Pears Benefits: ನಿಮ್ಮ ಭಾವೋದ್ವೇಗಕ್ಕೂ ಮದ್ದು ಈ ಮರಸೇಬು

Fruits : ನಿಮ್ಮ ಇಷ್ಟದ ಆಹಾರವನ್ನೂ ತಿನ್ನಿ. ಅದನ್ನು ಸಮದೂಗಿಸಲು ಹಣ್ಣುಗಳನ್ನೂ ತಿನ್ನಿ. ಆಗ ನಿಮ್ಮ ದೇಹವು ಆರೋಗ್ಯವಾಗಿರುತ್ತದೆ. ಮನಸ್ಸೂ ನಿಯಂತ್ರಣದಲ್ಲಿರುತ್ತದೆ.

Pears Benefits: ನಿಮ್ಮ ಭಾವೋದ್ವೇಗಕ್ಕೂ ಮದ್ದು ಈ ಮರಸೇಬು
Follow us
| Updated By: ಶ್ರೀದೇವಿ ಕಳಸದ

Updated on:Jul 05, 2022 | 11:49 AM

Pears Fruit : ಬಾಯಿರುಚಿಗೆ ಎಟುಕುವ ಎಲ್ಲವೂ ನಮಗೆ ಬೇಕು. ಆದರೆ ಆರೋಗ್ಯಕ್ಕೆ ಲಾಭವಿರುವ ಆಹಾರಗಳೆಂದರೆ ಮಾರುದೂರ. ಆದರೆ ಸ್ವಲ್ಪ ಯೋಚಿಸಿ ನಿತ್ಯದ ಆಹಾರವನ್ನು ಯೋಜಿಸಿದರೆ ಖಂಡಿತ ರುಚಿಯೊಂದಿಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಅದಕ್ಕಾಗಿ ವ್ಯವಧಾನ ಎನ್ನುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಹೆಚ್ಚು ತರಕಾರಿ, ಸೊಪ್ಪು, ಹಣ್ಣುಗಳನ್ನು ತಿನ್ನಲೇಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಲೇ ಇದ್ದಾರೆ. ಆದರೆ ಸಮಸ್ಯೆಗಳು ಕಾಲಬುಡಕ್ಕೆ ಬರುವ ತನಕ ಆ  ಬಗ್ಗೆ ಗಂಭೀರತೆ ಹುಟ್ಟಲು ಸಾಧ್ಯವೆ?  ಯಾವಾಗ ಒಂದೊಂದೇ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆಯೋ ಆಗ ವೈದ್ಯರನ್ನು ನೆನಪಿಸಿಕೊಳ್ಳುತ್ತೇವೆ. ಆದರೆ ಪರಿಹಾರ ಎನ್ನುವುದು ನಮ್ಮ ಆಹಾರಕ್ರಮದಲ್ಲೇ ಇದೆ ಎನ್ನುವುದು ಅವರನ್ನು ಹೋಗಿ ಭೇಟಿಯಾಗುವ ತನಕ ನಮಗೆ ಅರಿವಾಗುವುದೇ ಇಲ್ಲವಲ್ಲ. ಯಾಕೆ? ಹಾಗಾಗಬಾರದಲ್ಲವೆ?

ಎಷ್ಟೊಂದು ಹಣ್ಣುಗಳನ್ನು ಪ್ರಕೃತಿ ನೀಡಿದೆ. ಒಂದೊಂದಕ್ಕೂ ಒಂದೊಂದು ರುಚಿ. ಅತ್ಯಂತ ಪೋಷಕಾಂಶಭರಿತ ಹಣ್ಣುಗಳು ನಮ್ಮ ನಿತ್ಯದ ಆಹಾರದಲ್ಲಿ ಇರಲೇಬೇಕು. ಮರಸೇಬು ಬಹಳ ಪೋಷಕಾಂಶಗಳಿಂದ ಕೂಡಿದ ಹಣ್ಣು. ಫೈಬರ್ ಇದರಲ್ಲಿ ಹೇರಳವಾಗಿರುತ್ತದೆ. ಊಟದ ನಂತರ ಈ ಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ. ಕರುಳಿನ ಚಯಾಪಚಯ ಕ್ರಿಯೆಗಳನ್ನು ಇದು ಸುಧಾರಿಸುತ್ತದೆ.

