆ. ಅಲ್ಲಿ ಪೋಲ್ ಡ್ಯಾನ್ಸ್ ಸೇರಿದಂತೆ ಹಲವು ವಿಧದ ನೃತ್ಯ ಪ್ರಕಾರಗಳನ್ನು ಕಲಿಸಿಕೊಡಲಾಗುತ್ತದೆ. ನೃತ್ಯ ಮಾತ್ರವೇ ಅಲ್ಲದೆ ಫಿಟ್​ನೆಸ್​ ಸಹ ಅನುಷಾರ ಜೀವನದ ಅವಿಭಾಜ್ಯ ಅಂಗ. ದೇಹವನ್ನು ಹುರಿಗಟ್ಟಿಸಿಕೊಂಡು ಆ ಮೂಲಕ ಮನಸ್ಸನ್ನು ಗಟ್ಟಿಯಾಗಿರಿಸಿಕೊಂಡಿದ್ದಾರೆ ಅನುಷಾ.

ಇದನ್ನೂ ಓದಿ:Samantha: ಗೆಳತಿಯೊಟ್ಟಿಗೆ ಸಮಂತಾರ ಬಾಲಿ ಟ್ರಿಪ್:​ ಇಲ್ಲಿವೆ ಚಿತ್ರಗಳು

ಅನುಷಾ ಅತ್ಯುತ್ತಮ ಮೇಕಪ್​ ಕಲಾವಿದೆಯೂ ಹೌದು. ಹಲವು ಸೆಲೆಬ್ರಿಟಿಗಳ ಮೇಕಪ್ ಜೊತೆಗೆ ಕೆಲವು ಸಿನಿಮಾಗಳಿಗೂ ಮೇಕಪ್ ಕಲಾವಿದೆಯಾಗಿ ಕೆಲಸ ಮಾಡಿದ್ದಾರೆ. ಇವುಗಳ ಜೊತೆಗೆ ಪ್ರವಾಸ, ಹೈಕಿಂಗ್, ಟ್ರೆಕ್ಕಿಂಗ್ ಇನ್ನಿತರೆ ಸಾಹಸ ಕ್ರೀಡೆಗಳಲ್ಲಿಯೂ ಅನುಷಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೃತ್ಯ, ಫಿಟ್​ನೆಸ್ ಜೊತೆಗೆ ಕೆಲವು ಎನ್​ಜಿಓಗಳ ಜೊತೆಗೂ ಅನುಷಾ ಗುರುತಿಸಿಕೊಂಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೆಲಸ ಮಾಡುತ್ತಿರುವ ‘ಮಿಲಾಪ್’, ಪ್ರಕೃತಿ ಉಳಿವಿಗಾಗಿ ಕೆಲಸ ಮಾಡುತ್ತಿರುವ ಎನ್​ಜಿಓ ಜೊತೆಗೆ ಕೈಜೋಡಿಸಿದ್ದಾರೆ.

ಸ್ವತಃ ಫಿಟ್​ನೆಸ್ ಫ್ರೀಕ್ ಆಗಿರುವ ಹಾಗೂ ನಾರಿ ಶಕ್ತಿಯಲ್ಲಿ ವಿಶ್ವಾಸವಿಟ್ಟಿರುವ ಸಮಂತಾ ತಮ್ಮದೇ ಕನ್ನಡಿಯಂಥಹಾ ಗುಣಗಳನ್ನು ಹೊಂದಿರುವ ಅನುಷಾರಿಗೆ ಆಪ್ತ ಗೆಳಯರಾಗಿದ್ದಾರೆ. ಇಬ್ಬರೂ ಸಹ ಬಾಲಿ ಟ್ರಿಪ್​ನಲ್ಲಿ ಸಖತ್ ಮಜಾ ಮಾಡಿದ್ದಾರೆ. ಬಾಲಿ ಟ್ರಿಪ್​ನ ಬಹುತೇಕ ಸಮಯವನ್ನು ಪ್ರಕೃತಿ ಮಧ್ಯೆಯೇ ಕಳೆದಿದ್ದಾರೆ. ತಮ್ಮ ಟ್ರಿಪ್​ನ ಹಲವು ಚಿತ್ರಗಳು ಹಾಗೂ ವಿಡಿಯೋಗಳನ್ನು ಸಮಂತಾ ಹಾಗೂ ಅನುಷಾ ಸ್ವಾಮಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Wed, 2 August 23

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​