Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಟಿ ಒಡೆಯುವುದನ್ನು ತಡೆಯಲು ಈ ರೀತಿ ಮಾಡಿ

ಒಣಗಿದ ಮತ್ತು ಬಿರುಕುಬಿಟ್ಟ ತುಟಿಯ ನೋವು ಸಾಮಾನ್ಯವಾಗಿ ಎಲ್ಲರ ಅನುಭವಕ್ಕೆ ಬಂದಿರುತ್ತದೆ. ಇದು ತುಟಿ ಕೆಂಪಾಗುವುದು, ಊತ, ಕೆರೆತ, ಉರಿ ಮತ್ತು ಚುಚ್ಚಿದಂತಹ ಸಂವೇದನೆಯನ್ನು ಒಳಗೊಂಡಿರುತ್ತದೆ. ಜೊತೆಗೆ ಒಣ ತುಟಿಗಳಿಂದ ಕೆಲವೊಮ್ಮೆ ರಕ್ತವು ಕೂಡ ಸುರಿಯುವ ಅಪಾಯವಿರುತ್ತದೆ. ಇಂತಹ ಸಮಯದಲ್ಲಿ ಇವುಗಳನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇದರಿಂದ ನೋವು, ತುರಿಕೆ ಹೆಚ್ಚಾಗಬಹುದು. ಹಾಗಾದರೆ ನಮ್ಮ ತುಟಿ ಒಡೆಯಲು ಪ್ರಮುಖ ಕಾರಣವೇನು? ಆದರೆ ಇದನ್ನು ತಡೆಯುವುದು ಹೇಗೆ? ಇದಕ್ಕೆ ಪರಿಹಾರವೇನು? ಇಲ್ಲಿದೆ ಮಾಹಿತಿ.

ತುಟಿ ಒಡೆಯುವುದನ್ನು ತಡೆಯಲು ಈ ರೀತಿ ಮಾಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 29, 2025 | 5:18 PM

ಒಡೆದ ತುಟಿ ಕಿರಿಕಿರಿ ಉಂಟು ಮಾಡುವುದು ಸಹಜ. ಅದರಲ್ಲಿಯೂ ಚಳಿಗಾಲದಲ್ಲಿ ಈ ಸಮಸ್ಯೆ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ತಡೆಯಲು ಕೆಲವು ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯ. ಒಣಗಿದ ಮತ್ತು ಬಿರುಕುಬಿಟ್ಟ ತುಟಿಯ ನೋವು ಸಾಮಾನ್ಯವಾಗಿ ಎಲ್ಲರ ಅನುಭವಕ್ಕೆ ಬಂದಿರುತ್ತದೆ. ಇದು ತುಟಿ ಕೆಂಪಾಗುವುದು, ಊತ, ಕೆರೆತ, ಉರಿ ಮತ್ತು ಚುಚ್ಚಿದಂತಹ ಸಂವೇದನೆಯನ್ನು ಒಳಗೊಂಡಿರುತ್ತದೆ. ಜೊತೆಗೆ ಒಣ ತುಟಿಗಳಿಂದ ಕೆಲವೊಮ್ಮೆ ರಕ್ತವೂ ಕೂಡ ಸುರಿಯುವ ಅಪಾಯವಿರುತ್ತದೆ. ಇಂತಹ ಸಮಯದಲ್ಲಿ ಇವುಗಳನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇದರಿಂದ ನೋವು, ತುರಿಕೆ ಹೆಚ್ಚಾಗಬಹುದು. ಹಾಗಾದರೆ ನಮ್ಮ ತುಟಿ ಒಡೆಯಲು ಪ್ರಮುಖ ಕಾರಣವೇನು? ಇದನ್ನು ತಡೆಯುವುದು ಹೇಗೆ? ಇದಕ್ಕೆ ಪರಿಹಾರವೇನು? ಇಲ್ಲಿದೆ ಮಾಹಿತಿ.

ತುಟಿ ಒಡೆಯುವುದಕ್ಕೆ ಮುಖ್ಯ ಕಾರಣವೇನು?

