AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒತ್ತಡದಿಂದ ಮೆದುಳಿನ ಸಮಸ್ಯೆ ಖಂಡಿತ, ಚುರುಕಾಗಿರಲು 5 ಸುಲಭ ಮಾರ್ಗ ಇಲ್ಲಿದೆ ನೋಡಿ

ಯಾವುದೇ ಒತ್ತಡ ಉಂಟಾದರು ಮೊದಲು ಅದರ ಪರಿಣಾಮವನ್ನು ಎದುರಿಸುವುದು ಮೆದುಳು. ಒತ್ತಡದಿಂದ ಮೆದುಳಿಗೆ ಯಾವೆಲ್ಲಾ ಪರಿಣಾಮ ಬೀರಬಹುದು ಈ ಎಂಬುದನ್ನು ನರಶಸ್ತ್ರಚಿಕಿತ್ಸಕ ಡಾ. ಸ್ಟೀವನ್ ಸ್ಪಿಟ್ಜ್ ತಿಳಿಸಿಕೊಟ್ಟಿದ್ದಾರೆ. ಜೊತೆಗೆ ಮೆದುಳಿಗೆ ಒತ್ತಡ ನೀಡದಂತೆ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬಹುದು ಎಂಬುದನ್ನು ಸಹ ಹೇಳಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಒತ್ತಡದಿಂದ ಮೆದುಳಿನ ಸಮಸ್ಯೆ ಖಂಡಿತ, ಚುರುಕಾಗಿರಲು 5 ಸುಲಭ ಮಾರ್ಗ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on: Jul 07, 2025 | 4:02 PM

Share

ಒತ್ತಡ ಇಲ್ಲದ ಮನುಷ್ಯ ಈ ಜಗತ್ತಿನಲ್ಲಿ ಇಲ್ಲ. ಎಲ್ಲರಿಗೂ ಒಂದಲ್ಲ ಒಂದು ಒತ್ತಡ ಇದ್ದೇ ಇರುತ್ತದೆ. ಆದರೆ ಅದನ್ನು ನಿಭಾಯಿಸುವಲ್ಲಿ ಅನೇಕರು ವಿಫಲರಾಗುತ್ತಾರೆ. ಈ ಒತ್ತಡದಿಂದಾಗಿ ದೇಹದ ಅಂಗದಲ್ಲೂ ಅನೇಕ ಬದಲಾವಣೆಗಳು ಹಾಗೂ ಸಮಸ್ಯೆಗಳು ಎದುರುಗುತ್ತದೆ. ಕೆಲಸ, ಮನೆ, ಕುಟುಂಬ ಹೀಗೆ ಅನೇಕ ರೀತಿಯ ಒತ್ತಡಗಳನ್ನು ನಿಭಾಯಿಸಲೇಬೇಕು. ಇದರಿಂದ ಮೆದುಳಿನ ಮೇಲೆ ದೊಡ್ಡ ಮಟ್ಟದ ತೊಂದರೆಗಳನ್ನು ಉಂಟಾಗುತ್ತದೆ. ಈ ಒತ್ತಡ ಮೆದುಳಿನ ಮೇಲೆ ಹೇಗೆಲ್ಲ ತೊಂದರೆಯನ್ನು ಉಂಟು ಮಾಡುತ್ತದೆ ಎಂಬುದನ್ನು ನರಶಸ್ತ್ರಚಿಕಿತ್ಸಕ ಡಾ. ಸ್ಟೀವನ್ ಸ್ಪಿಟ್ಜ್ ತಮ್ಮ ಇನ್‌ಸ್ಟಾಗ್ರಾಮ್​​ನಲ್ಲಿ ತಿಳಿಸಿದ್ದಾರೆ. ಒತ್ತಡ ಮೆದುಳಿಗೆ ನಿಜವಾಗಿಯೂ ಏನು ಮಾಡುತ್ತದೆ  ಹಾಗೂ ಇದನ್ನು ಸರಿ ಮಾಡಲು ಯಾವೆಲ್ಲ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಹೇಳಿದ್ದಾರೆ. ಮೆದುಳು ಚುರುಕಾಗಿರಲು ಸಹಾಯ ಮಾಡುವ 5 ಮಾರ್ಗಗಳನ್ನು ಹೇಳಿದ್ದಾರೆ.

