ಋತುಬಂಧಕ್ಕೆ ದೇಹವನ್ನು ಸಿದ್ಧಪಡಿಸುವುದು ಹೇಗೆ?

ಅಂಡಾಶಯದ ಕಾರ್ಯಚಟುವಟಿಕೆಯಲ್ಲಿ ಕ್ಷೀಣತೆಯು ಋತುಬಂಧದ ಮೊದಲ ಪರಿವರ್ತನೆಯ ಹಂತವಾಗಿದ್ದು, ಸುಮಾರು 45 ವರ್ಷ ವಯಸ್ಸಿನಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಪ್ರಾರಂಭವಾಗುತ್ತದೆ ಮತ್ತು ಮಹಿಳೆಯರಲ್ಲಿ ಅನಿಯಮಿತ ಋತುಚಕ್ರ ಸಾಮಾನ್ಯವಾಗಿರುತ್ತದೆ. ಆಗ ರಾತ್ರಿ ಬೆವರುವಿಕೆ, ನಿದ್ರೆ ಕಿರಿಕಿರಿ, ಬಳಲಿಕೆ, ಮೂಡ್ ಸ್ವಿಂಗ್‌ಗಳು, ಲೈಂಗಿಕತೆ ಬಯಕೆ ಕಡಿಮೆಯಾಗುವಿಕೆ ಸಾಮಾನ್ಯ ಲಕ್ಷಣಗಳು.

ಋತುಬಂಧಕ್ಕೆ ದೇಹವನ್ನು ಸಿದ್ಧಪಡಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on:Nov 02, 2023 | 10:24 PM

ಮೆನೋಪಾಸ್ (Menopause) ಎನ್ನುವುದು ಗ್ರೀಕ್ ಪದವಾಗಿದ್ದು ‘ಮೆನ್ಸ್‌’ ಎಂದರೆ ಮಾಸಿಕ ಮತ್ತು “ಪಾಸ್‌” ಎಂದರೆ ನಿಲುಗಡೆ. ಇದು ಅಂಡಾಶಯದ ಚಟುವಟಿಕೆಯ ನಷ್ಟದಿಂದಾಗಿ ಸಂಭವಿಸುವ ಮುಟ್ಟಿನ (Periods) ಮತ್ತು ಸಂತಾನೋತ್ಪತ್ತಿ ಜೀವನದ ಅಂತ್ಯವಾಗಿದ್ದು, ಮಹಿಳೆಯರಲ್ಲಿ ವಯಸ್ಸಾದಾಗಿನ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಋತುಬಂಧದ ವಯಸ್ಸು 45 ವರ್ಷದಿಂದ 55 ವರ್ಷಗಳವರೆಗೆ, ಸರಾಸರಿ 50 ವರ್ಷಗಳು.

ಅಂಡಾಶಯದ ಕಾರ್ಯಚಟುವಟಿಕೆಯಲ್ಲಿ ಕ್ಷೀಣತೆಯು ಋತುಬಂಧದ ಮೊದಲ ಪರಿವರ್ತನೆಯ ಹಂತವಾಗಿದ್ದು, ಸುಮಾರು 45 ವರ್ಷ ವಯಸ್ಸಿನಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಪ್ರಾರಂಭವಾಗುತ್ತದೆ ಮತ್ತು ಮಹಿಳೆಯರಲ್ಲಿ ಅನಿಯಮಿತ ಋತುಚಕ್ರ ಸಾಮಾನ್ಯವಾಗಿರುತ್ತದೆ. ಆಗ ರಾತ್ರಿ ಬೆವರುವಿಕೆ, ನಿದ್ರೆ ಕಿರಿಕಿರಿ, ಬಳಲಿಕೆ, ಮೂಡ್ ಸ್ವಿಂಗ್‌ಗಳು, ಲೈಂಗಿಕತೆ ಬಯಕೆ ಕಡಿಮೆಯಾಗುವಿಕೆ ಸಾಮಾನ್ಯ ಲಕ್ಷಣಗಳು. ಯೋನಿ ಶುಷ್ಕತೆ, ಮೂತ್ರ ಬ್ಲಾಡರ್‌ ಸಮಸ್ಯೆಗಳು , ತೂಕ ಹೆಚ್ಚಾಗುವುದು ಮತ್ತು ಮೂಳೆ ಸಾಂದ್ರತೆಯ ಕುಸಿತ ಮೊದಲಾದ ಲಕ್ಷಣಗಳು ಕಾಣಿಸಬಹುದು. ವಿಭಿನ್ನ ಮಹಿಳೆಯರು ವಿಭಿನ್ನ ರೋಗಲಕ್ಷಣಗಳೊಂದಿಗೆ ಋತುಬಂಧದಕ್ಕೆ ಒಳಗಾಗುತ್ತಾರೆ. ಆದ್ದರಿಂದ ಇದು ಎಲ್ಲರಿಗೂ ಒಂದೇ ಆಗಿರುವುದಿಲ್ಲ.

