Health Tips: ಸುಲಭವಾಗಿ ತಯಾರಿಸಿ ಆವಕಾಡೊ ಬನಾನಾ ಸ್ಮೂಥಿ

ಈ ಆವಕಾಡೊ ಬನಾನಾ ಸ್ಮೂಥಿ ರೆಸಿಪಿಯು ದೇಹದಲ್ಲಿನ ಸಾಕಷ್ಟು ಸಮಸ್ಯೆಗೆ ಪರಿಹಾರವನ್ನು ನೀಡುವ ಅಂಶವನ್ನು ಹೊಂದಿದ್ದು ಜೊತೆಗೆ ರುಚಿಕರವಾಗಿದೆ.

Health Tips:  ಸುಲಭವಾಗಿ ತಯಾರಿಸಿ ಆವಕಾಡೊ ಬನಾನಾ ಸ್ಮೂಥಿ
Banana Avocado Smoothie
Follow us
| Updated By: ಅಕ್ಷತಾ ವರ್ಕಾಡಿ

Updated on: Oct 29, 2022 | 5:29 PM

ಬದಲಾದ ಜೀವನ ಪದ್ಧತಿಯಿಂದಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ದೇಹಕ್ಕೆ ಆರೋಗ್ಯವನ್ನು ನೀಡುವ ಪ್ರಮುಖ ಪೌಷ್ಟಿಕಾಂಶವುಳ್ಳ ಆಹಾರಗಳಲ್ಲಿ ಆವಕಾಡೊ, ಬನಾನಾಗಳೂ ಕೂಡ ಪ್ರಮುಖವಾಗಿದೆ. ಆದ್ದರಿಂದ ಅತ್ಯಂತ ಸುಲಭವಾಗಿ ಕೇವಲ 5 ನಿಮಿಷದಲ್ಲಿ ರುಚಿಕರ ಸ್ಮೂಥಿ ತಯಾರಿಸಿ. ಈ ಆವಕಾಡೊ ಬನಾನಾ ಸ್ಮೂಥಿ ರೆಸಿಪಿಯು ದೇಹದಲ್ಲಿ ಆಗುವ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಅಂಶವನ್ನು ಹೊಂದಿದ್ದು, ಇದರ ಜೊತೆಗೆ ರುಚಿಕರವಾಗಿದೆ.

ಇದು ಬೆಳಗಿನ ಉಪಾಹಾರಕ್ಕಾಗಿ ಸೂಕ್ತವಾದ ಪಾಕವಿಧಾನವಾಗಿದ್ದು, ನಿಮ್ಮ ದೇಹದಲ್ಲಿನ ತೂಕ ಇಳಿಸಲು ಸಹಕಾರಿಯಾಗಿದೆ. ಕೇವಲ ಆವಕಾಡೊ, ಬಾಳೆಹಣ್ಣು, ಬಾದಾಮಿ ಹಾಲು ಮತ್ತು ಜೇನುತುಪ್ಪದಿಂದ ತಯಾರಿಸಲಾದ ಈ ಸೂಪರ್ ಪೌಷ್ಠಿಕಾಂಶದ ಸ್ಮೂಥಿಯು ದೇಹಕ್ಕೆ ಸಾಕಷ್ಟು ಮಟ್ಟದ ಪೋಷಕಾಂಶಗಳನ್ನು ನೀಡುತ್ತದೆ. ನಿಮ್ಮ ಆಯ್ಕೆಯ ಪ್ರಕಾರ ನೀವು ಪದಾರ್ಥಗಳನ್ನು ಸರಿಹೊಂದಿಸಬಹುದು. ನೀವು ಜೇನುತುಪ್ಪದ ಬದಲಿಗೆ ಮಾಪಲ್ ಸಿರಪ್ ಅನ್ನು ಸೇರಿಸಬಹುದು ಮತ್ತು ರುಚಿಗೆ ಚಿಯಾ ಅಥವಾ ಸಬ್ಜಾ ಬೀಜಗಳನ್ನು ಕೂಡ ಸೇರಿಸಬಹುದು. ಆದ್ದರಿಂದ, ಒಮ್ಮೆ ಈ ಪಾಕವಿಧಾನವನ್ನು ಮನೆಯಲ್ಲಿ ಪ್ರಯತ್ನಿಸಿ.

ಬೇಕಾಗುವ ಪದಾರ್ಥಗಳು

  1. ಅವಕಾಡೋ ಅರ್ಧ ಭಾಗ
  2. ಬಾದಾಮಿ ಹಾಲು – 1 ಕಪ್
  3. ಬಾಳೆಹಣ್ಣು – 1
  4. ಜೇನು ತುಪ್ಪ -2 ಚಮಚ

ಇದನ್ನು ಓದಿ: Banana Recipes: ಬಾಳೆ ಹಣ್ಣಿನಿಂದ ಮಾಡಬಹುದು ವಿವಿಧ ರೆಸಿಪಿಗಳು

ಮಾಡುವ ವಿಧಾನ

  • ಮೊದಲಿಗೆ ಅರ್ಧ ಭಾಗದಷ್ಟು ತೆಗೆದುಕೊಂಡ ಅವಕಾಡೋ ಮತ್ತು ಒಂದು ಬಾಳೆಹಣ್ಣನ್ನು ಚೆನ್ನಾಗಿ ತುಂಡರಿಸಿ. ನಂತರ ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ಬಾದಾಮಿ ಹಾಲು ಸೇರಿಸಿ.
  • ನಂತರ ಎರಡು ಚಮಚದಷ್ಟು ಜೇನು ತುಪ್ಪ ಸೇರಿಸಿ. ಚೆನ್ನಾಗಿ ರುಬ್ಬಿಕೊಳ್ಳಿ.
  • ನಂತರ ಒಂದು ಗ್ಲಾಸಿಗೆ ಸುರಿದು ಪಿಸ್ತಾ ಬೀಜಗಳಿಂದ ಅಲಂಕರಿಸಿ
  • ಆರೋಗ್ಯಕರ ಹಾಗೂ ರುಚಿಕರ ಈ ಸ್ಮೂಥಿಯನ್ನು ನಿಮ್ಮ ಪ್ರೀತಿ ಪಾತ್ರರಿಗೆ ಸವಿಯಲು ನೀಡಿ.

ಆವಕಾಡೊ ಬನಾನಾ ಸ್ಮೂಥಿಯು ಉತ್ತಮ ಆರೋಗ್ಯವನ್ನು ನೀಡುವುದರ ಜೊತೆಗೆ ನಿಮ್ಮ ದೇಹದ ತೂಕವನ್ನು ಸಮಸ್ಥಿತಿಗೆ ತರಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿನ ರಕ್ತದೊತ್ತಡಕ್ಕೂ ಪರಿಹಾರ ನೀಡುತ್ತದೆ. ಆದ್ದರಿಂದ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ರೆಸಿಪಿಯನ್ನು ಒಮ್ಮೆ ತಯಾರಿಸಿ.

(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