AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dry ginger vs fresh ginger: ಒಣ ಶುಂಠಿ ಮತ್ತು ತಾಜಾ ಶುಂಠಿ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?

ಚಹಾದ ಹೊರತಾಗಿ, ಶುಂಠಿ ಅನೇಕ ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ವಾಕರಿಕೆ, ಜೀರ್ಣಕಾರಿ ಸಮಸ್ಯೆಗಳು ಮತ್ತು ಶೀತ ಮತ್ತು ಕೆಮ್ಮಿನಂತಹ ಸಾಮಾನ್ಯ ಕಾಲೋಚಿತ ಜ್ವರದ ರೋಗಲಕ್ಷಣಗಳಿಗೆ ಪರಿಹಾರವನ್ನು ನೀಡುತ್ತದೆ. ಆದರೆ ಈ ಬಗ್ಗೆ ಸಾಮಾನ್ಯವಾಗಿ ಮೂಡುವ ಪ್ರಶ್ನೆಯೆಂದರೆ ಯಾವ ಶುಂಠಿಯನ್ನು ಬಳಸುವುದು ಉತ್ತಮ? ಒಣ ಅಥವಾ ತಾಜಾ(ಹಸಿ)? ಒಣ ಶುಂಠಿ ಮತ್ತು ತಾಜಾ ಅಥವಾ ಹಸಿ ಶುಂಠಿ ಎರಡೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆಯಾದರೂ, ಯಾವುದು ಉತ್ತಮ ಎಂದು ತಿಳಿಯಲು ತಜ್ಞರು ಕೆಲವು ಸಲಹೆಯನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

Dry ginger vs fresh ginger: ಒಣ ಶುಂಠಿ ಮತ್ತು ತಾಜಾ ಶುಂಠಿ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on:Nov 17, 2023 | 12:28 PM

Share

ಭಾರತದ ಕೆಲವು ಮನೆಗಳಲ್ಲಿ ಶುಂಠಿ (ginger) ಇಲ್ಲದೆ ಚಹಾ ಅಪೂರ್ಣವಾಗಿರುತ್ತದೆ. ಇದು ಸೂಕ್ಷ್ಮವಾದ ಮಸಾಲೆ ಅಂಶ ಮತ್ತು ಉತ್ತೇಜಕ ಪರಿಮಳವನ್ನು ನೀಡುತ್ತದೆ. ಚಹಾದ ಹೊರತಾಗಿ, ಶುಂಠಿ ಅನೇಕ ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ವಾಕರಿಕೆ, ಜೀರ್ಣಕಾರಿ ಸಮಸ್ಯೆಗಳು ಮತ್ತು ಶೀತ ಮತ್ತು ಕೆಮ್ಮಿನಂತಹ ಸಾಮಾನ್ಯ ಕಾಲೋಚಿತ ಜ್ವರದ ರೋಗಲಕ್ಷಣಗಳಿಗೆ ಪರಿಹಾರವನ್ನು ನೀಡುತ್ತದೆ. ಆದರೆ ಈ ಬಗ್ಗೆ ಸಾಮಾನ್ಯವಾಗಿ ಮೂಡುವ ಪ್ರಶ್ನೆಯೆಂದರೆ ಯಾವ ರೀತಿಯ ಶುಂಠಿಯನ್ನು ಬಳಸುವುದು ಉತ್ತಮ? ಒಣ ಅಥವಾ ತಾಜಾ(ಹಸಿ)? ಒಣ ಶುಂಠಿ ಮತ್ತು ತಾಜಾ ಅಥವಾ ಹಸಿ ಶುಂಠಿ ಎರಡೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆಯಾದರೂ, ಯಾವುದು ಉತ್ತಮ ಎಂದು ತಿಳಿಯಲು ತಜ್ಞರು ಕೆಲವು ಸಲಹೆಯನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಒಣ ಶುಂಠಿಯ ಪ್ರಯೋಜನಗಳು ಯಾವುವು?