ಇದನ್ನೂ ಓದಿ : Vajrasana Benefits : ವಜ್ರಾಸನವನ್ನು ಏಕೆ ಮಾಡಬೇಕು?

ಇದನ್ನೂ ಓದಿ
Image
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
Image
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
Image
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Image
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ಮಧುಮೇಹಿಗಳಿಗಂತೂ ಇದು ನೆಚ್ಚಿನ ಹಣ್ಣು. ಈ ಹಣ್ಣಿನಲ್ಲಿರುವ ಆ್ಯಂಥೊಸಯಾನಿನ್​ ಟೈಪ್​ 2 ಮಧುಮೇಹಿಗಳ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ರೋಗನಿರೋಧಕ ಅಂಶಗಳು ಹೇರಳವಾಗಿ  ಇರುವುದರಿಂದ ಯಾವುದೇ ರೋಗವನ್ನು ಇದು ದೇಹದೊಳಗೆ ಸುಲಭವಾಗಿ ಬಿಟ್ಟುಕೊಡದು. ಇದರಲ್ಲಿರುವ ಕ್ರೆರ್ಸೆಟಿನ್ ಮತ್ತು ಪ್ರೊಸೈನಿಡಿನ್​ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್​ ಅನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ನೀರು ಮತ್ತು ನಾರಿನಂಶ ಈ ಹಣ್ಣಿನಲ್ಲಿ ಸಾಕಷ್ಟು ಇರುವುದರಿಂದ ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಲು ಈ ಹಣ್ಣನ್ನು ಸೇವಿಸಬಹುದು. ಇದರಲ್ಲಿರುವ ನಾರು ಮತ್ತು ನೀರಿನಾಂಶ ನಿಮ್ಮ ಭಾವೋದ್ವೇಗವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Health: ಎಚ್ಚರ! ಎಲ್ಲವನ್ನೂ ದಕ್ಕಿಸಿಕೊಳ್ಳುತ್ತಿದ್ದೀರಿ, ಆದರೆ ನಿದ್ರೆಯನ್ನು?

ಆಯಾ ಋತುಮಾನಕ್ಕೆ ತಕ್ಕಂತೆ ಹಣ್ಣುಗಳು ಎಲ್ಲೆಡೆಯೂ ಲಭ್ಯ. ಕುಳಿತಲ್ಲಿಯೇ ಆನ್​ಲೈನ್​ ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ನಡೆದುಕೊಂಡು ಹೋಗಿ ತಂದರೆ ನಡಿಗೆಯೂ ಆಗುತ್ತದೆ. ಗಾಳಿಸೇವನೆಯೂ ಆಗುತ್ತದೆ. ಯಾಕೆ ಅನವಶ್ಯಕ ಔಷಧಿಗಳಿಗೆ ಮೊರೆಹೋಗಬೇಕು? ಹಣ್ಣು ಹಂಪಲಗಳನ್ನು ಸೇವಿಸಿ ಹೊಟ್ಟೆ ತಂಪಾಗಿಟ್ಟುಕೊಂಡಲ್ಲಿ ನಿತ್ಯವೂ ಪ್ರಸನ್ನಚಿತ್ತರಾಗಿರುತ್ತೀರಿ. ಏಕೆಂದರೆ, ಮನಸ್ಸು ದೇಹ ಒಂದಕ್ಕೊಂದು ಸಂಬಂಧ ಹೊಂದಿವೆ. ಹಾಗಾಗಿ ಎಳವೆಯಿಂದಲೇ ಹಣ್ಣು ತಿನ್ನುವುದನ್ನು ಮಕ್ಕಳಲ್ಲಿಯೂ ರೂಢಿಸಿ. ನೀವೂ ತಿನ್ನಿ.

Published On - 11:47 am, Tue, 5 July 22

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