AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಪ್ರಚಾರದಲ್ಲಿ ವಿಳಂಬ ಏಕೆ? ಯಶ್ ಮಾಡುತ್ತಿರುವ ಯೋಜನೆಯೇನು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದ್ದು, ಪ್ರಚಾರದಲ್ಲಿ ಆಗುತ್ತಿರುವ ವಿಳಂಬ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ರಾಜಮೌಳಿಯಂತಹ ನಿರ್ದೇಶಕರು ಬಿಡುಗಡೆಗೆ ವರ್ಷವಿರುವಾಗಲೇ ಪ್ರಚಾರ ಶುರು ಮಾಡಿದ್ದರೆ, ಯಶ್ ಮಾತ್ರ ಸೈಲೆಂಟ್ ಆಗಿ ವಿಎಫ್‌ಎಕ್ಸ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇದು ‘ಟಾಕ್ಸಿಕ್’ ಸಿನಿಮಾದ ಮೇಲೆ ಪ್ರಭಾವ ಬೀರುತ್ತದೆಯೇ?

'ಟಾಕ್ಸಿಕ್' ಪ್ರಚಾರದಲ್ಲಿ ವಿಳಂಬ ಏಕೆ? ಯಶ್ ಮಾಡುತ್ತಿರುವ ಯೋಜನೆಯೇನು?
Toxic Movie
ಮಂಜುನಾಥ ಸಿ.
|

Updated on: Feb 05, 2026 | 5:39 PM

Share

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾ ಸದ್ಯ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ‘ಕೆಜಿಎಫ್’ ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ ಯಶ್ ನಟಿಸುತ್ತಿರುವ ಚಿತ್ರವಾದ್ದರಿಂದ ಸಹಜವಾಗಿಯೇ ಕುತೂಹಲ ಗಗನಕ್ಕೇರಿದೆ. ಚಿತ್ರದ ಬಿಡುಗಡೆಗೆ ಮಾರ್ಚ್ 19 ಕ್ಕೆ ನಿಗದಿ ಆಗಿದೆ. ಬಿಡುಗಡೆಗೆ ಇನ್ನು ಕೇವಲ ಒಂದು ತಿಂಗಳು ಬಾಕಿ ಇದ್ದರೂ ದೊಡ್ಡ ಮಟ್ಟದ ಪ್ರಚಾರ ಶುರುವಾಗದಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಸಾಮಾನ್ಯವಾಗಿ ಇಷ್ಟು ದೊಡ್ಡ ಬಜೆಟ್‌ನ ಪ್ಯಾನ್-ಇಂಡಿಯಾ ಚಿತ್ರಗಳಿಗೆ ಹಲವು ತಿಂಗಳುಗಳ ಮೊದಲೇ ಪ್ರಚಾರ ಆರಂಭವಾಗುತ್ತದೆ. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆದರೆ ಈಗಲೇ ಸಿನಿಮಾದ ಪ್ರಚಾರವನ್ನು ರಾಜಮೌಳಿ ಆರಂಭಿಸಿಬಿಟ್ಟಿದ್ದಾರೆ. ಯಶ್ ಸಹ ಪ್ರಚಾರವನ್ನು ಗಂಭೀರವಾಗಿ ಪರಿಗಣಿಸುವ ನಟ, ಏಕೆಂದರೆ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾ ಸಂದರ್ಭದಲ್ಲಿ ದೇಶದಾದ್ಯಂತ ಸಂಚರಿಸಿ ಸಿನಿಮಾ ಪ್ರಚಾರನ್ನು ಏಕಾಂಗಿಯಾಗಿ ಮಾಡಿದ್ದರು. ಆದರೆ ಯಶ್ ಈ ಬಾರಿ ಬೇರೆಯದೇ ತಂತ್ರ ಅನುಸರಿಸುತ್ತಿರುವ ಅನುಮಾನವಿದೆ.

