Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀದೇವಿಯನ್ನು ಗಾಢವಾಗಿ ಪ್ರೀತಿಸಿದ್ದರೂ ಮದುವೆಯಾಗಲಿಲ್ಲವೇಕೆ ರಜನೀಕಾಂತ್

Rajinikanth: ರಜನೀಕಾಂತ್ ಹಾಗೂ ಶ್ರೀದೇವಿ ಒಟ್ಟಿಗೆ 18 ಸಿನಿಮಾಗಳಲ್ಲಿ ನಟಿಸಿದ್ದರು. ರಜನೀಕಾಂತ್​ಗೆ ಶ್ರೀದೇವಿ ಮೇಲೆ ಬಹಳ ಪ್ರೀತಿಯಿತ್ತು. ಆದರೆ ಶ್ರೀದೇವಿಯನ್ನೇ ಮದುವೆ ಆಗುವೆ ಎಂದು ನಿರ್ಧಾರ ಸಹ ಮಾಡಿದ್ದರು. ಶ್ರೀದೇವಿಯ ತಾಯಿಯವರ ಬಗ್ಗೆ ಈ ಬಗ್ಗೆ ಮಾತುಕತೆ ಸಹ ಮಾಡಿದ್ದರಂತೆ. ಆದರೆ ಆ ಸಂದರ್ಭದಲ್ಲಿ ನಡೆದ ಒಂದು ಘಟನೆ ರಜನೀಕಾಂತ್ ಹಾಗೂ ಶ್ರೀದೇವಿಯನ್ನು ದೂರ ಮಾಡಿತು.

ಶ್ರೀದೇವಿಯನ್ನು ಗಾಢವಾಗಿ ಪ್ರೀತಿಸಿದ್ದರೂ ಮದುವೆಯಾಗಲಿಲ್ಲವೇಕೆ ರಜನೀಕಾಂತ್
Sridevi Rajinikanth
Follow us
ಮಂಜುನಾಥ ಸಿ.
|

Updated on: Mar 06, 2025 | 12:30 PM

ತಮಿಳು ಚಿತ್ರರಂಗದ (Kollywood) ಸೂಪರ್ ಹಿಟ್ ಜೋಡಿಗಳಲ್ಲಿ ರಜನೀಕಾಂತ್ (Rajinikanth) ಮತ್ತು ಶ್ರೀದೇವಿ (Sridevi) ಜೋಡಿ ಪ್ರಮುಖವಾದುದು. ಇಬ್ಬರೂ ಒಟ್ಟಿಗೆ ಬರೋಬ್ಬರಿ 18 ಸಿನಿಮಾಗಳಲ್ಲಿ ನಟಿಸಿದ್ದರು. ಎಲ್ಲವೂ ಬಹುತೇಕ ಸೂಪರ್ ಹಿಟ್. ಅಸಲಿಗೆ ಶ್ರೀದೇವಿ ಹಾಗೂ ರಜನೀಕಾಂತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಹುತೇಕ ಒಂದೇ ಸಮಯದಲ್ಲಿ. ಶ್ರಿದೇವಿ ಮೊದಲಿಗೆ ಬಾಲನಟಿಯಾಗಿ ನಟಿಸಿದ್ದರು, ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು 1976 ‘ಮೂಂಡ್ರು ಮದಿಚ್ಚು’ ಸಿನಿಮಾ ಮೂಲಕ. ರಜನೀಕಾಂತ್​ಗೆ ಅದು ನಾಲ್ಕನೇ ಸಿನಿಮಾ. ಆ ನಂತರ ಇಬ್ಬರೂ ಹಲವಾರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರು.

ರಜನೀಕಾಂತ್​ಗೆ ಶ್ರೀದೇವಿ ಮೇಲೆ ವಿಪರೀತ ಪ್ರೀತಿ ಇತ್ತು. ಶ್ರೀದೇವಿ ಇನ್ನೂ 16ನೇ ವಯಸ್ಸಿನಲ್ಲಿದ್ದಾಗಲೇ ರಜನೀಕಾಂತ್ ಶ್ರೀದೇವಿಯನ್ನು ವಿವಾಹವಾಗುವ ಆಲೋಚನೆ ಮಾಡಿದ್ದರು. ಶ್ರೀದೇವಿಯ ತಾಯಿಯ ಜೊತೆ ಆಪ್ತವಾಗಿದ್ದ ರಜನೀಕಾಂತ್, ಈ ಬಗ್ಗೆ ಅವರ ತಾಯಿಯ ಬಳಿಯೂ ಚರ್ಚಿಸಿದ್ದರು. ಶ್ರೀದೇವಿಯನ್ನೇ ಮದುವೆ ಆಗುವ ಆಲೋಚನೆಯಲ್ಲಿದ್ದ ರಜನೀಕಾಂತ್​ಗೆ, ಆ ಸಂದರ್ಭದಲ್ಲಿ ನಡೆದ ಒಂದು ಘಟನೆ ಮನಸ್ಸು ಬದಲಾಯಿಸುವಂತೆ ಮಾಡಿತು. ಶ್ರೀದೇವಿಗೂ ಸಹ ರಜನೀಕಾಂತ್ ಬಗ್ಗೆ ಪ್ರೀತಿ ಇತ್ತು. ಒಮ್ಮೆ ಶೂಟಿಂಗ್ ಸಮಯದಲ್ಲಿ ರಜನೀಕಾಂತ್​ಗೆ ಅನಾರೋಗ್ಯವಾದಾಗ ಅವರು ಬೇಗ ಗುಣಮುಖವಾಗಲೆಂದು ಏಳು ದಿನ ಉಪವಾಸ ಸಹ ಮಾಡಿದ್ದರಂತೆ ಶ್ರೀದೇವಿ.

ಇದನ್ನೂ ಓದಿ:ಕೋಟಿಲಿಂಗೇಶ್ವರಕ್ಕೂ ರಜನೀಕಾಂತ್-ಕಮಲ್ ಹಾಸನ್​ಗೂ ಇದೆ ನಂಟು: ವಿಡಿಯೋ

ಇದನ್ನೂ ಓದಿ
Image
ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ
Image
ಮಹೇಶ್ ಬಾಬು ಜೊತೆ ನಟಿಸಿದರೂ ಸಿಗದ ಅದೃಷ್ಟ; ಈಗ ಗೂಗಲ್​ನಲ್ಲಿ ಕೆಲಸ
Image
‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು ಬರೋಬ್ಬರಿ 15 ಕೆಜಿ ಚಿನ್ನ
Image
ಪುಡಿರೌಡಿ ತರ ಆಡೋದು ಬಿಡಿ, ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಕೌಂಟರ್

ಒಮ್ಮೆ ರಜನೀಕಾಂತ್, ಶ್ರೀದೇವಿಯ ಹೊಸ ಮನೆಯ ಗೃಹ ಪ್ರವೇಶಕ್ಕೆಂದು ಹೋದರು. ಶೂಟಿಂಗ್ ಮುಗಿಸಿ ತುಸು ತಡವಾಗಿ ಶ್ರೀದೇವಿಯ ಮನೆಗೆ ರಜನೀಕಾಂತ್ ಹೋದರು. ರಜನೀಕಾಂತ್, ಶ್ರೀದೇವಿಯ ಹೊಸ ಮನೆಗೆ ಕಾಲಿಟ್ಟ ಕೂಡಲೇ ಕರೆಂಟ್ ಹೊರಟು ಹೋಯ್ತು. ಇಡೀ ಮನೆಯನ್ನು ಕತ್ತಲು ಆವರಿಸಿತು. ಧಾರ್ಮಿಕ ಜೀವಿ ಆಗಿದ್ದ ರಜನೀಕಾಂತ್​ಗೆ ಇದು ಅಪಶಕುನ ಎನಿಸಿತು. ಈ ಒಂದೇ ಕಾರಣಕ್ಕೆ ಅವರು ಶ್ರೀದೇವಿಯಿಂದ ದೂರಾದರಂತೆ. ಈ ವಿಷಯವನ್ನು ರಜನೀಕಾಂತ್​ರ ಗುರು ಕೆ ಬಾಲಚಂದರ್ ಹೇಳಿದ್ದರು.

ಆ ನಂತರ ರಜನೀಕಾಂತ್, ಲತಾ ಅವರನ್ನು ವಿವಾಹವಾದರು. ಶ್ರೀದೇವಿ, ಆ ಬಳಿಕ ಬಾಲಿವುಡ್​ನಲ್ಲಿ ಬ್ಯುಸಿಯಾದರು. ಅಲ್ಲಿ ಅವರು ನಟ ಮಿಥುನ್ ಚಕ್ರವರ್ತಿಯವರನ್ನು ಬಹುವಾಗಿ ಪ್ರೀತಿಸಿದ್ದರು. ಆದರೆ ಮಿಥುನ್ ಚಕ್ರವರ್ತಿ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಲು ಒಪ್ಪದ ಕಾರಣ ಶ್ರೀದೇವಿ ಆಘಾತಕ್ಕೆ ಒಳಗಾದರು. ಆಗ ತೀವ್ರ ಖಿನ್ನತೆ ಅನುಭವಿಸಿದ್ದರಂತೆ ಶ್ರೀದೇವಿ. ಅದಾದ ಬಳಿಕ ನಿರ್ಮಾಪಕ ಬೋನಿ ಕಪೂರ್, ಶ್ರೀದೇವಿಯನ್ನು ಪ್ರೀತಿಸಿ ವಿವಾಹವಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
Shani Sanchara 2025: ಶನಿ ಸಂಚಾರ ರಾಶಿ ಭವಿಷ್ಯ, ಲೈವ್ ವೀಕ್ಷಿಸಿ
Shani Sanchara 2025: ಶನಿ ಸಂಚಾರ ರಾಶಿ ಭವಿಷ್ಯ, ಲೈವ್ ವೀಕ್ಷಿಸಿ