Sign In

By signing in or creating an account, you agree with Associated Broadcasting Company's Terms & Conditions and Privacy Policy.

International Yoga Day 2022 : ನೀವು ಸರಿಯಾದ ಕ್ರಮದಲ್ಲಿ ಉಸಿರಾಡುತ್ತಿದ್ದೀರಾ?

Breathing : ಬಾಯಿಯಿಂದ ಉಸಿರಾಟ ಶುರುವಾದಾಗ ವಾತಾವರಣದಲ್ಲಿರುವ ಕಲ್ಮಶವು ಶ್ವಾಸಕೋಶವನ್ನು ಸೋಂಕಿಗೆ ಒಳಪಡಿಸುತ್ತದೆ. ಆಗ ದೇಹ ಒಟ್ಟಾರೆಯಾಗಿ ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಾ ಬರುತ್ತದೆ.

International Yoga Day 2022 : ನೀವು ಸರಿಯಾದ ಕ್ರಮದಲ್ಲಿ ಉಸಿರಾಡುತ್ತಿದ್ದೀರಾ?
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 16, 2022 | 4:43 PM

International Yoga Day 2022 : ನೆನಪಿಸಿಕೊಳ್ಳಿ, ನೀವು ದೀರ್ಘ ಉಸಿರನ್ನು ಎಳೆದುಕೊಂಡಿದ್ದು ಯಾವಾಗ ಅಂತ. ಅಂದರೆ ತಾಜಾ ಗಾಳಿ ನಿಮ್ಮ ಶ್ವಾಸಕೋಶದ ಆಳಕ್ಕೆ ತಲುಪಿದ್ದು ನಿಮ್ಮ ಅನುಭವಕ್ಕೆ ಬರುವಂತೆ ಉಸಿರಾಡಿದ್ದು, ಆ ತಂಪು, ಆ ಶಾಂತ, ಸಮಾಧಾನದ ಅನುಭೂತಿ… ಈಗಲೂ ನೀವಿದನ್ನು ಅಭ್ಯಾಸ ಮಾಡಬಹುದು. ಸರಿಯಾದ ಉಸಿರಾಟದ ಕ್ರಮವನ್ನು ಅಳವಡಿಸಿಕೊಂಡಲ್ಲಿ ನಮ್ಮ ದೇಹದ ಒಳತಾಪಮಾನವು ಸಮತೋಲದಿಂದ ಕೂಡಿರುತ್ತದೆ. ಇಲ್ಲವಾದಲ್ಲಿ ಸಮಸ್ಯೆಗಳು ತೋರುತ್ತವೆ. ಸಮಸ್ಯೆಗಳು ಬಾಲ್ಯದಲ್ಲೇ ಎಚ್ಚರಿಕೆ ಗಂಟೆ ಬಾರಿಸಿರುತ್ತವೆ. ಉದಾ: ನಮ್ಮಲ್ಲಿ ಸಾಕಷ್ಟು ಜನರು ಬಾಯಿಯಿಂದ ಉಸಿರಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ತಕ್ಷಣಕ್ಕೆ ಆರೋಗ್ಯ ಸಮಸ್ಯೆಯಾಗದಿದ್ದರೂ ಕ್ರಮೇಣ ಉಲ್ಬಣಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಯೋಗದ ಮೂಲಕ  ಉಸಿರಾಟದ ತಂತ್ರಗಳನ್ನು ಅಳವಡಿಸಿಕೊಂಡಲ್ಲಿ ಶ್ವಾಸಕೋಶಕ್ಕೆ ಸರಿಯಾದ ರೀತಿಯಲ್ಲಿ ಆಮ್ಲಜನಕ ಪೂರೈಕೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ನಾವು ಬೆಳೆದಂತೆ ಕಾರ್ಯಒತ್ತಡದಲ್ಲಿ ನಿರಾಳವಾಗಿ ಉಸಿರಾಡುವುದನ್ನೇ ಮರೆಯುತ್ತಿದ್ದೇವೆ. ಆದ್ದರಿಂದ ದಿನದ ಕೆಲ ಗಂಟೆಯಾದರೂ ಉಸಿರಾಟವನ್ನು ಕೇಂದ್ರೀಕರಿಸುವುದು ಒಳ್ಳೆಯದು. ಇದನ್ನು ಅಭ್ಯಾಸ ಮಾಡುತ್ತ ಹೋದಾಗ ನಮಗರಿವಿಲ್ಲದೆ ಉಂಟಾಗುವ ಕೋಪ, ಆತಂಕ, ಭಯವೆಲ್ಲ ನಿಯಂತ್ರಣಕ್ಕೆ ಬಂದು ಮನೋದೈಹಿಕ ನಿಯಂತ್ರಣ ಸಾಧ್ಯವಾಗುತ್ತದೆ.