ಟಾಕ್ಸಿಕ್ ಚಿತ್ರವನ್ನು ಹಾಲಿವುಡ್ ಗುಣಮಟ್ಟದಲ್ಲಿ ನಿರ್ಮಿಸಲಾಗುತ್ತಿದ್ದು, ಅಂತಿಮ ಹಂತದ ಎಡಿಟಿಂಗ್ ಹಾಗೂ ವಿಎಫ್‌ಎಕ್ಸ್ (VFX) ಕೆಲಸಗಳು ಪ್ರಚಾರಕ್ಕಿಂತ ಹೆಚ್ಚು ಸಮಯ ಪಡೆದುಕೊಳ್ಳುತ್ತಿವೆ ಎನ್ನಲಾಗುತ್ತಿದೆ. ಸಿನಿಮಾದ ಪ್ರಚಾರ ತಡವಾಗಲು ಇದೂ ಸಹ ಕಾರಣ ಇರಬಹುದು. ಸಿನಿಮಾದ ಪ್ರಚಾರದ ಹೆಸರಲ್ಲಿ ಈ ವರೆಗೆ ಕೇವಲ ಒಂದು ಟೀಸರ್ ಮತ್ತು ಸಿನಿಮಾದ ನಟಿಯರ ಕ್ಯಾರೆಕ್ಟರ್ ಪೋಸ್ಟರ್​​ಗಳನ್ನು ಮಾತ್ರವೇ ಬಿಡುಗಡೆ ಮಾಡಲಾಗಿದೆ. ಯಶ್ ಅಥವಾ ಚಿತ್ರತಂಡದ ಯಾರೊಬ್ಬರು ಬಹಿರಂಗವಾಗಿ ಪ್ರಚಾರವನ್ನು ಆರಂಭಿಸಿಯೇ ಇಲ್ಲ.

ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾಗೆ ಯಶ್ ಮೇಲೆ ಯಾಕಿಷ್ಟು ಕೋಪ?

ಯಶ್ ಯಾವಾಗಲೂ ‘ಸರ್ಪ್ರೈಸ್’ ನೀಡುವಲ್ಲಿ ನಿಸ್ಸೀಮರು. ಜನವರಿಯಲ್ಲಿ ಬಿಡುಗಡೆಯಾದ ‘ರಾಯ’ನ ಪಾತ್ರದ ಪರಿಚಯ ಈಗಾಗಲೇ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಪ್ರಚಾರವನ್ನು ಕೊನೆಯ ಕ್ಷಣದಲ್ಲಿ ಅಬ್ಬರದಿಂದ ಮಾಡುವ ಮೂಲಕ ಹೈಪ್ ಅನ್ನು ನೇರವಾಗಿ ಥಿಯೇಟರ್‌ಗೆ ಕೊಂಡೊಯ್ಯುವ ಪ್ಲಾನ್ ಸಹ ಯಶ್ ಅವರದ್ದಾಗಿರುವ ಸಾಧ್ಯತೆ ಇದೆ. ‘ಕೆಜಿಎಫ್’ ಸಮಯಕ್ಕಿಂತಲೂ ಭಿನ್ನವಾಗಿ ಈ ಬಾರಿ ಪ್ರಚಾರ ಮಾಡುವ ಯೋಜನೆ ಯಶ್ ಅವರಿಗೆ ಇದ್ದಂತಿದೆ.

ಇಂದಿನ ದಿನಗಳಲ್ಲಿ ಪ್ರಚಾರವು ಸಿನಿಮಾದ ಓಪನಿಂಗ್‌ಗೆ ಬಹಳ ಮುಖ್ಯ. ಉತ್ತಮ ಪ್ರಚಾರದಿಂದ ಉತ್ತಮ ಓಪನಿಂಗ್ ಸಿಗುತ್ತದೆ ಎಂಬುದು ಸಿನಿಮಾ ರಂಗದಲ್ಲಿ ಇರುವ ನಂಬಿಕೆ. ಆದರೆ, ಯಶ್ ಅವರ ಬ್ರ್ಯಾಂಡ್ ವ್ಯಾಲ್ಯೂ ಮತ್ತು ‘ಕೆಜಿಎಫ್’ ನಂತರದ ಅವರ ವರ್ಚಸ್ಸು ಜನರನ್ನು ಥಿಯೇಟರ್‌ಗೆ ಸೆಳೆಯಲು ಶಕ್ತವಾಗಿದೆ. ಮುಂದಿನ ದಿನಗಳಲ್ಲಿ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದ್ದು, ಟ್ರೈಲರ್ ಬಿಡುಗಡೆ ಬಳಿಕ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿದೆ.

