AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಯ ಕೈಚಳಕದಲಿ ಅರಳಿತು ಯಶ್​ ಫ್ಯಾಮಿಲಿ ಚಿತ್ರ: ಪೆಂಟಿಂಗ್​​​ ಕಂಡು ರಾಕಿ ಬಾಯ್ ಫಿದಾ ​​                 ​   

ಕಲಾವಿದರಾದ ಕೃಷ್ಣ ಅವರು ಯಶ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಕೈಚಳಕದಲ್ಲಿ ಯಶ್​ ಅವರ ಮುದ್ದಾದ ಫ್ಯಾಮಿಲಿ ಚಿತ್ರ ಅರಳಿದೆ. 

ಅಭಿಮಾನಿಯ ಕೈಚಳಕದಲಿ ಅರಳಿತು ಯಶ್​ ಫ್ಯಾಮಿಲಿ ಚಿತ್ರ: ಪೆಂಟಿಂಗ್​​​ ಕಂಡು ರಾಕಿ ಬಾಯ್ ಫಿದಾ ​​                 ​   
ನಟ ಯಶ್​, ಕಲಾವಿದ ಕೃಷ್ಣ
TV9 Web
| Edited By: |

Updated on:Nov 26, 2022 | 8:22 PM

Share

ನಟ ರಾಕಿಂಗ್​ ಸ್ಟಾರ್​​ ಯಶ್ (Yash) ಅವರ ‘ಕೆಜಿಎಫ್​ 2’ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗೆಲುವು ಕಂಡಿದೆ. ಸದ್ಯ ಬೇರೆ ಬೇರೆ ರೀತಿಯ ಸ್ಕ್ರಿಪ್ಟ್​ಗಳನ್ನು ಕೇಳುವುದರಲ್ಲಿ ಯಶ್​ ಬ್ಯುಸಿ ಆಗಿದ್ದಾರೆ. ಜೊತೆಗೆ ತಮ್ಮ ಕುಟುಂಬದವರೊಂದಿಗೂ ಅವರು ಕಾಲ ಕಳೆಯುತ್ತಿದ್ದಾರೆ. ಆದರೆ ಸಿನಿಮಾ ವಿಚಾರವಾಗಿ ಇಲ್ಲಿಯವರೆಗೂ ಯಾವುದೇ ರೀತಿಯ ಮಾಹಿತಿ ಬಿಟ್ಟಿಕೊಟ್ಟಿಲ್ಲ ನಟ ಯಶ್. ಅವರ ಮುಂದಿನ ಚಿತ್ರ ಯಾವುದು? ಚಿತ್ರದ ನಿರ್ದೇಶಕರು ಯಾರು? ಯಾವ ರೀತಿಯ ಸ್ಕ್ರಿಪ್ಟ್​ನ್ನು ಈ ಸಲ ಆಯ್ಕೆ ಮಾಡಿಕೊಳ್ಳುತ್ತಾರೆ ಹೀಗೆ ನೂರಾರು ಪ್ರಶ್ನೆಗಳು ಅವರ ಫ್ಯಾನ್ಸ್​​ ಕೇಳುತ್ತಿದ್ದಾರೆ. ತಮ್ಮ ನೆಚ್ಚಿನ ನಟರಿಗಾಗಿ ಏನು ಬೇಕಾದರು ಮಾಡಲು ಅಭಿಮಾನಿಗಳು ಸಿದ್ಧರಿರುತ್ತಾರೆ. ಒಂದು ಚಿತ್ರದ ಬಿಡುಗಡೆಯಿಂದ ಹಿಡಿದು ಕಟೌಟ್​, ಹಾಲಿನ ಅಭಿಷೇಕ, ಊಟದ ವ್ಯವಸ್ಥೆ ಕೊನೆಗೆ ಚಿತ್ರವನ್ನು ಗೆಲ್ಲಿಸುವವರು ಅವರೇ.

‘ಕೆಜೆಎಫ್​ 2’ ಚಿತ್ರ ಬಿಡುಗಡೆಯಾದಾಗ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಲು ಸುಮಾರು 20,700 ಪುಸ್ತಕಗಳನ್ನು ಬಳಸಿ ಯಶ್​​ ಅವರ ಬೃಹತ್ ಮೊಸಾಯಿಕ್ ಭಾವಚಿತ್ರ ರಚಿಸಿ ವಿಶ್ವ ದಾಖಲೆ ಬರೆದಿದ್ದರು. ಅದೇ ರೀತಿಯಾಗಿ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಟ ಯಶ್ ಅವರಿಗೆ ಸಖತ್​ ಗಿಫ್ಟ್​ ಒಂದನ್ನು ನೀಡಿದ್ದಾರೆ. ಝಾರ್ಖಂಡ್​ ಮೂಲದ ಕಲಾವಿದರಾದ ಕೃಷ್ಣ ಅವರು ಯಶ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಕೈಯಿಂದ ಯಶ್​ ಅವರ ಮುದ್ದಾದ ಫ್ಯಾಮಿಲಿ ಚಿತ್ರ ಅರಳಿದೆ.

View this post on Instagram

A post shared by Krish (@fly_pen_official)

ಅಭಿಮಾನಿ ಕೃಷ್ಣ ಅವರು ಯಶ್​, ರಾಧಿಕಾ ಪಂಡಿತ ಮತ್ತು ಮಕ್ಕಳಾದ ಆಯ್ರಾ, ಯಥರ್ವ್ ಒಟ್ಟಿಗೆ ಒಂದೇ ಫ್ರೇಮ್​ನಲ್ಲಿ ಚಿತ್ರಿಸಿದ್ದಾರೆ. ಜೊತೆಗೆ ಈ ಪೆಂಟಿಂಗ್​​ನ್ನು ಯಶ್​ ಮತ್ತು ರಾಧಿಕಾ ದಂಪತಿ ಅವರನ್ನು ಭೇಟಿ ಮಾಡಿ ನೀಡಿದ್ದಾರೆ. ಈ ವಿಚಾರವನ್ನು ಕೃಷ್ಣ ಅವರು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಲಾವಿದ ಕೃಷ್ಣ ಅವರು ಯಶ್ ಅವರ ಕುಟುಂಬದ ಮುದ್ದಾದ ಪೆಂಟಿಂಗ್​​ನ್ನು ತುಂಬಾ ಎಂಜಾಯ್​ ಮಾಡಿಕೊಂಡು ಬರೆದಿದ್ದಾರಂತೆ. ನಟ ಯಶ್​ ಅವರು ಚಿತ್ರವನ್ನು ಪಡೆದುಕೊಂಡು ಕಲಾವಿದ ಕೃಷ್ಣ ಅವರನ್ನು ಮಾತನಾಡಿಸಿದ್ದು, ‘ಚಿತ್ರ ತುಂಬಾನೇ ಚೆನ್ನಾಗಿದೆ. ನನಗೆ ಇಷ್ಟವಾಯಿತು ಧನ್ಯವಾದ’ ಎಂದು ಹೇಳಿದ್ದಾರೆ. ಜೊತೆಗೆ ಕಲಾವಿದ ಕೃಷ್ಣ ಅವರ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಕೃಷ್ಣ ಅವರು ಬಿಡಿಸಿರುವ ಈ ಚಿತ್ರ ಎಲ್ಲೆಡೆ ವೈರಲ್​ ಆಗುತ್ತಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:21 pm, Sat, 26 November 22

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು