Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಲಯನ್ ಸಾಲ್ಟ್​ ಸ್ಟೋನ್ ಮಸಾಜ್​ನಿಂದ ಏನು ಪ್ರಯೋಜನ?

ಹಿಮಾಲಯನ್ ಉಪ್ಪು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ನೈಸರ್ಗಿಕವಾಗಿ ಕಂಡುಬರುವ 84 ಖನಿಜಗಳು ಮತ್ತು ಅಂಶಗಳಿಂದ ಇದು ತುಂಬಿರುತ್ತದೆ. ಈ ಖನಿಜಗಳಲ್ಲಿ ಹೆಚ್ಚಿನವು ದೇಹಕ್ಕೆ ಆರೋಗ್ಯ ಒದಗಿಸುತ್ತವೆ. ಹಿಮಾಲಯ ಪರ್ವತಗಳ ತಪ್ಪಲಿನಿಂದ ಗಣಿಗಾರಿಕೆ ಮೂಲಕ ತೆಗೆಯಲಾದ ಈ ಶಕ್ತಿಶಾಲಿ ಉಪ್ಪನ್ನು ಭೂಮಿಯ ಮೇಲಿನ ಶುದ್ಧ ಉಪ್ಪು ಎಂದು ಹೇಳಲಾಗುತ್ತದೆ.

ಹಿಮಾಲಯನ್ ಸಾಲ್ಟ್​ ಸ್ಟೋನ್ ಮಸಾಜ್​ನಿಂದ ಏನು ಪ್ರಯೋಜನ?
ಹಿಮಾಲಯನ್ ಉಪ್ಪು ಕಲ್ಲಿನ ಮಸಾಜ್ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 10, 2023 | 3:26 PM

ಸ್ಪಾ, ಸಲೂನ್​ಗಳಲ್ಲಿ ಹಲವು ರೀತಿಯ ಮಸಾಜ್ ಥೆರಪಿಯಿದೆ. ಇದೀಗ ಹೆಚ್ಚು ಜನಪ್ರಿಯವಾಗುತ್ತಿರುವ ಮಸಾಜ್ ಸಾಲ್ಟ್​ ಸ್ಟೋನ್ ಮಸಾಜ್. ಒತ್ತಡವನ್ನು ನಿವಾರಿಸಲು ಈ ಹಿಮಾಲಯನ್ ಸ್ಟೋನ್ ಮಸಾಜ್ ಮಾಡಲಾಗುತ್ತದೆ. ಹಿಮಾಲಯನ್ ಉಪ್ಪಿನ ಕಲ್ಲುಗಳನ್ನು ಬಿಸಿ ಮಾಡಿ, ಅದರಿಂದ ದೇಹದ ಮೇಲೆ ಮಸಾಜ್ ಮಾಡಲಾಗುತ್ತದೆ. ಈ ಸಾಲ್ಟ್ ಸ್ಟೋನ್ಸ್ ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ನಂತಹ 84 ನೈಸರ್ಗಿಕ ಖನಿಜಗಳನ್ನು ಹೊಂದಿರುತ್ತದೆ. ಈ ಖನಿಜಗಳು ದೇಹದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕಲ್ಲಿನಿಂದ ಉಷ್ಣತೆಯು ದೇಹದ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಹಿಮಾಲಯನ್ ಉಪ್ಪನ್ನು ದೇಹದ ಆರೋಗ್ಯಕ್ಕೆ ದೀರ್ಘಕಾಲದಿಂದ ಬಳಸಲಾಗುತ್ತಿದೆ. ಪಾಕಿಸ್ತಾನದ ಹಿಮಾಲಯ ಪರ್ವತಗಳ ತಪ್ಪಲಿನಿಂದ ಗಣಿಗಾರಿಕೆ ಮೂಲಕ ತೆಗೆಯಲಾದ ಈ ಶಕ್ತಿಶಾಲಿ ಉಪ್ಪನ್ನು ಭೂಮಿಯ ಮೇಲಿನ ಶುದ್ಧ ಉಪ್ಪು ಎಂದು ಹೇಳಲಾಗುತ್ತದೆ.

ಹಿಮಾಲಯನ್ ಉಪ್ಪು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ನೈಸರ್ಗಿಕವಾಗಿ ಕಂಡುಬರುವ 84 ಖನಿಜಗಳು ಮತ್ತು ಅಂಶಗಳಿಂದ ಇದು ತುಂಬಿರುತ್ತದೆ. ಈ ಖನಿಜಗಳಲ್ಲಿ ಹೆಚ್ಚಿನವು ದೇಹಕ್ಕೆ ಆರೋಗ್ಯ ಒದಗಿಸುತ್ತವೆ.

ಇದನ್ನೂ ಓದಿ: ಉಗುರುಗಳನ್ನು ಉಜ್ಜಿದರೆ ಕೂದಲು ಉದ್ದವಾಗುತ್ತಾ?

ಉಪ್ಪು ಕಲ್ಲಿನ ಮಸಾಜ್​ನಿಂದಾಗುವ ಉಪಯೋಗಗಳೇನು?:

ನಿದ್ರೆಗೆ ಸಹಕಾರಿ:

ಉಪ್ಪು ಮಸಾಜ್ ನಿದ್ರೆಯನ್ನು ಉತ್ತೇಜಿಸುತ್ತದೆ, ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ. ಈ ವಿಶೇಷ ಮಸಾಜ್ ಕೇಂದ್ರ ನರಮಂಡಲವನ್ನು ಸಮತೋಲನಗೊಳಿಸುತ್ತದೆ.

ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ:

ಹಿಮಾಲಯನ್ ಉಪ್ಪು ಉತ್ತಮವಾದ ಎಕ್ಸ್‌ಫೋಲಿಯೇಟರ್ ಮತ್ತು ಮಾಯಿಶ್ಚರೈಸರ್ ಆಗಿದ್ದು ಅದು ಚರ್ಮವನ್ನು ಕಾಂತಿಯುಕ್ತಗೊಳಿಸುತ್ತದೆ.

ಇದನ್ನೂ ಓದಿ: Skin Care Tips: ಸೆನ್ಸಿಟಿವ್ ಚರ್ಮವನ್ನು ಗುರುತಿಸುವುದು ಹೇಗೆ?

ಯೋಗಕ್ಷೇಮವನ್ನು ಹೆಚ್ಚಿಸುತ್ತದೆ:

ಹಿಮಾಲಯನ್ ಉಪ್ಪು ಕಲ್ಲಿನ ಮಸಾಜ್ ಆರೋಗ್ಯಕರ ಉಸಿರಾಟ ಮತ್ತು ಮೂಳೆಯ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಹಿಮಾಲಯನ್ ಉಪ್ಪು ಕಲ್ಲುಗಳು ರಕ್ತದೊತ್ತಡವನ್ನು ಸುಧಾರಿಸಲು, ಸರಿಯಾದ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ:

ಹಿಮಾಲಯನ್ ಉಪ್ಪು ಚರ್ಮವನ್ನು ಮೃದುವಾಗಿಸುತ್ತದೆ. ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯು ದೌರ್ಬಲ್ಯ, ತಲೆನೋವು, ಕೀಲು ನೋವು, ಆಯಾಸದಂತಹ ನೋವನ್ನು ನಿವಾರಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