ಎಣ್ಣೆ ಗ್ರಂಥಿಗಳ ಕೊರತೆಯಿಂದಾಗಿ ತುಟಿಗಳು ಸುಲಭವಾಗಿ ಒಣಗುತ್ತವೆ. ಅಲ್ಲದೆ ಚಳಿ ಮತ್ತು ಒಣಗಿದ ಹವಾಮಾನದಿಂದ ತುಟಿ ಒಡೆಯುತ್ತದೆ. ಜೊತೆಗೆ ಸೂರ್ಯನ ಬಿಸಿಲಿಗೆ ಮುಖವನ್ನು ಹೆಚ್ಚಾಗಿ ಒಡ್ಡಿಕೊಳ್ಳುವುದು, ಥೈರಾಯ್ಡ್ ಅಸಮತೋಲನ, ಚರ್ಮದ ಅಲರ್ಜಿ ಅಥವಾ ವಿಟಮಿನ್ ಬಿ ಕಾಂಪ್ಲೆಕ್ಸ್ ನ ಕೊರತೆಯಂತಹ ಚಯಾಪಚಯ ಸಮಸ್ಯೆಗಳು ಇದಕ್ಕೆ ಕಾರಣವಾಗಬಹುದು. ಜೊತೆಗೆ ನಿಮಗೆ ತುಟಿಯನ್ನು ನಾಲಿಗೆಯಿಂದ ಪದೇ ಪದೇ ಸ್ಪರ್ಶಿಸುವ, ಕಚ್ಚುವ ಅಭ್ಯಾಸಗಳಿಂದಲೂ ತುಟಿ ಒಡೆದಂತಹ ಸಮಸ್ಯೆ ಬರಬಹುದು. ನೀವು ಬಳಸುವ ಕಾಸ್ಮೆಟಿಕ್ಸ್ ಗಳು, ಅಥವಾ ಸೇವನೆ ಮಾಡುವ ಆಹಾರಗಳಿಂದಲೂ ಉಂಟಾಗಬಹುದು.

ಇದನ್ನೂ ಓದಿ: ಪುರುಷರಲ್ಲಿ ಈ ಲಕ್ಷಣಗಳು ಕಂಡುಬಂದರೆ ಎಂದಿಗೂ ನಿರ್ಲಕ್ಷಿಸಬೇಡಿ

ತುಟಿ ಒಡೆಯುವುದನ್ನು ತಡೆಯುವುದು ಹೇಗೆ?

ಸಾಮಾನ್ಯವಾಗಿ ತುಟಿ ಒಡೆಯುವುದನ್ನು ತಡೆಯಲು ಅಥವಾ ಒಣಗಿದ ಅನುಭವ ಆಗದಿರಲು ನಿಮ್ಮ ತುಟಿಯನ್ನು ತೇವಾಂಶದಿಂದಿರುವಂತೆ ನೋಡಿಕೊಳ್ಳಿ. ಆಯಿಂಟ್ ಮೆಂಟ್ ಗಳಿಗೆ ಬದಲಾಗಿ ಕೊಬ್ಬರಿ ಅಥವಾ ಬಾದಾಮಿ ಎಣ್ಣೆಯನ್ನು ಬಳಕೆ ಮಾಡಬಹುದು. ಜೊತೆಗೆ ಸಮಯ ಸಿಕ್ಕಾಗಲೆಲ್ಲಾ ಮಾಯಿಶ್ಚರೈಸರ್ ಹಚ್ಚುವುದು ಒಳ್ಳೆಯದು. ಅದರಂತೆ ನೀವು ಪರಿಮಳ ರಹಿತ ಎಮೋಲಿಯೆಂಟ್ ಗಳಿಂದ ನಿಮ್ಮ ತುಟಿಯನ್ನು ತೇವವಾಗಿಡಬಹುದು. ಅದಲ್ಲದೆ ರಾತ್ರಿ ಮಲಗುವ ಮುನ್ನ ನಿಮ್ಮ ತುಟಿಗಳಿಗೆ ಎಣ್ಣೆ ಅಥವಾ ಲಿಪ್ ಬಾಮ್ ಬಳಸುವುದನ್ನು ಮರೆಯಬೇಡಿ. ಇದೆಲ್ಲದರ ಜೊತೆಗೆ ತುಟಿ ಆದಷ್ಟು ತೇವದಿಂದಿರುವಂತೆ ನೋಡಿಕೊಳ್ಳಿ, ಹೆಚ್ಚಾಗಿ ನೀರು ಕುಡಿಯಿರಿ. ಇದರಿಂದ ತುಟಿ ಚೆಂದವಾಗಿರುವುದಲ್ಲದೆ ಆರೋಗ್ಯದಿಂದ ಕೂಡಿರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!