ಪ್ರಚಾರದಲ್ಲಿ ಆಗುತ್ತಿರುವ ವಿಳಂಬ ಯಶ್ ಅಭಿಮಾನಿಗಳಿಗೆ ಸ್ವಲ್ಪ ಆತಂಕ ತಂದಿದ್ದರೂ, ಯಶ್ ಅವರು ಯಾವಾಗಲೂ ಗುಣಮಟ್ಟಕ್ಕೆ ಆದ್ಯತೆ ನೀಡುವುದರಿಂದ ‘ಟಾಕ್ಸಿಕ್’ ಪ್ರಚಾರವೂ ಸಹ ಪರಿಣಾಮಕಾರಿ ಮತ್ತು ಸ್ಟೈಲಿಷ್ ಆಗಿಯೇ ಆಗಲಿದೆ ಎಂಬುದು ನಿರೀಕ್ಷೆ. ಮಾರ್ಚ್ 19ರ ಯುಗಾದಿ ಹಬ್ಬದಂದು ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರು ಚಾಲಕನ ಮೇಲೆ ಬೈಕ್​​ ಸವಾರನ ದರ್ಪ: ಮಿರರ್​​ ಮುರಿದಿದ್ದಲ್ಲದೆ ನಿಂದನೆ
ಕಾರು ಚಾಲಕನ ಮೇಲೆ ಬೈಕ್​​ ಸವಾರನ ದರ್ಪ: ಮಿರರ್​​ ಮುರಿದಿದ್ದಲ್ಲದೆ ನಿಂದನೆ
ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಕುಡಿಯಲು ಕೊಳಚೆ ನೀರೇ ಗತಿ!
ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಕುಡಿಯಲು ಕೊಳಚೆ ನೀರೇ ಗತಿ!
ಇಬ್ಬಲೂರು ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಹೊಸ ಫ್ಲೈಓವರ್
ಇಬ್ಬಲೂರು ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಹೊಸ ಫ್ಲೈಓವರ್
ಅಕ್ರಮ ವಲಸಿಗರಿಗೆ ನಡುಕ ಶುರು: ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ
ಅಕ್ರಮ ವಲಸಿಗರಿಗೆ ನಡುಕ ಶುರು: ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ
ಬಯಲಾಯ್ತು ಕಲಬುರಗಿ ಆರ್​ಟಿಒ ಕಚೇರಿ ಬ್ರಹ್ಮಾಂಡ ಭ್ರಷ್ಟಾಚಾರ
ಬಯಲಾಯ್ತು ಕಲಬುರಗಿ ಆರ್​ಟಿಒ ಕಚೇರಿ ಬ್ರಹ್ಮಾಂಡ ಭ್ರಷ್ಟಾಚಾರ
‘ಧುರಂಧರ್​ಗಿಂತ ಸೀಕ್ವೆಲ್ ಇನ್ನೂ ಪವರ್​​ಫುಲ್; ಯಾಮಿ ಗೌತಮ್
‘ಧುರಂಧರ್​ಗಿಂತ ಸೀಕ್ವೆಲ್ ಇನ್ನೂ ಪವರ್​​ಫುಲ್; ಯಾಮಿ ಗೌತಮ್
Video: ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್​​​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್​​​ಪ್ರೆಸ್ ರೈಲು
ದತ್ತಪೀಠದಲ್ಲಿ ಹೊಸ ವಿವಾದ: ಕಲಮೆ ತಯ್ಯಬಾಗೆ ಹಿಂದೂ ಸಂಘಟನೆಗಳ ಆಕ್ರೋಶ
ದತ್ತಪೀಠದಲ್ಲಿ ಹೊಸ ವಿವಾದ: ಕಲಮೆ ತಯ್ಯಬಾಗೆ ಹಿಂದೂ ಸಂಘಟನೆಗಳ ಆಕ್ರೋಶ
ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡೇ ಮಾಯಕ್ಕಾ ದೇವಿ ದರ್ಶನ!
ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡೇ ಮಾಯಕ್ಕಾ ದೇವಿ ದರ್ಶನ!
ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಆರಂಭಿಕ ಜೋಡಿ ಕನ್ಫರ್ಮ್
ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಆರಂಭಿಕ ಜೋಡಿ ಕನ್ಫರ್ಮ್