AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಲಡ್ ಟೆಸ್ಟ್‌ಗೆ ಮನೆಯಲ್ಲಿಯೇ ಸ್ಯಾಂಪಲ್ ಕೊಡುವುದು ಉತ್ತಮವಾ ಅಥವಾ ಲ್ಯಾಬ್‌ಗೆ ಹೋಗುವುದೇ? ಇಲ್ಲಿದೆ ತಜ್ಞರ ಸಲಹೆ

ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ರಕ್ತ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಹೋಗುವ ಬದಲು ಮನೆಯಲ್ಲಿಯೇ ಮಾದರಿಗಳನ್ನು ನೀಡಲು ಬಯಸುತ್ತಾರೆ. ಆದರೆ ಮನೆಯ ಮಾದರಿಯನ್ನು ನೀಡುವ ಮೂಲಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸರಿಯೇ? ಪ್ರಯೋಗಾಲಯದಲ್ಲಿಯೇ ಮಾದರಿಯನ್ನು ನೀಡುವುದು ಉತ್ತಮವೇ? ಮನೆ ಸ್ಯಾಂಪಲ್ ಕಲೆಕ್ಷನ ಮಾಡಿಸುವುದರಿಂದ ಆಗುವ ಲಾಭಗಳೇನು, ಲ್ಯಾಬ್‌ಗೆ ಹೋಗುವುದರಿಂದ ಸಿಗುವ ಲಾಭಗಳೇನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಬ್ಲಡ್ ಟೆಸ್ಟ್‌ಗೆ ಮನೆಯಲ್ಲಿಯೇ ಸ್ಯಾಂಪಲ್ ಕೊಡುವುದು ಉತ್ತಮವಾ ಅಥವಾ ಲ್ಯಾಬ್‌ಗೆ ಹೋಗುವುದೇ? ಇಲ್ಲಿದೆ ತಜ್ಞರ ಸಲಹೆ
Home Sample Collection Vs Lab Visit
ಪ್ರೀತಿ ಭಟ್​, ಗುಣವಂತೆ
|

Updated on: Apr 10, 2026 | 8:09 PM

Share

ಇಂದಿನ ಕಾಲದಲ್ಲಿ ಆರೋಗ್ಯ ತಪಾಸಣೆ (Health check-up) ಮಾಡಿಸಿಕೊಳ್ಳುವುದು ಬಹಳ ಸುಲಭ. ಅನೇಕ ಲ್ಯಾಬ್‌ಗಳು ಈಗ ಮನೆಬಾಗಿಲಿಗೇ ಬಂದು ಬ್ಲಡ್ ಸ್ಯಾಂಪಲ್ ಸಂಗ್ರಹಿಸುವ ಸೌಲಭ್ಯ ನೀಡುತ್ತಿವೆ. ಇದರಿಂದ ಹಲವರು ಲ್ಯಾಬ್‌ಗೆ ಹೋಗದೇ ಮನೆಯಲ್ಲೇ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಮನೆ ಸ್ಯಾಂಪಲ್ ಕಲೆಕ್ಷನ್ ಉತ್ತಮವೇ ಅಥವಾ ಲ್ಯಾಬ್‌ಗೆ ಹೋಗಿ ಪರೀಕ್ಷೆ ಮಾಡಿಸುವುದೇ ಉತ್ತಮವೇ ಎಂಬ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ. ಹಾಗಾದರೆ ಮನೆ ಸ್ಯಾಂಪಲ್ ಕಲೆಕ್ಷನ ಮಾಡಿಸುವುದರಿಂದ ಆಗುವ ಲಾಭಗಳೇನು, ಲ್ಯಾಬ್‌ಗೆ ಹೋಗುವುದರಿಂದ ಸಿಗುವ ಲಾಭಗಳೇನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಮನೆಯಲ್ಲಿಯೇ ಸ್ಯಾಂಪಲ್ ಕೊಡುವುದರಿಂದಾಗುವ ಲಾಭಗಳು:

ಸಾಮಾನ್ಯವಾಗಿ ಮನೆ ಸ್ಯಾಂಪಲ್ ಕಲೆಕ್ಷನ್‌ನ ಮುಖ್ಯ ಲಾಭವೆಂದರೆ ಸಮಯ ಉಳಿವು. ಲ್ಯಾಬ್ ದೂರದಲ್ಲಿರುವವರು, ಹಿರಿಯರು ಅಥವಾ ಹೊರಗೆ ಹೋಗಲು ಅಸಾಧ್ಯವಾಗಿರುವವರು ಈ ಸೇವೆಯನ್ನು ಸುಲಭವಾಗಿ ಬಳಸಬಹುದು. ಪ್ರಯಾಣದ ತೊಂದರೆ, ದೀರ್ಘ ಸಾಲಿನಲ್ಲಿ ನಿಲ್ಲುವ ಸಮಸ್ಯೆ ತಪ್ಪುತ್ತದೆ. ಆದರೆ, ಸ್ಯಾಂಪಲ್ ತೆಗೆದುಕೊಳ್ಳುವ ತಜ್ಞರು ಸರಿಯಾಗಿ ತರಬೇತಿ ಪಡೆದವರಾಗಿರಬೇಕು ಮತ್ತು ಲ್ಯಾಬ್ ಮಾನ್ಯತೆ ಪಡೆದಿರಬೇಕು ಎಂಬುದು ಅತ್ಯಂತ ಮುಖ್ಯವಾದ ವಿಷಯವಾಗುತ್ತದೆ.

ಇದನ್ನೂ ಓದಿ: ಶೀಘ್ರವೇ ಬರಲಿದೆ ಡೆಂಗ್ಯೂ ಲಸಿಕೆ! ಏನಿದರ ವಿಶೇಷತೆ? ಹೇಗೆ ಕಾರ್ಯನಿರ್ವಹಿಸುತ್ತೆ ತಿಳಿದುಕೊಳ್ಳಿ

ಲ್ಯಾಬ್‌ಗೆ ಹೋಗುವುದರಿಂದ ಸಿಗುವ ಲಾಭಗಳು:

ಲ್ಯಾಬ್‌ಗೆ ಹೋಗಿ ಸ್ಯಾಂಪಲ್ ನೀಡುವುದು ಹೆಚ್ಚು ವಿಶ್ವಾಸಾರ್ಹವಾಗಿದೆ. ಲ್ಯಾಬ್‌ನಲ್ಲಿ ಎಲ್ಲಾ ಅಗತ್ಯ ಯಂತ್ರೋಪಕರಣಗಳು ಮತ್ತು ತಜ್ಞರು ಇರುವುದರಿಂದ ಸ್ಯಾಂಪಲ್ ಗುಣಮಟ್ಟ ಉತ್ತಮವಾಗಿರುತ್ತದೆ. ಸ್ಯಾಂಪಲ್ ತಕ್ಷಣವೇ ಪ್ರಾಸೆಸ್ ಆಗುವುದರಿಂದ ಫಲಿತಾಂಶಗಳು ಹೆಚ್ಚು ನಿಖರವಾಗಿರುವ ಸಾಧ್ಯತೆ ಇದೆ. ಮನೆಯಿಂದ ಲ್ಯಾಬ್‌ಗೆ ಸ್ಯಾಂಪಲ್ ಸಾಗಿಸುವಾಗ ತಾಪಮಾನ ನಿಯಂತ್ರಣ ಮತ್ತು ಸರಿಯಾದ ಹ್ಯಾಂಡ್ಲಿಂಗ್ ಸಮಸ್ಯೆಗಳು ಎದುರಾಗಬಹುದು. ಆದರೆ ಲ್ಯಾಬ್‌ನಲ್ಲಿ ಈ ಸಮಸ್ಯೆಗಳು ಕಡಿಮೆ.

ಯಾವುದು ಉತ್ತಮ?

ಸಾಮಾನ್ಯ ಮತ್ತು ರೂಟೀನ್ ಟೆಸ್ಟ್‌ಗಳಿಗೆ ಮನೆ ಸ್ಯಾಂಪಲ್ ಕಲೆಕ್ಷನ್ ಸೂಕ್ತವಾಗಬಹುದು. ಆದರೆ HIV, ಇನ್ಫೆಕ್ಷನ್, ಥೈರಾಯ್ಡ್ ಅಥವಾ ಹೃದಯ ಸಂಬಂಧಿತ ಪ್ರಮುಖ ಪರೀಕ್ಷೆಗಳಿಗಾಗಿ ಲ್ಯಾಬ್‌ಗೆ ಹೋಗುವುದು ಉತ್ತಮ. ಅಂತಿಮವಾಗಿ, ಯಾವ ಪರೀಕ್ಷೆ ಮಾಡಿಸುತ್ತೀರಿ ಎಂಬುದರ ಮೇಲೆ ಆಯ್ಕೆ ಅವಲಂಬಿತವಾಗಿರುತ್ತದೆ. ಆದ್ರಂಗ್ ವಿಶ್ವಾಸಾರ್ಹ ಲ್ಯಾಬ್ ಆಯ್ಕೆಮಾಡಿ, ಸ್ಯಾಂಪಲ್ ತೆಗೆದುಕೊಳ್ಳುವ ತಜ್ಞರ ಸ್ವಚ್ಛತೆ ಗಮನಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಹಂಸಲೇಖ-ರವಿಚಂದ್ರನ್ ಹಾಡುಗಳ ಕಾನ್ಸರ್ಟ್ ‘ಕ್ರೇಜಿಬ್ರಹ್ಮಂ’: ಎಲ್ಲಿ? ಯಾವಾಗ?
ಹಂಸಲೇಖ-ರವಿಚಂದ್ರನ್ ಹಾಡುಗಳ ಕಾನ್ಸರ್ಟ್ ‘ಕ್ರೇಜಿಬ್ರಹ್ಮಂ’: ಎಲ್ಲಿ? ಯಾವಾಗ?
ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ: ಕೇಸ್ ದಾಖಲಾಗ್ತಿದ್ದಂತೆ ಪರಾರಿ
ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ: ಕೇಸ್ ದಾಖಲಾಗ್ತಿದ್ದಂತೆ ಪರಾರಿ
ತಮ್ಮ ‘ಯಜಮಾನ್ರು’ ರವಿಚಂದ್ರನ್ ಬಗ್ಗೆ ಹಂಸಲೇಖ ಮಾತು
ತಮ್ಮ ‘ಯಜಮಾನ್ರು’ ರವಿಚಂದ್ರನ್ ಬಗ್ಗೆ ಹಂಸಲೇಖ ಮಾತು
ಅಬ್ಬರದ ಮಳೆಗೆ ರಾಯರ ಭಕ್ತರು ಕಂಗಾಲು: ನೆರವಿಗೆ ದೌಡಾಯಿಸಿದ ಶ್ರೀಗಳು
ಅಬ್ಬರದ ಮಳೆಗೆ ರಾಯರ ಭಕ್ತರು ಕಂಗಾಲು: ನೆರವಿಗೆ ದೌಡಾಯಿಸಿದ ಶ್ರೀಗಳು
ಮೂರಿಕಟ್ಟೆ ಒಡೆದ ಮುಸ್ಲಿಮರು; ಕರ್ತವ್ಯದಲ್ಲಿದ್ದ ಪೊಲೀಸರ ಮೇಲೂ ಹಲ್ಲೆ
ಮೂರಿಕಟ್ಟೆ ಒಡೆದ ಮುಸ್ಲಿಮರು; ಕರ್ತವ್ಯದಲ್ಲಿದ್ದ ಪೊಲೀಸರ ಮೇಲೂ ಹಲ್ಲೆ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್!
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್!
ಭಟ್ಕಳದಲ್ಲಿ ಘನಘೋರ ದುರಂತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಭಟ್ಕಳದಲ್ಲಿ ಘನಘೋರ ದುರಂತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಕರ್ನಾಟಕದಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಗೊಂದಲ
ಕರ್ನಾಟಕದಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಗೊಂದಲ
ಕುಮಾರಣ್ಣ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿದ ಬಿಗ್‌ಬಾಸ್‌ ಜಾಹ್ನವಿ
ಕುಮಾರಣ್ಣ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿದ ಬಿಗ್‌ಬಾಸ್‌ ಜಾಹ್ನವಿ
ಸಭೆ ಬಳಿಕ ಕರ್ನಾಟಕ ರಾಜಕೀಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಖಡಕ್ ಮಾತು
ಸಭೆ ಬಳಿಕ ಕರ್ನಾಟಕ ರಾಜಕೀಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಖಡಕ್ ಮಾತು