ಸಂತಾನೋತ್ಪತ್ತಿ ಕ್ರಿಯೆಯ ಹೊರತಾಗಿ ಮಹಿಳೆಯ ಆರೋಗ್ಯದಲ್ಲಿ ಅಂಡಾಶಯದ ಹಾರ್ಮೋನುಗಳು ಪ್ರಮುಖ ಪಾತ್ರವಹಿಸುತ್ತವೆ.

ಅಂಡಾಶಯದ ಹಾರ್ಮೋನುಗಳು ಕೇವಲ ಸಂತಾನೋತ್ಪತ್ತಿಯ ನಿಯಂತ್ರಣಕ್ಕೆ ಮಾತ್ರ ಸೀಮಿತವಲ್ಲ. ಅದನ್ನು ಹೊರತುಪಡಿಸಿ ಮಹಿಳೆಯ ಆರೋಗ್ಯದಲ್ಲಿ ವೈವಿಧ್ಯಮಯ ಪಾತ್ರವನ್ನು ವಹಿಸುತ್ತವೆ. ಈಸ್ಟ್ರೊಜೆನ್ ಹಾರ್ಮೋನ್ ನ್ಯೂರೋಎಂಡೋಕ್ರೈನ್, ಅಸ್ಥಿಪಂಜರ, ಅಡಿಪೋಸ್ ಮತ್ತು ಹೃದಯರಕ್ತನಾಳದ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರುತ್ತದೆ.

ಈಸ್ಟ್ರೊಜೆನ್‌ಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಏಕೆಂದರೆ ಇದು ಲಿಪಿಡ್‌ಗಳ ಶೇಖರಣೆಗಿಂತ ಆಕ್ಸಿಡೇಷನ್‌ಗೆ ಸಹಾಯ ಮಾಡುತ್ತದೆ.

ಇನ್ಸುಲಿನ್ ಹಾರ್ಮೋನ್ ಸ್ರವಿಸುವಿಕೆಯನ್ನು ಮತ್ತು ಪೋಷಕಾಂಶಗಳ ಹೋಮಿಯೋಸ್ಟಾಸಿಸ್ ನಿಯಂತ್ರಿಸುವಲ್ಲಿ ಈಸ್ಟ್ರೊಜೆನ್ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಈ ಕೊರತೆಯು ಟೈಪ್ 2 ಮಧುಮೇಹ ಮತ್ತು ಬೊಜ್ಜಿಗೆ ಕಾರಣವಾಗುತ್ತದೆ. ಹೊಟ್ಟೆಯ ಕೆಳಭಾಗದಲ್ಲಿ ಮತ್ತು ಅಂಗಗಳ ಸುತ್ತಲೂ ತೂಕ ಹೆಚ್ಚಾಗುವುದು. ಇದನ್ನು ಒಳಾಂಗಗಳ ಕೊಬ್ಬು ಎಂದು ಕರೆಯಲಾಗುತ್ತದೆ.

ಒಳಾಂಗಗಳ ಕೊಬ್ಬು ಮಧುಮೇಹ, ಪಾರ್ಶ್ವವಾಯು, ಹೃದ್ರೋಗ ಮತ್ತು ಕ್ಯಾನ್ಸರ್‌ಗಳಂತಹ ಸಮಸ್ಯೆ ಉಂಟು ಮಾಡಬಹುದು.

ಈಸ್ಟ್ರೊಜೆನ್ ಕೊರತೆಯು ಶುಷ್ಕ ಮತ್ತು ಹೊಳಪಿಲ್ಲದ ಚರ್ಮ ಮತ್ತು ಕೂದಲಿಗೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.

ಋತುಬಂಧಕ್ಕೆ ಪ್ರವೇಶಿಸುವ ಮೊದಲು ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಆರೋಗ್ಯವನ್ನು ಉತ್ತಮಗೊಳಿಸುವುದು ಒಳ್ಳೆಯದು ಮತ್ತು ಸಾಧ್ಯವಾದಷ್ಟು ಕಾಲ ತೂಕ ನಿಯಂತ್ರಿಸಿ ಮತ್ತು ಈ ಸಮಯದಲ್ಲಿ ಚಯಾಪಚಯವು ನಿಧಾನವಾಗುತ್ತದೆ ಮತ್ತು ತೂಕ ಹೆಚ್ಚಾಗುವಿಕೆ ಸುಲಭ ಎಂದು ನೆನಪಿಟ್ಟುಕೊಳ್ಳುವುದು ಉತ್ತಮ.

