AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಸುಲಭವಾಗಿ ತಯಾರಿಸಿ ಆವಕಾಡೊ ಬನಾನಾ ಸ್ಮೂಥಿ

ಈ ಆವಕಾಡೊ ಬನಾನಾ ಸ್ಮೂಥಿ ರೆಸಿಪಿಯು ದೇಹದಲ್ಲಿನ ಸಾಕಷ್ಟು ಸಮಸ್ಯೆಗೆ ಪರಿಹಾರವನ್ನು ನೀಡುವ ಅಂಶವನ್ನು ಹೊಂದಿದ್ದು ಜೊತೆಗೆ ರುಚಿಕರವಾಗಿದೆ.

Health Tips:  ಸುಲಭವಾಗಿ ತಯಾರಿಸಿ ಆವಕಾಡೊ ಬನಾನಾ ಸ್ಮೂಥಿ
Banana Avocado Smoothie
TV9 Web
| Edited By: |

Updated on: Oct 29, 2022 | 5:29 PM

Share

ಬದಲಾದ ಜೀವನ ಪದ್ಧತಿಯಿಂದಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ದೇಹಕ್ಕೆ ಆರೋಗ್ಯವನ್ನು ನೀಡುವ ಪ್ರಮುಖ ಪೌಷ್ಟಿಕಾಂಶವುಳ್ಳ ಆಹಾರಗಳಲ್ಲಿ ಆವಕಾಡೊ, ಬನಾನಾಗಳೂ ಕೂಡ ಪ್ರಮುಖವಾಗಿದೆ. ಆದ್ದರಿಂದ ಅತ್ಯಂತ ಸುಲಭವಾಗಿ ಕೇವಲ 5 ನಿಮಿಷದಲ್ಲಿ ರುಚಿಕರ ಸ್ಮೂಥಿ ತಯಾರಿಸಿ. ಈ ಆವಕಾಡೊ ಬನಾನಾ ಸ್ಮೂಥಿ ರೆಸಿಪಿಯು ದೇಹದಲ್ಲಿ ಆಗುವ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಅಂಶವನ್ನು ಹೊಂದಿದ್ದು, ಇದರ ಜೊತೆಗೆ ರುಚಿಕರವಾಗಿದೆ.

ಇದು ಬೆಳಗಿನ ಉಪಾಹಾರಕ್ಕಾಗಿ ಸೂಕ್ತವಾದ ಪಾಕವಿಧಾನವಾಗಿದ್ದು, ನಿಮ್ಮ ದೇಹದಲ್ಲಿನ ತೂಕ ಇಳಿಸಲು ಸಹಕಾರಿಯಾಗಿದೆ. ಕೇವಲ ಆವಕಾಡೊ, ಬಾಳೆಹಣ್ಣು, ಬಾದಾಮಿ ಹಾಲು ಮತ್ತು ಜೇನುತುಪ್ಪದಿಂದ ತಯಾರಿಸಲಾದ ಈ ಸೂಪರ್ ಪೌಷ್ಠಿಕಾಂಶದ ಸ್ಮೂಥಿಯು ದೇಹಕ್ಕೆ ಸಾಕಷ್ಟು ಮಟ್ಟದ ಪೋಷಕಾಂಶಗಳನ್ನು ನೀಡುತ್ತದೆ. ನಿಮ್ಮ ಆಯ್ಕೆಯ ಪ್ರಕಾರ ನೀವು ಪದಾರ್ಥಗಳನ್ನು ಸರಿಹೊಂದಿಸಬಹುದು. ನೀವು ಜೇನುತುಪ್ಪದ ಬದಲಿಗೆ ಮಾಪಲ್ ಸಿರಪ್ ಅನ್ನು ಸೇರಿಸಬಹುದು ಮತ್ತು ರುಚಿಗೆ ಚಿಯಾ ಅಥವಾ ಸಬ್ಜಾ ಬೀಜಗಳನ್ನು ಕೂಡ ಸೇರಿಸಬಹುದು. ಆದ್ದರಿಂದ, ಒಮ್ಮೆ ಈ ಪಾಕವಿಧಾನವನ್ನು ಮನೆಯಲ್ಲಿ ಪ್ರಯತ್ನಿಸಿ.

ಬೇಕಾಗುವ ಪದಾರ್ಥಗಳು

  1. ಅವಕಾಡೋ ಅರ್ಧ ಭಾಗ
  2. ಬಾದಾಮಿ ಹಾಲು – 1 ಕಪ್
  3. ಬಾಳೆಹಣ್ಣು – 1
  4. ಜೇನು ತುಪ್ಪ -2 ಚಮಚ

ಇದನ್ನು ಓದಿ: Banana Recipes: ಬಾಳೆ ಹಣ್ಣಿನಿಂದ ಮಾಡಬಹುದು ವಿವಿಧ ರೆಸಿಪಿಗಳು

ಮಾಡುವ ವಿಧಾನ

  • ಮೊದಲಿಗೆ ಅರ್ಧ ಭಾಗದಷ್ಟು ತೆಗೆದುಕೊಂಡ ಅವಕಾಡೋ ಮತ್ತು ಒಂದು ಬಾಳೆಹಣ್ಣನ್ನು ಚೆನ್ನಾಗಿ ತುಂಡರಿಸಿ. ನಂತರ ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ಬಾದಾಮಿ ಹಾಲು ಸೇರಿಸಿ.
  • ನಂತರ ಎರಡು ಚಮಚದಷ್ಟು ಜೇನು ತುಪ್ಪ ಸೇರಿಸಿ. ಚೆನ್ನಾಗಿ ರುಬ್ಬಿಕೊಳ್ಳಿ.
  • ನಂತರ ಒಂದು ಗ್ಲಾಸಿಗೆ ಸುರಿದು ಪಿಸ್ತಾ ಬೀಜಗಳಿಂದ ಅಲಂಕರಿಸಿ
  • ಆರೋಗ್ಯಕರ ಹಾಗೂ ರುಚಿಕರ ಈ ಸ್ಮೂಥಿಯನ್ನು ನಿಮ್ಮ ಪ್ರೀತಿ ಪಾತ್ರರಿಗೆ ಸವಿಯಲು ನೀಡಿ.

ಆವಕಾಡೊ ಬನಾನಾ ಸ್ಮೂಥಿಯು ಉತ್ತಮ ಆರೋಗ್ಯವನ್ನು ನೀಡುವುದರ ಜೊತೆಗೆ ನಿಮ್ಮ ದೇಹದ ತೂಕವನ್ನು ಸಮಸ್ಥಿತಿಗೆ ತರಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿನ ರಕ್ತದೊತ್ತಡಕ್ಕೂ ಪರಿಹಾರ ನೀಡುತ್ತದೆ. ಆದ್ದರಿಂದ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ರೆಸಿಪಿಯನ್ನು ಒಮ್ಮೆ ತಯಾರಿಸಿ.

(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