ಒಣ ಶುಂಠಿಯನ್ನು ತಾಜಾ ಅಥವಾ ಹಸಿ ಶುಂಠಿಯ ಬೇರನ್ನು ಒಣಗಿಸಿ ನಂತರ ಅದನ್ನು ನುಣ್ಣಗೆ ಪುಡಿ ಮಾಡುವ ಮೂಲಕ ತಯಾರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ನೀರಿನ ಅಂಶ ಇಲ್ಲದೆ, ಪರಿಮಳ ಮತ್ತು ಔಷಧೀಯ ಗುಣಗಳನ್ನು ಒಳಗೊಂಡಿರುತ್ತದೆ. ಪೌಷ್ಟಿಕ ತಜ್ಞೆ, ಫಿಸಿಯೋಥೆರಪಿಸ್ಟ್ ಮತ್ತು ಪ್ರಮಾಣೀಕೃತ ಮಧುಮೇಹ ಶಿಕ್ಷಣ ತಜ್ಞೆ ಡಾ. ಅರ್ಚನಾ ಬಾತ್ರಾ ಅವರು ಸೂಚಿಸಿದಂತೆ ಒಣ ಶುಂಠಿಯ ಪ್ರಯೋಜನಗಳು ಇಲ್ಲಿವೆ.

-ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಒಣ ಶುಂಠಿ ಜೀರ್ಣಕ್ರಿಯೆಯನ್ನು ಸುಧಾರಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದು ಅಜೀರ್ಣವನ್ನು ನಿವಾರಿಸುತ್ತದೆ, ಹೊಟ್ಟೆಯುಬ್ಬರವನ್ನು ಕಡಿಮೆ ಮಾಡುತ್ತದೆ ಮತ್ತು ಜಠರಗರುಳಿನ ಅಸ್ವಸ್ಥತೆಯನ್ನು ನಿವಾರಿಸುತ್ತದೆ.

-ಉರಿಯೂತದ ಗುಣಲಕ್ಷಣಗಳು: ಇದು ಉರಿಯೂತದ ಗುಣಲಕ್ಷಣಗಳನ್ನು ನಿವಾರಿಸುತ್ತದೆ, ಸ್ನಾಯು ಮತ್ತು ಕೀಲು ನೋವನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ.

-ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ: ಒಣ ಶುಂಠಿ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕೆಮ್ಮು, ಶೀತ ಮತ್ತು ಗಂಟಲು ನೋವನ್ನು ನಿವಾರಿಸಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

ತಾಜಾ ಶುಂಠಿಯ ಪ್ರಯೋಜನಗಳು ಯಾವುವು?

ತಾಜಾ ಶುಂಠಿ, ಅದರ ಕಚ್ಚಾ ಮತ್ತು ನೈಸರ್ಗಿಕ ರೂಪದಲ್ಲಿ, ಜೊತೆಗೆ ಅದರ ಔಷಧೀಯ ಗುಣಗಳಿಂದ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದೆ. ತಾಜಾ ಶುಂಠಿಯ ಪ್ರಯೋಜನಗಳು ಯಾವವು ತಿಳಿದಿದೆಯಾ?

ವಾಕರಿಕೆ ನಿವಾರಕ: ತಾಜಾ ಶುಂಠಿ ವಾಕರಿಕೆ ನಿವಾರಕ ಗುಣಗಳಿಗೆ ಹೆಸರುವಾಸಿಯಾಗಿದೆ. ಚಲನೆಯಲ್ಲಿ ಅಸ್ವಸ್ಥತೆ, ಗರ್ಭಾವಸ್ಥೆಯಲ್ಲಿನ ಅನಾರೋಗ್ಯವನ್ನು ನಿವಾರಿಸಲು ಇದನ್ನು ಆಗಾಗ ಬಳಸಲಾಗುತ್ತದೆ. ತಾಜಾ ಶುಂಠಿಯ ಸಣ್ಣ ತುಂಡನ್ನು ಜಗಿಯುವುದು ಅಥವಾ ಶುಂಠಿ ಚಹಾ ತಯಾರಿಸುವುದು ಪರಿಣಾಮಕಾರಿಯಾದ ಪರಿಣಾಮಗಳನ್ನು ನೀಡುತ್ತದೆ.

ಉತ್ಕರ್ಷಣ ನಿರೋಧಕ ಅಂಶ: ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ, ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆಗೆ ಒಳ್ಳೆಯದು: ಒಣ ಶುಂಠಿಯಂತೆಯೇ, ತಾಜಾ ಶುಂಠಿಯು ಪಿತ್ತರಸ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ, ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಮತ್ತು ಜಠರಗರುಳಿನ ಅಸ್ವಸ್ಥತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಶೀತಕ್ಕೆ ಪರಿಹಾರ: ತಾಜಾ ಶುಂಠಿಯನ್ನು ಸಾಮಾನ್ಯವಾಗಿ ಶೀತ ಮತ್ತು ಜ್ವರಕ್ಕೆ ಪರಿಹಾರವಾಗಿ ಸೇವಿಸಲಾಗುತ್ತದೆ, ಏಕೆಂದರೆ ಇದು ರೋಗಲಕ್ಷಣಗಳನ್ನು ನಿವಾರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಯಾವುದು ಉತ್ತಮ: ಒಣ ಶುಂಠಿ ಅಥವಾ ತಾಜಾ ಶುಂಠಿ?