ಈ ಸಮಯದಲ್ಲಿ ಸ್ಥೂಲಕಾಯತೆಯನ್ನು ಹೊಂದಿರುವುದರಿಂದ ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್ ಸಾಧ್ಯತೆಗಳು ಹೆಚ್ಚಾಗುತ್ತವೆ.

ಯಾವುದೇ ವ್ಯಾಯಾಮವನ್ನು ಸ್ಥಿರವಾಗಿ ಮತ್ತು ನಿರಂತರವಾಗಿ ಮಾಡಿದಾಗ ಸಾಕಷ್ಟು ಒಳ್ಳೆಯದು.

ಶ್ರೋಣಿಯ ಸ್ನಾಯುಗಳನ್ನು ಬಲಪಡಿಸಲು ಕೆಗೆಲ್ ವ್ಯಾಯಾಮ ಅತ್ಯಗತ್ಯ.

ಆಹಾರದ ಬಗ್ಗೆ ಜಾಗರೂಕರಾಗಿರಿ, ಕೊಬ್ಬು ಮುಕ್ತ ಮತ್ತು ಸರಳ ಕಾರ್ಬೋಹೈಡ್ರೇಟ್‌ ಸಮೃದ್ಧ, ಫೈಬರ್ ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯದ ಆಹಾರಗಳ, ನಟ್‌ಗಳು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಒಳ್ಳೆಯದು. ಏಕೆಂದರೆ ಇದು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಈ ಅವಧಿಯಲ್ಲಿ ಮೂಳೆಯ ಆರೋಗ್ಯಕ್ಕಾಗಿ ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ತೆಗೆದುಕೊಳ್ಳುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಇದನ್ನೂ ಓದಿ: ವಿಶ್ವ ಋತುಬಂಧ ದಿನ; ಪ್ರತೀ ಮಹಿಳೆ ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ

ಮೂಳೆ ಬೀಳುವಿಕೆ ಮತ್ತು ಮುರಿತಗಳನ್ನು ತಡೆಗಟ್ಟಲು ಮೂಳೆ ಮತ್ತು ಸ್ನಾಯುವಿನ ಬಲವನ್ನು ಕಾಪಾಡಿಕೊಳ್ಳಲು ತೂಕವನ್ನು ಹೊರುವ ವ್ಯಾಯಾಮ ಮತ್ತು ಪ್ರತಿರೋಧ ತರಬೇತಿಯನ್ನು ಶಿಫಾರಸು ಮಾಡಲಾಗಿದೆ.

ಧ್ಯಾನ, ಹೊಸ ಭಾಷೆಯನ್ನು ಕಲಿಯುವುದು ಅಥವಾ ಯಾವುದೇ ಸೃಜನಶೀಲ ಚಟುವಟಿಕೆಯು ಕ್ಷೀಣಿಸುತ್ತಿರುವ ಜ್ಞಾಪಕಶಕ್ತಿ ಮತ್ತು ಮನಸ್ಥಿತಿಯ ವ್ಯತ್ಯಾಸಗಳನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ತಡೆಯುತ್ತದೆ.

ರಾತ್ರಿಯಲ್ಲಿ ವಿಶೇಷವಾಗಿ ಮೊಬೈಲ್‌, ಟಿವಿ ಬಳಕೆ ಕಡಿಮೆ ಮಾಡುವುದು, ಮಧ್ಯಾಹ್ನದ ನಂತರ ಕೆಫೀನ್ಯುಕ್ತ ಆಹಾರ, ಪಾನೀಯ ಸೇವಿಸದಿರುವುದು, ಆಲ್ಕೋಹಾಲ್ ತ್ಯಜಿಸುವುದು ಉತ್ತಮ. ಉತ್ತಮ ಹೃದಯ ಆರೋಗ್ಯಕ್ಕಾಗಿ ಧೂಮಪಾನವನ್ನು ತ್ಯಜಿಸಿ.

ಡಾ. ಜಯಶ್ರೀ ನಾಗರಾಜ್ ಭಾಸ್ಗಿ

(ಲೇಖಕರು: ಹಿರಿಯ ಸಮಾಲೋಚಕರು, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಫೋರ್ಟಿಸ್ ಆಸ್ಪತ್ರೆ, ರಿಚ್ಮಂಡ್ ರಸ್ತೆ, ಬೆಂಗಳೂರು)

Published On - 10:22 pm, Thu, 2 November 23

ತಾಜಾ ಸುದ್ದಿ
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