ಒತ್ತಡಕ್ಕೆ ಕಾರಣ:

  • ಕಾರ್ಟಿಸೋಲ್ಸ್ ಹಾರ್ಮೋನು
  •  ಯೋಚನಾ ಶಕ್ತಿ ನಷ್ಟ
  • ಕಳಪೆ ಗಮನ

ಕಾರ್ಟಿಸೋಲ್ ಅಂದರೆ ಮೆದುಳಿಗೆ ಒತ್ತಡ ತರುವ ಹಾರ್ಮೋನ್. ಒತ್ತಡ ಮಿತಿಮೀರಿದ ಸಂದರ್ಭದಲ್ಲಿ ಮಾತ್ರ ಮೆದುಳು ಕಾರ್ಟಿಸೋಲ್ ಹಾರ್ಮೋನ್​​ನ್ನು ಹೆಚ್ಚಿಸುತ್ತದೆ. ಈ ಕಾರ್ಟಿಸೋಲ್ ಹಾರ್ಮೋನ್ ಮೆದುಳಿನ ಮೇಲೆ ಹೇಗೆ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬುದನ್ನು ನರಶಸ್ತ್ರಚಿಕಿತ್ಸಕ ಡಾ. ಸ್ಟೀವನ್ ಸ್ಪಿಟ್ಜ್ ಹೇಳಿದ್ದಾರೆ.  ಡಾ. ಸ್ಪಿಟ್ಜ್ ಅವರ ಹೇಳುವ ಪ್ರಕಾರ, ಮನುಷ್ಯ ಒತ್ತಡಕ್ಕೊಳಗಾದಾಗ ಮೆದುಳಿನ ಅಮಿಗ್ಡಾಲಾ ಭಾಗಕ್ಕೆ ಒತ್ತಡ ಬೀಳುತ್ತದೆ.  ಇದೊಂದು ಭಾವನ್ಮಕವಾಗಿರುವ ಭಾಗವಾಗಿದ್ದು, ಚಿಂತೆ, ಭಯ, ಆಕ್ರಮಣಶೀಲತೆ ಮತ್ತು ಸಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸುವ ಹಾರ್ಮೋನ್. ಒಂದು ವೇಳೆ ಈ ಭಾಗಕ್ಕೆ ಒತ್ತಡ ಹೆಚ್ಚಾದರೆ, ಇದು ಮೆದುಳಿನ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಹೆಚ್ಚಾದರೆ ಕಾರ್ಟಿಸೋಲ್ ಹಾರ್ಮೋನ್ ಕೂಡ ಹೆಚ್ಚಾಗುತ್ತದೆ. ಇದರಿಂದ ಮೆದುಳಿನ ಮೇಲೆ ಹಾಗೂ ಆರೋಗ್ಯದ ಮೇಲೆ ಹೆಚ್ಚಿನ ಒತ್ತಡವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಈ ತರಕಾರಿಗಳನ್ನು ಸೇವನೆ ಮಾಡಬಾರದಂತೆ! ಯಾಕೆ ಗೊತ್ತಾ?

ಮೆದುಳು ಚುರುಕಾಗಿಸುವುದು ಹೇಗೆ?

  1. ಪ್ರತಿದಿನ 10 ನಿಮಿಷ ನಡೆಯಬೇಕು.
  2. ಒತ್ತಡದ ಭಾವನೆಯಿಂದ ಹೊರಬಹುದು.
  3. ಬಾಕ್ಸ್-ಬ್ರೀತ್, (2-ಸೆಕೆಂಡ್ ಉಸಿರು ಒಳಗೆಳೆದುಕೊಳ್ಳುವುದು, 2-ಸೆಕೆಂಡ್ ಹಿಡಿದಿಟ್ಟುಕೊಳ್ಳುವುದು, 2-ಸೆಕೆಂಡ್ ಉಸಿರು ಬಿಡುವುದು)
  4. ಅದಷ್ಟು ಮೊಬೈಲ್​​ನಿಂದ ದೂರು ಇರುವುದು
  5. ನಿದ್ರೆಗೆ ಆದ್ಯತೆ ನೀಡುವುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