ಒಣಗಿದ ಶುಂಠಿಗಿಂತ ತಾಜಾ ಅಥವಾ ಹಸಿ ಶುಂಠಿ ಉತ್ತಮ ಎಂಬ ನಂಬಿಕೆಗೆ ವಾಸ್ತವವು ವಿರುದ್ಧವಾಗಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ತಾಜಾ ಶುಂಠಿಯ ಒಣಗಿಸುವ ಪ್ರಕ್ರಿಯೆಯು ನೀರನ್ನು ಹೀರಿಕೊಳ್ಳುವ ಮೂಲಕ ಅದರ ಉತ್ಕರ್ಷಣ ನಿರೋಧಕ ಅಂಶವನ್ನು ಹೆಚ್ಚಿಸುತ್ತದೆ. ಹಾಗೆಂದು ತಾಜಾ ಶುಂಠಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಂಪೂರ್ಣವಾಗಿ ಇಲ್ಲ ಎಂಬರ್ಥವಲ್ಲ, ಆದರೆ ಅಡುಗೆಯಲ್ಲಿ ಬಳಸಿದಾಗ ಅದರ ಉತ್ಕರ್ಷಣ ನಿರೋಧಕ ಮಟ್ಟವು ಕಡಿಮೆಯಾಗುತ್ತದೆ. ಪಬ್ಮೆಡ್ ಸೆಂಟ್ರಲ್ನಲ್ಲಿ ಪ್ರಕಟವಾದ 2013 ರ ಅಧ್ಯಯನವು ಮಾನವ ಜೀವಕೋಶಗಳಲ್ಲಿರುವ ವೈರಸ್ ಮೇಲೆ ತಾಜಾ ಮತ್ತು ಒಣಗಿದ ಶುಂಠಿ ಬೀರುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿದ್ದು, ತಾಜಾ ಶುಂಠಿ ಉಸಿರಾಟದ ವ್ಯವಸ್ಥೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ಸೂಚಿಸುತ್ತವೆ, ಆದರೆ ಒಣಗಿದ ಶುಂಠಿ ಅದೇ ಪರಿಣಾಮವನ್ನು ಉಂಟುಮಾಡುವುದಿಲ್ಲ.

ಇದನ್ನೂ ಓದಿ: ಶುಂಠಿ ಜ್ಯೂಸ್​ನಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಪರಿಹಾರ

ಆಯುರ್ವೇದದ ಪ್ರಕಾರ, ಒಣ ಶುಂಠಿ ವಾತವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ, ಆದರೆ ತಾಜಾ ಶುಂಠಿ ಅದನ್ನು ಹೆಚ್ಚಿಸುತ್ತದೆ, ಇದು ಗ್ಯಾಸ್, ಉಬ್ಬರ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಡಾ. ಬಾತ್ರಾ ವಿವರಿಸುತ್ತಾರೆ. ಆದ್ದರಿಂದ, ಕಾಲೋಚಿತ ಜ್ವರ, ಶೀತ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳನ್ನು ಪರಿಹರಿಸಲು, ತಾಜಾ ಶುಂಠಿಯ ನೀರಿನ ಬದಲು ಒಣ ಶುಂಠಿಯ ನೀರು ಅಥವಾ ಚಹಾವನ್ನು ಆಯ್ಕೆ ಮಾಡುವುದು ಸೂಕ್ತ. ಒಣ ಶುಂಠಿ ಅನುಕೂಲಕರ ಆಯ್ಕೆಯಾಗಿದೆ, ಆದರೆ ನಿಮ್ಮ ಆಹಾರದಿಂದ ತಾಜಾ ಶುಂಠಿಯನ್ನು ಸಂಪೂರ್ಣವಾಗಿ ತಪ್ಪಿಸದಿರುವುದು ಕೂಡ ಮುಖ್ಯ, ಏಕೆಂದರೆ ಇದು ಕೂಡ ಅಮೂಲ್ಯವಾದ ಪ್ರಯೋಜನಗಳನ್ನು ನೀಡುತ್ತದೆ. ಹಾಗಾಗಿ ಎರಡೂ ಪ್ರಭೇದಗಳ ಅನುಕೂಲಗಳನ್ನು ಬಳಸಿಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:36 pm, Mon, 13 November 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