ಇದನ್ನೂ ಓದಿ : International Yoga Day 2022 ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಒತ್ತಡ ಕಡಿಮೆ ಮಾಡಲು ಸಹಾಯಕವಾಗುವ ಯೋಗಭಂಗಿಗಳು

ಇದನ್ನೂ ಓದಿ
Image
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
Image
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Image
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Image
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ಸಾಮಾನ್ಯವಾಗಿ ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಂಡಾಗ ಬಾಯಿಯಿಂದ ಉಸಿರಾಟ ಶುರುವಾಗುತ್ತದೆ. ಓಡುವಾಗ, ಆತಂಕ, ಕೋಪ ಮತ್ತು ಭಾವನಾತ್ಮಕ ಮಟ್ಟ ಹೆಚ್ಚಾದಾಗ ನಮಗರಿವಿಲ್ಲದೆಯೇ ಬಾಯಿಯಿಂದ ಉಸಿರಾಡಲು ಆರಂಭಿಸುತ್ತೇವೆ. ಆದರೆ ಬಾಯಿಯಿಂದ ಉಸಿರಾಟ ಶುರುವಾದಾಗ ವಾತಾವರಣದಲ್ಲಿರುವ ಕಲ್ಮಶವು ಶ್ವಾಸಕೋಶವನ್ನು ಸೋಂಕಿಗೆ ಒಳಪಡಿಸುತ್ತದೆ. ಆಗ ದೇಹ ಒಟ್ಟಾರೆಯಾಗಿ ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಾ ಬರುತ್ತದೆ. ದೈಹಿಕವಾಗಿ ಜರ್ಜರಿತವಾದಾಗ ಮನಸಿನ ಮೇಲೂ ಪರಿಣಾಮ ಬೀರುತ್ತದೆ. ಮಾಡುವ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ಕಷ್ಟವಾಗುತ್ತದೆ. ಕೆಲಸ ಮಾಡುವ ಸ್ಥಳ ಅಥವಾ ಮನೆಯೊಳಗೆ ಹೊಂದಿಕೊಂಡು ಹೋಗುವುದು ದುಸ್ತರವಾಗುತ್ತದೆ. ಆದ್ದರಿಂದ ಮನಸ್ಸು ಮತ್ತು ದೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಮ್ಮ ಜೀವನಶೈಲಿಯೂ ಬಹಳ ಮುಖ್ಯ.

ಇದನ್ನೂ ಓದಿ : International Yoga Day 2022: ಈ ಆಸನಗಳು ಮಧುಮೇಹ, ರಕ್ತದೊತ್ತಡ ನಿಯಂತ್ರಣಕ್ಕೆ

ದಿನವಿಡೀ ಒತ್ತಡದಲ್ಲಿ ಏರುಪೇರಾದ ಮನಸ್ಸು ದೇಹ ಉಲ್ಲಸಿತವಾಗಲು ದಿನಕ್ಕೆ ಅರ್ಧಗಂಟೆಯಾದರೂ ಈ ಕೆಳಗಿನ ಯೋಗಚಟುವಟಿಕೆಗಳಲ್ಲಿ ತೊಡಗಿಕೊಳ್ಳವುದು ಒಳ್ಳೆಯದು. ಈಗೇನು ಮೊದಲಿನಂತೆ ಯೋಗ ತರಗತಿಗಳಿಗೆ ಹೋಗಿ ಅಭ್ಯಾಸ ಮಾಡಬೇಕಂತಿಲ್ಲ. ಆನ್​ಲೈನ್​ನಲ್ಲಿಯೂ ತರಗತಿ ಸೇರಬಹುದು. ಅಥವಾ ಯೂಟ್ಯೂಬ್​ನಲ್ಲಿ ನಿಮಗೆ ಬೇಕಾದ ವ್ಯಾಯಾಮ, ಆಸನಗಳ ಹೆಸರು ಟೈಪಿಸಿದರೆ ನೋಡುತ್ತಲೇ ಕಲಿಯಬಹುದು. ನಿಮ್ಮ ಅನುಕೂಲಕರ ಸಮಯದೊಂದಿಗೆ ನಿತ್ಯವೂ ಮಾಡಬಹುದು.

ಇವುಗಳನ್ನು ರೂಢಿಸಿಕೊಳ್ಳಿ : ಭಸ್ತ್ರಿಕಾ ಪ್ರಾಣಾಯಾಮ, ಕುಂಭಕ ಪ್ರಾಣಾಯಾಮ, ಸಿಂಹಾಸನಾ, ಮೃಗಿ ಮುದ್ರಾ ಪ್ರಾಣಾಯಾಮ, ಕಪಾಲಭಾತಿ ಪ್ರಾಣಾಯಾಮ.

Published On - 4:23 pm, Thu, 16 June 22

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್